Wednesday 6 February 2019

ಗೃಹಯೋಗ

ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ ಯಾರಿಗಿರುತ್ತದೆ? ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿಪತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚಂದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ ಉತ್ತಮ ಗೃಹ ಯೋಗ : ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜೊತೆಯಲ್ಲಿ ಇದ್ದು 1-4-7-10-5-9 ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜೊತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲಾ ಪ್ರಕಾರದ ಅನುಕೂಲತೆಗಳು ಇರುತ್ತದೆ. ಸ್ವಾರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾವದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಪ್ರಯತ್ನದಿಂದ, ಪುರುಷಾರ್ಥದಿಂದ. ಸ್ವಂತ ಹಣದಿಂದ ಮನೆಯನ್ನು ಕಟ್ಟಿಕೊಳ್ಳುತ್ತಾನೆ. ವೈಶಿಷ್ಠ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರನ ಜೊತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತದೆ. ದೊಡ್ಡ ಬಂಗಲೆಯ ಯೋಗ : ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅದರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಅಕಸ್ಮಾತ್‌ ಮನೆ ಹೊಂದುವ ಯೋಗ : ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಅನಾಯಸ ಮನೆ ಹೊಂದುವ ಯೋಗ : ಜಾತಕದಲ್ಲಿ ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಲಗ್ನದಲ್ಲಿದ್ದರೆ ಮತ್ತು ನಾಲ್ಕನೇ ಭಾವದ ಮೇಲೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ,ಚಂದ್ರರ ದೃಷ್ಟಿ ಇದ್ದರೆ ಈ ಯೋಗ ಇದ್ದವರು ವಿಶೇಷ ಪ್ರಯತ್ನ ಇಲ್ಲದೆಯೇ ಮನೆಯು ದೊರಕುತ್ತದೆ. ಲಗ್ನಾಧಿಪತಿ ಮತ್ತು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಮತ್ತು ಚತುರ್ಥ ಸ್ಥಾನದ ಮೇಲೆ ಶುಭ ಗ್ರಹಗಳ ದೃಷ್ಠಿ ಇದ್ದರೆ ಅನಾಯಾಸದ ಮನೆ ದೊರಕುತ್ತದೆ. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ : ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿಪತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚಂದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ. ಉತ್ತಮ ಮನೆಯ ಯೋಗ : ನಿಮ್ಮ ಜಾತಕದಲ್ಲಿ 4ನೇ ಅಧಿಪತಿ ಮತ್ತು 10ನೇ ಅಧಿಪತಿ ಇಬ್ಬರು ಕೇಂದ್ರ ತ್ರಿಕೋಣಗಳಲ್ಲಿದ್ದರೆ ಉತ್ತಮ ಮನೆಯ ಯೋಗ ಇರುತ್ತದೆ. ಗೃಹಯೋಗ ಲಾಭ? ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಚ ಎಂಬ ಉಕ್ತಿಯಂತೆ ಮನೆಯನ್ನು ಹೊಂದಲು ಋುಣವಿರಬೇಕು. ಕೆಲವರ ಬಳಿ ಎಷ್ಟೇ ಹಣವಿದ್ದರೂ ಗೃಹಯೋಗವಿರುವುದಿಲ್ಲ. ಎಲ್ಲಾ ಸೌಕರ್ಯಗಳಿದ್ದರೂ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಕಾರಣವೇನು? ಜ್ಯೋತಿಷದ ಪ್ರಕಾರ ಜಾತಕದಲ್ಲಿ ಸ್ಥಿರಾಸ್ಥಿ ಯೋಗವಿದೆಯೇ ಎಂದು ನೋಡಬೇಕು. ಯೋಗವಿದ್ದರೆ ವಾಸ್ತು ದೋಷವಿಲ್ಲದ ಗೃಹ ನಿರ್ಮಿಸಲು ಸಾಧ್ಯವೇ ಎಂಬುದನ್ನು ಗಮನಿಸಬೇಕು. ಗ್ರಹಗಳಲ್ಲಿ ಚಂದ್ರ ಗೃಹ ಸೌಖ್ಯಕಾರಕ. ಜಾತಕದಲ್ಲಿ ಚಂದ್ರ ಬಲಿಷ್ಠನಾಗಿದ್ದರೆ ಗೃಹ ಸೌಖ್ಯವಿರುತ್ತದೆ. ಜಾತಕದಲ್ಲಿ ನಾಲ್ಕನೆಯ ಮನೆ ಹಾಗೂ ಗ್ರಹಗಳಲ್ಲಿ ಮಂಗಳ ಗ್ರಹ (ಕುಜ) ಇವುಗಳ ಆಸ್ತಿಯ ಬಗ್ಗೆ ಸೂಚಕವಾದ ಭಾವ ಹಾಗೂ ಗ್ರಹವಾಗಿರುತ್ತವೆ. ಜಾತಕದಲ್ಲಿ 4ರ ಅಧಿಪತಿಯು ನಾಲ್ಕರಲ್ಲಿ ಸ್ಥಿತನಾಗಿದ್ದು ಲಗ್ನಾಧಿಪತಿಯು ಸ್ಥಿತನಾಗಿದ್ದು ಶುಭಗ್ರಹಕ್ಕೆ ದೃಷ್ಟಿಯಿದ್ದರೆ ಗೃಹ ಸೌಖ್ಯವಿರುತ್ತದೆ. ಚತುರ್ಥ ಭಾವದ ಅಧಿಪತಿಯು ಚತುರ್ಥದಲ್ಲಿ ಸ್ಥಿತನಾಗಿದ್ದು ತನ್ನ ಸ್ವಂತ ನವಾಂಶದಲ್ಲಿ ಸ್ಥಿತರಾಗಿದ್ದರೆ ಅಥವಾ ಚತುರ್ಥಾಧಿಪತಿಯು ಉಚ್ಛ ಸ್ಥಾನದಲ್ಲಿದ್ದರೆ ಜಾತಕನಿಗೆ ದೊಡ್ಡ ಬಂಗಲೆ ಕಟ್ಟುವ ಯೋಗ, ವಾಹನ ಸೌಖ್ಯ, ಗೃಹದಲ್ಲಿ ಸಂಗೀತ ವಾದ್ಯಗಳೊಂದಿಗೆ ಸೌಖ್ಯದಿಮದ ಜೀವನ ನಡೆಸುವ ಯೋಗವುಂಟಾಗುತ್ತದೆ. ಚತುರ್ಥಾಧಿಪತಿ ಹಾಗೂ ದಶಮಾಧಿಪತಿಗಳು ಕೇಂದ್ರ ತ್ರಿಕೋಣಗಳಲ್ಲಿ ಸ್ಥಿತರಾಗಿದ್ದರೆ ಜಾತಕನು ರಾಜಭವನ-ಅರಮನೆಗಳಂತಹ ವೈಭವ ಪೂರಿತ ಗೃಹಗಳಲ್ಲಿ ವಾಸ ಮಾಡುವ ಯೋಗ ಹೊಂದಿರುತ್ತಾನೆ. ಜಾತಕನಿಗೆ ಚತುರ್ಥ ಭಾವಾಧಿಪತಿಯ ದಶಾ / ಕುಜ ದಶಾ ಕಾಲದಲ್ಲಿ ಗೃಹ ನಿರ್ಮಾಣ ಯೋಗ ಉಂಟಾಗುತ್ತದೆ. ಚತುರ್ಥ ಭಾವದಲ್ಲಿ ಚಂದ್ರಸ್ಥಿತ ಚತುರ್ಥಾಧಿಪತಿ ಚಂದ್ರ ಸ್ಥಿತ / ವೀಕ್ಷಣೆಯೊಂದಿಗೆ ಜಾತಕನು ನೂತನ ಗೃಹ ನಿರ್ಮಿಸುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಬುಧನ ಸಂಬಂಧ ಹೊಂದಿದ್ದರೆ ಜಾತಕನು ಸೌಂದರ್ಯಯುತವಾದ ಗೃಹ ನಿರ್ಮಾಣ ಮಾಡುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಗುರು ಸಂಬಂಧ ಹೊಂದಿದ್ದರೆ ಜಾತಕನು ಭವ್ಯವಾದ ಗಟ್ಟಿಯಾದ ಗೃಹ ನಿರ್ಮಾಣ ಮಾಡುತ್ತಾನೆ. ಸೂರ್ಯ, ಕೇತು ಗ್ರಹಗಳ ಚತುರ್ಥಾದಿಪತಿಯು ಸಂಬಂಧ ಪಟ್ಟರೆ ದುರ್ಬಲ ಮನೆಯ ನಿರ್ಮಾಣ ಮಾಡುತ್ತಾನೆ. ಶನಿ ಮತ್ತು ರಾಹು ಸಂಬಂಧ ಚತುರ್ಥಾಧಿಪತಿಗೆ ಏರ್ಪಟ್ಟರೆ ಜಾತಕನು ಹಳೆಯ ಮನೆಯನ್ನು ಮತ್ತೆ ಖರೀದಿಸುವ ಯೋಗವನ್ನು ಹೊಂದುತ್ತಾನೆ. ಚತುರ್ಥಾಧಿಪತಿಗೆ ಶುಕ್ರನ ಸಂಬಂಧ ಏರ್ಪಟ್ಟರೆ ಸಾಲಂಕೃತ ಗೃಹವನ್ನು ನಿರ್ಮಿಸುತ್ತಾನೆ. ಚತುರ್ಥಾಧಿಪತಿಗೆ ಕುಜನ ಸಂಬಂಧ ಏರ್ಪಟ್ಟರೆ ಜಾತಕನ ಗೃಹವು ಅಗ್ನಿಯಿಂದ ಭಾದೆಗೆ ಒಳಪಡುತ್ತದೆ. ಚತುರ್ಥಭಾವ ಗೃಹ ವ್ಯಾಜ್ಯ : ಚತುರ್ಥಭಾವದಲ್ಲಿ ಅಥವಾ ಚತುರ್ಥಾಧಿಪತಿಗೆ ಅಥವಾ ಕುಜಗ್ರಹಕ್ಕೆ ಕ್ಷೀಣ ಸೂರ್ಯನ ಸಂಬಂಧ ಏರ್ಪಟ್ಟರೆ ಜಾತಕನ ಸ್ಥಿರಾಸ್ಥಿಯು ಸರ್ಕಾರದಿಂದ ತೊಂದರೆಗೆ ಒಳಗಾಗುತ್ತದೆ. ಚತುರ್ಥ ಭಾವಕ್ಕೆ, ಭಾವಾಧಿಪತಿಗೆ ಅಥವಾ ಕುಜಗ್ರಹಕ್ಕೆ ರಾಹು ಸಂಬಂಧ ಏರ್ಪಟ್ಟರೆ ಜಾತಕನು ಗೃಹ / ನಿವೇಶನ ಖರೀದಿಸುವಲ್ಲಿ ಮೋಸ ಹೋಗುತ್ತಾನೆ ಅಥವಾ ಕಾಗದ ಪತ್ರಗಳಿಂದ ಮೋಸಕ್ಕೆ ಒಳಗಾಗುತ್ತಾನೆ. ಗೃಹ ವಾಸ್ತು : ಜಾತಕನ ಚತುರ್ಥಭಾವದಿಂದ ಗೃಹವಾಸ್ತುವನ್ನು ತಿಳಿದು ನಿರ್ಮಿಸಬೇಕು. ಚತುರ್ಥದಲ್ಲಿ ಶುಭಗ್ರಹಗಳ ಸ್ಥಿತ ಅಥವಾ ವೀಕ್ಷಣೆಯಿದ್ದರೆ ಶುಭಫಲ ಉಂಟಾಗುತ್ತದೆ. ಚತುರ್ಥದಲ್ಲಿ ಅಶುಭ ಗ್ರಹಗಳ ಸ್ಥಿತನಾಗಿದ್ದರೆ (ಶನಿ-ಕುಜ-ರಾಹು-ಕೇತು) ಒಳ್ಳೆಯದಲ್ಲ. ಜಾತಕನು ವಾಸ್ತುವಿಲ್ಲದ ಗೃಹದಲ್ಲಿ ವಾಸನಾಗಿದ್ದು ಕಷ್ಟನಷ್ಟಗಳನ್ನು ಅನುಭವಿಸುತ್ತಾನೆ. ಯಾರಿಗೆ ಅಕಸ್ಮಾತ್‌ ಮನೆ ಹೊಂದುವ ಯೋಗ? ಈ ಯೋಗವುಳ್ಳ ಜಾತಕರಿಗೆ ಕಲ್ಪನೆಯೆ ಇರದೆ ಸ್ವಂತ ಮನೆಯನ್ನು ಹೊಂದುವರು ಇಂತಹ ಜಾತಕರು ಬೇರೆಯವರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಜಾತಕದಲ್ಲಿ ಚತುರ್ಥಾಧಿಪತಿ ಶುಭಗ್ರಹದ ಜೊತೆಯಲ್ಲಿ ಇದ್ದು 1-4-7-10-5-9 ನೇ ಭಾವಗಳಲ್ಲಿ ಹಾಗೂ ತನ್ನೊಡನಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟುತ್ತಾನೆ. ಆ ಮನೆಯಲ್ಲಿ ಎಲ್ಲಾ ಪ್ರಕಾರದ ಅನುಕೂಲತೆಗಳು ಇರುತ್ತವೆ. ಲಗ್ನಾಧಿಪತಿ 4ನೇ ಭಾವದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಸ್ವ ಪ್ರಯತ್ನದಿಂದ ಜಾತಕ ಮನೆ ಕಟ್ಟುತ್ತಾನೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಕಷ್ಟದಿಂದ, ಪುರುಷಾರ್ಥದಿಂದ, ಸ್ವಂತ ಸಂಪಾದನೆಯಿಂದ ಸಂಪಾದಿಸಿದ ಹಣದಿಂದ ಮನೆಯನ್ನು ಕಟ್ಟಿಕೊಳ್ಳುತ್ತಾನೆ. ವೈಶಿಷ್ಠ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರನ ಜೊತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕರು ಮನೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲ್ಪಟ್ಟು ಪರಿಪೂರ್ಣ ಎನಿಸಿದ್ದು ಮತ್ತು ಸಾಮಾನ್ಯ ಜನರ ಮನೆಯವರಿಗಿಂತ ಬೇರೆಯೇ ರೀತಿಯಾಗಿ ಇರುತ್ತದೆ. ದೊಡ್ಡ ಬಂಗಲೆಯ ಯೋಗ : ನಿಮ್ಮ ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರು ಅದರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಇಂತಹ ಯೋಗವುಳ್ಳ ಜಾತಕರು ದೊಡ್ಡ ಬಂಗಲೆಯ ಮಾಲೀಕರಾಗುತ್ತಾರೆ. ಅಕಸ್ಮಾತ್‌ ಮನೆ ಹೊಂದುವ ಯೋಗ : ನಿಮ್ಮ ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗವುಳ್ಳ ಜಾತಕರಿಗೆ ಕಲ್ಪನೆಯೆ ಇರದೆ ಸ್ವಂತ ಮನೆಯನ್ನು ಹೊಂದುವರು ಇಂತಹ ಜಾತಕರು ಬೇರೆಯವರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಲಗ್ನಾಧಿಪತಿ ಮತ್ತು ಚತುರ್ಥ ಸ್ಥಾನಾಧಿಪತಿ ಇಬ್ಬರು ಮಿತ್ರ ಗ್ರಹಗಳಾಗಿದ್ದು ನಾಲ್ಕನೇ ಸ್ಥಾನ ಸ್ವಕ್ಷೇತ್ರ ಅಥವಾ ಮಿತ್ರ ಕ್ಷೇತ್ರ ಆಗಿರಬೇಕು. ಯಾರಿಗೆ ಸುಂದರವಾದ ಮನೆ ಕಟ್ಟುವ ಯೋಗ ಇರುತ್ತದೆ? * ಸ್ವಂತ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದಾಗ ಲಗ್ನ ಮತ್ತು ಚತುರ್ಥ ಸ್ಥಾನಗಳ ಮೇಲಿಂದ ತಿಳಿಯ ಬೇಕು. ಲಗ್ನ ಮತ್ತು ಚತುರ್ಥಧಿಪತಿಗಳು ಮಿತ್ರ ಗ್ರಹಗಳಾಗಿದ್ದು ಹಾಗೂ ಸ್ವ ಕ್ಷೇತ್ರ ಉಚ್ಚಕ್ಷೇತ್ರ ಮಿತ್ರ ಕ್ಷೇತ್ರಗಳಾಗಿದ್ದರೆ ಹಾಗೂ ಲಗ್ನ ಮತ್ತು ಚತುರ್ಥ ಸ್ಥಾನಗಳಿಗೆ ಯಾವುದೇ ಪಾಪಗ್ರಹಗಳ ದೃಷ್ಠಿ ಬೀಳಬಾರದು ಹಾಗೂ ಪಾಪ ಗ್ರಹಗಳ ಜೊತೆ ಸೇರಿರಬಾರದು ಲಗ್ನಾಧಿಪತಿಯಾಗಲಿ ಅಥವಾ ಚತುರ್ಥಧಿಪತಿಯಾಗಲಿ ಆಸ್ತನಾಗಿರಬಾರದು. ಲಗ್ನಾಧಿಪತಿಯಾಗಲಿ ಚತುರ್ಥಾಧಿಪತಿಯಾಗಲಿ ಶುಭ ಗ್ರಹಗಳಾದ ಗುರು, ಶುಕ್ರ ಪೂರ್ಣ ಚಂದ್ರ, ಬುಧ ಗ್ರಹಗಳಾಗಿದ್ದರೆ ತುಂಬಾ ಸುಂದರವಾದ ಮನೆಯನ್ನು ಕಟ್ಟಲು ಸಾಧ್ಯ. ಲಗ್ನಾಧಿಪತಿಗಾಗಲಿ ಚತುರ್ಥಧಿಪತಿಗಾಗಲಿ ಶುಭ ಗ್ರಹಗಳ ದೃಷ್ಟಿ ಇದ್ದರೆ ವೈಭವವುಳ್ಳ ಮನೆಯನ್ನು ಕಟ್ಟಿ ಅದರಲ್ಲಿ ಎಲ್ಲಾ ತರಹದ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯ. ಜಾತಕನು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಕೇಂದ್ರ ತ್ರಿಕೋಣಗಳಲ್ಲಿ ಶುಭ ಗ್ರಹಗಳು ಇರಬೇಕು ಹಾಗೂ ಲಗ್ನ ಮತ್ತು ಚತುರ್ಥಾಧಿಪತಿಗಳಿಗೆ 6-8-12 ನೇ ರಾಶಿಗಳ ಗ್ರಹಗಳ ಸಂಬಂಧ ಇರಬಾರದು. ಈ ರಾಶಿಯ ಅಧಿಪತಿಗಳ ದೃಷ್ಟಿಯು ಬೀಳಬಾರದು. ಮತ್ತು ಪಾಪ ಗ್ರಹಗಳಾದ ಕುಜ,ಶನಿ,ರಾಹು, ಕೇತು ಕ್ಷೀಣ ಚಂದ್ರ, ಪಾಪ ಗ್ರಹಗಳ ಜೊತೆಯಲ್ಲಿರುವ ಬುಧ ಈ ಗ್ರಹಗಳ ಸಂಬಂಧ ಲಗ್ನ, ಚತುರ್ಥಾಧಿಪತಿಗಳಿಗೆ ಬಂದರೆ ನೀವು ಕಟ್ಟುವ ಮನೆಯು ಪರಿಪೂರ್ಣವಾಗದೆ ಹಾಗೂ ಮನೆಯನ್ನು ಕಟ್ಟಿದರೂ ಆ ಮನೆಯಲ್ಲಿ ಸುಖ ಸಂತೋಷದಿಂದ ಇರುವುದಕ್ಕೆ ಸಾಧ್ಯ ಆಗುವುದಿಲ್ಲ. ಆದ್ದರಿಂದ ಲಗ್ನ ಚತುರ್ಥ ಸ್ಥಾನದಲ್ಲಿ ಶುಭ ಗ್ರಹಗಳು ಇದ್ದು ಶುಭ ಗ್ರಹಗಳ ದೃಷ್ಟಿಗೆ ಒಳಗಾಗಿರಬೇಕು. ನಿವೇಶನದ ಆಯವರ್ಗ ಆಯವರ್ಗದಲ್ಲಿ ಎಂಟು ವಿಧಗಳಿವೆ ಅವೆಂದರೆ ಧ್ವಜಾಯ, ಧೂಮ್ರಾಯ, ಸಿಂಹಾಯ, ಶ್ವಾನಾಯ, ವೃಷಭಾಯ, ಖರಾಯ, ಗಜಾಯ ಮತ್ತು ಕಾಕಾಯ. ಇವುಗಳಲ್ಲಿ ಧ್ವಜಾಯ, ವೃಷಭಾಯ ಅತೀ ಶ್ರೇಷ್ಠ. ಸಿಂಹಾಯ, ಗಜಾಯ ಸಾಧರಣವಾದ ಫಲಯನ್ನು ಕೂಡುವವು, ಉಳಿದ ಆಯಗಳು ಕನಿಷ್ಠವಾದವು. ಈ ಶುಭ ಆಯದ ಜೊತೆಗೆ ವಾರ ತಿಥಿ, ನಕ್ಷ ತ್ರ ಯೋಗ, ಕರಣ, ಆಯಸ್ಸು, ಧನ ಸಂಖ್ಯೆ, ಋುಣ ಸಂಖ್ಯೆ ಅಂಶ ಮತ್ತು ದಿಕ್ಪಾಲಕರು ಇವು ಸಹ ಶುಭವಾಗಿ ಇರಬೇಕು. ಆಯ ವರ್ಗವು ಸೇರಿ ಹನ್ನೊಂದು ವರ್ಗವು ಶುಭವಾಗಿರಬೇಕು. ಎಂಟು ವಿಧ ಆಯಗಳ ಫಲಗಳ ಬಗ್ಗೆ ತಿಳಿಯೋಣ : 1. ಧ್ವಜಾಯದ ಫಲ : ಧ್ವಜಾಯದಲ್ಲಿ ಕಟ್ಟುವ ಮನೆಯಲ್ಲಿ ಸಮಸ್ತ ಸೌಭಾಗ್ಯವನ್ನು, ದ್ರವ್ಯಲಾಭ, ಶತ್ರುನಾಶ,ರಾಜಪೂಜ್ಯತೆಯನ್ನುಂಟು ಮಾಡುವುದು. 