Sunday 29 September 2019

ನೀಲಸರಸ್ವತಿ ಮಂತ್ರ: ತ್ರಿಪುರ ಸುಂದರಿ ಮೂಲ ಮಂತ್ರ:

ನೀಲಸರಸ್ವತಿ ಮಂತ್ರ: !!!ಓಂ ಕ್ರೀಂ ಶ್ರೀಂ ಹುಂ ಫಟ್!!! ನೀಲಸರಸ್ವತಿ ಸ್ತೋತ್ರ: ಘೋರರೂಪೇ ಮಹಾರವೇ ಸರ್ವ ಶತೃಭಯಂಕರಿ ಭಕ್ತೇಭ್ಯೋವರದೇ ದೇವಿ ತಾರಾಹೀಮಾಂ ಶರಣಾಗತಂ ಸುರಾಸುರಚರಿತೇ ದೇವಿ ಸಿದ್ದಗಂದರ್ವ ಸೇವಿತೇ ಜಾಡ್ಯಾಪಹರೇ ದೇವಿ ತಾರಾಹೀಮಾಂ ಶರಣಾಗತಂ ಜಟಾಜೂಟಸಂಯುಕ್ತೇ ಮೋಹ ಜಿಹ್ವಾಂತಕಾರಿಣಿ ದೃತ ಬುದ್ದಿಕರೇ ದೇವಿ ತಾರಾಹೀಮಾಂ ಶರಣಾಗತಂ ಸೌಮ್ಯ ಕ್ರೋದಧರೇ ರೂಪೇ ಚಂಡಮುಂಡ ನಮೋಸ್ತುತೇ ಸೃಷ್ಟಿರೂಪೇ ನಮಸ್ತುಭ್ಯಂ ತಾರಾಹೀಮಾಂ ಶರಣಾಗತಂ ಜಡಾನಾಂ ಜಡತಾಂಹಂತಿ ಭಕ್ತನಾಂ ಭಕ್ತವತ್ಸಲ ಮೂಡಾತ್ಮ ಹರೇ ದೇವಿ ತಾರಾಹೀಮಾಂ ಶರಣಾಗತಂ ವಂ ಹ್ರೂಂ ಹ್ರೂಂ ಕಾಮ್ಯೇ ದೇವಿ ಬಲಿ ಹೋಮ ಪ್ರಿಯೇ ನಮಃ ಉಗ್ರತರೇ ನಮೋನಿತ್ಯಂ ತಾರಾಹೀಮಾಂ ಶರಣಾಗತಂ ಬುದ್ದಿ ದೇಹಿ ಯಶೋ ದೇಹಿ ಕವಿತ್ವಂ ದೇಹಿ ದೇಹಿ ಮೇ ಮೂಡತ್ವಂಚ ಹರೇ ದೇವಿ ತಾರಾಹೀಮಾಂ ಶರಣಾಗತಂ ಇಂದ್ರಾದಿ ವಿಲಾಸನವಂದ ವಂದಿತೇ ಶರಣಾಮಯಿ ತಾರೇ ತಾರವೇ ನಾದಸ್ಯೇ ತಾರಾಹೀಮಾಂ ಶರಣಾಗತಂ ಇದಂ ಸ್ತೋತ್ರಂ ಪಠೇತ್ ಯಶಸ್ತು ಸತತಂ ಶ್ರದ್ದಾಯೋನ್ವಿತ ತಸ್ಯಾ ಶತೃಕ್ಷಯಂ ಯತಿ ಮಹಾಪ್ರಜ್ಞಾಪ್ರಜಾಯತೇ ಮಂತ್ರ ಸಾಧನೆಯ ಸಲಹೆ: ದಿಕ್ಕು:ಪೂರ್ವ/ಉತ್ತರ/ಈಶಾನ್ಯ ವಾರ:ಬುಧವಾರ/ಗುರುವಾರ/ಹುಣ್ಣಿಮೆ/ಗ್ರಹಣಕಾಲ.ನವರಾತ್ರಿ ಸಮಯ ಮೂಲ ನಕ್ಷತ್ರ ಇರುವ ದಿನ.ವಸಂತ ಪಂಚಮಿ. ಸಮಯ:ಬೆಳಗ್ಗೆ ೬.೦೦ರಿಂದ೭.೦೦ ಬುಧಹೋರದಲ್ಲಿ ಶುಕ್ಲಪಕ್ಷದಲ್ಲಿ. ಜಪಮಣಿ:ಸ್ಪಟಿಕಮಣಿ ಮಾಲೆ,ಮುತ್ತಿನ ಮಣಿ ಮಾಲೆ,ಕಮಲ ಮಾಲೆ, ವಸ್ತ್ರ:ಬಿಳಿ ವಸ್ತ್ರ ಹೂವು: ಮಲ್ಲಿಗೆ,ಸಂಪಿಗೆ,ಗುಲಾಬಿ ನೈವೇದ್ಯ:ಸಿಹಿಪೊಂಗಲ್,ಹಾಲಿನ ಪಾಯಸ,ಗಿಣ್ಣು,ಕಲ್ಲುಸಕ್ಕರೆ. ಜಪಸಂಖ್ಯೆ:೯,೧೮,೪೫,೧೦೮(ಸಿದ್ದಿಗಾಗಿ೧೦೦೮ ಸಲ ೪೮ ದಿನಗಳಕಾಲ ಜಪ ಅಗತ್ಯ) ಸಿದ್ದಿಗಾಗಿ ಮಂತ್ರ ಜಪ ಅನುಷ್ಟಾನ: ಶುಭವಾರ,ಸಮಯ ಇತ್ಯಾದಿ ನೋಡಿಕೊಂಡು ಮೇಲೆ ತಿಳಿಸಿರುವಂತೆ ಸರಸ್ವತಿ ಬಾವಚಿತ್ರ/ಯಂತ್ರ ಮಾಡಿಕೊಂಡು ಅವುಗಳನ್ನು ಪ್ರತಿಸ್ಠಾಪಿಸಿ ಪೂಜೆಮಾಡಿ ಮಂತ್ರವನ್ನು ಜಪಿಸಿ ಸಿದ್ದಿಮಾಡಿಕೊಳ್ಳಬೇಕು. ಸೂಚನೆ:(ಸ್ತ್ರೀಯರು ಮಾಸಿಕ ಋತು ಸ್ರಾವದಲ್ಲಿ ಈ ಮಂತ್ರ ಜಪವನ್ನು ಮಾಡಬಾರದು) ತ್ರಿಪುರ ಸುಂದರಿ ಮೂಲ ಮಂತ್ರ: !!!ಓಂ ಐಂ ಕ್ಲೀಂ ಸೌ ಕ್ಲೀಂ ಐಂ ಐಂ ಕ್ಲೀಂ ಸೌ!!! ತ್ರಿಪುರಸುಂದರಿ ಮಹಾ ಮಂತ್ರ: ಹೌಂ ಐಂ ಹ್ರೀಂ ಶ್ರೀಂ ಐಂ ಕ್ಲೀಂ ಸೌಂ ಕ್ಲೀಂ ಐಂ ಹೌಂ ನಮೋ ಭಗವತಿ ತ್ರಿಪುರಸುಂದರಿ ದೇವೀ ಮಮ ವಶಂ ಕುರು ಕುರು ಸ್ವಾಹಾ!!! ಈ ಮಂತ್ರವನ್ನು ಮಂಗಳವಾರ/ಶುಕ್ರವಾರ/ಅಷ್ಟಮಿ/ನವಮಿ/ಹುಣ್ಣಿಮೆ ಇರುವಾಗ ಚಂದ್ರಹೋರಾದಲ್ಲಿ ೯,೪೫,೧೦೮ ಸಲ ಪೂರ್ವ/ಈಶಾನ್ಯ ದಿಕ್ಕಿಗೆ ಮುಖಮಾಡಿಕೊಂಡು ಜಪಿಸಬೇಕು ನೈವೇದ್ಯಕ್ಕೆ ಗಿಣ್ಣು/ಕಲ್ಲಿಸಕ್ಕರೆಹಾಲು,ಸಿಹಿಪೊಂಗಲ್ ಮಾಡಬೇಕು.ಮಲ್ಲಿಗೆ ಸಂಪಿಗೆ,ಗುಲಾಬಿ,ಲಿಲ್ಲಿ, ಬಳಾಸಬೇಕು ಮಾಲೆ:ಸ್ಪಟಿಕ ಮಾಲೆ ರೋಸರಿ ಬೀಜದ ಮಾಲೆ ಉಪಯೋಗಿಸಬೇಕು.

ಶ್ರೀ ಸರಸ್ವತಿ ಸ್ತ್ರೋತ್ರ(ಅಗಸ್ತ್ಯಮುನಿ ವಿರಚಿತ)

ಶ್ರೀ ಸರಸ್ವತಿ ಸ್ತ್ರೋತ್ರ(ಅಗಸ್ತ್ಯಮುನಿ ವಿರಚಿತ) ಯಾ ಕುಂದೇಂದು ತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ ಯಾ ವೀಣಾವರದಂಡಮಂದಿತಕರಾ ಯಾ ಶ್ವೇತಪದ್ಮಾಸನ| ಯಾ ಬ್ರಹ್ಮಾಚ್ಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಯೇಷಜಾಡ್ಯಾಪಹಾ||೧|| ದೋರ್ಭಿರ್ಯುಕಾ ಚತುರ್ಬಿಂ ಸ್ಪಟಿಕಮಣಿನಿಭೈ ರಕ್ಷಮಾಲಾಂದಧಾನಾ ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ| ಭಾಸಾ ಕುಂದೇಂದು ಶಂಖಸ್ಪಟಿಕಮಣಿನಿಭಾ ಭಸಮಾನಾಅಸಮಾನಾ ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ||೨|| ಸುರಾಸುರ ಸೇವಿತ ಪಾದ ಪ್ಂಕಜಾ ಕರೇ ವಿರಾಜತ್ಕಮುನೀಯ ಪುಸ್ತಕಾ| ವಿರಿಂಚಿ ಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ ಸದಾ||೩|| ಸರಸ್ವತೀ ಸರಸಿಜಕೇಸರಪ್ರಭಾ ತಪಸ್ವಿನೀ ಸಿತಕಮಲಾಸನಪ್ರಿಯಾ| ಅನಸ್ತನೀ ಕಮಲವಿಲೋಲಲೋಚನಾ ಮನಸ್ವಿನೀ ಭವತು ವರಪ್ರಸಾದಿನೀ||೪|| ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ| ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||೫|| ಸರಸ್ವತಿ ನಮಸ್ತುಭ್ಯಂ ಸರ್ವದೇವಿ ನಮೋ ನಮಃ| ಶಾಂತರೂಪೇ ಶಶಿಧರೇ ಸರ್ವಯೋಗೇ ನಮೋ ನಮಃ||೬|| ನಿತ್ಯಾನಂದೇ ನಿರಾಧಾರೇ ನಿಷ್ಕಲಾಯೈ ನಮೋ ನಮಃ| ವಿದ್ಯಾಧರೇ ವಿಶಾಲಾಕ್ಷಿ ಶುದ್ದಜ್ಞಾನೇ ನಮೋ ನಮಃ||೭|| ಶುದ್ದ ಸ್ಪಟಿಕರೂಪಾಯೈ ಸೂಕ್ಷ್ಮರೂಪೇ ನಮೋ ನಮಃ| ಶಬ್ದಬ್ರಹ್ಮಿ ಚತುರ್ಹಸ್ತೇ ಸರ್ವಸಿದ್ದಯೈ ನಮೋ ನಮಃ||೮|| ಮುಕ್ತಾಲಂಕೃತ ಸರ್ವಾಂಗ್ಯೈ ಮೂಲಾಧಾರೇ ನಮೋ ನಮಃ| ಮೂಲಮಂತ್ರ ಸ್ವರೂಪಾಯೈ ಮೂಲಶಕ್ತ್ಯೈ ನಮೋ ನಮಃ||೯|| ಮನೋನ್ಮಣಿ ಮಹಾಯೋಗೇ ವಾಗೀಶ್ವರೀ ನಮೋ ನಮಃ| ವಾಗ್ಚ್ಯೈ ವರದಹಸ್ತಾಯೈ ವರದಾಯೈ ನಮೋ ನಮಃ||೧೦|| ವೇದಾಯೈ ವೇದರೂಪಾಯೈ ವೇದಾಂತಾಯೈ ನಮೋ ನಮಃ| ಗುಣದೋಷವಿವರ್ಜಿನೈ ಗುಣದೀಪ್ತ್ಯೈ ನಮೋ ನಮಃ||೧೧|| ಸರ್ವ ಜ್ಞಾನೇ ಸದಾನಂದೇ ಸರ್ವರೂಪೇ ನಮೋ ನಮಃ| ಸಂಪನ್ನಾಯೈ ಕುಮಾರ್ಯೈಚ ಸರ್ವಜ್ಞತೇ ನಮೋ ನಮಃ||೧೨|| ಯೋಗಾನಾರ್ಯ ಉಮಾದೇವ್ಯೈ ಯೋಗಾನಂದೇ ನಮೋ ನಮಃ| ದಿವ್ಯಜ್ಞಾನ ತ್ರಿನೇತ್ರಾಯೈ ದಿವ್ಯಮೂರ್ತಯೈ ನಮೋ ನಮಃ||೧೩ ಅರ್ಧಚಂದ್ರಜಟಾಧಾರಿ ಚಂದ್ರಬಿಂಬೇ ನಮೋ ನಮಃ| ಚಂದ್ರಾದಿತ್ಯಜಟಾಧಾರಿ ಚಂದ್ರಬಿಂಬೇ ನಮೋ ನಮಃ||೧೪|| ಅಣುರೂಪೇ ಮಹಾರೂಪೇ ವಿಶ್ವರೂಪೇ ನಮೋ ನಮಃ| ಅಣಿಮಾದ್ಯಷ್ಟಸಿದ್ದಾಯೈ ಆನಂದಾಯೈ ನಮೋ ನಮಃ||೧೫|| ಜ್ಞಾನ ವಿಜ್ಞಾನ ರೂಪಾಯೈ ಜ್ಞಾನಮೂರ್ತೇ ನಮೋ ನಮಃ| ನಾನಾ ಶಾಸ್ತ್ರ ಸ್ವರೂಪಾಯೈ ನಾನಾ ರೂಪೇ ನಮೋ ನಮಃ||೧೬|| ಪದ್ಮದಾ ಪದ್ಮವಂಶಾ ಚ ಪದ್ಮರೂಪೇ ನಮೋ ನಮಃ| ಪರಮೇಷ್ಟ್ಯೈ ಪರಾಮೂರ್ತ್ಯೈ ನಮಸ್ತೇ ಪಾಪನಾಶಿನೀ||೧೭|| ಮಹಾದೇವ್ಯೈ ಮಹಾಕಾಲ್ಯೈ ಮಕಾಲಕ್ಷ್ಮೈ ನಮೋ ನಮಃ| ಬ್ರಹ್ಮವಿಷ್ಣುಶಿವಾಯೈ ಚ ಬ್ರಹ್ಮನಾರ್ಯೈ ನಮೋ ನಮಃ||೧೮|| ಕಮಲಾಕರಪುಷ್ಪ ಚ ಕಾಮರೂಪೇ ನಮೋ ನಮಃ| ಕಪಾಲಿ ಕರ್ಮದೀಪ್ತಾಯೈ ಕರ್ಮದಾಯೈ ನಮೋ ನಮಃ||೧೯|| ಸಾಯಂ ಪ್ರಾತಃ ಪಠೇನಿತ್ಯಂ ಷಾಣ್ಮಾಸಾತ್ಸಿದ್ದಿರುಚ್ಚತೇ| ಚೋರವ್ಯಾಘ್ರಭಯಂ ನಾಸ್ತಿ ಪಠತಾಂ ಶೃಣ್ವತಾಮಪಿ||೨೦|| ಇತ್ತಂ ಸರಸ್ವತೀ ಸ್ತೋತ್ರಮಗಸ್ತ್ಯಮುನಿವಾಚಕಮ್| ಸರ್ವಸಿದ್ದಿಕರಂ ನೃಣಾಂ ಸರ್ಪಪಾಪಪ್ರಣಾಶನಮ್||೨೧|| ||ಇತಿ ಅಗಸ್ತ್ಯಮುನಿ ಪ್ರೋಕ್ತಂ ಸರಸ್ವತೀಸ್ತೋತ್ರಂ ಸಂಪೂರ್ಣಂ||

ವಿಹಾಹಯೋಗ

ವಿಹಾಹಯೋಗ *ಜಾತಕದಲ್ಲಿ ಲಗ್ನ,ಚಂದ್ರ,ಕಳತ್ರಕಾರಕನಾದ ಶುಕ್ರ ಪ್ರಬಲವಾಗಿದ್ದರೆ ಒಳ್ಳೆಯ ವಿವಾಹಯೋಗವನ್ನು ಹೇಳಬಹುದು. *ವಿವಾಹಯೋಗವನ್ನು ನೋಡುವಾಗ ಪ್ರಮುಖವಾಗಿ ವಿವಾಹಸ್ಥಾನಗಳಾದ೧,೨,೪,೭,೮,೧೨ನೇ ಭಾವಗಳನ್ನು ಲಗ್ನ,ಚಂದ್ರ ಮತ್ತು ಶುಕ್ರರಿಂದ ನಿರ್ಣಯಿಸಬೇಕು. ೧.ಲಗ್ನಭಾವ:- ಜಾತಕನ ಗುಣ,ಆತನ ಸುಖವನ್ನು ಸೂಚಿಸುತ್ತದೆ. ೨.ಕುಟುಂಬ ಭಾವ: ಜಾತಕನ ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ. ೪.ಸುಖಭಾವ:- ಜಾತಕನ ವೈವಾಹಿಕ ಸುಖವನ್ನು ಸೂಚಿಸುತ್ತದೆ. ೭.ಕಳತ್ರಭಾವ:- ಜಾತಕನ ಸಂಗಾತಿಯ ಗುಣ,ಅವರಿಂದ ಜಾತಕನಿಗೆ ಸಿಗುವ ಸುಖ,ದುಃಖಗಳನ್ನು ಸೂಚಿಸುತ್ತದೆ. ೮.ಮಾಂಗಲ್ಯ ಭಾವ:- ಜಾತಕನ ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ. ೧೨.ಶಯನ ಸುಖ:- ಜಾತಕನಿಗೆ ತನ್ನ ಸತಿಯಿಂದ ದೊರೆಯ ಬಹುದಾದ ಶಯನಸುಖವನ್ನು,ಪರಸ್ಪರರಲ್ಲಿ ಪ್ರೀತಿಯನ್ನು ಸೂಚಿಸುತ್ತದೆ. ಈ ಎಲ್ಲಾ ಭಾವಗಳಲ್ಲಿ ಶುಭಗ್ರಹಗಳು ಸ್ಥಿತವಾಗಿದ್ದಾಗ ಉತ್ತಮವೈವಾಹಿಕ ಜೀವನ ಉಂಟಾಗುತ್ತದೆ.ಅಶುಭ,ಪೀಡಿತ,ಅಸ್ತ,ನೀಚ,ಗ್ರಹಗಳೇನಾದರು ಸ್ಥಿತವಾಗಿದ್ದರೆ ಆಯಾಗ್ರಹಗಳ ಪ್ರಭಾವಕ್ಕನುಗುಣವಾಗಿ ಜಾತಕನ ಜೀವನದಲ್ಲಿ ಏರಿಳಿತಗಳು(ಕಷ್ಟ,ಸುಖಗಳು)ಇರುತ್ತವೆ. *ವಿವಾಹ ಜೀವನಕ್ಕೆ ಶುಭಗ್ರಹಗಳು-ಚಂದ್ರ,ಶುಕ್ರ,ಗುರು *ವೈವಾಹಿಕ ಜೀವನಕ್ಕೆ ಅಶುಭಗ್ರಹಗಳು:-ರವಿ,ರಾಹು ಶನಿ *ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಗ್ರಹಗಳು:-ಕುಜ,ಕೇತು,ಬುಧ.(ಈಗ್ರಹಗಳು ಶುಭಗ್ರಹಗಳ ಸಂಪರ್ಕ ವಿದ್ದರೆ ಶುಭ,ಅಶುಭಗ್ರಹಗಳ ಸಂಪರ್ಕ ವಾದರೆ ಅಶುಭ) *ವಿವಾಹ ವಾಗಲು:-ಸಪ್ತಮಮತ್ತು ಲಾಭ ಸ್ತ ಹಾಗು ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತಾರೆ ಹಾಗು ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು. *ಯಾವುದೇಜಾತಕದಲ್ಲಿ೨.೭.೧೧ನೇ ಭಾವಾದಿಪತಿಗಳು ಬಲಿಷ್ಟರಾಗಿ ವಿವಾಹ ಸೂಚಕಗ್ರಹಗಳಾದ ಶುಕ್ರ,ಗುರು,ಚಂದ್ರರು ಬಲಿಷ್ಟರಾಗಿದ್ದರೆ ಉತ್ತಮ ವಿವಾಹಯೋಗ.ಜಾತಕದಲ್ಲಿಸಪ್ತಮಾಧಿಪತಿಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭವಿವಾಹ ಯೋಗ ಕಳತ್ರಕಾರಕನಾದ ಶುಕ್ರನು ಶುಭನು ಗುರುದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗೌಂಟಾಗುತ್ತದೆ. *ಪುರುಷರ ಜಾತಕದಲ್ಲಿ ಚಂದ್ರ೨ಅಥವ೪ನೇ ಸ್ಥಾನದಲ್ಲಿದ್ದರೆವಿವಾಹ ವಿಳಂಭ(ತಡ,ಆಲಸ್ಯ ವಿವಾಹ)ಉಂಟಾಗುತ್ತದೆ, *ಸ್ತ್ರೀಯರ ಜಾತಕದಲ್ಲಿ ರವಿಯು೨ಅಥವ೪ರಲ್ಲಿದ್ದರೆ ಆಲಸ್ಯ ವಿವಾಹ(ವಿಳಂಬ,ತಡ)ಉಂಟಾಗುತ್ತದೆ.ಮೇಷ,ಸಿಂಹ,ಕನ್ಯ,ದನಸ್ಸು,ಮಕರ ಲಗ್ನದಲ್ಲಿ ಶುಕ್ರನಿದ್ದರೆ(ಸ್ತ್ರೀ/ಪುರುಷರ ಜಾತಕಗಳೆರಡರಲ್ಲೂ)ಆಲಸ್ಯ ವಿವಾಹಯೋಗ ಉಂಟಾಗುತ್ತದೆ.