Tuesday 19 February 2019

ವಾಸ್ತು ಸಲಹೆ

ಮನೆಗೆ ಸಾಂಪ್ರದಾಯಿಕ ಬಾವಿ ಅಥವಾ ಕೊಳವೆ ಬಾವಿಯೆಂಬುದು ನೀರು ಒದಗಿಸುವ ಪ್ರಮುಖ ಮೂಲ. ಕೆಲವರು ಸಂಪೂರ್ಣವಾಗಿ ಬಾವಿಯನ್ನೇ ಅವಲಂಬಿಸಿರುತ್ತಾರೆ. ವಾಸ್ತುವಿನಲ್ಲಿ ಬಾವಿಯ ದಿಕ್ಕು ಮತ್ತು ಬಾವಿ ಕೊರೆಯುವ ವಿಧಾನದ ಬಗ್ಗೆ ಕೆಲವೊಂದು ನಿಯಮಗಳಿವೆ. - ಬಾವಿ ಕೊರೆದ ಬಳಿಕ ಹೊಸ ಮನೆಯ ನಿರ್ಮಾಣವನ್ನು ಆರಂಭಿಸಬೇಕು. - ಹೊಸ ಮನೆ ನಿರ್ಮಾಣದಲ್ಲಿ ಆ ಬಾವಿಯ ನೀರನ್ನು ಉಪಯೋಗಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. - ಬಾವಿ ಅಥವಾ ನೀರಿನ ಮೂಲ ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿರಬೇಕು. - ಒಂದು ವೇಳೆ ನೀರಿನ ಪೈಪ್‌ ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿದ್ದರೆ ಬಾವಿಯು ಅದರ ಎಡ ಅಥವಾ ಬಲಕ್ಕಿದ್ದು ಮಧ್ಯದಲ್ಲಿರಬಾರದು. - ಬಾವಿಯು ಪ್ರಾಪರ್ಟಿಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಬಹುದು. - ಬಾವಿಯು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿರಬಾರದು. - ಬಾವಿಯು ವೃತ್ತಾಕಾರವಾಗಿರಬೇಕು. ನೀರಿಗೆ ದಿನಕ್ಕೆ ಕನಿಷ್ಠ ಐದು ಗಂಟೆಯಾದರೂ ಸೂರ್ಯನ ಬೆಳಕು ಬೀಳುವಂತಿರಬೇಕು. -ಬಾವಿ ನೀರನ್ನು ಎರಡು ಮನೆಯವರು ಪಾಲು ಮಾಡಿಕೊಳ್ಳಬಾರದು. - ಗಂಗಾಪ್ರಾಥನಾ,ಕುಲದೇವತಾಪ್ರಾಥನಾ ಪೂಜೆ ಮಾಡಿದ ಬಳಿಕವೇ ಬಾವಿ ತೋಡುವ ಕಾರ್ಯ ಆರಂಭಿಸಬೇಕು. - ಶುಭವಾರಗಳು:ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಬಾವಿ ತೋಡಲು ಆರಂಭಕ್ಕೆ ಶುಭ ವಾರಗಳು. -ಶುಭ ನಕ್ಷತ್ರಗಳು: ಕೃತಿಕಾ, ಪೂರ್ವ ಪಲ್ಗುಣಿ, ಮೂಲ, ಭರಣಿ, ಅಶ್ಲೇಷಾ,ಪೂರ್ವಾಭಾದ್ರ ಮತ್ತು ಪೂರ್ವಾಷಾಢ ನಕ್ಷತ್ರದಲ್ಲಿಯೂ ಬಾವಿ ತೋಡಲು ಆರಂಭಿಸಬಹುದು. ಶುಭ ಜಲ ಲಗ್ನಗಳು ಕಟಕ,ವೃಶ್ಚಿಕ,ಮೀನ,(ಮಕರ,ಕುಂಭ.) ಸಂಪೂರ್ಣ ಜಲ ಲಗ್ನಗಳಲ್ಲಿ ಕೊಳವೆಬಾವಿ ತಗೆಸಲು ಪ್ರಾರಂಬಿಸಬೇಕು. ಇನ್ನೊಂದಿಷ್ಟು ವಾಸ್ತು ಟಿಪ್ಸ್ ಸುಖ ಜೀವನಕ್ಕೆ ಮುನ್ನುಡಿ ಬರೆಯುವುದು ಯಾವಾಗಲೂ ಬೆಡ್‌ ರೂಂ.ಹೀಗಾಗಿ ಇಲ್ಲಿನ ವಾಸ್ತು ಬಗ್ಗೆ ಯಾವ ಕಾರಣಕ್ಕೂ ನಿರ್ಲಕ್ಷ್ಯ ವಹಿಸಲೇಬಾರದು. ಈ ಹಿನ್ನೆಲೆಯಲ್ಲಿ ಮಲಗುವ ಕೋಣೆ ಕುರಿತಂತೆ ಕೆಲವು ವಾಸ್ತು ನಿಯಮಗಳ ವಿವರ ಇಲ್ಲಿದೆ. -ನೈರುತ್ಯ ಭಾಗದಲ್ಲಿ ಬೆಡ್‌ ರೂಂ ಇದ್ದರೆ ಉತ್ತಮ ಆರೋಗ್ಯ ಮತ್ತು ಶ್ರೇಯಸ್ಸನ್ನು ತರುತ್ತದೆ. -ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಈ ಕೊಠಡಿ ಇರದಂತೆ ನೋಡಿಕೊಳ್ಳಿ. ಇಲ್ಲವಾದರೆ ದಂಪತಿಯಲ್ಲಿ ಜಗಳ, ಆರೋಗ್ಯ ಸಮಸ್ಯೆಗಳು ಎದುರಾಗಬಹುದು. -ಬೆಡ್‌ ರೂಂನಲ್ಲಿ ಯಾವಾಗಲೂ ಬೆಡ್‌ ನೈರುತ್ಯ ದಿಕ್ಕಿನ ಮೂಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. -ದಂಪತಿ ದಕ್ಷಿಣ/ ಪಶ್ಚಿಮಕ್ಕೆ ತಲೆ ಹಾಕಿ ಮಲಗುವ ರೀತಿಯಲ್ಲಿ ಮಂಚವನ್ನು ಹಾಕಬೇಕು. ಯಾರಿಗೆ, ಯಾವ ದಿಕ್ಕು ಯೋಗ್ಯ, ಯಾವ ದಿಕ್ಕು ಕ್ಷೇಮ? ಈಗಾಗಲೇ ಹಲವು ವಾಸ್ತು ವಿಚಾರಗಳು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ನಕಾರಾತ್ಮಕ ಸಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತವೆ. ಹೀಗಾಗಿ ವಿಶ್ವವೇ ತನ್ನ ಆಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ಕಸನ ಗೊಳಿಸುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕು. ಇದು ಅನಿವಾರ್ಯ. ಉತ್ತರ ದಿಕ್ಕನು ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ ಪರಿಣಾಮಕಾರಿ ಯಾದ ಬರಹಗಳ ಸಮಯದಲ್ಲಿ ಅಥವಾ ಹೊಸತೇನನ್ನೋ ಪರಿಶೋಧಿಸುವ ಸಮಯವೇ ಇರಲಿ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡಾ ಇದಕ್ಕೆ ಸೂಕ್ತ. ನಿಮ್ಮ ವ್ಯಾಪಾರ ಅಥವಾ ಇನ್ನೇನೇ ವ್ಯಾವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ ಮಾತನಾಡುವಾಗಲೂ ಇಷ್ಟಾರ್ಥ ಸಿದ್ಧಿಗಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳನ್ನು ಗಮನಿಸಿ ಮುಖ ಮಾಡಿಯೇ ಮಾತಾಡಬೇಕು. ಬೆಳಕಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು. ಯೋಗೀರ್ಶವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವ ದಿಕ್ಕುಗಳ ಫ‌ಲವಂತಿಕೆಯೇ ಉತ್ತಮವಾಗಿದೆ. ಆದರೆ ಅಡುಗೆಯನ್ನು ಮಾಡುವಾಗ ಉತ್ತರ ದಿಕ್ಕನ್ನು ಮುಖಮಾಡಿ ಅಡುಗೆ ಮಾಡಕೂಡದು. ಹೀಗೆನ್ನುವುದಿರಲಿ, ಕುಡಿಯುವುದಿರಲಿ ಉತ್ತರ ದಿಕ್ಕು ನಿಷಿದ್ಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ. ಆಹಾರ ಸಂವರ್ಧನಾ, ತಯಾರಿಕಾ ಪ್ರಗತಿ, ಸಾಫ‌ಲ್ಯ, ರುಚಿ, ಪ್ರಸನ್ನತೆಗಳು ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ ಜೀರ್ಣಕ್ರಿಯೆ ಆರೋಗ್ಯ ಸಂವರ್ಧನೆಗಳಿಗೆಲ್ಲ ಇದು ಸೂಕ್ತ. ಒಲೆಯೋ, ಸ್ಟೋವ್‌, ಗ್ಯಾಸ್‌ ಬರ್ನರ್‌ ಇತ್ಯಾದಿ ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿತಗೊಳ್ಳಬೇಕು. ಈ ವಿಚಾರವನ್ನು ಅಳತೆಬದ್ಧವಾಗಿ ರೂಪಗೊಳಿಸಲು ಮನೆಯ ಖುಲ್ಲಾ ಇರುವ ಜಾಗ ಉತ್ತರ ಮತ್ತು ಪೂರ್ವಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂರ್ಯಪ್ರಕಾಶ ಪೂರ್ವದಿಂದ ಒಳಹೊಮ್ಮುವಂತಿದ್ದು ಶಾಖ ಸೂಕ್ತವಾಗಿ ಹೊರಹೋಗುವಂತೆ ನೈಸರ್ಗಿಕ ವಾತಾವರಣದ ವ್ಯವಸ್ಥೆ ಸೂಕ್ತವಾಗಿರಬೇಕು. ದೈಹಿಕ ಸಮೃದ್ಧಿಗೆ ಆರೋಗ್ಯ ಚಟುವಟಿಕೆಗಳ ಗಟ್ಟಿತನಕ್ಕೆ ಇದರಿಂದ ದಾರಿ ಲಭ್ಯ. ಮಾನಸಿಕ ನೆಮ್ಮದಿಗೂ ಇದರಿಂದ ಸಾಧ್ಯ. ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್‌ ಗೂಡ್ಸ್‌ ಬೇಡ. ಟೀವಿ, ಕಂಪ್ಯೂಟರ್‌ ಲ್ಯಾಪ್‌ ಟ್ಯಾಪ್‌ ಉಪಯೋಗಗಳನ್ನು ಮಲಗುವ ಕೋಣೆಯಲ್ಲಿ ನಿಷೇಧಿಸಿ. ಮಲಗುವ ಕೋಣೆಯು ಒಂದು ಕ್ರಿಯಾ ಶಕ್ತಿಗೆ ಎಲೆಕ್ಟ್ರಾನಿಕ್‌ ಉಪಕರಣಗಳ ಕಿರಣದಿಂದ ತೊಂದರೆಗೆ ದಾರಿ ಇದೆ. ದಯಮಾಡಿ ಇವುಗಳ ಉಪಯೋಗ ಮಲಗುವ ಕೋಣೆಯಲ್ಲಿ ಬೇಡ. ಇದ್ದರೂ ಒಂದು ಮಿತಿ ಇರಲಿ. ಮಿತಿ ಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ ಇದರಿಂದ ಕ್ಷೇಮ. ಹಾಸಿಗೆಯ ಎದುರಿಗೆ ಕನ್ನಡಿಯನ್ನು ನಿಷೇಧಿಸಿ. ಇದ್ದರೂ ಕನ್ನಡಿಯನ್ನು ಬಟ್ಟೆಯಿಂದ ರಾತ್ರಿ ಮುಚ್ಚಿಡಿ. ಮನೆಯ ಎಲ್ಲಾ ಗೋಡೆಗಳಿಗೂ ಒಂದೇ ಬಣ್ಣದ ಅಲಂಕಾರ ಬೇಡ. ತುಳಸೀ ಗಿಡಗಳು ಮನೆಯ ವಾಯುಶುದ್ಧಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ. ಮನೆಯಲ್ಲಿ ಭಾರಿ ತೊಲೆಗಳು ಅಚ್ಚು ಹಾಗೂ ಅಡ್ಡಪಟ್ಟಿಗಳಿರುವ ತಾರಸಿಯ ಕೆಳಗಡೆ ಮಲಗಬೇಡಿ. ಭಯಾನಕ ಕನಸುಗಳಿಗೆ, ಖನ್ನತೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಇದೇ ರೀತಿ ಕಬ್ಬಿಣದ ಮಂಚಗಳೂ ಹಾಸಿಗೆ ಹಾಸಲು ಉಪಯೋಗಿಸಬೇಡಿ. ಹೃದಯವ್ಯಾಧಿ ಹಾಗೂ ಮೆದುಳಿಗೆ ಇದರಿಂದ ಹಾನಿಯಾಗುತ್ತದೆ. ಮಂಚಗಳು ಮರದಿಂದಲೇ ಮಾಡಿರಲಿ. ಈಶಾನ್ಯದ ಕಡೆ ಬಸುರಿ ಹೆಂಗಸರು ಮಲಗಬೇಕು. ಉತ್ತರರದ ಕಡೆ ತಲೆ ಇಡುವುದು ಬೇಡ. ಯಾರೂ ಉತ್ತರ ದಿಕ್ಕಿನೆಡೆ ತಲೆ ಇಟ್ಟು ಮಲಗಬಾರದು. ಕಾಂತೀಯವಾದ ಉದ್ವಿಗ್ನ ತರಂಗಗಳು ಅಶಾಂತಿಗೆ ಅಪ್ರಸನ್ನತೆಗೆ ಉದ್ವಿಗ್ನತೆ ತುಂಬಿದ ಮನೊಸ್ಥಿತಿಗೆ ಕಾರಣವಾತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳು ತೆರೆದಿರಲಿ ಕಳ್ಳಕಾಕರರ ಕಾಟವಿರದಂತೆ ಜಾಲರಿ ಜೋಡಿಸಿದ್ದರೆ ಉತ್ತಮ. ಮೀನು , ಹಕ್ಕಿಗಳನ್ನು ಮನೆಯಲ್ಲಿ ಸಾಕಬಹುದಾ? ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣಗಳ, ಅವುಗಳ ಹೊರಮೈ ಚೆಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾಗದ ಗಾಜಿನ ಗೋಡೆಗಳೀಗೆ ಡಿಕ್ಕಿ ಹೊಡೆಯುತ್ತ ಮೂತಿ ಬಡೆಯುತ್ತಾ, ಉರಟುರುಟಾಗಿಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ ಎಂದು ಆನಂದಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪಿದ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭ ಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿದ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ. ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂ ನಲ್ಲಿ ಪೂರ್ತಿಯಾಗಿ ಕಡುಗಪ್ಪು ಮೈಬಣ್ಣವಿರುವ ಮೀನುಗಳು ಇರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸುನೀಲಿ, ನಸುಗೆಂಪು, ಬಿಳಿಕಪ್ಪು ಪಟ್ಟೆಗಳಿರುವ ಮೀನುಗಳು ಅಲೆ, ಅಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದಿಂದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಬೇಡ. ಮುಂಜಾನೆ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸಿಟ್ಟುಕೊಳ್ಳಿ. ಒಳಗಿನ ನೀರು ನಸುನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ. ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವ ವಿಚಾರ ಆಗದಿದ್ದರೆ ಸೂಕ್ತ. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿದ್ದವೇ ಆಗಿದೆ. ಉಳಿದಂತೆ ಗಿಣಿ , ಲವ್‌ಬರ್ಡ್ಸ್‌, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ಕೊಳ್ಳುವುದು ಬೇಡ. ಪಂಜರದಲ್ಲಿ ಇವುಗಳ ಅಸಹಾಯಕ ಪರಿಸ್ಥಿತಿ ಅಥವಾ ಸೆರೆವಾಸ ಅಷ್ಟು ಒಳ್ಳೆಯದಲ್ಲ. ಜಲದುರ್ಗೆ ನಿಮ್ಮ ಮನೆಯಲ್ಲಿರಲಿ ಮನುಷ್ಯನ ಜೀತಾವಧಿಯಲ್ಲಿ ಅನೇಕಾನೇಕ ಏರಿಳಿತಗಳನ್ನು ಎದುರಿಸಲೇ ಬೇಕಾಗುತ್ತದೆ. ಏರುವುದನ್ನು ಮನುಷ್ಯ ಆನಂದಿಸಬಹುದಾದರೂ ಇಳಿತಗಳು ಮಾನಸಿಕವಾದ ದೈಹಿಕವಾದ ತಳಮಳಗಳನ್ನು ಕಿರಿಕಿರಿ ಯಾತನೆಗಳನ್ನು ಒದಗಿಸುವುದು ನೋವಿನ ಸಂಗತಿ. ಸಾಮಾನ್ಯವಾಗಿ ಶನಿಕಾಟದ ಸಂದರ್ಭದಲ್ಲಿನ ಜೀತದ ಇಳಿತಗಳಿಂದಾಗಿ ಅನೇಕ ಬಗೆಯ ಆಘಾತಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಪ್ರಧಾನವಾಗಿ ಶನಿಕಾಟದ ಕಾಲಘಟ್ಟದಲ್ಲಿ ಜೀವನದ ಸಂದರ್ಭದ ನೋವು ಯಾತನೆ ಪಡಿಪಾಟಲುಗಳು ಅಗಾಧ. ಇವುಗಳು ಮುಖ್ಯವಾಗಿ ಪಂಚಭೂತಾತ್ಮಕ ಅಂಶಗಳಾದ ಮಣ್ಣು , ನೀರು, ಬೆಳಕು, ವಾಯು ಹಾಗೂ ಆಕಾಶ ತತ್ವಗಳಿಗೆ ತೊಂದರೆ ತರುತ್ತವೆ. ಇದರಿಂದಾಗಿ ಆಸ್ತಿ ಜಮೀನು ಸೈಟು ಫ್ಲ್ಯಾಟ್‌ಗಳ ತೊಂದರೆಗಳು ಎದುರಾಗಬಹುದು. ಬೆಂಕಿಯ ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು. ಆರೋಗ್ಯದ ವಿಷಯದಲ್ಲಿ ರಕ್ತದ ಒತ್ತಡ ರಕ್ತ ಧಮನಿಗಳ ಬಿರುಸಾಗುಕೆ ಇತ್ಯಾದಿ ತೊಂದರೆ ಎದುರಾಗಬಹುದು. ಮಾನಸಿಕ ಉನ್ಮಾದಗಳನ್ನು ಕೂಡಾ ಎದುರಿಸಬೇಕಾಗಿ ಬರುವುದು ಸಾಮಾನ್ಯ. ಜಲ ಸಂಬಂಧವಾದ ತಾಪತ್ರಯಗಳನ್ನು ಎದುರಿಸಬೇಕಾಗಿ ಬರಬಹುದು. ಜಲದ ಸಮಸ್ಯೆ ದೈಹಿಕ ಅಸಮತೋಲನಗಳ ವಿಷಯದಲ್ಲಿದ್ದಷ್ಟೇ ಮನೆಯೊಳಗೆ ನೀರಿನ ಸಂಬಂಧವಾದ ಸಮಸ್ಯೆಗಳು ಕೂಡಾ ಅಧಿಕವಾಗಿಯೇ ಇರುತ್ತದೆ. ಒಬ್ಬ ವ್ಯಕ್ತಿಗೆ ಅದ್ಭುತವಾದ ಮನೆ ಇರುತ್ತದೆ. ಆದರೆ ನೀರಿನ ಸಮಸ್ಯೆ ಮಾತ್ರ ಅಪಾರವಾಗಿರುತ್ತದೆ. ನಗರಗಳಲ್ಲಿ ಒಂದು ರೀತಿಯ ನೀರಿನ ಸಮಸ್ಯೆಯಾದರೆ ಹಳ್ಳಿಗಳಲ್ಲಿ ಇನ್ನೊಂದು ರೀತಿಯ ತೊಂದರೆಯಾಗುತ್ತದೆ. ಆ ಜಮೀನು, ಗದ್ದೆ, ಹೊಲಗಳ ವಿಷಯದಲ್ಲಿ ಮತ್ತೂಂದೇ ರೀತಿಯಲ್ಲಿ ಇರುತ್ತದೆ. ಇವೆಲ್ಲಾ ಪ್ರಧಾನವಾಗಿ ಶನಿಕಾಟದ ಸಂದರ್ಭದಲ್ಲಂತೂ ದೊಡ್ಡ ಪ್ರಮಾಣದಲ್ಲಿ ಇರುತ್ತದೆನ್ನಬಹುದು. ಹೀಗಾಗಿ ಶನಿಕಾಟದ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಯಾವರೀತಿಯಲ್ಲಿ ಶನಿಕಾಟದ ತೀವ್ರತೆ ಇದೆಯೆಂಬುದನ್ನು ಗ್ರಹಿಸಬೇಕು. ನೀರಿನ ತಾಪತ್ರಯವು ಎದುರಾಗುವುದಿದ್ದಲ್ಲಿ ಜಲದುರ್ಗಾ ಸ್ತಿತಿ ಹೆಚ್ಚು ಸೂಕ್ತ. ಆಲದುರ್ಗಾವನ್ನು ಮನೆಯ ಯಜಮಾನ ಮನೆಯ ಎದುರಲ್ಲಿ ಸ್ಥಾಪಿಸುವುದು ಸ್ತುತಿಸುವುದು ಹೆಚ್ಚು ಸೂಕ್ತ. ಇದರಿಂದ ಮನೆಯೊಳಗಿನ ಜಲಕ್ಷೊàಭೆಯನ್ನು ನಿವಾರಿಸುವಲ್ಲಿ ಮನೆಯ ಯಜಮಾನನಿಗೆ ಹೆಚ್ಚಿನ ಶಕ್ತಿ ಒದಗುತ್ತದೆ. ಜಲದುರ್ಗೆಯನ್ನು ಸೂಕ್ತವಾದ ರೀತಿಯಲ್ಲಿ ಕಲಶ ಸ್ಥಾಪನಾ ವಿಧಿಯ ಮೂಲಕವಾಗಿ ಅಥವಾ ಪಂಚಲೋಹ ಬೆಳ್ಳಿ ಅಥವಾ ಬಂಗಾರದ ಮೂರ್ತಿಯ ರೂಪದಲ್ಲಿ ಮನೆಯ ದೇವರ ಪೀಠದಲ್ಲಿ ಕೂಡ್ರಿಸಬಹುದು. ಜಲದುರ್ಗಾ ಸ್ತುತಿಯಿಂದ ಬೆಸ್ತರು ಸಾಗರೋತೊನ್ನ ವಸ್ತು ವಹಿವಾಟಿನ ವ್ಯಾಪಾತರಸ್ಥರು ಉದ್ಯಮಿಗಳು ಅಪಾರವಾದ ಯಶಸ್ಸನ್ನು ಸಂಪಾದಿಸಿಕೊಳ್ಳಬಹುದಾಗಿದೆ. ಆಯಾತ ನಿರ್ಯಾತಗಳ ಸಂಬಂಧವಾಗಿ ಖಂಡಾಂತರ ಮಟ್ಟದ ವಹಿವಾಟುಗಳನ್ನು ಹೊಂದಿದವರು ಕೂಡಾ ಜಲದುರ್ಗೆಯನ್ನು ಆರಾಧಿಸಬೇಕು. ಒಟ್ಟಿನಲ್ಲಿ ಜಲದುರ್ಗಾ ಪೂಜೆ ಅಥವಾ ಸ್ತುತಿ ಮನೆಯಲ್ಲಿ ಅನೇಕ ರೀತಿಯ ನೆಮ್ಮದಿ ಹಾಗೂ ಮಾನಸಿಕ ಶಾಂತಿಯನ್ನು ನಿರ್ಮಿಸಿಕೊಡುತ್ತದೆ. ನವಗ್ರಹಗಳು, ಅಷ್ಟ ದಿಕ್ಪಾಲಕರು ಮತ್ತು ನಿಮ್ಮ ಮನೆ... ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕ್ಪಾಲಕರು ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ನಮ್ಮ ಭಾರತೀಯ ವಾಸ್ತು ಶಾಸ್ತ್ರದಲ್ಲಿ ನವಗ್ರಹಗಳಿಗೆ, ಅಷ್ಟ ದಿಕ್ಪಾಲಕರಿಗೆ ಬಹಳಷ್ಟು ಮಹತ್ವವನ್ನು ಒದಗಿಸಿದ ವಿಶ್ಲೇಷಣೆಗಳುಂಟು. ಈ ಅಂಕಣದಲ್ಲಿ ಈ ಮೊದಲೇ ವಿವರಿಸಿದ ಹಾಗೆ ಎಲ್ಲ ಗ್ರಹಗಳು ಹಾಗೂ ಅಷ್ಟ ದಿಕ್ಪಾಲಕರುಗಳು ಕಟ್ಟಡ ಇಮಾರತುಗಳು, ಮನೆ, ಅರಮನೆ, ಗುಡಿ ದೇವಾಲಯಗಳ ವಿಚಾರದಲ್ಲಿ ಒಟ್ಟಾಗಿ ಉಂಟು ಮಾಡುವ ಪ್ರಭಾವ, ಪೂರೈಸುವ ಸ್ಪಂದನಗಳ ಬಗ್ಗೆ ಹೆಚ್ಚಿನ ಅರಿವನ್ನು ನಾವು ಪಡೆದಿರಬೇಕು. ಒಟ್ಟಾರೆಯಾಗಿ ವಾಸ್ತುವಿನ ವಿಷಯದಲ್ಲಿ ಸಂಪೂರ್ಣ ಎಚ್ಚರವನ್ನು ವಹಿಸುವುದು ಹಿಂದಿನ ಕಾಲದಿಂದಲೂ ದುಸ್ತರವಾಗಿಯೇ ಇತ್ತು. ಈಗಂತೂ ಕೇಳುವುದೇ ಬೇಡ. ಪುಟ್ಟ ಪುಟ್ಟ ಉದ್ದಗಲಗಳ ನಿವೇಶನಗಳಲ್ಲಿ ಎಲ್ಲವನ್ನೂ ನಿಭಾಯಿಸುವ ವಿಚಾರ ಅಸಾಧ್ಯವಾದ ಮಾತು. ಹೀಗಾಗಿ ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಿಂದ ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ ಅವರೆ ಎಳ್ಳು ಉದ್ದು ಹುರುಳಿ ಇತ್ಯಾದಿ ನವದಾನ್ಯಗಳನ್ನು ಇಂತಿಂಥಾ ದಿಕ್ಕಿನ ಲೋಪಗಳಿಗೆ ಎಂದು ಗುರುತಿಸಿಕೊಂಡು ನಿಸರ್ಗದಲ್ಲಿನ ಪಕ್ಷಿ, ಕೀಟ ಜಂತುಗಳಿಗೆ ಆಹಾರವಾಗಿ ಸಮರ್ಪಿಸುವುದು ಅತಿ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಸ್ತುವಿನ ಲೋಪ ದೋಷಾದಿಗಳಿಗೆ ಅಷ್ಟರಮಟ್ಟಿಗಿನ ವಿಮೋಚನೆ ದೊರಕುತ್ತದೆ. ಇದು ಅತ್ಯಂತ ಹೆಚ್ಚು ಗಮನಾರ್ಹ. ಯಾವ ದಿಕ್ಕಿಗೆ ಯಾರು ಅಧಿಪತಿ? ಇಡೀ ಜಗತ್ತು ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ ಎಂಬುದನ್ನು ನಾವು ಅರಿತಿದ್ದೇವೆ. ಇದರೊಂದಿಗೆ ಸೃಷ್ಟಿ, ಸ್ಥಿತಿ, ಲಯಾದಿ ವಿಷಯಗಳಿಗೂ ಹೆಚ್ಚಿನ ಮಹತ್ವ ಪಡೆದಿದೆ. ಹುಟ್ಟಿದ ಪ್ರತಿಜೀವಿಗೂ ಹುಟ್ಟಿನಷ್ಟೇ ಸಾವೂ ಅನಿವಾರ್ಯವಾದ ಇನ್ನೊಂದು ಧೃವ, ಹೀಗಾಗಿ ನಮ್ಮ ಆಷೇìಯ ವಿಶೇಷಗಳು ಸಂವರ್ದಿಸಿದ ಪುರಾಣಗಳಲ್ಲಿ ಎಲ್ಲವನ್ನೂ ನಿಯಂತ್ರಿಸುವ ಪರಮಾತ್ಮ ಒಬ್ಬನೇ ಆದರೂ ಆ ಪುರುಷ ಶ್ರೇಷ್ಠನನ್ನು ಮಾಯೆಯಿಂದ ಬೇರ್ಪಡಿಸಿ ನಮ್ಮ ಸಂಸ್ಕೃತಿ ನೋಡಲಿಲ್ಲ. ಹೀಗಾಗಿ ಆ ಪುರುಷ ಶ್ರೇಷ್ಠನೇ ಮಾಯೆಯ ಆವರಣಗಳಿಂದಾಗಿ ತನ್ನಲ್ಲೇ ಚೈತನ್ಯವಾದ ಸ್ತ್ರೀಯನ್ನು ಒಳಗೊಂಡಿದ್ದಾನೆ. ಇವತ್ತಿನ ವೈಜಾnನಿಕವಾದ ಬಿಗ್‌ ಬ್ಯಾಂಗ್‌ ಥಿಯರಿ ಏನಿದೆ ಅದು ನಮ್ಮ ಆಷೇìಯವಾದ ನಂಬಿಕೆಯ ಮಾಯೆಯನ್ನು ಪೂರ್ತಿಯಾಗಿ ದೃಢೀಕರಿಸುವಂತಿದೆ. ಈ ಮಾಯೆ ಸ್ತ್ರೀಯಾಗಿದ್ದಾಳೆ. ಪ್ರಕೃತಿಯಾಗಿದ್ದಾಳೆ. ಪುರುಷನನ್ನು ಆಶ್ರಯಿಸಿಕೊಂಡೇ ಇದ್ದಾಳೆ. ಪುರುಷನಿಗೂ ಸ್ತ್ರೀಯನ್ನು ಬಿಟ್ಟರೆ ಚೈತನ್ಯವಿಲ್ಲ. ಪ್ರಕೃತಿಗೂ ಪುರುಷನನ್ನು ತೊರೆದರೆ ಫ‌ಲವಂತಿಕೆಗೆ ಬೆಲೆ ಇಲ್ಲ. ಈ ಮಾಯೆ ಆಚ್ಛಾದಿತ ಪುರುಷನೇ ಸರ್ವಾಂತರ್ಯಾಮಿ ಸರ್ವಶಕ್ತ ಪರಮಾತ್ಮ. ಆ ಪರಮಾತ್ಮನೇ ತನ್ನಿಂದ ತಾನು ಛೇದಿಸಿಕೊಂಡು ತ್ರಿಮೂರ್ತಿಗಳ ಸ್ವರೂಪದಲ್ಲಿ ಬ್ರಹ್ಮ, ವಿಷ್ಣು , ಮಹೇಶ್ವರನಾಗಿ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿದ್ದಾನೆ. ಈ ಮೂರು ಶಕ್ತಿಗಳ ಜೊತೆಗೆ ಸ್ತ್ರೀ ಮಣ್ಣು, ಬೆಂಕಿ, ಆಕಾಶ, ವಾಯು, ಜಲ ತತ್ವಗಳಲ್ಲಿ ಒಡೆದು ಪಂಚಭೂತೆಯಾಗಿದ್ದಾಳೆ. ನೀವು ಮನೆ ಕಟ್ಟುವ ಸೈಟು ಹೇಗಿರಬೇಕು ಗೊತ್ತಾ? ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ ಎಂದರೆ ಒಂದು ಫ್ಲಾಟ್‌ ಸಿಕ್ಕಿದರೆ ಸಾಕು ಎಂಬ ವಿಚಾರದಲ್ಲಿ ಹೆಚ್ಚಿನ ಕಾತುರ ಇರುತ್ತದೆ. ಕಾಲ ಸಕಲವನ್ನೂ ಸಂಪನ್ನತೆಯ ದೃಷ್ಟಿಯಿಂದ ಮುಕ್ಕಿ ತಿಂದಿದೆ. ಕಾಲದ ದುಷ್ಟತನವೆಲ್ಲಾ ಇದು. ಹಾಗೆ ನೋಡಿದರೆ ಮನುಷ್ಯನ ಸ್ವಾರ್ಥ ಚಲ್ತಾ ಹೈ ಧೋರಣೆಗಳು ಆಳುವವರ ಉಡಾಫೆ, ಭೂಮಿಗೆ ದಕ್ಕಿದ ಹೆಚ್ಚಿನ ಬೆಲೆ, ಲಂಚ ರುಷುವತ್ತು ಮಸಲ್‌ ಪವರ್‌ ಒಂದು ಸುಂದರ ಮನೆಯನ್ನು ಪಡೆದುಕೊಳ್ಳುವ ಕ್ರಿಯೆಯನ್ನು ಗಗನಕುಸುಮವಾಗಿಸಿದೆ. ಫ್ಲಾಟಿನ ಏರಿಳಿತಗಳು ಆಕಾಶ, ಅಳತೆ, ದಿಕ್ಕು, ಅನುಪಾತ ಇರುವ ಪ್ರದೇಶ, ಫ್ಲಾಟಿಗೆ ಎದುರು ರಸ್ತೆಯ ದಿಕ್ಸೂಚಿ ಸುತ್ತಮುತ್ತಲ ಪರಿಸರದ ವಾಸ್ತವಗಳು ಇತ್ಯಾದಿಗಳೆಲ್ಲಾ ಸಾಮಾಜಿಕ ಪತನಕ್ಕೆ ಕಾರಣವಾಗುವಂತಿರಬಾರದು. ಮನೆ ಕಟ್ಟಿ ವಾಸಿಸ ತೊಡಗಿದವರ ಉತ್ಸಾಹ, ಕ್ರಿಯಾಶೀಲತೆ, ಆರೋಗ್ಯ ಸಂಪತ್ತು ಕುಸಿಯಲು ಕಾರಣವಾಗಬಾರದು. ಯಾವಾಗಲೂ ಮನೆಯ ವಾಯುವ್ಯ ಹಾಗೂ ಆಗ್ನೇಯ ಬಿಂದುವಿಗೆ ಒಂದು ಸರಳ ರೇಖೆ ಹಾಕಿದರೆ ಉತ್ತರ ಹಾಗೂ ಪೂರ್ವ ಭಾಗದಿಂದ ಆಗ್ನೇಯ ಬಿಂದುವ ವರೆಗಿನ ತ್ರಿಕೋನ ಭಾಗ ಸೂರ್ಯನ ಅಧಿಪತ್ಯಕ್ಕೆ ಒಳಗೊಳ್ಳುತ್ತದೆ. ಮಿಕ್ಕುಳಿದ ಭಾಗ ಚಂದ್ರನ ಅಧಿಪತ್ಯಕ್ಕೆ ಒಳಪಟ್ಟಿರುತ್ತದೆ. ಸೂರ್ಯನ ಭಾಗ ಸ್ವಪ್ರಕಾಶಿಸುವುದರಿಂದ ನಿಮ್ಮ ಪ್ರಯತ್ನಗಳಿಂದಲೇ ಜೀವನದಲ್ಲಿ ಗೆಲ್ಲುವ ಶಕ್ತಿಯನ್ನು ಮನೆಯ ಈ ಭೂಭಾಗನಿಮಗೆ ಕರುಣಿಸಿ ಕೊಡುತ್ತದೆ. ಉಳಿದರ್ಧ ಭಾಗ ನಿಮ್ಮ ವಿಚಾರದಲ್ಲಿ ಒದಗಬೇಕಾದ ದೈಹಿಕ ಸಹಾಯ ಅದೃಷ್ಟಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯಲ್ಲಿ ವರಿಸಿದ ಚಂದ್ರನ ಭಾಗ ಸ್ವಲ್ಪ ಎತ್ತರವನ್ನು ಕಾಪಾಡಿಕೊಳ್ಳುವುದು ಫ್ಲಾಟ್‌ನ ವಾಸ್ತು ದೃಷ್ಟಿಯಿಂದ ಉತ್ತಮವಾದುದಾಗಿದೆ. ಉತ್ತರ ಮತ್ತು ಪೂರ್ವದತ್ತ ಇಳಿಜಾರು ಇರಬೇಕಾದುದು ವಾಸ್ತು ಸಿದ್ಧಿಗೆ ಸೂಕ್ತ. ಇದರಿಂದಾಗಿ ನೀರಿನ ಹರಿತ ಪಶ್ಚಿಮದಿಂದ ಪೂರ್ವಕ್ಕೂ ದಕ್ಷಿಣದಿಂದ ಉತ್ತರಕ್ಕೂ ಅವಕಾಶ ಒದಗಿಬರುತ್ತದೆ. ಈ ರೀತಿಯ ವಿಚಾರಗಳು ಒಗ್ಗೂಡಿದರೆ ಈ ರೀತಿಯ ಫ್ಲಾಟ್‌ನಲ್ಲಿ ತಲೆ ಎತ್ತಿದ ಮನೆಯ ನಿವಾಸಿಗಳಿಗೆ ಸುಖಕ್ಕೆ ದಾರಿ ಲಭ್ಯ. ಯಾವಾಗಲೂ ತುಸು ತಗ್ಗಿದ ಈಶಾನ್ಯ ಮೂಲೆ ತುಸು ಎತ್ತರಿಸಲ್ಪಟ್ಟ ನೈರುತ್ಯ ಮೂಲೆ ಎಲ್ಲಾ ವಿಚಾರಗಳಲ್ಲಿ ಯಶಸಿಗೆ ದಾರಿ ನಿರ್ಮಿಸುತ್ತದೆ. ದೀರ್ಘಾಯಸ್ಸು ಕೂಡಾ ಕೂಡಿ ಬರಲು ಇದು ಸಹಾಯಕ. ಇಡಿಯಾದ ಪಶ್ಚಿಮ ದಿಕ್ಕು ಎತ್ತರವೂ, ಇಡಿಯಾದ ಪೂರ್ವ ದಿಕ್ಕು ತಗ್ಗಿಕೊಂಡಿದ್ದು ಇದ್ದುದಾದರೆ ಇಂಥ ಫ್ಲಾಟಿನಲ್ಲಿ ಕಟ್ಟಿದ ಮನೆಯಲ್ಲಿ ವಾಸಿಸುವ ಜನರಿಗೆ ಸಾಮಾಜಿಕವಾದ ಮನ್ನಣೆ ಧನವೃದ್ಧಿಯು ಉತ್ತಮ ರೀತಿಯಲ್ಲಿ ಲಭ್ಯವಾಗುತ್ತದೆ. ಮನೆಯ ಮಧ್ಯದ ಸ್ಥಳವು ತುಸು ಏರಿಕೊಂಡಿದ್ದು ವಿಕಸನ ಪಡೆದಿದ್ದರೆ ಇದಕ್ಕೆ ಕೂರ್ಮ ವೃದ್ಧಿ ಎನ್ನುತ್ತಾರೆ. ಇದರಿಂದಾಗಿ ಮನೆಯ ಫ್ಲಾಟ್‌ ತುಂಬಾ ಸಂಪನ್ನತೆಯನ್ನು ಪಡೆದು ಶ್ರೇಷ್ಠತ್ವಕೆ ಒಯ್ಯುವ ಸಾಧನವಾಗುತ್ತದೆ. ಇಂಥ ರೀತಿಯ ಮನೆಯಲ್ಲಿನ ವಾಸವು ವಸತಿಗಾರರ ಸುಖ, ಕ್ಷೇಮ, ಲಾಭ, ಜಯ, ಸಿರಿಗೆ ಸಿದ್ಧಿಗೆ ಅಂಶವಾಗಿದೆ.ಒಟ್ಟಿನಲ್ಲಿ ಭೂಮಿಯ ವಿವಿಧ ಏರಿಳಿತಗಳಿಂದಾಗಿ ತನ್ನ ಸಂಪನ್ನತೆಯನ್ನು ಪಡೆದುಕೊಳ್ಳುತ್ತದೆ. ಕೆಲವು ಸಲ ಪ್ಲಾಟ್‌ ಯಾವುದೋ ದಿಕ್ಕಲ್ಲಿ ಮೂಲೆಯಲ್ಲಿ ತುಸು ಬೆಳೆದಿರುತ್ತದೆ. ಈ ರೀತಿಯ ಬೆಳವಣಿಗೆಗಳಲ್ಲಿ ಎಲ್ಲವೂ ಒಳಿತಿಗೆ ಪೂರಕವಾಗಿ ವರ್ತಿಸುವುದಿಲ್ಲ. ಫ್ಲಾಟ್‌ಗೆ ಈಶಾನ್ಯದ ಕಡೆ ತುಸು ಬೆಸೆದುಕೊಂಡಿದ್ದರೆ ಇಂಥ ಫ್ಲಾಟ್‌ ನಲ್ಲಿ ಕಟ್ಟಿದ ಮನೆಯಿಂದ ಉತ್ತಮ ಫ‌ಲ ಸಮೃದ್ಧಿಗಳು ಲಭ್ಯವಾಗುವುವು. ಹಾಗೆಯೇ ದಕ್ಷಿಣ, ಪಶ್ಚಿಮ, ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ದಿಕ್ಕುಗಳು ಸರಿಯಾಗಿ ಲಂಬಕೋನಗಳಲ್ಲಿದ್ದರೆ ಕೂಡಾ ಇಲ್ಲಿನ ಮನೆಗಳು ಸಕಾರಾತ್ಮಕ ಗುಣ ಪಡೆಯುತ್ತದೆ ಅನುಮಾನವಿಲ್ಲ. ಆದರೆ ಆಗ್ನೇಯ ದಿಕ್ಕಿಗೆ ಫ್ಲಾಟಿನ ಬೆಳವಣಿಗೆ ಮನೆ ಕಟ್ಟಲು ಉತ್ತಮವಾಗಿರದು. ವಾಯುವ್ಯ ದಿಕ್ಕಿಗೂ ಫ್ಲಾಟ್‌ ಬೆಳೆಯಕೂಡದು. ಇಲ್ಲಿ ಮನೆಯ ಕಟ್ಟುವಿಕೆ ಉತ್ತಮ ಫ‌ಲಾವಳಿಗೆ ಪೂರಕವಾಗಿರುವುದಿಲ್ಲ. ಹಾಗೆಯೇ ನೈರುತ್ಯದ ಕಡೆಯ ದೀರ್ಘ‌ತೆ ಫ್ಲಾಟ್‌ ಗಳಿಗೆ ಉಚಿತವಾದುದಲ್ಲ. ದಯಮಾಡಿ ಗಮನಿಸಿ. ಈ ರೀತಿಯಲ್ಲಿ ವಾಸ್ತುವಿನ ಕುರಿತಾದ ಕೆಲವು ಅಂಶಗಳನ್ನು ಕಡೆಗಣಿಸದೆಯೇ ಪುರಸ್ಕರಿಸಿದರೆ ಒಳ್ಳೆಯದು. ಹೆಚ್ಚಾಗಿ ಜಾತಕದ ದಶಾಕಾಲ ಸರಿ ಇರದಿರುವಾಗ, ಶನಿಕಾಟದ ಕೇಮದ್ರುಮಯೋಗದ ನಕಾರಾತ್ಮಕ ದಿನಗಳಲ್ಲಿ ವಾಸ್ತುವಿನ ಶಿಸ್ತು ಬದ್ಧತೆ ಮನೆಯನ್ನು ಪುಷ್ಟೀಕರಿಸಿದ್ದರೆ ಗ್ರಹಗಳ ದೌರ್ಬಲ್ಯವನ್ನು ನಿಯಂತ್ರಿಸುವ ಶಕ್ತಿ ಒದಗಿಬರುತ್ತದೆ. ಮನೆ ಮತ್ತು ನಿವೇಶನದ ತಾಳಮೇಳ ಹೇಗಿರಬೇಕು? ಬಹಳ ಜನರು ಸೈಟುಗಳ ಬಗೆಗೆ ಮನೆಗಳ ಬಗೆಗೆ ತಿರುತಿರುಗಿ ಅದೇ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಒಟ್ಟಿನಲ್ಲಿ ಜನರಿಗೆ ತಮ್ಮ ಸೈಟು ಚೆನ್ನಾಗಿದೆ, ವಾಸ್ತುವಿನ ಪ್ರಕಾರ ಸಮರ್ಪಕವಾಗಿದೆ ಎಂಬ ಉತ್ತರ ಬೇಕು. ಒಮ್ಮೊಮ್ಮೆ ತಮ್ಮ ಎಲ್ಲಾ ಕಷ್ಟಗಳಿಗೂ ವಾಸ್ತು ದೋಷಗಳೇ ಕಾರಣ. ಮನೆಯ ವಾಸ್ತು ಅವ್ಯವಸ್ಥೆಗಳನ್ನು ಮುಂದೆ ಮಾಡಿಕೊಂಡು ಕೊರಗುತ್ತಿರುತ್ತಾರೆ. ಸೈಟಿನ ಉತ್ತಮ ಅಥವಾ ದೌರ್ಬಲ್ಯದ ಕುರಿತು ಸೈಟಿನ ಸಂಬಂಧ ರಸ್ತೆಯ ಜೊತೆ ಹೇಗೆ ಹೊಂದಿಕೊಂಡಿದೆ ಎಂಬುದರ ಮೆಲೆ ನಿರ್ಧರಿಸಬಹುದು. ಈ ಕುರಿತಾಗಿ ಸೂಕ್ತವಾದ ವಿಶ್ಲೇಷಣೆಯ ಅವಶ್ಯಕತೆ ಇದೆ. ಜನರು ಒಂದೇ ಸಮನೆ ಸಣ್ಣ ತೊಂದರೆಯ ಬಗೆಗೂ ತಲ್ಲಣಿಸಬಾರದು. ಒಂದು ಫ್ಲಾಟ್‌ ಬೇರೆಬೇರೆ ಕಾರಣಗಳಿಗಾಗಿ ತನ್ನ ಸಂಪನ್ನತೆ ಪಡೆಯುತ್ತದೆ. ಎದುರಾಗುವ ರಸ್ತೆ ಕೂಡಾ ಮುಖ್ಯವಾಗುತ್ತದೆ. ಉದಾಹರಣೆಗೆ ಒಬ್ಬ ಯಜಮಾನ ತನ್ನ ಕುಂಡಲಿಯ ವಿಚಾರದಲ್ಲಿ ಅಸಮತೋಲನ ಎದ್ದೇಳತೊಡಗಿದಾಗ ಮನೆ ಅಥವಾ ಮನೆಯ ನಿವೇಶನದ ಸ್ವರೂಪ ಮನೆಯ ಫ್ಲಾಟ್‌ಗೆ ಎದುರಾದ ರಸ್ತೆಯ ದಿಕ್ಕು ಸೂಕ್ತವಾಗಿದ್ದರೂ ಕಷ್ಟಗಳು ಎದುರಾದೀತು. ತಮ್ಮ ಕಷ್ಟಗಳಿಗೆಲ್ಲಾ ಮನೆಯ ವಾಸ್ತು ದೋಷವೇ ಎಂದು ತಿಳಿಯಬೇಕಿಲ್ಲ. ನಾಲ್ಕು ದಶಕಗಳ ಹಿಂದೆ ರಾಜೇಶ್‌ ಖನ್ನಾ ಕೀರ್ತಿ ಶೀಖರಕ್ಕೆ ಏರತೊಡಗಿದ ಹೊತ್ತು. ಅಂದಿನ ಸೂಪರ್‌ ಸ್ಟಾರ್‌ ಎಂದು ಸುಮಾರಾಗಿ ಕರೆಯಬಹುದಾಗಿದ್ದ ರಾಜೇಂದ್ರ ಕುಮಾರ್‌ ಅವರಿಂದ ರಾಜೇಶ್‌ ಖನ್ನಾ ಅವರು ಆಶೀರ್ವಾದ್‌ ಎಂಬ ಬಂಗಲೆಯೊಂದನ್ನು ಖರೀದಿಸಿದ್ದರು. ಆಶೀರ್ವಾದಕ್ಕೆ ಬಂದ ರಾಜೇಶ್‌ ಖನ್ನಾ ಆಗ ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿದ್ದು ಸುಳ್ಳೆನಲ್ಲ. ಪೂರ್ಣಪ್ರಮಾಣದ ಸೂಪರ್‌ ಸ್ಟಾರ್‌ ಆಗಿ ರಾಜೇಶ್‌ ಖನ್ನಾ ಜನಪ್ರಿಯತೆಯ ಮೌಂಟ್‌ ಎವರೆಸ್ಟ್‌ ಏರಿದ್ದರು. ಆದರೆ ಕಾಲದ ಸಂಪನ್ನತೆ ಅಥವಾ ದಾರುಣತೆ ಒಂದೇ ರೀತಿಯಲ್ಲಿರಲಾರದು ಎಂಬಂತೆ ರಾಜೇಶ್‌ ಮೇಲೇರಿದಷ್ಟೇ ವೇಗದಲ್ಲಿ ಕೆಳಗಿಳಿಯ ತೊಡಗಿದ್ದಾಗಲೂ ಆಶೀರ್ವಾದ್‌ ಬಂಗಲೆಯಲ್ಲಿಯೇ ಇದ್ದರು. ಆದರೆ ಏರಲು ಇಳಿಯಲು ಖ್ಯಾತರಾಗಲು ಕೀರ್ತಿ ಪಡೆಯಲು ಧನಲಾಭ ಹೊಂದಲು ಮನೆಯ ನಿವಾಸದ ವಾಸ್ತು ಒಂದೇ ಕಾರಣವಲ್ಲ ಎಂಬುದನ್ನೂ ಆಶೀರ್ವಾದದಲ್ಲಿ ಇದ್ದೂ ಬಿಕ್ಕಟ್ಟಿಗೆ ಜಾರಿದ ಸೋಲಿಗೆ ಮುಖಮಾಡಿದ ರಾಜೇಶ್‌ ಖನ್ನಾರೇ ದೊಡ್ಡ ಸಾಕ್ಷಿ. ಅವರ ಯಶಸ್ಸಿಗೆ ಕಾರಣವಾದ ಗ್ರಹದ ಚಲಾವಣೆ ಮುಗಿದು ದುರ್ಬಲ ಗ್ರಹವೊಂದರ ಅಧಿಪತ್ಯದ ದಶಾಕಾಲ ಬಂದಾಗ ರಾಜೇಶ್‌ ಖನ್ನಾ ಸೋಲತೊಡಗಿದ್ದರು. ಪತ್ನಿಯ ಜೊತೆಗೂ ಬಿರುಕು ಒಡಮೂಡಿತ್ತು. ಬರೀ ಸುಮ್ಮನೆ ವಾಸ್ತು ದೋಷ ವಾಸ್ತು ದೋಷ ಎಂದನ್ನುತ್ತ ಮನೆಯನ್ನು ದೂಷಿಸುತ್ತಿರಬಾರದು.ನಿಜ ಭಾರತೀಯ ವಾಸ್ತುಶಾಸ್ತ್ರ ಕೆಲವು ವಿಚಾರಗಳನ್ನು ಮನೆಯ ಸೈಟು ಎದುರಿಸುವ ದಿಕ್ಕಿನ ಮೇಲಿಂದ ಸಂಪನ್ನವಾದುದು ಸಂಪನ್ನವಾದುದಲ್ಲ ಎಂದು ಪ್ರತ್ಯೇಕಿಸಿದೆ. ಹಲವು ನಿರ್ದಿಷ್ಟ ಅಂಶಗಳನ್ನು ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದೆ. ಒಂದು ಸೈಟಿಗೆ ರಸ್ತೆ ದಕ್ಷಿಣ ದಿಕ್ಕಿನಲ್ಲಿದ್ದರೆ ಕೆಲವು ತೊಂದರೆಗಳನ್ನು ಇದು ಸೃಷ್ಟಿಸುತ್ತದೆ. ದಕ್ಷಿಣದ ಹಾದಿ ಮನೆಯ ಸೈಟಿಗಿಂತ ತಗ್ಗಿನಲ್ಲಿದ್ದರೆ ಇದು ಸೂಕ್ತವಲ್ಲ. ಪೂರ್ವ ದಿಕ್ಕನ್ನು ಮುಖಮಾಡಿಕೊಂಡ ಸೈಟ್‌ ಸಾಮಾನ್ಯವಾಗಿ ಸಂಪನ್ನವಾದುದು ಎಂದು ಹೇಳಬಹುದು. ಹೀಗೆ ಮುಖಮಾಡಿದ ಮನೆಗಳು ಇತರೆ ಯಾವುದೇ ಅಡೆತಡೆಗಳಿಂದ ತೊಂದರೆಗೆ ಒಳಗಾಗುವುದಿಲ್ಲ. ನೇರವಾಗಿ ಸೂರ್ಯರಶ್ಮಿ ಪೂರ್ವ ದಿಕ್ಕಿನಿಂದ ಮನೆಯೊಳಗಡೆ ಪ್ರವೇಶೀಸುವ ತೀಕ್ಷ್ಣತೆ ಸ್ವಾಗತಾರ್ಹವಾದುದು. ಸೂರ್ಯನ ರಶ್ಮಿಗಳು ಮುತ್ತಿಕ್ಕುವ ಮನೆಯ ಪ್ರಜ್ವಲನಕ್ಕೆ ಒಂದು ರೀತಿಯ ಅನನ್ಯತೆ ಇರುತ್ತದೆ. ಉತ್ತರ ದಿಕ್ಕನ್ನು ದೃಷ್ಟಿಸುವ ಪ್ಲಾಟ್‌/ ಮನೆಗಳು ಉತ್ತಮವೇ. ಖಗೋಲ ಸಂಪನ್ನವಾದ ವಿಶ್ವವನ್ನು/ ವಿಶ್ವದಿಂದ ಸಂವೇದಿಸುವ ಶಕ್ತಿಮೂಲ ಇಂಥ ಮನೆಗಳಿಗೆ ದಕ್ಕುತ್ತದೆ ಎಂಬುದು ಆಷೇìಯ ವಿಷಯವಾಗಿದೆ. ಮುಳುಗುವ ಬಾಗಿಲಿನ ಸೌರಭ ತಟಸ್ಥವಾದ ಶಕ್ತಿಧಾತುವನ್ನು ಪಡೆದಿರುವುದರಿಂದ ನಷ್ಟಗೊಳ್ಳುವುದಾಗಲೀ, ಲಾಭಕ್ಕಾಗಿನ ಅಂಶಗಳಾಗಲೀ ಒಂದು ಇನ್ನೊಂದನ್ನು ಮೀರಿ ನಿಲ್ಲಲಾರದ ರೀತಿಯಲ್ಲಿ ಎರಡೂ ಒಂದೇ ಹದದಲ್ಲಿ ಇರುತ್ತದೆ. ವಾಸ್ತು ಶಾಸ್ತ್ರವನ್ನು ನಾವು ನಿರ್ಲಕ್ಷಿ$ಸಲಾಗದು. ಹಾಗೆಂದು ವಾಸ್ತುವಿಗೆ ವಿರುದ್ಧವಾದುದನ್ನು ಅನುಕೂಲವಾಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಅರಿತುಕೊಳ್ಳಬೇಕು. ಮನೆಯಲ್ಲಿ ನೀರು ಹಿಡಿದಿಟ್ಟರೆ ಏನೆಲ್ಲಾ ಆಗುತ್ತಾ ಎಂದರೆ... ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಈ ಬಗ್ಗೆ ಗಮನವಿರಲಿ. ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಹೊಡೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌, ನಗರಸಭೆ, ಮುನಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲ ಜನರು. ಹೇಗೋ ಸಂಗ್ರಹಿಸುತ್ತಾರೆ, ಹೇಗೋ ನೀರಿನ ಪೂರೈಕೆ ಮನೆಯೊಳಗಡೆಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿ ನಗರ, ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ನೋಡುವುದಾದರೆ ಈಶಾನ್ಯ ಮೂಲೆಯಲ್ಲಿ ( ಉತ್ತರ ಹಾಗೂ ಪೂರ್ವ ದಿಕ್ಕುಗಳು ಸಮಾವೇಶವಾಗುವ ಸ್ಥಳ) ಬಾವಿಯನ್ನು ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯ ಮೂಲೆಯೇ ಪ್ರಾಶಸ್ತ್ಯದ ಜಾಗೆಯಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡ ಈಶಾನ್ಯ ಮೂಲೆಯಲ್ಲೇ ಇರಬೇಕು. ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲ ತಲೆಕೆಡಿಸಿಕೊಳ್ಳುವ ವಿಚಾರವಲ್ಲ. ಮನೆಯ ಸುಮಾರು ಒಟ್ಟೂ ವಿಸ್ತ್ರೀರ್ಣದ ಶೇಕಡ ಒಂದು ಭಾಗದಷ್ಟು ಉದ್ದಗಲಗಳು ಸಂಪಿಗೆ ಒದಗಿರಲಿ ಎಂಬುದನ್ನು ಗಮನಿಸಿ. ಸಂಪಿನ ಆಳ ಆರಡಿಯನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪ್‌ ಅನ್ನು ಆಗಾಗ ಸ್ವತ್ಛಗೊಳಿಸುವುದು ನಡೆಯಬೇಕಲ್ಲ? ಆರೋಗ್ಯಕ್ಕೆ ಇದು ಮುಖ್ಯ. ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಯುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಲಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರದ್ದಿರುತ್ತದೆ. ಈಜುಗೊಳವನ್ನು ಕೂಡ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ. ಈ ಏನೇ, ಇತರ, ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಗಮನವಿರಲಿ. ಹೇಗೆಂದರೆ, ಮನೆಯ ಮೇಲಿನ ಓವರ್‌ಹೆಡ್‌ ಟ್ಯಾಂಕ್‌ಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಒಗ್ಗೂಡುವ ಜಾಗದಲ್ಲಿರುವುದು ಸೂಕ್ತ. ಇದರಿಂದ ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದಾಗಿ ದೊರಕುತ್ತಿರುತ್ತದೆ. ಅಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾಗುವ ವಿಚಾರ ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಇದು ತುಂಬಾ ಮುಖ್ಯ ತಿಳಿದಿರಿ. ವಾಸ್ತು ನಿಯಮಗಳೂ, ಸರಳ ಪರಿಹಾರಗಳೂ ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ... ಮನೆಯನ್ನು ಕಟ್ಟುವಾಗಿನ ವಾಸ್ತು ನಿಯಮಗಳನ್ನು ಪ್ರಮುಖವಾಗಿ ಪಡಸಾಲೆ, ಅಡುಗೆ ಮನೆ, ಬಚ್ಚಲುಮನೆ, ಮಲಗುವ ಕೋಣೆ, ಸಂಡಾಸು, ಸ್ಟೋರ್‌ ರೂಂ. ಕಿಟಕಿ ಬಾಗಿಲು, ದೇವರ ಕೋಣೆ ಮುಂತಾದವುಗಳೆಲ್ಲ ಸೂಕ್ತವಾಗಿಯೇ ಮಾಡಿರುತ್ತೀರಿ ಎಂದುಕೊಳ್ಳೋಣ. ಇವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಅಷ್ಟು ಸುಲಭವಲ್ಲ ಎಂಬ ಮಾತು ಬೇರೆ. ಏನೋ ಒಂದು ದೋಷ ಹಾಗೆ ಸುಮ್ಮನೆ ಉಳಿದೇಬಿಡುತ್ತದೆ. ಸರಿಯಾದ ಶಕ್ತಿ ಧಾತುಗಳನ್ನು ಸಂಪಾದಿಸಿಕೊಂಡರೆ ಉಳಿದಿರುವ ಕಿಂಚತ್‌ ಲೋಪಗಳನ್ನು ಸುಧಾರಿಸಿಕೊಳ್ಳಬಹುದಾಗಿದೆ. ವಿವೇಚನೆಯೊಂದಿಗೆ ಇಂದಿನ ಕೆಲವು ಸರಳ ಪರಿಹಾರಗಳನ್ನು ನೀವು ನಡೆಸಿ, ಉಳಿದುಹೋದ ದೋಷಗಳನ್ನು ಸಮತೋಲನಗೊಳಿಸಿ, ಉಂಟಾಗಲಿರುವ ತೊಂದರೆಗಳನ್ನು ತಪ್ಪಿಸಿಕೊಳ್ಳುವುದು ಸೂಕ್ತ. ಸಾಧಕ ಶಕ್ತಿಗಾಗಿನ ಜಾಗ್ರತ ಕೋಶಗಳು ನಿಮ್ಮಲ್ಲಿ ಕ್ರಿಯಾಶೀಲವಾಗಬೇಕು. ದೇವಿ ಆರಾಧನೆ, ದತ್ತಾತ್ರೇಯ ಆರಾಧನೆ, ಗಣಪತಿ, ರಾಮರಕ್ಷಾ, ಮಾರುತಿ ಆರಾಧನೆಗಳು ಎಷ್ಟು ಪ್ರಾಬಲ್ಯವನ್ನು ತಡೆಯಲು ಸಾಧ್ಯ? ಎಂಬುದು ಇಲ್ಲಿ ಮುಖ್ಯ. ಜೀವ ಧಾತುಗಳಾದ ಗಾಳಿ, ನೀರು, ಬೆಂಕಿ, ಮಣ್ಣುಗಳ ಜೊತೆ ಆಕಾಶ ತತ್ವ ಒಂದು ಸುಲಲಿತವಾದ ಧಾಟಿಯಲ್ಲಿ ನಿಮ್ಮ ನಿಯಂತ್ರಣಕ್ಕೆ ಸಿಕ್ಕಿದರೆ ಅದರಿಂದ ಇಂದ್ರಾದಿ ದೇವತೆಗಳ, ತ್ರಿಮೂರ್ತಿಗಳ ಕುರಿತಾದ ಸಿದ್ಧಿ ಸೂತ್ರಗಳ, ಆದಿ ಶಕ್ತಿ ಮಹಾಮಾಯ ಆ ಶ್ರೀಪೀಠ ಶೋಭಿತಳಾದ ಕ್ಷೀರ ಸಮುದ್ರ ತನಯೆ ಲಕ್ಷ್ಮಿಯ, ಬುದ್ಧಿಬಲ ನೀಡುವ ಕಾಮರೂಪಿಣಿ ಮಂಗಳಮಯ ಶ್ರೀಶಾರದೆಯ ಅಭಯ, ರಕ್ಷೆ ಸಿಗಲು ಸಾಧ್ಯ. ಪರಾತ್ಪರವಾದ ಶಕ್ತಿಯನ್ನು ಧ್ಯಾನಿಸುವ ಏಕಾಗ್ರತೆಯನ್ನು ಮಂತ್ರಶಕ್ತಿಯಿಂದ, ಧಾರ್ಢ್ಯತೆ ಪಡೆದ ಧಾತುಗಳಿಂದ, ವಾಸ್ತುಪುರುಷನ ಅಭಿವ್ಯಕ್ತಿ ವೃದ್ಧಿಸುವ ಚೈತನ್ಯ ಪಡೆಯಬೇಕು. ಇದು ಸುಲಭದ ಕೆಲಸವಲ್ಲ. ಸಾಧನೆಯಿಂದ ಸಾಧಿಸಬೇಕು. ಭಕ್ತಿಯಿಂದ ಗೆಲ್ಲಬೇಕು. ಮನೆಯಲ್ಲಿ ಪ್ರತಿನಿತ್ಯವೂ ಬೇಕಾದ ಸಲಕರಣೆಗಳ ಆಯ್ಕೆಯ ವಿಚಾರದಲ್ಲಿ ಏನನ್ನೂ ಯೋಚಿಸದೆಯೇ ವಾಸ್ತು ನಾಡಿಯನ್ನು ಅಸ್ತವ್ಯಸ್ತಗೊಳಿಸುವ ಕೆಲಸ ಮಾಡಬೇಡಿ. ಪ್ರತಿ ದಿನವೂ ಬಹಳ ಅಮೂಲ್ಯವಾದದ್ದು. ಪ್ರತಿಕ್ಷಣವೂ ಬಾರದಿರುವಂಥದ್ದು. ಸುಮ್ಮನೇ ಕ್ಷಣಗಳು ಜಾರುತ್ತಿರುತ್ತದೆ. ನಾಳೆ ಮಾಡಿದರಾಯ್ತು ಎಂದು ಶುದ್ಧತೆಯನ್ನು ತುಂಬಿಕೊಂಡ ಪ್ರಕೃತಿ ಅಲೆಗಳನ್ನು ಸುಮ್ಮನೆ ವ್ಯರ್ಥ ಗೊಳಿಸಿಕೊಳ್ಳುತ್ತೀರಿ. ಮನೆಯ ದಿಕ್ಕು ಪೂರ್ವ, ಉತ್ತರ ಎಂದು ಗಾಬರಿ ಹುಟ್ಟುವಷ್ಟು ಗಡಿಬಿಡಿಯೊಂದಿಗೆ ಧಾವಿಸಿ ಕೈವಶ ಪಡೆಯಲು ಮುಂದಾಗುತ್ತೀರಿ. ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ. ಸ್ಟೋರ್‌ ರೂಮಿನಲ್ಲಿ ಇಡಬೇಕಾದ ಸರಕುಗಳೇನು ಎಂಬುದನ್ನು ಯೋಚಿಸದೆಯೇ ಎಲ್ಲವನ್ನೂ ರಾಶಿ ಮಾಡಿ ತುಂಬುತ್ತೀರಿ. ಪಶ್ಚಿಮ ದಿಕ್ಕಿಗೆ ಬೆಡ್‌ ರೂಮ್‌ ಗಳಿರಲಿ ಎಂಬ ವಿಚಾರ ಸರಿ. ಆದರೆ ಮುಕ್ತ ಹಜಾರಕ್ಕೂ ಬೆಡ್‌ ರೂಮಿಗೂ ಹೊಂದಿಸಿಕೊಳ್ಳಬೇಕಾದ ಅಗಲ ಉದ್ದಗಳನ್ನು ಸೂಕ್ತವಾಗಿ ಇರಿಸಿಕೊಳ್ಳಲು ಯೋಚಿಸುವುದಿಲ್ಲ. ಮುಖ್ಯವಾಗಿ ಅಪಾರ್ಟ್ಮೆಂಟ್ ನಲ್ಲಿ ಮಕ್ಕಳನ್ನು ಎಲ್ಲೆಂದರಲ್ಲಿ ಆಡಲು ಕಳುಹಿಸುತ್ತೀರಿ. ಅವರ ಬಳಿ ಎಲೆಕ್ಟ್ರಾನಿಕ್‌ ಸರಕುಗಳಾದ ಮೊಬೈಲ್‌ ಡಿಜಿಟಲ್‌ ವಾಚ್‌ ಇನ್ನೇನೋ ಆಟಿಕೆ ಇರುತ್ತದೆ. ದಕ್ಷಿಣ ದಿಕ್ಕಿನ ಆಘಾತಗಳು ಎಂಥದಿರಬಹುದು ಇದರಿಂದಾಗಿ ಎಂಬುದನ್ನು ಯೋಚಿಸುವುದಿಲ್ಲ. ಇವನ್ನೆಲ್ಲ ಸೂಕ್ತವಾದ ಸುವಸ್ತುಗಳು, ಹರಳುಗಳು, ಸ್ವಸ್ತಿಕ್‌, ಶಂಖು ಚಕ್ರ, ಗದಾ ಪದ್ಮ ತ್ರಿಶೂಲ ಧಾತುಗಳ ಮೂಲಕ ಒಂದು ಸಮತೋಲನ ಪಡೆಯಲು ಸುಲಭವಾದ ದಾರಿ ಏನೆಂಬುದನ್ನು ಅರಿಯಲು ಮುಂದಾಗುವುದಿಲ್ಲ. ಬದಲಾದ ಕಾಲಘಟ್ಟದಲ್ಲಿ ಉಂಟಾಗುವ ವಿಕಿರಣಗಳಿಂದಾಗುವ ಅಪಾಯಗಳನ್ನು ತಪ್ಪಿಸಿಕೊಳ್ಳಲು ರಕ್ಷಣೆಯನ್ನು ಬಯಸುತ್ತದೆ. ಸುಲಭವಾದ ದಾರಿಯಿಂದ, ಸಾಧನಗಳಿಂದ ರಕ್ಷೆ ಸಾಧ್ಯ. ಪಶ್ಚಿಮದ ದಿಕ್ಕಿನ ಅಂಗಡಿಯ ವ್ಯಾಪಾರ, ವ್ಯವಹಾರ ಚೆನ್ನಾಗಿರುತ್ತಾ? ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ, ಇಂಟರ್‌ ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ. ಕನಕೋತ್ತಮ ಕಾಂತಿಃ ಕನಕಭೂಷಣಃ ಇತ್ಯಾದಿ - ದುರ್ಗಾಳ ಕುರಿತಾಗಿ ದುರ್ಗಾ ಸಪ್ತಶತಿಯಲ್ಲಿ ಇದು ಬರುತ್ತದೆ. ದೇವಿಯ ಸುವರ್ಣ ಕಾಂತಿಯ ಮೂರ್ತಿ ವಿವರಣೆಯ ಸಂದರ್ಭದಲ್ಲಿ ಉಲ್ಲೇಖವಾಗುತ್ತದೆ. ಪಶ್ಚಿಮ ದಿಕ್ಕನ್ನು ದೃಷ್ಟಿಸುವ ಅಂಗಡಿಯ ವ್ಯಾಪಾರವು ಅಂಬಾಳಿಂದಲೇ ಜಗದಂಬಾ ಎಂದು ಆರಾಧಿಸುವ ದುರ್ಗಾಳಿಂದಲೇ ಒದಗಿಬರಬೇಕು. ಸರ್ವತ್ರ ಭೂತಳಾದ ದೇವಿಯು ಸಜ್ಜನನ ಪಾಲಿಗೆ ವರ ಕೊಡುವ ಕಾಮಧೇನು. ಅಂಗಡಿಯಲ್ಲಿ ನೈಋತ್ಯ ಮೂಲೆಯಲ್ಲಿ ಯಜಮಾನ ಅಥವಾ ಯಜಮಾನತಿ ಕುಳಿತಿರಬೇಕು. ಈ ಮೂಲೆ ಕೊಂಚ ಎತ್ತರವಾಗಿರಬೇಕು. ಉಳಿದ ಯಾವ ದಿಕ್ಕುಗಳೂ ಅಂಗಡಿಯ ಮಾಲೀಕ ಜನಕ್ಕೆ ಉಪಯೋಗಕ್ಕೆ ಬರುವಂಥದ್ದಲ್ಲ. ವಾಯುವ್ಯ ಮೂಲೆಯನ್ನು ಅನೇಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರಿದು ಸೂಕ್ತ ವಿಚಾರವಲ್ಲ. ಇಲ್ಲಿ ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ ಇಂಟರ್‌ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ. ಅದೇ ರೀತಿ ಯಜಮಾನ ಅಥವಾ ಒಡತಿಗೆ ಪೂರ್ವ ಅಥವಾ ಉತ್ತರ ದಿಕ್ಕನ್ನು ನೋಡುತ್ತಾ ಜವಾಬ್ದಾರಿ ನಿರ್ವಹಿಸಬೇಕು. ಶಟರ್ಸ್‌ಗಳ ವಿಚಾರದಲ್ಲೂ ಕೆಲವು ಅಗತ್ಯವಾದ ಚಿಂತನ ಗಮನಗಳ ಔಚಿತ್ಯ ಸೂಕ್ತವಾಗಿರಲಿ. ಎರಡು ಶಟರ್ಸ್‌ಗಳನ್ನು ಹೊಂದಿರುವರಾದರೂ ಎರಡನ್ನೂ ಉಪಯೋಗಿಸುವುದಕ್ಕೆ ತೊಂದರೆ ಇಲ್ಲ. ಆದರೆ ವಾಯುವ್ಯ ಮೂಲೆಯ ಶಟರ್‌ ಮಾತ್ರ ಪ್ರಧಾನವಾದ ಆಯ್ಕೆಯನ್ನು ಉಪಯೋಗದ ವಿಷಯದಲ್ಲಿ ಪಡೆದಿರಲಿ. ಪ್ರಾಶಸ್ತ್ಯವಂತೂ ವಾಯುವ್ಯ ದಿಕ್ಕಿನ ಶಟರ್‌ಗೇ ದೊರಕುವಂತಾಗಲಿ. ಯಾವುದೇ ದೈವಿಕ ಪೂಜಾ ಕೆಲಸಗಳಿಗಾಗಿ ಸಂಬಂಧಿಸಿದ ಮೂರ್ತಿ ಅಥವಾ ಸ್ತುತಿ ಈಶಾನ್ಯದಲ್ಲೇ ನಡೆಯಲಿ. ಕಸಬರಿಗೆ ಒರೆಸುವ ವಸ್ತ್ರ, ಟಾಯ್ಲೆಟ್‌ ಸಲಕರಣೆಗಳು ನ್ಯಾಪ್‌ಕಿನ್‌, ಪೇಪರ್‌ ಕಬ್ಬಿಣದ ತ್ಯಾಜ್ಯಗಳನ್ನು ಈಶಾನ್ಯ ಅಥವಾ ವಾಯುವ್ಯ ನೈಋತ್ಯ ವಹಿವಾಟಿನ ಜಾಗೆಯಲ್ಲಿ ಇಡಬೇಡಿ. ದೇವರನ್ನಿಡುವ ಜಾಗದಲ್ಲಿ ಚಿಕ್ಕದೊಂದು ಕ್ರಿಷ್ಟಲ್‌ ಪಿರಮಿಡ್‌ ಅಥವಾ ಅಭಿಮಂತ್ರಿಸಿದ ಶಂಖ, ಗದಾ, ಧಾತು, ಸಮಷ್ಟಿ ಸಂಪುಟಗಳು ಇದ್ದಿರಲಿ. ಸಮಸ್ಯೆಗಳೇನೂ ಇಲ್ಲ. ಅತಿಯಾದ ಅಲಂಕಾರಗಳು ಬೇಡ. ಯಜಮಾನ / ಒಡತಿಯ ಹಿಂದಗಡೆಯ ದಕ್ಷಿಣ ದಿಕ್ಕಿಗೋ ವಿಸ್ತರಿಸಿದ ಜಾಗೆಯಲ್ಲಿ ಕನ್ನಡಿಯ ಜೋಡಣೆ ಅಥವಾ ದೇವರ ಮೂರ್ತಿ ಅಥವಾ ಚಿತ್ರಗಳು ಬೇಡ. ನಿಮ್ಮ ನಿಮ್ಮ ಜಾತಕದ ಆಧಾರದಲ್ಲಿ ದೇವರ ಸಲುವಾಗಿನ ಆರಾಧನೆಗಾಗಿನ ಹೂವುಗಳ ಬಣ್ಣ ಇರಲಿ. ನೈಋತ್ಯ ದಿಕ್ಕಿನಲ್ಲಿ ಸಿಮೆಂಟಿನ ಕಟ್ಟೆ ಸಮಾವೇಶಗೊಳಿಸಿ, ಅಲ್ಲಿ ಆರಾಧನೆಗಾಗಿನ ಸಲಕರಣೆಗಳು ಇಡಲ್ಪಟ್ಟರೆ ತೊಂದರೆಗಳಿಲ್ಲ. ವಾಯುವ್ಯ ಮೂಲೆಯಲ್ಲಿನ ಪಶ್ಚಿಮದ ಭಾಗದಲ್ಲಿ ಮೆಟ್ಟಿಲುಗಳು ಇದ್ದು ಅಂಗಡಿಯ ಒಳಬರಲು ಸಾಧ್ಯವಾಗುವ ಹಾಗೆ ರಚನೆ ಇರಲಿ. ವ್ಯಾಪಾರದ ವಾಣಿಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಮಾತುಕತೆಗಳ ಕಾಲದಲ್ಲಿ ಹೊರರಸ್ತೆಯ ಧೂಳು ಬರದಂತೆ ಬಾಗಿಲು ಮುಚ್ಚಿರಲಿ. ರೆಸ್ಟೋರಂಟ್‌ಗಳಾದರೆ ಸ್ಪಾಂಜ್‌ ಬಳಸಿದ ದ್ರಾವಣ, ಪ್ಲಾಸ್ಟಿಕ್‌ ಕಸಬರಿಕೆ, ಉದ್ದನೆಯ ಕೋಲಿಗೆ ಕಟ್ಟಿದ ನೆಲ ಒರೆಸುವ ಮಾಪು ನಡೆಯಲಿ. ಗ್ರಾಹಕರಿಗೆ ದ್ರಾವಣ ಸಿಡಿಯದಂತೆ, ಕಸಬರಿಕೆ ಸೋರದಂತೆ ಎಚ್ಚರಿಕೆ ವಹಿಸಿ. ಕೆಲಸಗಾರರಿಗೆ ಈ ಕುರಿತು ಸರಳವಾದ ಬೋಧನೆ ಮಾಡಿ. ಯಜಮಾನನ ಜಾತಕಕ್ಕೆ ಹೊಂದುವ ಬಣ್ಣದ ಅನುಸಾರ ಕೆಲಸಗಾರರ ಸಮವಸ್ತ್ರವಿರಲಿ. ಎಲ್ಲವೂ ಸರಿಯಾಗಿದ್ದರೆ ಲಕ್ಷ್ಮೀಯ ಚಿತ್ತ ಆನಂದವಾಗಿರುತ್ತದೆ. ಮನೆಯ ಬಾವಿ ಯಾವ ಮೂಲೆಯಲ್ಲಿ ಇರಬೇಕು ಅನ್ನೋದು ಗೊತ್ತಾ? ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರ್‌ ಅನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗ. ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಕೊರೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌ ನಗರಸಭೆ ಮುನಿಸಿಪಾಲ್ಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ವಿಧಿ ವಿಧಾನಗಳನ್ನು ಜನರು ಅನುಸರಿಸುವುದಿಲ್ಲ. ಹೇಗೋ ಸಂಗ್ರಹಿಸುತ್ತಾರೆ. ಹೇಗೋ ನೀರಿನ ಪೂರೈಕೆ ಮನೆಯೊಳಗಡೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗವಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯವೇ ಆಗಿರಬೇಕು. ಹೀಗೆ ನಿರ್ಮಿಸುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೆ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲಾ ತೆಲೆಕೆಡಿಸಿಕೊಳ್ಳುವ ವಿಚಾರವಲ್ಲ. ಸುಮಾರಿ ಒಟ್ಟು ವಿಸ್ತೀರ್ಣದ ಶೇ. ಒಂದುರಷ್ಟು ಭಾಗದ ಉದ್ದಗಲಗಳನ್ನು ಸಂಪಿಗೆ ಒದಗಿಸಿರಬೇಕು. ಸಂಪಿನ ಆಳ ಆರಡಿಗಳನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಳೆನೀರಿನ ಕೊಯ್ಲು ಮತ್ತು ವಾಸ್ತು ಕೊಯ್ಲು ಇರುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡಾ ಈಶಾನ್ಯ ಮೂಲೆಯಲ್ಲೇ ಇರಬೇಕು. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರದ್ದಿರುತ್ತದೆ. ಈಜುಕೊಳವನ್ನು ಕೂಡಾ ನಿರ್ಮಿಸುವ ವಿಚಾರವಿರುತ್ತದೆ. ಈ ಏನೇ ಇತರ ನೀರಿಗೆ ಸಂಬಂಧಿಸಿದ ವಿಚಾರಗಳಿದ್ದರೂ, ಈಶಾನ್ಯ ದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲಾ ಮೂಲಗಳೂ ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಂಡಿರಬೇಕು. ಹೀಗೆಂದು ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳು ಈಶಾನ್ಯದಲ್ಲಿರಬಾರದು. ಇವು ಕಡ್ಡಾಯವಾಗಿ ನೈಋತ್ಯದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಸೇರುವ ಮೂಲೆಗೆ ನೈಋತ್ಯವೆನ್ನುತ್ತಾರೆ. ನೈರುತ್ಯದಲ್ಲಿ ಟ್ಯಾಂಕ್‌ ಇಡುವುದು ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಯಾಗುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಿ. ಪ್ರಾಣಿಕ್‌ ಹೀಲಿಂಗ್‌ ಎನ್ನುವ ವಿಚಾರದ ಸಕಾರಾತ್ಮಕ ಬಲ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದ ದೊರೆಯುತ್ತದೆ. ಅಪ್ರದಕ್ಷಿಣಾ ರೂಪದಲ್ಲಿದ್ದರೆ ನಕಾರಾತ್ಮಕ ಬಲ ದೊರೆಯುತ್ತದೆ. ಇದು ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಈ ಬಲಗಳು ಬಹು ಪರಿಣಾಮಕಾರಿಯಾಗಿದೆ. ಮನೆ ಕಟ್ಟುವಾಗ ವಾಸ್ತು ನೋಡಿ ಮನೆಯನ್ನು ಕಟ್ಟುವಾಗ ಅನೇಕ ಸಣ್ಣ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ ಅಗ್ನಿಮೂಲೆ, ವಾಯು ಮೂಲೆಗಳಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲು ಮನೆ, ಪಡಸಾಲೆ. ದೇವರ ಮನೆ, ಇತ್ಯಾದಿಗಳನ್ನೆಲ್ಲ ಮೀಸಲಿಡಬೇಕೆಂಬ ಸಂಗತಿ ಬೇರೆ. ಆದರೆ ಈ ಎಲ್ಲಾ ವಿಚಾರಗಳ ಹೊರತಾಗಿ ಕೆಲವು ಅನುಸರಿಸಬೇಕಾದ ವಿಚಾರಗಳು ಕೂಡಾ ಮುಖ್ಯವಾಗಿದೆ. ಇದರಿಂದ ಮನೆಯೊಳಗಿನ ಶಾಂತಿ, ಸಮಾಧಾನ, ಸಮೃದ್ಧಿ, ಆರೋಗ್ಯ, ನಗು, ಕೇಕೆ, ಸುಖ, ಸಂತೋಷಗಳೆಲ್ಲ ವೃದ್ಧಿಗೊಳ್ಳಲು ಅವಕಾಶ ಒದಗಿ ಬರುತ್ತದೆ. ಇಲ್ಲದಿದ್ದರೆ ಅನೇಕ ಕಿರಿಕಿರಿಗಳು ಎಲ್ಲಾ ವಿಚಾರಗಳಲ್ಲೂ ಮೂಡಿಬಂದು ಅನೇಕ ಅಶಾಂತಿ, ಅಸಮಾಧಾನಗಳಿಗೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ರಸ್ತೆಯಿಂದ ಮನೆಯೊಳಗಿನ ಕಾಂಪೌಂಡ್‌ ಒಳಗೆ ಕಾಲಿಡಲು, ಇರುವ ಗೇಟ್‌ ಯಾವಾಗಲೂ ಮನೆಯ ಹೆಬ್ಟಾಗಿಲಿಗಿಂತ ಚಿಕ್ಕದಿರಬೇಕು ಹಾಗೂ ಹೆಬ್ಟಾಗಿಲು ಎತ್ತರದಲ್ಲಿರಬೇಕು. ಇತ್ತೀಚೆಗೆ, ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರೊಬ್ಬರು ಇದ್ದ ತಮ್ಮ ಮನೆಯನ್ನು ಹಳೆ ರೀತಿಯಿಂದ ಹೊಸಮಾದರಿಗೆ ನವೀಕರಣಗೊಳಿಸುವ ಸಂದರ್ಭದಲ್ಲಿ ಕಾಪೌಂಡ್‌ ಗೇಟನ್ನು ತುಸು ಎತ್ತರಿಸಿ ನವೀನ ಕುಸುರಿಯಲ್ಲಿ ನಿಯೋಜಿಸಿ ಹೆಬ್ಟಾಗಿಲಿಗಿಂತ ದೊಡ್ಡದಾಗಿಸಿದರು. ಆದರೆ ಕೆಲವೇ ದಿನಗಳಲ್ಲಿ ಚೆನ್ನಾಗಿದ್ದ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಈ ಅಸಮತೋಲನ ಅಳತೆಗಳು ಸರಿಹೋದ ಮೇಲೆ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತು. ಮನೆಯ ಟೆರೆಸ್‌ ಅಥವಾ ಮಹಡಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಪೂರ್ವದಿಂದ ಪಶ್ಚಿಮಕ್ಕೆ ಮುಖವಿರಿಸಿ ಏರುವಂತಿದ್ದರೆ ಸೂಕ್ತ. ಉತ್ತರದಿಂದ ದಕ್ಷಿಣ ದಿಕ್ಕಿಗೆ ಮುಖವಾಗುವಂತೆ ಇದ್ದರೂ ಸರಿಯೆ. ಈ ಅಂಶವನ್ನು ಪರಿಪಾಲಿಸಿದಲ್ಲಿ ಉತ್ತಮ ಅದೃಷ್ಟವು ಶೀಘ್ರವಾಗಿ ಒದಗಿಬರಲು ಅವಕಾಶವಾಗುತ್ತದೆ. ಮನೆಯ ಸೈಟಿನಲ್ಲಿ ಗುದ್ದಲಿ ಪೂಜೆ ಕೂಡ ಪ್ರಮುಖವಾದದ್ದು. ದಕ್ಷಿಣ ಹಾಗೆಯೇ ಪೂರ್ವ ದಿಕ್ಕುಗಳು ಈ ಸಂದರ್ಭದಲ್ಲಿ ಪ್ರಥಮವಾಗಿ ಅಗೆಯಬಾರದು. ಪೂರ್ವ ದಿಕ್ಕಿನಲ್ಲಿ ಅಗೆಯುವ ವಿಚಾರ ಕೈಗೊಂಡಾಗ ಉತ್ತರ ದಿಕ್ಕಿನಲ್ಲೂ ಅಗೆತ ಪ್ರಾರಂಭಿಸಬೇಕು. ಇದರಿಂದ ಮನೆಯ ಎಲ್ಲಾ ವಿಚಾರಗಳಲ್ಲೂ ತೊಂದರೆ ಇಲ್ಲದೆ ಸುಸೂತ್ರವಾಗಿ ಮುಂದುವರೆಯುತ್ತದೆ. ದಕ್ಷಿಣ ದಿಕ್ಕಿಗೆ ಪೂರಕವಾಗಿ ಹೊರಗಿನ ವರಾಂಡ ಕಟ್ಟುವ ನಿರ್ಣಯ ನಡೆಸಿದಲ್ಲಿ ಆಗ್ನೇಯ ದಿಕ್ಕಿನಲ್ಲಿ (ಪೂರ್ವ ದಕ್ಷಿ$ಣ ಮೂಲೆಯ ಭಾಗ) ಕೋಣೆ ಇದ್ದು ಉತ್ತರ ದಿಕ್ಕಿಗೆ ಮುಖ ಮಾಡಿದ ಬಾಗಿಲನ್ನು ಕೂಡಿಸಬೇಕು. ಮನೆಯ ಯಜಮಾನನ ಆರೋಗ್ಯ ಲವಲವಿಕೆ ಉತ್ಸಾಹಗಳಿಗೆ ಇದು ಉತ್ತಮ ವಿಚಾರವಾಗುತ್ತದೆ. ಮನೆಯ ಮುಂಬಾಗಿಲು ವಿಷಯದಲ್ಲಿ ಎಚ್ಚರವಿರಲಿ. ನೇರ ಮುಂಬಾಗಿಲ ಎದುರಲ್ಲಿ ಒಂದು ಕಟ್ಟೆಯನ್ನೋ ಗೋಡೆಯನ್ನೋ ನಿರ್ಮಿಸಕೂಡದು. ಇದರಿಂದ ಮನೆಯ ಒಳಗೆ ಆಗಮಿಸುವ ಉತ್ತಮ ಸ್ಪಂದನಗಳು, ಸೌಭಾಗ್ಯ ಅಂಶಗಳು ಬರುವ ಅದೃಷ್ಟಕ್ಕೆ ತಡೆ ನಿರ್ಮಿಸಿದಂತಾಗಿ ಬಿಡುತ್ತದೆ. ಹೀಗಾಗಿ ತಾನಾಗಿ ಬರುವ ಒಳ್ಳೆ, ಸೌಭಾಗ್ಯದ ವಿಚಾರಗಳನ್ನು ನಾವಾಗಿ ಗೋಡೆ ಅಥವಾ ಕಟ್ಟೆ ಕಟ್ಟಿ ತಡೆಯಲು ಹೋಗಬೇಡಿ. ಕಟ್ಟೆ ಇರುವುದನ್ನು ಬಯಸಿ, ಕಟ್ಟುವುದಾದಲ್ಲಿ ಮುಂಬಾಗಿಲ ಅಕ್ಕಪಕ್ಕ ಬರುವಂತೆ ಕಟ್ಟಿ. ಮುಂಬಾಗಿಲಿಗೆ ಯಾವರೀತಿ ತಡೆಯೂ ಆಗದಂತೆ ನೋಡಿಕೊಳ್ಳಿ. ಮನೆಯ ಸುರಕ್ಷಿತಗಾಗಿನ ಗೋಡೆಯೂ ಕೂಡ, ಇದ್ದರೂ, ಕಟ್ಟಲ್ಪಟ್ಟರೂ ಮುಂಬಾಗಿಲ ಉದ್ದ, ಅಡ್ಡ ಅಗಲಗಳಿಗೆ ಯಾವುದೇ ರೀತಿ ತೊಂದರೆ ಆಗದೇ ಇರುವಂತೆ ಇರಲಿ. ಈವಿಚಾರವನ್ನು ಮರೆಯದೇ ಗಮನ ಹರಿಸುವುದು ಸೂಕ್ತ. ಮನೆಯ ಸೊಗಸು ಹಾಗೂ ಭದ್ರತೆಯ ವಿಚಾರಗಳನ್ನು ಯಾವಾಗಲೂ ಮರೆಯಬಾರದು. ವಾಸ್ತು ಸಲಹೆ: ವಾಯುವ್ಯ ದಿಕ್ಕಿನಲ್ಲಿ ಲಕ್ಷ್ಮೀ ಓಡಾಟ ಸಲೀಸು ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ ದಿವ್ಯದ ಬೆಳಕಿದೆ. ಹೀಗಾಗಿಯೇ ಶ್ರೀ ಮನ್ಮಹಾಲಕ್ಷ್ಮೀಯನ್ನು ಲೋಕದ ಏಕೈಕ ಬೆಳಕಿನ ಶಕ್ತಿ, ಬೆಳಕಿನ ಬೀಜ ಗರ್ಭವೇ ಮಹಾಲಕ್ಷ್ಮೀ ಎಂಬ ಮಾತಿದೆ ನಮ್ಮಲ್ಲಿ. ಹೀಗಾಗಿ ಮನೆಯ ವಾಯುವ್ಯ ದಿಕ್ಕಿನ ಮಹತ್ವ, ಸ್ವಚ್ಛತೆಯಿಂದ ಒಗ್ಗೂಡಿದ್ದರೆ ಸಂಪತ್ತಿಗೆ ಪ್ರೇರಕನಾದ ಚೈತನ್ಯ ಮನೆಯೊಡೆಯನಿಗೆ ನಿಶ್ಚಿತ. ಮನೆಯ ವ್ಯಾಪ್ತಿಗೆ ಸ್ಥಾವರ (ನಿಂತಲ್ಲಿಯೇ ನಿಂತ) ಸ್ಥಿತಿ ಒದಗಿದ್ದರೂ, ಅದು ತನ್ನೊಳಗಿನ ಜೀವಗಳನ್ನ ಚಲನಶೀಲತೆಗೆ ಒಳಪಡಿಸಿ ಚೈತನ್ಯದ ಸೆಲೆಯನ್ನು ತುಂಬಿ ತುಳುಕಿಸುವ ಕೆಲಸ ಮಾಡುತ್ತದೆ. ಯಾವುದೇ ಕೆಲಸದ ಬಗೆಗಿನ ಮೊದಲ ಹೆಜ್ಜೆ ನಿಮ್ಮ ಮನೆಯೊಳಗಿನಿಂದಲೇ ಪ್ರಾರಂಭಗೊಳ್ಳಬೇಕು. ಬಾಡಿಗೆ ಮನೆಯಾಗಿದ್ದರೂ ಸದ್ಯ ಅದು ನಿಮ್ಮದೇ ಮನೆ. ನಿಮ್ಮ ಉತ್ಸಾಹ, ನಿರಾಸೆ, ಅಸಹಾಯಕತೆ, ಕೇಕೆ, ಚಾತುರ್ಯ ಅದು ಒಟ್ಟಾಗಿ ಸೇರಿ ಮನೆಯ ಮೇಲೂ ಪ್ರಭಾವ ಬೀರುತ್ತದೆ. ಬೇಡವಾದುದನ್ನು ಹೊರತಳ್ಳಿ ಮನೆಯಲ್ಲಿನ ಕಿಟಕಿ ಬಾಗಿಲುಗಳೆಲ್ಲ ತೆರೆದಿರಲಿ. ಒಳಗಿನ ಗಾಳಿ ಹೊರಗೆ (ಇರುವ ಕಲ್ಮಷಗಳನ್ನು ಒಗ್ಗೂಡಿಸಿಕೊಂಡು) ಹೋಗಲು ಸಹಾಯಕವಾಗುತ್ತದೆ. ವಾಯುವ್ಯ ದಿಕ್ಕಿನ ಸ್ವಚ್ಛತೆ, ನೈರ್ಮಲ್ಯಗಳಿಂದ ಅಲ್ಲಿನ ಗಾಳಿ ಕಿಟಿಕಿ ಬಾಗಿಲುಗಳ ಮೂಲಕ ಮನೆಯೊಳಗೆ ಬರಲೂ ಸಹಾಯವಾಗುತ್ತದೆ. ಒಳ ಬರುವ ಹೊಸಗಳಿಗೆ ಲಕ್ಷ್ಮೀಯ ಕೃಪೆಯನ್ನು ಉದ್ದೀಪಿಸುವ ಸಿಗ್ನತೆ ಕೂಡಿಕೊಂಡಿರುತ್ತದೆ. ಧಾನ್ಯಕ್ಕೆ ಮನಸ್ಸನ್ನು ಸ್ಥೈರ್ಯಗೊಳಿಸುವ ಶಕ್ತಿ ಇದೆ. ಮನಸ್ಸು ಮತ್ತು ಸ್ವಚ್ಛ ಹೊಸಗಾಳಿ ಪರಸ್ಪರ ಬಂಧುಗಳಂತೆ ಒಂದು ಇನ್ನೊಂದನ್ನು ಶಕ್ತಿ ಸ್ಪಂದನಗಳೊಡನೆ ಸಕಾರಾತ್ಮಕಗೊಳಿಸುತ್ತದೆ. ಬೇಕಾದ ವಸ್ತುಗಳು ಮಾತ್ರ ಮನೆಯೊಳಗೆ ಇರಲಿ. ಬೇಡವಾದುದನ್ನು ನಿರ್ದಾಕ್ಷಿಣ್ಯವಾಗಿ ಹೊರತಳ್ಳಿ ಇಲ್ಲದಿದ್ದರೆ ಒಂದು ಸುಸಂಬದ್ಧ ಚಕ್ರಮಯ ಪ್ರಕೃತಿ ಹಾರಕ್ಕೆ ಧಕ್ಕೆ ಬರುತ್ತದೆ. ಜ್ಞಾನವೂ, ಸಂಪತ್ತು ಎರಡೂ ಹದವಾಗಿ ಸೇರಿಕೊಂಡಾಗ ಕುಟುಂಬ ಕ್ಷೇಮಕರವಾಗಿ ಇರುತ್ತದೆ. ಬಾಗಿಲುಗಳನ್ನೆಲ್ಲ ಹಾಕಿ ಒಳಗಿನ ಗಾಳಿ ಯನ್ನು ಹೊರ ಹೋಗದಂತೆ ಕಟ್ಟಿಡ ಬೇಡಿ. ಮನೆಯ ವಾಯುವ್ಯ ದಿಕ್ಕಿನಲ್ಲಿ ಒಂದೆಡೆಯಿಂದ ಶುದ್ಧ ಗಾಳಿ ಹರಿಯುವಂತಾದರೆ ಲಕ್ಷ್ಮೀಯ ಬರುವಿಕೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ ಸೌಭಾಗ್ಯ ನಿಮ್ಮದಾಗುತ್ತದೆ. ಶೌಚ ಗೃಹವಾಗಲೀ, ವಿಸರ್ಜನಾ ಘಟಕಗಳಾಗಲೀ ಅವು ಮುಚ್ಚಿರಬೇಕು. ಬಾಗಿಲು ತೆರೆದಿಡಬೇಡಿ. ಅದನ್ನು ಜಾಗೃತೆಯಿಂದ ಮುಚ್ಚಿ, ಮತ್ತೂಂದೆಡೆಯ ಪ್ರತ್ಯೇಕ ಕಿಟಕಿಯೋ, ಇನ್ನೇನೋ ಒಂದು ತೆರೆದ ಭಾಗದಿಂದ ಗಾಳಿ ಒಳಬರುವಂತಾಗುವುದು ಕ್ಷೇಮ. ಗಂಧದ ಪರಿಮಳ, ಹಾವಿನ ಪರಿಮಳ, ದೇವ ನೀಲಾಂಜನದೆದುರಿನ ಸುವಾಸನಾ ದ್ರವ್ಯಗಳ ಹಿತಮಿತವಾದ ಸುವಾಸನೆ ಪಸರಿಸಿದ್ದರೆ ಅದು ಮನೆಯ ಕ್ರಿಯಾಶೀಲತೆಗೆ, ಸಕಾರಾತ್ಮಕ ಸ್ಪಂದನಗಳಿಗೆ ಸಹಾಯಕಾರಿ. ಹಾಲಕ್ಷ್ಮೀಯು ಅನಿಲ ಸ್ವರೂಪದಲ್ಲಿಯೇ ಇದ್ದಾಳೆಂಬುದು ಅರ್ಥವಲ್ಲ. ವಾಯುವ್ಯ ದಿಕ್ಕಿನ ಪರಿಪಕ್ವ ನಿರ್ಮಲತೆ ಮನೆಯೊಳಗಿನ ಮನಸ್ಸುಗಳನ್ನು ಕಾಯಕದಿಂದ ಕೈಲಾಸ ನಿರ್ಮಿಸುವತ್ತ ಶಕ್ತಿಯುತಗೊಳಿಸುತ್ತದೆ. ಈ ನಿರ್ಮಾಣಕ್ಕಾಗಿನ ದ್ರವ್ಯ(ಲಕ್ಷ್ಮೀ)ವನ್ನು ಚೈತನ್ಯಪೂರ್ಣವಾಗಿ ಓಡಾಡಿಸುವ, ದಾಸರು ಹೇಳಿದಂತೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯವನ್ನು ಚಿಗುರಿಸಲು ಶಕ್ತಿಯುತ ಮನಸ್ಸುಗಳು ನಿಸ್ಸಂದೇಹವಾಗಿ ಗೆಲ್ಲುತ್ತವೆ. ಹೀಗಾಗಿ ನಿಮ್ಮ ಮನೆಯ ಒಳಗಿನ ಗಾಳಿ ಹಿತವೆನಿಸುವ ಗಾಳಿಯಾಗಿ, ಸ್ಫೂರ್ತಿಯಾಗಿ ತುಂಬಿಕೊಂಡಿರಲಿ. ಮನೆಯಲ್ಲಿ ಗಣೇಶ, ಲಕ್ಷ್ಮೀ, ಸರಸ್ವತಿ ಇರಬೇಕು... ಯಾವಾಗಲೂ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಒಂದು ಇರಲೇಬೇಕು. ಮುಖ್ಯವಾಗಿ ಪೂರೈಸಬೇಕಾದ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕವಾಗಿದೆ. ಹಾಗೆಯೇ ನಿರ್ವಿಘ್ನದಾಯಕವಾಗಿ ನಡೆಸುವ ಕೆಲಸಗಳಿಂದ ನಿರ್ವಿಘ್ನದಾಯಕವಾದ ನಿರಂತರವಾದ ಅರ್ಥ ವ್ಯವಸ್ಥೆ ಒಂದು ಸಂಪನ್ನತೆಗೆ ಸಾಗಬೇಕು. ಇದಕ್ಕೆ ಲಕ್ಷ್ಮೀ ಕಟಾಕ್ಷ ಬೇಕು. ಅದಕ್ಕಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಸ್ಥಿರಗೊಳ್ಳುವ ಆರ್ಥಿಕತೆ ಕೇವಲ ನಿರ್ವಿಘ್ನತೆಗಳು ಹಾಗೂ ಲಕ್ಷ್ಮೀ ಕಟಾಕ್ಷದಿಂದ ಒದಗಲಾರದು. ಒದಗಿದ ಆರ್ಥಿಕ ಸೌಲಭ್ಯ ಗಟ್ಟಿಯಾಗಿ ನೆಲೆಯೂರಲು ಉತ್ತಮ ಜ್ಞಾನ, ಚಾಣಾಕ್ಷತೆ ಪ್ರಬುದ್ಧತೆ ವ್ಯಾವಹಾರಿಕತೆಗಳ ಆವಶ್ಯಕತೆ ಇದ್ದೇ ಇದೆ. ಇಲ್ಲದಿದ್ದಲ್ಲಿ ಚಂಚಲೆಯಾದ ಲಕ್ಷ್ಮೀಯನ್ನು ದೋಚಿಕೊಂಡು ಹೋಗುವ ದುಷ್ಟರಿದ್ದಾರೆ. ಪ್ರಾಣಕ್ಕೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ತುಂಬಾ ಆವಶ್ಯಕವಾಗಿದೆ. ಗಣೇಶನ ಆರಾಧನೆಯಿಂದಾಗಿ ಈತನ ತಂದೆ ತಾಯಿಯರಾದ ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ. ಶ್ರೀ ಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ. ಅನುಮಾನವೇ ಇಲ್ಲ. ಅಂತೂ ಗಣೇಶ ಲಕ್ಷ್ಮೀ ಸರಸ್ವತಿಯರಿಂದಾಗಿ ನಿರ್ವಿಘ್ನತೆ ಸಂಪತ್ತು ಹಾಗೂ ಜ್ಞಾನದ ಕೊಡಗಳು ತುಂಬಿರುತ್ತವೆೆ. ಬದುಕು ಹಸನಾಗಿರುತ್ತದೆ. ಸೃಷ್ಟಿ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಕೃಪಾಶೀರ್ವಾದಗಳು ಕೂಡ ನಿಸ್ಸಂಶಯ ಆಸ್ತಿ. ಇದರಿಂದಾಗಿ ಮೂವತ್ಮೂರು ಕೋಟಿ ದೇವತೆಗಳ ರಕ್ಷಣಾತ್ಮಕ ನಿಲುವು ಅಷ್ಟ ದಿಗ್ಗಜಗಳು ಅಷ್ಟಾಂಗಗಳು, ಅಷ್ಟ ಸಿದ್ಧಿಗಳು ಅಷ್ಟ ಶೋಭೆಗಳು, ಅಷ್ಟ ಭೋಗಗಳು ಅಷ್ಟ ಮಂಗಲಾವೃತ ಸುಸ್ಥಿತಿಗಳು, ಅಷ್ಟ ದಿಕ್ಕುಗಳಿಂದ ಉತ್ತಮ ಫ‌ಲಗಳು, ಅಷ್ಟ ಐಶ್ವರ್ಯಗಳು, ಪ್ರಸನ್ನತೆ ತೇದಿಯೊಂದಿಗೆ ಒದಗಿಬರುತ್ತದೆ. ಇವನ್ನೆಲ್ಲ ಮುಖ್ಯವಾಗಿ ಗಮನಿಸಬೇಕು. ಒಟ್ಟಿನಲ್ಲಿ ಮೂಲಭೂತವಾದ ಪ್ರತಿ ಆಂಶಗಳು ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಯರಿಂದಲೇ ಲಭ್ಯ. ನಮ್ಮ ಸಂಸ್ಕೃತಿಯು ನಿಯೋಜಿಸಿದ ಷೋಡಶ ಸಂಸ್ಕಾರಗಳು ಮೂಲಭೂತವಾಗಿ ನಿರ್ವಿಘ್ನತೆಯಿಂದ ಜ್ಞಾನಾರ್ಜನೆಯೊಡನೆ ಸಂಪತ್ತನ್ನು ಗಳಿಸಿ ಜೀವನ ಧರ್ಮವನ್ನು ರೂಪಿಸಿಕೊಂಡು ಹೋಗಲೆಂದೇ ಮುಖ್ಯವಾದ ಮಾನವೀಯತೆಯನ್ನು ಚಿನ್ನದಂತೆ ಪುಟಗೊಳಿಸುತ್ತದೆ. ದುರ್ಬುದ್ಧಿಗಳಿಂದ ರಕ್ಷಿಸುತ್ತದೆ. ಈ ಎಲ್ಲಾ ವಿಷಯಗಳನ್ನೂ ಗ್ರಹಿಸಿದಾಗ ಮನೆಯಲ್ಲಿ ಸಕಲ ಕಾರ್ಯ ಸಿದ್ಧಿಗೆ ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಗಳ ದಿವ್ಯ ಉಪಸ್ಥಿತಿ ಸದಾ ಆತ್ಮ ಪರಿಶುದ್ಧತೆಗಳೊಡನೆ ವಸ್ತು ಸ್ಥಿತಿಯಾಗಿರಲಿ. ಮನೆಯಲ್ಲಿ ಸಾಕು ಪ್ರಾಣಿಗಳು ಎಲ್ಲಿರಬೇಕು? ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳು ದಕ್ಷಿಣ ದಿಕ್ಕಿನಲ್ಲಿ ಕಟ್ಟುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿ ಸಾಕಣಿಕೆ ನಿಷಿದ್ಧವಲ್ಲ. ಆದರೆ ಪರಿಶುದ್ಧವಾದ ಪರಿಸರ ಕಾಪಾಡಲ್ಪಡಲಿ ಮನೆಯ ವಾಸ್ತುವಿಗೆ ಪಂಚ ಭೂತ ತತ್ವಾಧಾರಿತ ಬೆಳಕು, ಗಾಳಿ, ನೀರು, ಮಣ್ಣು ಹಾಗೂ ಆಕಾಶ ಧಾತುಗಳು ಪ್ರಾಮುಖ್ಯವಾದವು ಎಂಬದುನಾವೆಲ್ಲಾ ತಿಳಿದ ವಿಚಾರ. ಆದರೆ ಈ ಪಂಚ ಭೂತ ತತ್ವಗಳು ನಿರಂತರವಾಗಿ ಮಲಿನವಾಗಲೂ ತೊಡಗುತ್ತವೆ ಕ್ಷಿಪ್ರವಾಗಿ. ಹೀಗಾಗಿ ಈ ಪಂಚ ಭೂತಾತ್ಮಕ ಘಟಕಗಳು ಒಂದು ಸಾವಯವ ಚಕ್ರದ ನಿಯಂತ್ರಣಕ್ಕೆ ಒಳಗೊಂಡಾಗ ತಂತಾನೆ ಇವು ಅಶುದ್ಧತೆಯಿಂದ ಶುದ್ಧತೆಗೆ ಪರಿವರ್ತನೆಗೊಳ್ಳುತ್ತವೆ. ಮನುಷ್ಯ ಮಿದುಳಿನ ವಿಕಾಸದಿಂದಾಗಿ ಪರಿಸರವನ್ನು ಮಲಿನಗೊಳಿಸದ ಹಾಗೆ ಹೇಗೆ ರಕ್ಷಿಸಬೇಕೆಂಬುದನ್ನು ತಿಳಿದಿರುತ್ತಾನೆ. ಆದರೆ ಸಾಕು ಪ್ರಾಣಿಗಳಿಗೆ ಬುದ್ಧಿ ವಿಕಸನ ಇರುವುದಿಲ್ಲ. ತಮ್ಮನ್ನೇ ತಾವು ಶುದ್ಧಿಕರಿಸಿಕೊಳ್ಳುವ ವಿಚಾರದಲ್ಲಿ ಅವು ಹಿಂದೆ ಬೀಳುತ್ತವೆ. ಕಟ್ಟಿಕೊಂಡ ಮನೆಯಲ್ಲಿ ಸ್ವಾಭಾವಿಕವಾಗಿ ಅವು ಶುದಟಛಿವಾಗಿರಲು ಸಾಧ್ಯವಾಗದು. ಹೀಗಾಗಿ ಮನೆಯೊಳಗಡೆ ಪ್ರಾಣಿಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸಬೇಕು. ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಹಾಸಿಗೆಯ ಮೇಲೆ ಮಲಗಿಸಿಕೊಳ್ಳುವ,ಅವುಗಳೊಂದಿಗೆ ಆಟವಾಡುವ, ಮನೆಯಲ್ಲೇ ಒಂದೆಡೆ ಚೈನಿಗೆ ಕಟ್ಟಿ ಈ ಪ್ರಾಣಿಗಳ ಸ್ವಾತಂತ್ರ್ಯಕ್ಕೆ ಮೊಟಕು ಹಾಕುವ ಕಾಯಕವನ್ನ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಾರೆ. ಹಲವರನ್ನು ಗಮನಿಸಿರಬಹುದು. ಎಲ್ಲೋ ಮನೆಯಿಂದ ಹೊರಗೆಳೆದು ತಂದು ಸಾರ್ವಜನಿಕ ಸ್ಥಳದಲ್ಲಿ (ಉದಾ-ನಾಯಿಗಳನ್ನು) ಕಕ್ಕಸು, ಮೂತ್ರ ಇತ್ಯಾದಿ ವಿಸರ್ಜನೆಗಳನ್ನು ನೆರವೇರಿಸುತ್ತಾರೆ. ಇದು ಸಾಕು ಪ್ರಾಣಿಗಳು ಬೇಕು, ಆದರೆ ಅವುಗಳ ಜವಾಬ್ದಾರಿಯುಕ್ತವಾಗಿ ನಡೆಸಬೇಕೆಂಬ ಯೋಚನೆಯಲ್ಲಿ ಇವರು ಇರಲಾರರು. ಹಾಗೆಂದು ಒಂದು ರೀತಿಯ ಪ್ರೀತಿ ಹಾಗೂ ವಾತ್ಸಲ್ಯವನ್ನ ಈ ಪ್ರಾಣಿಗಳ ಕುರಿತು ತೋರಿಸುತ್ತಾರೆ. ಆದರೂ ಸ್ವಾತಂತ್ರ್ಯ ಹರಣ ನಡೆದಿರುತ್ತದೆ. ಎಷ್ಟೋ ಮನೆಗಳಲ್ಲಿ ಗಿಣಿ, ಬಣ್ಣದ ಪಕ್ಷಿ, ಲವ್‌ ಬರ್ಡ್ಸ್‌ ಇತ್ಯಾದಿ ಸಾಕುತ್ತಾರೆ. ಆದರೆ ಈ ಮೂಕ ಜೀವಿಗಳನ್ನು ಬಂಧಿಸಿರುತ್ತಾರೆ. ಸ್ವತ್ಛಂದ ಹಾರಾಟಗಳಿಗೂ ತಡೆ ತರುತ್ತಾರೆ. ಇದು ಮನೆಯೊಳಗಿನ ಮೂಕ ರೋದನಕ್ಕೆ ಸಾಕ್ಷಿಯಾಗುತ್ತವೆ. ಜೀವಗಳು ಪರಿತಪಿಸುವ ವರ್ತಮಾನ ಮನೆಯಲ್ಲಿ ನಡೆಯುವುದು ಸಹಾ ಸರಿಯಾದುದಲ್ಲ. ತಿಳಿದಿರಲಿ.ಇನ್ನು ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳುದಕ್ಷಿಣ ದಿಕ್ಕಿನಲ್ಲಿ ಕಟ್ಟಲ್ಪಡುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿಸಾಕಣಿಕೆಗಳು ನಿಷಿದಟಛಿವಲ್ಲ. ಆದರೆ ಪರಿಶುದ್ಧವಾದ ಪರಿಸರ ಕಾಪಾಡಲ್ಪಡಲಿ. ಜೀವೋ ಜೀವಸ್ಯ ಜೀವನಂ ಎಂಬ ಮಾತು ರೂಢಿಯಲ್ಲಿದೆ. ಜೀವಕ್ಕೆ ಜೀವವೇ ಆಹಾರವಾಗಿದೆ ವಿನಾ ಅನ್ಯ ಮಾರ್ಗಗಳಿಲ್ಲ. ಆದರೆ ಈ ಜೀವ ಜೀವದ ಆಹಾರದ ಬಗೆಗಿನ ಸಂಬಂಧ ಹಿಂಸಾ ಸ್ವರೂಪದ ಆವರಣಗಳನ್ನು ಸಾಧ್ಯವಾದಷ್ಟು ಕಡಿಮೆಯಾಗಿರುವಂತೆ ಜಾಗ್ರತೆವಹಿಸಬೇಕು. ಈ ಜಾಗ್ರತೆಯು ಅಜಾಗ್ರತೆಯಾದಲ್ಲಿ ಕೆಟ್ಟ ಪರಿಣಾಮಗಳಿಗೆ ದಾರಿಯಾಗದೇ ಇರದು. ಪ್ರಕೃತಿಗೆ ಬದುಕೂ ಬೇಕು. ನಾಶವೂ ಬೇಕು. ಅನಿವಾರ್ಯವಾಗುವ ಅಳತೆಯಲ್ಲಿ ನಾಶವಿದ್ದಾಗ, ಕ್ರೌರ್ಯಕ್ಕೆ ಸ್ಥಳವಿರದು. ಪೂರ್ತಿ ಕ್ರೌರ್ಯವೇ ತುಂಬಿ ಹೋದರೆ, ಜಗದ್ರಕ್ಷಕ ಸ್ವರೂಪಿಯಾದ ಪ್ರಕೃತಿ ಮುನಿಯದಿರಲಾರಳು. ಮಲಗುವ ಕೋಣೆಗಿರಲಿ ಸರಳ ಸಂಪನ್ನ ಗುಣ ಆಧುನಿಕ ಜೀವನ ಕ್ರಮ ವಿವಿಧ ಕಾರಣಗಳಿಂದಾಗಿ ಮನೆಯ ಯಜಮಾನ ವಿಶೇಷ ಹಾಗೂ ಜರೂರು ಕೆಲಸ ಕಾರ್ಯಗಳಿಗಾಗಿ ಮಲಗು ಕೋಣೆಯನ್ನು ಉಪಯೋಗಿಸುತ್ತಾನೆ. ಮನೆಯಲ್ಲಿ ಪ್ರತ್ಯೇಕ ಕಚೇರಿ ಎಂಬ ಒಂದು ಸ್ಥಳವನ್ನು ರೂಪಿಸಿ ಕೊಳ್ಳುವುದು ತುಂಬಾ ಕಷ್ಟದ ಕೆಲಸ. ವಿರಾಮಕ್ಕೆ, ನಿದ್ದೆಗೆ ಉಪಯೋಗಿಸುವುದಲ್ಲದೇ, ಮನೆಯಲ್ಲೇ ಪೂರೈಸಬೇಕಾದ ತನ್ನ ಹೊರ ವಹಿವಾಟುಗಳ ಮುಂಚಿನ ತಯಾರಿಗಳು ಬೆಡ್‌ ರೂಮಿನಲ್ಲೇ ಅವುಗಳ ಆವರಣಗಳನ್ನ ಯಜಮಾನ ನಿಯೋಜಿಸುತ್ತಾನೆ. ಹೀಗಾಗಿ ಬೆಡ್‌ರೂಂ ಸಂಯೋಜನೆ ಈ ಎಲ್ಲಾ ನಿಟ್ಟಿನಿಂದ ಸೂಕ್ತ ರೂಪವನ್ನು ವಾಸ್ತು ದೃಷ್ಟಿಯಿಂದ ಪಡೆಯಲೇ ಬೇಕಾದ್ದು ಅನಿವಾರ್ಯವಾಗಿದೆ. ಜೀವನದ ಶೈಲಿಯಲ್ಲಿನ ಶಾಂತಿ, ನೆಮ್ಮದಿಗೆ ಬೆಡ್‌ರೂಮ್‌ ಪ್ರಧಾನವಾಗಿದೆ. ಶಾಂತಿ, ನೆಮ್ಮದಿಯ ವಿಚಾರದಲ್ಲಿ ಏರುಪೇರುಗಳಾದ ಬೆಡ್‌ ರೂಮ್‌ ವಿನ್ಯಾಸಕ್ಕೆ ಕೆಲವು ಚಾಲನೆಗಳನ್ನು ನೀಡಲೇಬೇಕು. ಮಲಗುವ ಕೋಣೆಯ ಕಿಟಕಿಗಳ ಸ್ವರೂಪ, ಬಾಗಿಲು, ಕನ್ನಡಿಗಳ ಹೊಂದಾಣಿಕೆಯಲ್ಲಿ, ಗೋಡೆಗಳ ಬಣ್ಣ, ಅಲಂಕಾರಕ್ಕಾಗಿ ಇರಿಸಲ್ಪಟ್ಟ ಚಿತ್ರಗಳು, ಅಂದ ಹೆಚ್ಚಿಸುವ ಕೆತ್ತನೆಗಳಲ್ಲಿ ಯಾವಾ ಯಾವ ಚಿತ್ರಗಳು ಮೂಡಿವೆ ಎಂಬಿತ್ಯಾದಿ ಅಂಶಗಳತ್ತ ಗಮನಹರಿಸಿ. ಮಲಗುವ ಕೋಣೆಯಲ್ಲೇ ದೇವರ ಪೀಠ, ಪೂಜಾ ಸ್ಥಳ ಒಳಗೊಳ್ಳಕೂಡದು. ಕಸ, ತ್ಯಾಜ್ಯಗಳು ಬೆಡ್‌ರೂಮಿನಲ್ಲಿ ಪೇರಿಸಲ್ಪಡುವ ಅಂಶವನ್ನ ಸರಿಪಡಿಸಿ. ನಿಮ್ಮ ಜನ್ಮ ಕುಂಡಲಿಯ ಆಧಾರದಲ್ಲಿ ಬಹು ಮುಖ್ಯವಾದ ವರ್ಣಗಳನ್ನು ಗೋಡೆಯ ಬಣ್ಣಗಳ ವಿಷಯದಲ್ಲಿ ಆಯ್ಕೆ ಮಾಡಿಕೊಳ್ಳಿ. ಜೀವನದ ಸುಗಮತೆಗೂ, ಹಗಲಿನ ಆಕಾಶದ ನೀಲ ಛಾಯೆಗೂ ಒಂದು ಸುಸಂಬದ್ಧ ಹೊಂದಾಣಿಕೆ ಇರುವುದರಿಂದ ಆಕಾಶ ನೀಲಿಯು ಮಲಗುವ ಕೋಣೆಗೆ ಸೂಕ್ತವಾದ ಬಣ್ಣ ಬಹುತೇಕವಾಗಿ ಮನುಷ್ಯನ ಮನಸ್ಸಿನ ಮೂಲೆಯ ಬುದ್ಧಿ ಚೇತನವನ್ನು ಸ್ಪಂದಿಸಲಾರದು ಕಪ್ಪು ಬಣ್ಣವನ್ನು ಮಲಗುವ ಮಂಚದೆದುರಿಗೆ ದೃಷ್ಟಿಗೆ ಬೀಳುವಂತೆ ಇರದಿರುವಂತೆ ನೋಡಿಕೊಳ್ಳಿ. ಕಿಟಕಿಗಳನ್ನು ತೆರೆದಾಗ, ಮುಚ್ಚಿದಾಗ ಯಾವ ಕಾಲದಲ್ಲಿ ಯಾವುದು ಸೂಕ್ತ ಎಂಬುದನ್ನರಿತು. ಎಷ್ಟೆಷ್ಟು ಹೊರಗಿನ ಗಾಳಿ ಒಳಗೆ ಬರುತ್ತಿರಬೇಕು ಎಂಬುದನ್ನು ನಿರ್ಧರಿಸಿ. ಆ ರೀತಿಯಲ್ಲಿ ಕಿಟಕಿಗಳನ್ನು ತೆರೆಯುವ, ಮುಚ್ಚುವ ವ್ಯವಸ್ಥೆ ಇರಲಿ. ಗಾಳಿ ಜೋರಾಗಿ ಬಂದಾಗ ಡಬ್‌ ಎಂದು ಕಿಟಿಕಿಗಳು ಬಡಿದು ಕೊಳ್ಳುವಂತೆ ಇರಲಿ. ಕಿಟಕಿಗಳಿಗೆ ಉಜ್ಜಿದ ಹುರುಬುರುಕು ಗಾಜು ಇರಲಿ. ಪೂರ್ತಿ ಪಾರದರ್ಶಕವಾದ ಗಾಜುಗಳು ಬೇಡ. ನೀಲಿ, ಕೇಸರಿ, ಚಾಕಲೇಟ್‌, ಹಸಿರು ಬಣ್ಣಗಳ ಚಿತ್ತಾರದ ಡೊಂಕು ಗೆರೆಗಳು ಗಾಜುಗಳ ಮೇಲೆ ಉಬ್ಬಿದ ಸ್ವರೂಪದಲ್ಲಿ ಮೂಡಿರುವುದು ಸೂಕ್ತ. ಪ್ರಖರ ಬೆಳಕು ರಾಚದಿರಲಿ ಬೆಡ್‌ರೂಮಿನಲ್ಲಿ. ಮಂದ ಸ್ವರೂಪದಿಂದ, ಓದಲು ಖುಷಿ ಇರುವಷ್ಟೇ ಬೆಳಕಿದ್ದರೆ ಉತ್ತಮ. ಮಲಗುವ ಮಂಚದ ನೇರ ಎತ್ತರಕ್ಕೆ ದೀಪದ ಗೊಂಚಲು ತೂಗಿಕೊಂಡಿರುವುದು ಬೇಡ. ಭಾರವಾದ ಕಬ್ಬಿಣದ ತೊಲೆಗಳು ಮಲಗುವ ಸ್ಥಳದ ನೇರಕ್ಕೆ ಛಾವಣಿಗೆ ಬೇಡ. ಹಾಗೆಯೇ ತಲೆ ದಿಂಬುಗಳ ಕಡೆಗೆ ಒರಟು ವಸ್ತುಗಳನ್ನು ಇಡಬೇಡಿ. ಮಂಚದ ಅವಶ್ಯಕತೆ ಮಲಗುವುದಕ್ಕೆ ಮಾತ್ರ ಸೀಮಿತವಿರಲಿ. ಎಲ್ಲಾ ದಿಕ್ಕುಗಳಿಂದ ಮಂಚವನ್ನು ತಲುಪುವ ಹಾಗೆ ಅಂತರ ಇರಲಿ. ಒಂದು ಕಡೆ ಇಳಿ ಜಾರಿರುವಂತೆ ಮಲಗುವ ಕೋಣೆಯ ಛಾವಣಿಯ ವಿನ್ಯಾಸವನ್ನು ರೂಪಿಸಬೇಡಿ. ತಲೆಯ ಕಡೆಯಿಂದ ತುಸು ದೂರಕ್ಕೆ ಇಳಿ ಬಿಟ್ಟ ಫ್ಯಾನ್‌ಗಳಿರಲಿ. ಕಿಟಕಿಗಳ ಒಮ್ಮೆಗೇ ತೀರಾ ಹತ್ತಿರಕ್ಕೆ ಮಲಗುವ ಮಂಚ ಇರದಿರಲಿ. ಅಂತೂ ಮಲಗುವ ರೂಮು ನಿಮ್ಮ ದಿವ್ಯವಾದ ದಿನವೊಂದನ್ನು ಮುಗಿಸಿ ಮಗದೊಂದು ದಿವ್ಯತೆಯನ್ನು ಸ್ವಾಗತಿಸುವ ವರ್ತಮಾನಕ್ಕೆ ಹೊಂದಿಕೊಳ್ಳುವಂತೆ ಶುಚಿಯಾಗಿರಲಿ. ಅಕ್ವೇರಿಯಂ, ಸಾಕು ಹಕ್ಕಿಗಳು ಮನೆಯಲ್ಲಿ ಇರಬಹುದೇ? ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ. ಮನೆಯ ಸೊಬಗಿದೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ, ಪಾರಿವಾಳ, ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು, ಲವ್‌ ಬರ್ಡ್ಸ್‌ ಗಳಂಥ ಬಣ್ಣದ ಮೈ ಹೊದಿಕೆಯ ಹಕ್ಕಿಗಳನ್ನುಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣದ ಅವುಗಳ ಹೊರ ಮೈ ಮಿಂಚಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾರದ ಗಾಜಿನ ಗೋಡೆಗಳಿಗೆ ಢೀ ಕೊಡುತ್ತ, ಮೂತಿ ಬಡಿಯುತ್ತ, ಮೂತಿ ಉರುಟುರುಟಾಗಿಸುತ್ತಾ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆಂಬುದನ್ನು ಆನಂದಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು, ಜಾಡಿಗಳು, ಗಿಂಡಿಗಳು ಅಶುಭಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿರುವ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ. ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂನಲ್ಲಿ ಕಡುಗಪ್ಪು ಪೂರ್ತಿಯಾಗಿ ಮೈಬಣ್ಣವಾಗಿರುವ ಮೀನುಗಳಿರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸು ನೀಲಿ, ನಸುಗೆಂಪು, ಬಿಳಿಕಪ್ಪುಗಳು ಪಟ್ಟೆಯಾದ ಮೀನುಗಳು ಆಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ, ಕತ್ತು, ಮೂತಿ ಕೊಂಕಿಸುತ್ತಾ ಓಡಾಡುತ್ತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಮಾಡಬೇಡಿ. ಮುಂಜಾನ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸ ನೆರವೇರಲಿ. ಒಳಗಿನ ನೀರು ನಸು ನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಹೊರಸೂಸುವಂಥ ರೀತಿಯಲ್ಲಿ ಇರಲಿ. ಇದರಿಂದ ಮನೆಯೊಳಗೆ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ. ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ, ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇ ಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟದಿದ್ದರೆ ಒಳ್ಳೆಯದು. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದುಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿಷಿದ್ಧವೇ ಆಗಿವೆ. ಉಳಿದಂತೆ ಗಿಣಿ ಲವ್‌ , ಬರ್ಡ್ಸ್‌ ಪಾರಿವಾಳಗಳು ಸಹಾ ಮನೆಯೊಳಗೆ ನಿಷಿದ್ಧವೇ ಆಗಿವೆ. ಇವು ಮನೆಯೊಳಗೆ ತನ್ನಿಂತಾನೆ ವಸತಿ ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ರೆಕ್ಕೆಗಳನ್ನು ಸಂಯೋಜಿಸಿಕೊಂಡ ಇವುಗಳಅಸಹಾಯಕ ಸೆರೆವಾಸವೂ ಬೇಡ. -ಸಂಗ್ರಹ

No comments:

Post a Comment