2. ಧೂಮ್ರಾಯದ ಫಲ : ಧೂಮ್ರಾಯದಲ್ಲಿ ಕಟ್ಟಿದ ಮನೆಯು ರೋಗ ಪೀಡೆಯು, ಪುತ್ರರಿಗೂ, ಪತ್ನಿಗೂ ನಾನಾ ವಿಧವಾದ ವ್ಯಾದಿಯನ್ನು ಶತೃವೃದ್ಧಿಯನ್ನು ಉಂಟುಮಾಡುವುದು. 3. ಸಿಂಹಾಯದ ಫಲ : ಸಿಂಹಾಯದ ಮನೆಯಲ್ಲಿ ವಾಸಿಸುವವರಿಗೆ ಶರೀರಸೌಖ್ಯ, ರೋಗನಾಶ, ಧನ-ಧಾನ್ಯ ಸಂಪಾದನೆ, ಸರ್ವ ಕಾರ್ಯಗಳಲ್ಲಿ ಜಯ ಉಂಟಾಗುವುದು ಈ ಮನೆಯಲ್ಲಿ ವಾಸಿಸುವವರಿಗೆ ಸಿಟ್ಟುಜಾಸ್ತಿ, ಸಿಂಹಾಯದ ಮನೆಯ ಎದುರಿಗೆ ಗಜಾಯದ ಮನೆಯನ್ನು ಕಟ್ಟಿದರೆ ಗಜಾಯದ ಮನೆಯು ಶೀಘ್ರವಾಗಿ ನಾಶವಾಗುವುದು. 4. ಶ್ವಾನಾಯದ ಫಲ : ಶ್ವಾನಾಯದ ಮನೆಯಲ್ಲಿ ವಾಸಿಸುವವರಿಗೆ ಶ್ವಾನ (ನಾಯಿ)ಗಳ ಬುದ್ಧಿ ಇರುತ್ತದೆ. ಯಾವಾಗಲೂ ಕಲಹ, ಧನ ಧಾನ್ಯ ನಷ್ಠ, ಶತೃವೃದ್ಧಿ, ದೇಹಾಲಸ್ಯ, ಅಗ್ನಿಭಯ, ದಾರಿದ್ರ್ಯ, ಜೀವನದಲ್ಲಿ ಸಂಕಷ್ಠ ಉಂಟಾಗುವುದು. 5. ಖರಾಯದ ಫಲ : ಖರಾಯದಲ್ಲಿ ವಾಸ ಮಾಡುವ ಯಜಮಾನನು ಯಾವಾಗಲು ಪರಸ್ಥಳದಲ್ಲಿ ಕಷ್ಟಪಡುತ್ತಾನೆ. ಆ ಮನೆಗೆ ಯಾವಾಗಲೂ ದಾರಿದ್ರ್ಯತೆ ಉಂಟಾಗಿ ಸದಾ ವೈರತ್ವದಿಂದ ಕೂಡಿರುತ್ತದೆ. 6. ಗಜಾಯದ ಫಲ : ಗಜಾಯದ ಮನೆಯು ವಾಸಕ್ಕೆ ಯೋಗ್ಯವಾಗಿರುತ್ತದೆ. ಆರೋಗ್ಯ, ಐಶ್ವರ್ಯ, ಸಕಲ ಧನ ಧಾನ್ಯಗಳು ಸಂಪತ್ತುಗಳಿಂದ ಕೂಡಿರುತ್ತದೆ. ಈ ಮನೆಯ ಯಜಮಾನನಿಗೆ ಎರಡು ಸಂಸಾರಗಳು ಉಂಟಾಗುವುದು. ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡುವುದು ಇದರ ಎದುರಿಗೆ ಸಿಂಹಾಯದ ಮನೆ ಇದ್ದರೆ ಈ ಮನೆಗೆ ನಾಶ ಉಂಟಾಗುವುದು. 7. ಕಾಕಾಯದ ಫಲ : ಕಾಕಾಯದಲ್ಲಿ ಮನೆಯನ್ನು ನಿರ್ಮಿಸಿದರೆ ಆ ಮನೆಗೆ ಕಾಗೆ ಹೊಕ್ಕ ಫಲ ಉಂಟಾಗುವುದು. ಸದಾ ದುಃಖದಿಂದಲೂ ರೋಗದಿಂದಲೂ ಕೂಡಿರುತ್ತದೆ. ಕಲಹ ಕಷ್ಟಕಾರ್ಪಣ್ಯಗಳು ಮೇಲಿಂದ ಮೇಲೆ ಒದಗಿ ಬರುವುದು. (ಕೃಪೆ ಒಂಟಿ ಕೊಪ್ಪಲ್ ಪಂಚಾಂಗ)

No comments:

Post a Comment