Friday 30 August 2019

ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು?

ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ. ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ. ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ. 1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ ಮತ್ತು ಮಕರ ಇದು ಸ್ಥಿರ ರಾಶಿ. ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಯೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ ಇಲ್ಲವೇ ಮೇಷ, ಕರ್ಕಾಟಕ, ತುಲಾ ಮತ್ತು ಧನು ಈ ಚರ ರಾಶಿಯಲ್ಲಿ ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದರೆ ಆ ಗ್ರಹಗಳ ದೆಸೆಯಲ್ಲಿ ಜಾತಕನಿಗೆ ಬಹಳ ಸಂಪತ್ತು ಬರುತ್ತದೆ. ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿ ಇದ್ದರೆ ಒಳ್ಳೆಯ ಫಲವು ಸಿಗುವುದಿಲ್ಲ. ರಾಹು ಕೇತುಗಳು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಕೇತುಗಳು ಮೇಷ, ವಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕರು ಬಹಳ ಹಣವಂತರಾಗುತ್ತಾರೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ. ತತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿಶನಿ ಇದ್ದರೆ ಜಾತಕನು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತದೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು ಸರಕಾರದ ದಂಡಕ್ಕೆ ಗುರಿಯಾಗುತ್ತಾರೆ. -Sangraha (FB)

ಸಾಡೇಸಾತಿ

ಸಾಡೇಸಾತಿ(ಏಳುವರೆ ವರ್ಷ ಶನಿ ಕಾಟ(ಜನ್ಮ ರಾಶಿಯಿಂದ ಗೋಚಾರದಲ್ಲಿ(೧,೨,೧೨,ಈ ಮನೆಗಳಲ್ಲಿ ಸಂಚರಿಸುವುದನ್ನು ಸಾಡೇಸಾತಿ ಎನ್ನುತ್ತಾರೆ) ಚಂದ್ರನಿಂದ 12, 1 ಮತ್ತು 2 ನೇ ಮನೆಯಲ್ಲಿ ಶನಿ, ಇದರೆ ಇದನ್ನುಸಡೆ ಸಾತಿ ಎಂದು ಕರೆಯುತ್ತಾರೆ ಇದು ಏಳೂವರೆ ವರ್ಷಗಳು ಇರುತ್ತದೆ. ಚಂದ್ರನಿಂದ 8 ನೇ ಮನೆಯಲ್ಲಿ ಶನಿ ಇದರೆ ಅಷ್ಟಮ ಶನಿ ಎಂದು ಕರೆಯುತ್ತಾರೆ. ಅರ್ಹ ಅಷ್ಟಮ ಶನಿ ಎಂಬ 4 ನೇ ಮನೆಯಲ್ಲಿ ಇದರೆ ಶನಿ. ಶನಿವಾರದಂದು ಹನುಮಾನ್ ಚಾಲಿಸಾ ಓದುವುದು ಗ್ರಹದ ದುಷ್ಪರಿಣಾಮಗಳಿಂದ ಪಾರಾಗಲು ಸಹಾಯ ಮಾಡುತ್ತದೆ. ಜೀರಿಗೆಯೊಂದಿಗೆ ಮೊಸರು ಅನ್ನ ಮಾಡಿ ಮತ್ತು ಶನಿವಾರದಂದು ದೇವಾಲಯವೊಂದರಲ್ಲಿ ಶನಿಗ್ರಹಕ್ಕೆ ಅರ್ಪಿಸಿ ನಂತರ ಕಾಗೆಗಳಿಗೆ ಆಹಾರವನ್ನು ನೀಡಿ. ಶನಿವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕೇವಲ ದ್ರವಗಳೊಂದಿಗೆ ಉಪವಾಸ ಮಾಡುವುದು ಅವನನ್ನು ಹೆಚ್ಚು ಮೆಚ್ಚಿಸುತ್ತದೆ. ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಿ ಅಥವಾ ಶನಿವಾರದಂದು ಶನಿ ಗ್ರಹಕ್ಕೆ ತೀಲ್ ಎಣ್ಣೆ ದೀಪವನ್ನು ಬೆಳಗಿಸಿ. ಅಂಗವಿಕಲರಿಗೆ ಶನಿವಾರದಂದು ಆಹಾರ ನೀಡುವುದರಿಂದ ಶನಿಯು ಹೆಚ್ಚು ಸಂತೋಷವಾಗುತ್ತದೆ. ಶನಿವಾರ ಬೆಳಿಗ್ಗೆ ಪೀಪಲ್ ಮರದ(ಅರಳಿ ಮರದ) ಕೆಳಗೆ (ಎಳ್ಳೇಣ್ಣೆಯ)ತೀಲ್ ಎಣ್ಣೆ ದೀಪವನ್ನು ಅರ್ಪಿಸಿ ಮತ್ತು ಶನಿ ಸ್ತೂತಿ ಪಠಿಸಿ: -Sangraha (FB)

ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ ?

1) 3ನೆ ಮನೆಯಲ್ಲಿ ರಾಹು 9ನೆ ಮನೆಯಲ್ಲಿ ಕೇತು ಇದ್ರೆ ವಾಸುಕಿ ಕಾಲ ಸರ್ಪ ಯೋಗ ಬರುತ್ತದೆ. 2) ರಾಹು 1ನೆ ಮನೆಯಲ್ಲಿದ್ದು ಕೇತು 7ನೆ ಮನೆಯಲ್ಲಿದ್ರೆ ಅನಂತ ಕಾಳ ಸರ್ಪ ಯೋಗ ಬರುತ್ತದೆ. 3) ರಾಹು 2ನೆ ಮನೆಯಲ್ಲಿದ್ದು ಕೇತು 8ನೆ ಮನೆಯಲ್ಲಿದ್ರೆ ಕುಳಿಕ ಕಾಳ ಸರ್ಪ ಯೋಗ ಬರುತ್ತದೆ. 4)4ನೆ ಮನೆಯಲ್ಲಿ ರಾಹು 10ನೆ ಮನೆಯಲ್ಲಿ ಕೇತು ಇದ್ದಾಗ ಶಂಖ ಫಲ ಕಾಳ ಸರ್ಪ ಯೋಗ ಬರುತ್ತದೆ. 5) 5ನೆ ಮನೆಯಲ್ಲಿ ರಾಹು 11ನೆ ಮನೆಯಲ್ಲಿ ಕೇತು ಇದ್ದಾಗ ಪದ್ಮಕಾಳ ಸರ್ಪ ಯೋಗ ಬರುತ್ತದೆ. 6) 6ನೆ ಮನೆಯಲ್ಲಿ ರಾಹು 12 ನೆ ಮನೆಯಲ್ಲಿ ಕೇತು ಇದ್ದಾಗ ಮಹಾ ಪದ್ಮ ಕಾಳ ಸರ್ಪ ಯೋಗ ಬರುತ್ತದೆ. 7)ರಾಹು 7ನೆ ಮನೆಯಲ್ಲಿ ಕೇತು 1ನೆ ಮನೆಯಲ್ಲಿ ಇದ್ರೆ ತಕ್ಷಕ ಕಾಳ ಸರ್ಪ ಯೋಗ ಬರುತ್ತದೆ. 8) 8ನೆ ಮನೆಯಲ್ಲಿ ರಾಹು 2ನೆ ಮನೆಯಲ್ಲಿ ಕೇತು ಇದ್ರೆ ಕಾರ್ಕೋಟಕ ಕಾಳ ಸರ್ಪ ಯೋಗ ಬರುತ್ತದೆ. 9)9ನೆ ಮನೆಯಲ್ಲಿ ರಾಹು 3ನೆ ಮನೆಯಲ್ಲಿ ಕೇತು ಇದ್ರೆ ಶಂಖ ಚೂಡ ಕಾಳ ಸರ್ಪ ದೋಷ ಬರುತ್ತದೆ. 10)ಯೋಗರಾಹು ಹತ್ತನೇ ಮನೆಯಲ್ಲಿ ಕೇತು ನಾಲ್ಕನೇ ಮನೆಯಲ್ಲಿ ಇದ್ರೆ ಘಾತಕ ಅಥವಾ ಪಾತಕ ಕಾಳ ಸರ್ಪ ಯೋಗ ಬರುತ್ತದೆ. ರಾಹು ಮತ್ತು ಕೇತು ಗ್ರಹಗಳ ಮಧ್ಯೆ ಮಿಕ್ಕ 7 ಗ್ರಹಗಳಿದ್ದರೆ 11) ರಾಹು 11ನೆ ಮನೆ ಯಲ್ಲಿದ್ದು ಕೇತು 5ನೆ ಮನೆಯಲ್ಲಿ ಇದ್ರೆ ವಿಷ ಧರ ಕಾಳ ಸರ್ಪ ಯೋಗ ಬರುತ್ತದೆ. 12) ರಾಹು 12ನೆ ಮನೆಯಲ್ಲಿ ಇದ್ಧು ಕೇತು 6ನೆ ಮನೆಯಲ್ಲಿ ಇದ್ರೆ ಶೇಷ ನಾಗ ಕಾಳ ಸರ್ಪ ಯೋಗ ಬರುತ್ತದೆ. ಜೀವನಾವಧಿಯ 42ವರ್ಷಧ ವರೆಗೂ ಕಾಳಸರ್ಪ ಯೋಗವು ತೊಂದರೆ ನೀಡುತ್ತದೆ. ತಿಳಿದಿರುವ ಪ್ರಕಾರ .....ಕೇತು (ಬಾಲ) ವಿನಿಂದ ರಾಹು ಮಧ್ಯೆ ಎಲ್ಲಾ ಗ್ರಹಗಳು ಸೇರಿದಾಗ..ಇದು ಕಾಳಸರ್ಪ ಯೋಗ...ಎನ್ನುತ್ತಾರೆ.. ರಾಹು (ಬಾಯಿಂದ) ವಿನಿಂದ. ಕೇತು (ಬಾಲ ) ....ವಿನೊಳಗೆ ಎಲ್ಲಾ ಗ್ರಹಗಳು ಬಂದರೆ ಇದು ಕಾಳ ಸರ್ಪ ದೋಷ ಎನ್ನುತ್ತಾರೆ.... -Sangraha (FB)

ಗ್ರಹ ಎ೦ದರೇನು ? ಸೂರ್ಯ ಚಂದ್ರಾದಿ ನವಗ್ರಹಗಳ ಕಾರಕತ್ವದ ವಿವರಗಳು -ಕೃಪೆ ಅಂತರಜಾಲ ತಾಣ

ಗ್ರಹ ಎ೦ದರೇನು ? ಗ್ರಹ ಎ೦ಬುದು ಸಂಸ್ಕೃತದಲ್ಲಿ ಐದಾರು ಅರ್ಥಗಳುಳ್ಳ ಶಬ್ದ. “ಗ್ರಹ ಬಡಿದವನಂತೆ” ನಿಂತ ಅನ್ನುತ್ತೇವೆ. ಇಲ್ಲಿ ಗ್ರಹ ಎ೦ದರೆ ಭೂತ, ಪಿಶಾಚಿ ಎ೦ದರ್ಥ. ಶಕ್ತಿಗ್ರಹ, ಪಾಣಿಗ್ರಹ, ನೀಚಗ್ರಹ ಎ೦ಬಲ್ಲೆಲ್ಲಾ ಗ್ರಹ ಶಬ್ದವು ಬೇರೆ ಬೇರೆ ಅರ್ಥವನ್ನು ಹೇಳುತ್ತದೆ. “ನನಗೆ ಯಾಕೆ ಬೇಕಿತ್ತು ? ನನ್ನ ಗ್ರಹಚಾರ ಮಾರಾಯ” ಎನ್ನುತ್ತಾರೆ ಉಡುಪರು. ಗ್ರಹಗತಿ ಸರಿಯಿತ್ತು, ಅಪಘಾತದಿಂದ ಪಾರಾದೆ. ಅನ್ನುತ್ತಾರೆ ಕಲ್ಬುರ್ಗಿಯವರು. ಗ್ರಹಾನುಕೂಲಕ್ಕಾಗಿ ಗ್ರಹಯಜ್ಞವನ್ನು ಮಾಡಿ ಎನ್ನುತ್ತಾರೆ ಪುರೋಹಿತರು. ಇಲ್ಲಿ ಗ್ರಹವೆಂದರೆ ಆದಿತ್ಯಾದಿ ನವಗ್ರಹಗಳು. ಗ್ರಹಣ ಎ೦ದರೆ ಹಿಡಿಯುವುದು ಎ೦ದರ್ಥ. ಯಾವುದು ಹಿದಿಯುವವು? ಅವು ಗ್ರಹಗಳು (ಗೃಹ್ಣಂತಿ ಇತಿ ಗ್ರಹಾಃ) ಸೂರ್ಯಚಂದ್ರರನ್ನು ಹಿಡಿಯುವ ರಾಹು ಕೇತುಗಳಷ್ಟೇ ಗ್ರಹರಲ್ಲ. ಆಯಾಯ ದಶಾಕಾಲದಲ್ಲಿ ನಮ್ಮನ್ನೆಲ್ಲ ಹಿಡಿಯುವ ಆದಿತ್ಯಾದಿಗಳೂ ಗ್ರಹರೇ. ಈ ಗ್ರಹಗಳು ಸಕಲ ಪ್ರಾಣಿ ಜಾತದ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತಿದ್ದು ತಮ್ಮ ಪ್ರಭಾವವನ್ನು ಬೀರುತ್ತವೆ. ಪರಮೋತ್ಕರ್ಷವನ್ನು ಹೊಂದಿ ಗದ್ದುಗೆಯನ್ನು ಏರುವುದಕ್ಕೂ,ನೆಲಕಚ್ಚಿ ಪ್ರಪಾತಕ್ಕೆ ಬೀಳುವುದಕ್ಕೂ ಗ್ರಹದ ಸ್ಥಿತಿಗತಿಗಳು ಕಾರಣವಾಗುತ್ತವೆ. ಕಾರಿಕೆಯೊಂದು ಹೀಗೆ ಹೇಳುತ್ತದೆ. ಗ್ರಹಾ ಗಾವೋ ನರೇಂದ್ರಶ್ಚ ಬ್ರಾಹ್ಮಣಶ್ಚ ವಿಶೇಷತಃ | ಪೂಜಿತಾಃಪೂಜಯಿಷ್ಯಂತಿ ನಿರ್ದಹಂತ್ಯನಮಾನಿತಾ || ಗ್ರಹಗಳು ಗೋವುಗಳು ರಾಜ ಮತ್ತು ಬ್ರಾಹ್ಮಣರು ಈ ನಾಲ್ವರು ಪೂಜಿತರಾದರೆ ಸದಭೀಷ್ಟ ಪ್ರದರು, ಅವಮಾನಿತವಾದರೆ ಸರ್ವನಾಶಕರು ಎ೦ದೂ ಜ್ಯೋತಿಶ್ಶಾಸ್ತ್ರ ಒಂಬತ್ತು ಗ್ರಹಗಳನ್ನು ಹೆಸರಿಸುತ್ತದೆ. ಸೂರ್ಯ, ಚಂದ್ರ, ಕುಜ, ಬುಧ, ಗುರು ಶುಕ್ರ, ