Wednesday 20 February 2019

ಜಾತಕನಿಗೆ ಸಂತಾನಯೋಗ ತಿಳಿಯುವುದೆಂತು?

ನಮ್ಮ ಪುರಾಣಗಳಲ್ಲಿ ಸಂತಾನಕ್ಕೋಸ್ಕರ ತಪಸ್ಸು ಮಾಡಿ ಸಂತಾನ ಪಡೆದ ಹತ್ತು ಹಲವು ಪ್ರಸಂಗಗಳನ್ನು ನೋಡುತ್ತೇವೆ. ಜ್ಯೋತಿಷವು ಸಂತಾನಕಾರಕ ಗ್ರಹ ಗುರು ಎನ್ನುತ್ತದೆ. ಹಾಗೆಯೇ ವಿಶೇಷವಾಗಿ ಗುರು, ಬುಧ, ರಾಹು ನಂತರ ಕೇತು,ಚಂದ್ರರನ್ನೂ ಗಮನಿಸಲಾಗುತ್ತದೆ. ಅದರ ಆಧಾರದ ಮೇಲೆ ಸಂತಾನ ಯೋಗ ಯಾವಾಗ ಆಗುತ್ತದೆ, ಎಷ್ಟು ಸಂತಾನ ಎಂಬ ಅಂಶವನ್ನು ತಿಳಿಯಬಹುದು. ಸಂತಾನ ವಿಚಾರ ತಿಳಿಯಲು ಲಗ್ನ, ಪಂಚಮ ಭಾಗ್ಯ ಸ್ಥಾನಗಳನ್ನು ಪರಿಶೀಲಿಸಬೇಕು. ಸಂತಾನಯೋಗ ಲೆಕ್ಕಾಚಾರ ಮಾಡಲು ಗಂಡ-ಹೆಂಡಿರ ಜಾತಕವನ್ನು ಲೆಕ್ಕ ಹಾಕಬೇಕು. ಲಗ್ನವು ಜಾತಕನನ್ನೂ, ಪಂಚಮವು ಮುಂದಿನ ಪೀಳಿಗೆಯನ್ನು, ಭಾಗ್ಯವು ಹಿಂದಿನ ಪೀಳಿಗೆಯನ್ನು ಸೂಚಿಸುತ್ತದೆ. ಸಂತಾನಯೋಗದ ನಿಯಮಾವಳಿ : ಲಗ್ನಾಧಿಪತಿ ಪಂಚಮದಲ್ಲಿ ಮತ್ತು ಪಂಚಮಾಧಿಪತಿ ಲಗ್ನದಲ್ಲಿದ್ದು ಪರಿವರ್ತನೆಯಾಗಿದ್ದರೆ ಸಂತಾನ ಸುಖ ಉಂಟಾಗುತ್ತದೆ. ಪಂಚಮಾಧಿಪತಿ ಕೇಂದ್ರ ತ್ರಿಕೋಣದಲ್ಲಿದ್ದು ಗುರುವಿನ ಸಂಬಂಧ ಹೊಂದಿದ್ದರೂ ಸಂತಾನಯೋಗವಿರುತ್ತದೆ. ಪಂಚಮಾಧಿಪತಿ ಬಲಾಢ್ಯನಾಗಿ ಲಗ್ನಾಧಿಪತಿ ಗುರುವಿನಿಂದ ಶುಭ ಸಂಬಂಧವನ್ನು ಹೊಂದ್ದಿದರೆ, ಪಂಚಮ ಭಾವದಲ್ಲಿ ಶುಭಗ್ರಹವಿದ್ದು ಪಂಚಮಕ್ಕೆ ಲಗ್ನ ಪಂಚಮಾಧಿಪತಿಯ ಸಂಬಂಧವಿದ್ದರೆ, ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಗುರು ಸುಸ್ಥಿತಿಯಲ್ಲಿರುವ ಜಾತಕರಿಗೆ, ಪಂಚಮ ಭಾವದಲ್ಲಿ ಸ್ವಕ್ಷೇತ್ರದಲ್ಲಿ ಪಾಪಗ್ರಹನಿದ್ದರೆ ಸಂತಾನ ಭಾಗ್ಯವಿರುತ್ತದೆ ಎನ್ನುತ್ತದೆ ಫಲದೀಪಿಕ. ಹೀಗೆ ಸಂತಾನವಿದೆಯೇ ಎಂಬುದನ್ನು ಮೇಲಿನ ನಿಯಮಾವಳಿಗಳಿಂದ ತಿಳಿಯಬಹುದು. ಪರಿಹಾರಗಳು : ಪಂಚಮಾಧಿಪತಿ ದುಸ್ಥಾನದಲ್ಲಿದ್ದಾಗ ಸಂತಾನದೋಷ ಉಂಟಾಗುತ್ತದೆ. ಪಂಚಮ ಭಾವ / ಭಾವಾಧಿಪತಿಗೆ ಶನಿ, ಚಂದ್ರ ಅಥವಾ ಬುಧನ ಸಂಬಂಧವಿದ್ದರೂ ತೊಂದರೆ ಕಾಣುತ್ತದೆ. ಅಂತಹ ಸಂದರ್ಭದಲ್ಲಿ ರಾಮೇಶ್ವರದಲ್ಲಿ ತೀರ್ಥಸ್ನಾನ, ಗಂಗಾಸ್ನಾನ, ಸಂತಾನ ಗೋಪಾಲಸ್ವಾಮಿ ವ್ರತ ಮಾಡುವುದರಿಂದ ದೋಷ ಪರಿಹಾರ ಉಂಟಾಗುತ್ತದೆ. SANGRAHA

No comments:

Post a Comment