Wednesday 13 February 2019

ವೈದ್ಯಕೀಯ ಶಿಕ್ಷಣದಲ್ಲಿ ನವಗ್ರಹಗಳ ಪಾತ್ರ *

ರೀತಿಯ ಕೆಲಸ ಕಾರ್ಯಗಳು ಆಗುತ್ತವೆ ಮತ್ತು ಯಾವ್ಯಾವ ಸಾಧನೆಗಳನ್ನು ನಾವು ಮಾಡಲು ಸಾಧ್ಯ ಎಂದು ಹೇಳುತ್ತವೆ. ಅದೇನೆಂದು ನಿಮಗೆ ಗೊತ್ತಾ ? ಇತ್ತೀಚಿನ ದಿನಗಳಲ್ಲಿ ಪಿಯುಸಿ ಪರೀಕ್ಷೆಯ ನಂತರ ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕೆಂದು ತಂದೆ ತಾಯಿಯರು ಚಿಂತಿಸತೊಡಗುತ್ತಾರೆ. ಕೆಲವು ಮಕ್ಕಳು ಇಂಜಿನಿಯರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಕಲೆ, ವಾಣಿಜ್ಯ, ಹೀಗೆ ಹತ್ತು ಹಲವಾರು ಬಗೆಯ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಮಾತ್ರ ವೈದ್ಯಕೀಯ ಶಿಕ್ಷಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ. ಎಲ್ಲರೂ ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಆದರೆ ಜಾತಕದ ಅನುಸಾರವಾಗಿ ಕುಂಡಲಿಯಲ್ಲಿ ಯಾವ ಯಾವ ಗ್ರಹಗಳು ಯಾವ ಮನೆಯಲ್ಲಿದೆ ಎಂಬುದನ್ನು ನಿರ್ಧರಿಸಿ ಮುಂದೆ ಅವರ ಶಿಕ್ಷಣ ಯಾವ ವಿಚಾರದ ಬಗ್ಗೆ ಇರುವುದೆಂದು ತಿಳಿದುಕೊಳ್ಳಬಹುದು. ಅನಾದಿಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಹಾಗೂ ವೈದ್ಯಕೀಯ ಶಾಸ್ತ್ರಕ್ಕೆ ನಿಕಟ ಸಂಬಂಧವಿದೆ. ಈಶ್ವರನ ಮುಖದಿಂದ ಪ್ರಪಂಚದ ಸಕಲ ಜೀವಿಗಳ ಉದ್ಧಾರಕ್ಕಾಗಿ ವೇದಗಳು ಸೃಷ್ಟಿಯಾದವು. ವೇದಗಳಲ್ಲಿ ಕಲೆ, ವಿಜ್ಞಾನ, ಜ್ಞಾನ, ವಿದ್ಯೆಗಳು ಅಡಕವಾಗಿವೆ. ಅಥರ್ವಣ ವೇದದ ಮೂಲಕ ಆಯುರ್ವೇದದ ವಿಚಾರಗಳನ್ನು ಸಂಗ್ರಹಿಸಿ ಚರ್ತುಮುಖ ಬ್ರಹ್ಮದೇವನು ಮಾನವನ ಕಲ್ಯಾಣಕ್ಕಾಗಿ ಬ್ರಹ್ಮ ಸಂಹಿತೆ ಎಂಬ ವೈದ್ಯ ರಹಸ್ಯ ರಚಿಸಿದ್ದಾನೆ. ಈ ಆಯುರ್ವೇದವನ್ನು ಮಹಾ ಮುನಿಗಳಾದ ಶ್ರಿ ಶುಶ್ರುತ , ಶ್ರೀ ಚರಕ , ಮುನಿ ಶ್ರೀ ಮತ್ತು ವಾಗ್ಭಟ ಮುಂತಾದವರು ಅಭ್ಯಾಸ ಮಾಡಿ ಆಯುರ್ವೇದ ಶಾಸ್ತ್ರವನ್ನು ಬೆಳೆಸಿದರು. ಹಾಗೂ ಸುಪ್ರಸಿದ್ಧ ವೈದ್ಯರಾದರು. ಈಗ ವೈದ್ಯಕೀಯ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿ ಹೋಮಿಯೋಪಥಿ ಆಯುರ್ವೇದ, ಯುನಾನಿ, ಅಲೋಪತಿ, ವೈದ್ಯ ಪದ್ಧತಿ ಮುಂದುವರೆದು ಸಾಕಷ್ಟು ಬದಲಾವಣೆಗಳಾಗುತ್ತಿವೆ. ಒಬ್ಬ ವ್ಯಕ್ತಿ ವೈದ್ಯನಾಗಬೇಕಾದರೆ ಆತನ ಜಾತಕವನ್ನು ಪರಿಶೀಲಿಸಿ ಆತನ ಭವಿಷ್ಯ ಹೇಳಬೇಕಾಗುತ್ತದೆ. ಮೊದಲಿಗೆ ರಾಶಿಗಳಿಗೆ ಸಂಬಂಧಿಸಿದಂತೆ ಯಾವ ವಿಭಾಗದಲ್ಲಿ ಪರಿಣತಿ ಹೊಂದುತ್ತಾರೆಂದು ನೋಡೋಣ. ಮೇಷ ಹಾಗೂ ವೃಶ್ಚಿಕ: ಈ ರಾಶಿಗಳಿಗೆ ಸಂಬಂಧಿಸಿದಂತೆ ಮೇಷ ರಾಶಿ ತಲೆ ಹಾಗೂ ಮಸ್ತಕಕ್ಕೆ ಸಂಬಂಧಿಸಿದೆ. ಹಾಗೂ ವೃಶ್ಚಿಕ ರಾಶಿ ಗುಹೇಂದ್ರಿಯ ಹಾಗೂ ಮೂತ್ರಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಕುಜನಾಗಿದ್ದು , ಈ ಕುಜನು ಬಲಿಷ್ಠನಾಗಿದ್ದರೆ ಮೆದುಳಿಗೆ ಸಂಬಂಧಿಸಿದ ಪರಿಣಿತಿ ವೈದ್ಯರಾಗುತ್ತಾರೆ. ನುರಿತ ಶಸ್ತ್ರಚಿಕಿತ್ಸಕರಾಗುತ್ತಾರೆ ಹಾಗೂ ಒಳ್ಳೆಯ ದಂತ ವೈದ್ಯರಾಗುತ್ತಾರೆ ಮತ್ತು ನುರಿತ ದಾದಿಯರಾಗುತ್ತಾರೆ. ಗುಪ್ತರೋಗ ತಜ್ಞರಾಗುತ್ತಾರೆ. ವೃಷಭ ಹಾಗೂ ತುಲಾ ರಾಶಿ: ಈ ರಾಶಿಗಳಿಗೆ ಸಂಬಂಧಿಸಿದಂತೆ ವೃಷಭ ರಾಶಿ ಮುಖಕ್ಕೆ ಸಂಬಂಧಿಸಿದೆ. ತುಲಾ ರಾಶಿ ತೊಡೆ ಹಾಗೂ ವೀರ್ಯಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಶುಕ್ರನಾಗಿದ್ದು ಈ ಶುಕ್ರನು ಬಲಿಷ್ಠನಾಗಿದ್ದರೆ ದಂತ ವೈದ್ಯರು, ನುರಿತ ಶಸ್ತ್ರ ಚಿಕಿತ್ಸಕರೂ ಆಗುತ್ತಾರೆ. ಮಿಥುನ ಹಾಗೂ ಕನ್ಯಾ: ಈ ರಾಶಿಗಳಿಗೆ ಸಂಬಂಧಿಸಿದಂತೆ ಮಿಥುನ ರಾಶಿ ಕೈಗಳು ಹಾಗೂ ಕುತ್ತಿಗೆ ಸಂಬಂಧಿಸಿದೆ. ಕನ್ಯಾ ರಾಶಿ ಸೊಂಟ ಹೊಟ್ಟೆಯ ಕೆಳಭಾಗಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಬುಧ. ಈ ಬುಧನು ಬಲಿಷ್ಠನಾಗಿದ್ದರೆ ವೈದ್ಯಶಾಸ್ತ್ರದಲ್ಲಿ ಪಾಂಡಿತ್ಯ ಹೊಂದುವರು ಹಾಗೂ ವೈದ್ಯಕೀಯ ವಿಚಾರ, ವಿಷಯಗಳಲ್ಲಿ ಅನೇಕ ಸಂಶೋಧನೆ ನಡೆಸುವರು. ಕಟಕ: ಈ ರಾಶಿಯು ಹೃದಯ, ಎದೆ, ಹೊಟ್ಟೆಗೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಚಂದ್ರ. ಈತ ಬಲಿಷ್ಠನಾಗಿದ್ದರೆ ಪ್ರತಿಭಾನ್ವಿತ ಅನುಭವಿ, ಹೃದಯ ತಜ್ಞ ಹಾಗೂ ನುರಿತ ಶಸ್ತ್ರಚಿಕಿತ್ಸಕ ಹಾಗೂ ನುರಿತ ದಾದಿಯರಾಗುವರು. ಸಿಂಹ: ಈ ರಾಶಿಯ ಉದರಕ್ಕೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಬಲಿಷ್ಠನಾಗಿದ್ದರೆ ಉಚ್ಛ ಕ್ಷೇತ್ರದಲ್ಲಿದ್ದರೆ, ನುರಿತ ಶಸ್ತ್ರಚಿಕಿತ್ಸಕ, ವೈದ್ಯ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಔಷಧ ಶಾಸ್ತ್ರದಲ್ಲಿ ಪರಿಣಿತಿ ಹೊಂದುವರು. ಧನಸ್ಸು ಹಾಗೂ ಮೀನ: ಧನಸ್ಸು ರಾಶಿಯು ತೊಡೆ, ಮೊಣಕಾಲುಗಳಿಗೆ ಸಂಬಂಧಿಸಿದೆ. ಮೀನ ರಾಶಿಯ ಕಾಲುಗಳು, ಪಾದಗಳಿಗೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಗುರು. ಗುರು ಬಲಿಷ್ಠನಾಗಿದ್ದರೆ ನುರಿತ ದಾದಿಯರಾಗುತ್ತಾರೆ. ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಮುಖ್ಯಸ್ಥರಾಗುವರು. ಮೂಳೆ ವೈದ್ಯ ಹಾಗೂ ಶಸ್ತ್ರಚಿಕಿತ್ಸಕರಾಗುವರು. ಮಕರ ಹಾಗೂ ಕುಂಭ: ಮಕರ ರಾಶಿಯು ಮೊಣಕಾಲಿಗೆ ಸಂಬಂಧಿಸಿದೆ. ಕುಂಭ ಮಂಡಿಗೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಶನೇಶ್ವರನು ಅಧಿಪತಿ. ಈತ ಬಲಿಷ್ಠನಾಗಿದ್ದರೆ ಮೂಳೆ ತಜ್ಞ , ನುರಿತ ಶಸ್ತ್ರಚಿಕಿತ್ಸಕರಾಗುವರು. ಸೂರ್ಯ ಹಾಗೂ ರಾಹು ಕಾರಕಾಂಶದಲ್ಲಿದ್ದು ಶುಭಗ್ರಹಗಳು ನೋಡುತ್ತಿದ್ದರೆ ಅರಿವಳಿಕೆ ತಜ್ಞರಾಗುತ್ತಾರೆ ಹಾಗೂ ಸುಪ್ರಸಿದ್ಧ ಔಷಧಿ ವ್ಯಾಪಾರಿಗಳಾಗುತ್ತಾರೆ. ಬುಧ ರಾಹು ಮನೆ ವೈದ್ಯ ವೃತ್ತಿಗೆ ಕಾರಕರು. ಸೂರ್ಯ ಕುಜರು ಅಗ್ನಿ ರಾಶಿಗಳಲ್ಲಿ ಅಥವಾ ಉಚ್ಛ ಸ್ವಮಿತ್ರ ಕ್ಷೇತ್ರಗಳಲ್ಲಿ ಇದ್ದರೆ ಯಶಸ್ವಿ ವೈದ್ಯರಾಗುತ್ತಾರೆ. ಯಾವ ವೈದ್ಯನೇ ಆಗಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಥವಾ ವೃತ್ತಿಯಲ್ಲಿ ಒಳ್ಳೆಯ ಪರಿಣಿತಿ ಹೊಂದಿ ಯಶಸ್ವಿ ವೈದ್ಯನಾಗಬೇಕಾದರೆ ಕಾರಕ ಗ್ರಹಗಳು ಹೆಚ್ಚಾಗಿ ಪುರುಷ ರಾಶಿಗಳಲ್ಲಿ ಇರಬೇಕು. ಪುರುಷ ರಾಶಿಗಳೆಂದರೆ ಸೂರ್ಯ, ಕುಜ ಹಾಗೂ ಗುರು ಪುರುಷ ಗ್ರಹಗಳಾಗಿವೆ. ಸಿಂಹ, ಮೇಷ, ಧನಸ್ಸು ಇವು ಪುರುಷ ರಾಶಿಗಳಾಗಿರುತ್ತವೆ. ಕುಂಡಲಿಯಲ್ಲಿ ಚಂದ್ರನು ಪುರುಷ ರಾಶಿಯಲ್ಲಿ ಇದ್ದರೆ ಅಂತಹ ವ್ಯಕ್ತಿಗಳು ಸುಪ್ರಸಿದ್ಧ ವೈದ್ಯರಾಗಿರುತ್ತಾರೆ. ಜತೆಗೆ ಕೀರ್ತಿ ಸನ್ಮಾನಕ್ಕೆ ಪಾತ್ರರಾಗಿರುತ್ತಾರೆ.

No comments:

Post a Comment