Sunday 10 February 2019

ರಥಸಪ್ತಮಿ: 12.02.2019

ಸರ್ವಚೇತನ ಸ್ವರೂಪಿ ಸೂರ್ಯನಿಗೆ ನಮೋ ಭಾರತೀಯರು ಆಚರಿಸುವ ಹಬ್ಬ ಹರಿದಿನಗಳಲ್ಲಿ ಅತಿ ಮುಖ್ಯವಾದ ಒಂದು ಪರ್ವ ರಥಸಪ್ತಮಿ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಇದನ್ನು ಆಚರಿಸಲಾಗುತ್ತದೆ. ಶೈವ, ವೈಷ್ಣವ ಮುಂತಾದ ಎಲ್ಲಾ ವೈದಿಕ ಸಂಪ್ರದಾಯಗಳ ಜನರೂ ಇದನ್ನು ಆಚರಿಸುತ್ತಾರೆ. ಇದಕ್ಕೆ ಕಾರಣ ಈ ಹಬ್ಬದ ಆರಾಧ್ಯ ದೇವತೆಯಾದ 'ಸೂರ್ಯ'. ಆತನು ಎಲ್ಲಾ ವರ್ಗದವರ ಪೂಜಿಸುವ ವಿಷಯವಾಗಿದ್ದಾನೆ. ಸೌರ ಎಂದು ಕರೆಯಲಾಗುವ ಭಕ್ತಿ ದರ್ಶನಗಳಲ್ಲಿ ಸೂರ್ಯನೇ ಪರಾ ದೇವತೆ. ಪಂಚಾಯತನ ಎಂದು ಕರೆಯಲಾಗುವ ಒಂದು ಪೂಜಾಕಲ್ಪದಲ್ಲಿಯೂ ಸೂರ್ಯನು ಆರಾಧ್ಯ ದೇವತೆಗಳಲ್ಲಿ ಒಬ್ಬನಾಗಿ ಪರಿಗಣಿತನಾಗಿದ್ದಾನೆ. ಇದಲ್ಲದೆ ಸೂರ್ಯ ಬಿಂಬವೂ ಹರಿಹರರಿಬ್ಬರಿಗೂ ಸಾಲಿಗ್ರಾಮ, ಶಿವಲಿಂಗಗಳಂತೆ ಪೂಜಾ ಮಾಧ್ಯಮವಾಗಿದೆ. ಧ್ಯೇಯಸ್ಸದಾ ಸವಿತೃ ಮಂಡಲ ಮಧ್ಯವರ್ಶೇ ನಾರಾಯಣಸ್ಸರಸಿಜಾಸನ ಸನ್ನಿವಿಷ್ಟಃ | ಅರ್ಕಮಂಡಲ ಮಧ್ಯಸ್ಥಂ ಸೂರ್ಯಕೋಟಿ ಸಮಪ್ರಭಂ ಬ್ರಹ್ಮಾದಿ ಸೇವೈ ಪಾದಾಬ್ಜಂ ನೌಮಿ ಬ್ರಹ್ಮ ರಮಾಸಖಂ || ನಾರಾಯಣನು ಸೂರ್ಯಮಂಡಲದಲ್ಲಿ ಮಧ್ಯದಲ್ಲಿ ಧ್ಯಾನಿಸ್ಪಡುತ್ತಾನೆ. 'ಸೂರ್ಯನಾರಾಯಣ' ಎಂಬ ಹೆಸರು ಪ್ರಸಿದ್ಧಿಯಾಗಿದೆ. ಗಾಯತ್ರ್ಯರ್ಕಾಗ್ನಿಗೋಚರಃ ಶಂಭುಃ ಎಂಬ ಶ್ಲೋಕವು ಸೂರ್ಯಮಂಡಲದಲ್ಲಿ ಶಿವನನ್ನು ಧ್ಯಾನ ಮೂರ್ತಿಯನ್ನಾಗಿ ಹೇಳುತ್ತಿದೆ. ಉಪನಿಷತ್ತುಗಳು ಪರಮಾತ್ಮನನ್ನು ಆದಿತ್ಯ ಮಂಡಲದಲ್ಲಿ ಉಪಾಸನೆ ಮಾಡಬೇಕೆಂದು ಸಾರುತ್ತವೆ. ತ್ರಿಕಾಲಸಂಧ್ಯಾವಂದನೆಯಲ್ಲಿ ಜಪಿಸಲಾಗುವ ಗಾಯತ್ರೀ ಮಂತ್ರವು ಸವಿತೃದೇವತಾಕವಾಗಿದೆ. ಸರ್ವಪ್ರಿಯ ದೇವತೆಯಾಗಿರುವ ಸೂರ್ಯ ದೇವನನ್ನು ಕುರಿತ ಹಬ್ಬವಾಗಿರುವುದರಿಂದ ಇದು ಎಲ್ಲಾ ಆಸ್ತಿಕರಿಂದಲೂ ಆಚರಣೆಗೊಳಗಾಗುತ್ತಿರುವುದು ಸಹಜವೇ ಆಗಿದೆ. ಪರ್ವದ ನಾಮಧೇಯಗಳು ರಥಸಪ್ತಮಿ ಮತ್ತು ಅಚಲಾ ಸಪ್ತಮಿ ಎಂಬ ಹೆಸರುಗಳಿಂದ ಇದು ಶಾಸ್ತ್ರಗಳಲ್ಲಿ ಪ್ರಸಿದ್ಧಿಯಾಗಿದೆ. ರಥಸಪ್ತಮಿ ಎಂಬ ಹೆಸರಿಗೆ ಕಾರಣ ಈ ವಿಶಿಷ್ಟವಾದ ಸಪ್ತಮಿ ತಿಥಿಯಂದು 'ರಥವರ' ಎಂದು ಕರೆಯಲಾಗುವ ಸೂರ್ಯನು ಆರಾಧಿಧಿಸಲ್ಪಡುವುದು. ಏವಂ ವಿಧಂ ರಥವರಂ ರಥವಾಜಿಯುಕ್ತಂ ಸೂರ್ಯನನ್ನು ಪ್ರತ್ಯೇಕವಾಗಿ ಕರೆದಿರುವುದರಿಂದ ರಥವರ ಶಬ್ದವು ಸೂರ್ಯನ ರಥಕ್ಕೆ ಅನ್ವಯಿಸುತ್ತದೆಯೇ ಹೊರತು ಸೂರ್ಯನಿಗಲ್ಲ. ಪ್ರಸಿದ್ಧವಾದ ಸೂರ್ಯರಥದ ಉತ್ತರಗತಿಯ ನಿಮಿತ್ತವಾಗಿ ದೇವರನ್ನು ಆರಾಧಿಧಿಸುವ ಸಪ್ತಮಿ ತಿಥಿ ಎಂದು ರಥಸಪ್ತಮಿ ಶಬ್ದಕ್ಕೆ ಅರ್ಥ ವಿವರಣೆ ನೀಡುವುದು ಹೆಚ್ಚು ಉಚಿತವಾಗಿದೆ. ದೇವಾಲಯದಲ್ಲಿ ಉತ್ತರಾಯಣದಲ್ಲಿ ರಥೋತ್ಸವಗಳು ಸಾಮಾನ್ಯವಾಗಿ ಪ್ರಾರಂಭವಾಗುವುದು ಸಪ್ತಮಿ ತಿಥಿ ದಿವಸವಾದ್ದರಿಂದ ಸ್ಥಿರವಾದ ಫಲವನ್ನು ಕೊಡುತ್ತದೆ. ಅಕ್ಷಯ ತೃತೀಯ ಅಕ್ಷಯ ಫಲವನ್ನು ಕೊಡುವಂತೆ, ರಥ ಸಪ್ತಮಿ ಕೂಡ ಆರೋಗ್ಯ ಭಾಗ್ಯವನ್ನು ಕರುಣಿಸುತ್ತದೆ. ರಥಸಪ್ತಮಿ ಆಚರಣೆಯು ನಿತ್ಯವೇ? ಅಥವಾ ಕಾಮ್ಯವೇ? ಎಂದರೆ ಎರಡೂ ಆಗುತ್ತದೆ. ನಿತ್ಯ ಅವಶ್ಯ ಎಂಬ ಶಬ್ದಗಳನ್ನು ವಿಷ್ಣು ಸ್ಮೃತಿಯು ಹೇಳುವುದರಿಂದ ನಿಷ್ಕಾಮವಾಗಿ ಆಚರಿಸಿದರೆ ನಿತ್ಯ ವ್ರತವಾಗುತ್ತದೆ. ಆರೋಗ್ಯ, ಐಶ್ವರ್ಯ ಎಂಬುದು ಲಾಭವಾಗುತ್ತದೆ. ರಥಸಪ್ತಮಿಯಂದು ಸಕಾಲದಲ್ಲಿ ಸ್ನಾನ ಮಾಡಿದರೆ ಅಕ್ಷಯ ಫಲ ಸಿದ್ಧಿಸುತ್ತದೆ. ಮಾಘ ಮಾಸ ಪ್ರಾತಃಕಾಲ ಸ್ನಾನಕ್ಕೆ ಪ್ರಶಸ್ತ. ವಾಡಿಕೆಯಲ್ಲಿ 'ಬಲವಂತ ಮಾಘಸ್ನಾನ'ದಿಂದ ಅಧ್ಯಾತ್ಮ ಫಲ ದೊರೆಯುವುದಿಲ್ಲ. ಕೋಟಿ ಸೂರ್ಯ ಗ್ರಹಣ ಪುಣ್ಯಕಾಲದ ಆಚರಣೆಗೆ ಸಮಾನ ಮಂತ್ರ ಜಪ ದೇವತಾ ಆರಾಧನೆ ವಿಶೇಷ ನೀರಿನಲ್ಲಿ ಪೂರ್ಣವಾಗಿ ಮುಳುಗಿ ಮಾಡುವ ಸ್ನಾನ ತುಂಬಾ ಪ್ರಶಸ್ತ. ಸಪ್ತಾಶ್ವಾ ಸಪ್ತಲೋಕಾಶ್ವಾ ಸಪ್ತ ದ್ವೀಪಾ ವಸುಂಧರಾ | ಸಪ್ತಾರ್ಕ ಪರ್ಣಾನೈದಾಯ ಸಪ್ತಮ್ಯಾಂ ಸ್ನಾನ ಮಾಚಕೇತ್ || ಸೂರ್ಯನು ಪ್ರಸಾದದಿಂದ ಬೆಳಿಗ್ಗೆ ಮಾಡುವ ಸ್ನಾನದಿಂದ ಕಷ್ಟಗಳು ನಿವಾರಣೆಯಾಗಿ ಸುಖ, ಸೌಭಾಗ್ಯ ವೃದ್ಧಿಯಾಗಲೆಂದು ಭಗವಂತನಲ್ಲಿ ಪ್ರತಿದಿನ ಕಣ್ಣಿಗೆ ಕಾಣುವ ಸೂರ್ಯನನ್ನು ನಮಸ್ಕರಿಸೋಣ. ಎಕ್ಕದ ಎಲೆ ಜಳಕ ರಥಸಪ್ತಮಿ ಎಂದ ಕೂಡಲೇ ಗ್ರಾಮಾಂತರ ಪ್ರದೇಶಗಳಲ್ಲಿ ಹಿರಿಯರು ಎಕ್ಕದ ಗಿಡ ಹುಡುಕಿಕೊಂಡು ಹೋಗುವುದು, ಎಲೆಗಳನ್ನು ತರುವುದು ಸಾಮಾನ್ಯ. ಗಣಪತಿಯ ಪತ್ರ ಪೂಜೆಯಲ್ಲಿ ಎಕ್ಕೆ ಎಲೆಗಳು ಪವಿತ್ರವಾಗಿವೆ. ಸೂರ್ಯನಿಗೆ ಪ್ರಿಯಕರವಾದ ಪತ್ರೆ ಇದಾಗಿದೆ. ರಥ ಸಪ್ತಮಿಯಂದು ಬಿಳಿ ಎಕ್ಕೆಯ ಎಲೆಗಳನ್ನು ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸಿದರೆ ಆರೋಗ್ಯ ಮತ್ತು ಶ್ರೇಯಸ್ಸು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದು. ಕಾಲಿಗೆ ಮುಳ್ಳು ಚುಚ್ಚಿದ್ದರೆ ಎಕ್ಕದ ಹಾಲು ಹಾಕಿದರೆ ಬಾವು ಆಗುವುದಿಲ್ಲ; ಮುಳ್ಳು ಸುಲಭವಾಗಿ ಹೊರಕ್ಕೆ ಬರುತ್ತದೆ. ಕೆಲವು ಹಿರಿಯರು || ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ||. ಧ್ಯೇಯಃಸ್ಸದಾ ಸವಿತೃಮಂಡಲ ಮಧ್ಯವರ್ಥೀ | ನಾರಾಯಣ ಸರಸಿಜಾಸನ ಸನ್ನಿವಿಷ್ಠಾಃ | ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟಿ | ಹಾರಿ ಹಿರಣ್ಮಯ ವಪುಧೃತ ಶಂಖಚಕ್ರಾ || ಓಂ ಅರುಣಾಯ ನಮಃ | ಓಂ ಶರಣ್ಯಾಯ ನಮಃ | ಓಂ ಕರುಣಾರಸಸಿಂಧವೇ ನಮಃ | ಓಂ ಅಸಮಾನಬಲಾಯ ನಮಃ | ಓಂ ಆರ್ತರಕ್ಷಣಾಯ ನಮಃ | ಓಂ ಆದಿತ್ಯಾಯ ನಮಃ ಓಂ ಆದಿಭೂತಾಯ ನಮಃ | ಓಂ ಅಖಿಲಾಗಮವೇದಿನೇ ನಮಃ | ಓಂ ಅಚ್ಯುತಾಯ ನಮಃ | ಓಂ ಅಖಿಲಜ್ಞಾಯ ನಮಃ || ೧೦ || ಓಂ ಅನಂತಾಯ ನಮಃ | ಓಂ ಇನಾಯ ನಮಃ | ಓಂ ವಿಶ್ವರೂಪಾಯ ನಮಃ | ಓಂ ಇಜ್ಯಾಯ ನಮಃ | ಓಂ ಇಂದ್ರಾಯ ನಮಃ | ಓಂ ಭಾನವೇ ನಮಃ | ಓಂ ಇಂದಿರಾಮಂದಿರಾಪ್ತಾಯ ನಮಃ | ಓಂ ವಂದನೀಯಾಯ ನಮಃ | ಓಂ ಈಶಾಯ ನಮಃ | ಓಂ ಸುಪ್ರಸನ್ನಾಯ ನಮಃ || ೨೦ || ಓಂ ಸುಶೀಲಾಯ ನಮಃ | ಓಂ ಸುವರ್ಚಸೇ ನಮಃ | ಓಂ ವಸುಪ್ರದಾಯ ನಮಃ | ಓಂ ವಸವೇ ನಮಃ | ಓಂ ವಾಸುದೇವಾಯ ನಮಃ | ಓಂ ಉಜ್ವಲಾಯ ನಮಃ | ಓಂ ಉಗ್ರರೂಪಾಯ ನಮಃ | ಓಂ ಊರ್ಧ್ವಗಾಯ ನಮಃ | ಓಂ ವಿವಸ್ವತೇ ನಮಃ | ಓಂ ಉದ್ಯತ್ಕಿರಣಜಾಲಾಯ ನಮಃ || ೩೦ || ಓಂ ಹೃಷಿಕೇಶಾಯ ನಮಃ | ಓಂ ಊರ್ಜಸ್ವಲಾಯ ನಮಃ | ಓಂ ವೀರಾಯ ನಮಃ | ಓಂ ನಿರ್ಜರಾಯ ನಮಃ | ಓಂ ಜಯಾಯ ನಮಃ | ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ | ಓಂ ಋಷಿವಂದ್ಯಾಯ ನಮಃ | ಓಂ ರುಗ್ಫ್ರಂತೇ ನಮಃ | ಓಂ ಋಕ್ಷಚಕ್ರಾಯ ನಮಃ | ಓಂ ಋಜುಸ್ವಭಾವಚಿತ್ತಾಯ ನಮಃ || ೪೦ || ಓಂ ನಿತ್ಯಸ್ತುತಾಯ ನಮಃ | ಓಂ ಋಕಾರ ಮಾತೃಕಾವರ್ಣರೂಪಾಯ ನಮಃ | ಓಂ ಉಜ್ಜಲತೇಜಸೇ ನಮಃ | ಓಂ ಋಕ್ಷಾಧಿನಾಥಮಿತ್ರಾಯ ನಮಃ | ಓಂ ಪುಷ್ಕರಾಕ್ಷಾಯ ನಮಃ | ಓಂ ಲುಪ್ತದಂತಾಯ ನಮಃ | ಓಂ ಶಾಂತಾಯ ನಮಃ | ಓಂ ಕಾಂತಿದಾಯ ನಮಃ | ಓಂ ಘನಾಯ ನಮಃ | ಓಂ ಕನತ್ಕನಕಭೂಷಾಯ ನಮಃ || ೫೦ || ಓಂ ಖದ್ಯೋತಾಯ ನಮಃ | ಓಂ ಲೂನಿತಾಖಿಲದೈತ್ಯಾಯ ನಮಃ | ಓಂ ಸತ್ಯಾನಂದಸ್ವರೂಪಿಣೇ ನಮಃ | ಓಂ ಅಪವರ್ಗಪ್ರದಾಯ ನಮಃ | ಓಂ ಆರ್ತಶರಣ್ಯಾಯ ನಮಃ | ಓಂ ಏಕಾಕಿನೇ ನಮಃ | ಓಂ ಭಗವತೇ ನಮಃ | ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ | ಓಂ ಗುಣಾತ್ಮನೇ ನಮಃ | ಓಂ ಘೃಣಿಭೃತೇ ನಮಃ || ೬೦ || ಓಂ ಬೃಹತೇ ನಮಃ | ಓಂ ಬ್ರಹ್ಮಣೇ ನಮಃ | ಓಂ ಐಶ್ವರ್ಯದಾಯ ನಮಃ | ಓಂ ಶರ್ವಾಯ ನಮಃ | ಓಂ ಹರಿದಶ್ವಾಯ ನಮಃ | ಓಂ ಶೌರಯೇ ನಮಃ | ಓಂ ದಶದಿಕ್‌ ಸಂಪ್ರಕಾಶಾಯ ನಮಃ | ಓಂ ಭಕ್ತವಶ್ಯಾಯ ನಮಃ | ಓಂ ಓಜಸ್ಕರಾಯ ನಮಃ | ಓಂ ಜಯಿನೇ ನಮಃ || ೭೦ || ಓಂ ಜಗದಾನಂದಹೇತವೇ ನಮಃ | ಓಂ ಜನ್ಮಮೃತ್ಯುಜರಾವ್ಯಾಧಿ ವರ್ಜಿತಾಯ ನಮಃ | ಓಂ ಔನ್ನತ್ಯಪದಸಂಚಾರರಥಸ್ಥಾಯ ನಮಃ | ಓಂ ಅಸುರಾರಯೇ ನಮಃ | ಓಂ ಕಮನೀಯಕರಾಯ ನಮಃ | ಓಂ ಅಬ್ಜವಲ್ಲಭಾಯ ನಮಃ | ಓಂ ಅಂತರ್ಬಹಿಃ ಪ್ರಕಾಶಾಯ ನಮಃ | ಓಂ ಅಚಿಂತ್ಯಾಯ ನಮಃ | ಓಂ ಆತ್ಮರೂಪಿಣೇ ನಮಃ | ಓಂ ಅಚ್ಯುತಾಯ ನಮಃ || ೮೦ || ಓಂ ಅಮರೇಶಾಯ ನಮಃ | ಓಂ ಪರಸ್ಮೈಜೋತಿಷೇ ನಮಃ | ಓಂ ಅಹಸ್ಕರಾಯ ನಮಃ | ಓಂ ರವಯೇ ನಮಃ | ಓಂ ಹರಯೇ ನಮಃ | ಓಂ ಪರಮಾತ್ಮನೇ ನಮಃ | ಓಂ ತರುಣಾಯ ನಮಃ | ಓಂ ವರೇಣ್ಯಾಯ ನಮಃ | ಓಂ ಗ್ರಹಾಣಾಂಪತಯೇ ನಮಃ | ಓಂ ಭಾಸ್ಕರಾಯ ನಮಃ || ೯೦ || ಓಂ ಆದಿಮಧ್ಯಾಂತರಹಿತಾಯ ನಮಃ | ಓಂ ಸೌಖ್ಯಪ್ರದಾಯ ನಮಃ | ಓಂ ಸಕಲ ಜಗತಾಂಪತಯೇ ನಮಃ | ಓಂ ಸೂರ್ಯಾಯ ನಮಃ | ಓಂ ಕವಯೇ ನಮಃ | ಓಂ ನಾರಾಯಣಾಯ ನಮಃ | ಓಂ ಪರೇಶಾಯ ನಮಃ | ಓಂ ತೇಜೋರೂಪಾಯ ನಮಃ | ಓಂ ಶ್ರೀಂ ಹಿರಣ್ಯಗರ್ಭಾಯ ನಮಃ | ಓಂ ಹ್ರೀಂ ಸಂಪತ್ಕರಾಯ ನಮಃ || ೧೦೦|| ಓಂ ಐಂ ಇಷ್ಟಾರ್ಥದಾಯ ನಮಃ | ಓಂ ಸುಪ್ರಸನ್ನಾಯ ನಮಃ | ಓಂ ಶ್ರೀಮತೇ ನಮಃ | ಓಂ ಶ್ರೇಯಸೇ ನಮಃ | ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ | ಓಂ ನಿಖಿಲಾಗಮವೇದ್ಯಾಯ ನಮಃ | ಓಂ ನಿತ್ಯಾನಂದಾಯ ನಮಃ | ಓಂ ಶ್ರೀ ಸೂರ್ಯನಾರಾಯಣ ಸ್ವಾಮಿನೇ ನಮಃ || ೧೦೮ || || ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್‌ || ಸೂರ್ಯನ 108 ಹೆಸರುಗಳನ್ನು ಹೇಳಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿಯೂ ಇದೆ. ಒಂದು ವೇಳೆ 108 ನಾಮಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದರೆ ಇಂದ್ರ, ವಿಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ ಎಂಬ ಸೂರ್ಯನ 12 ನಾಮಗಳನ್ನು ಜಪಿಸಿ ನಮಸ್ಕಾರ ಮಾಡಬಹುದಾಗಿದೆ. ಸೂರ್ಯ ಶಕ್ತಿ ಸೂರ್ಯಾರಾಧನೆಗೆ ರಥಸಪ್ತಮಿ ವಿಶೇಷ ಕಾಲ. ಅಂದು ಸೂರ್ಯನ ಕಿರಣಗಳಲ್ಲಿ 'ಡಿ' ಜೀವಸತ್ವ ಹೆಚ್ಚಿರುವುದರಿಂದ ವೈಜ್ಞಾನಿಕವಾಗೂ ಮಹತ್ವ ಪಡೆದುಕೊಂಡಿದೆ. ಸೂರ್ಯನ ಪಥ ಬದಲಾವಣೆಯಾಗುವುದರಿಂದ ಮಾಘಮಾಸದಿಂದ ಮುಂದಕ್ಕೆ ಚಳಿ ಗಣನೀಯವಾಗಿ ಕಡಿಮೆಯಾಗುತ್ತದೆ. ಪೃಥ್ವಿಯಿಂದ 149.6 ಮಿಲಿಯ ಕಿ.ಮೀ.ಗಳ ದೂರದಲ್ಲಿರುವ ಮಹಾನಕ್ಷ ತ್ರವೇ ಸೂರ್ಯ. ಸೂರ್ಯನಿಂದ ಹೊರ ಹೊಮ್ಮುವ ಬೆಳಕು ಒಂದು ಸೆಕೆಂಡಿಗೆ 299,792 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಪೃಥ್ವಿಯನ್ನು ತಲುಪಲು 8 ನಿಮಿಷ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸೂರ್ಯನ ಚಲನ ಸಿದ್ಧಾಂತದಿಂದಲೇ ಅಯನ ಮತ್ತು ಋುತುಗಳು ಸಂಭವಿಸುತ್ತವೆ. ಸೂರ್ಯಾರಾಧನೆ ಏಕೆ? ಮಾಘಮಾಸ ಶುಕ್ಲ ಪಕ್ಷ ದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಇಂದು ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷ ಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ. - ಸೂರ್ಯಪೂಜೆಯಿಂದ ಅಕ್ಷಯ ಪಾತ್ರೆ ದ್ವಾಪರಾಯುಗದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಟನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾದನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷ ಯ ಪಾತ್ರೆ ಪಡೆದಿದ್ದರು. -SANGRAHA

No comments:

Post a Comment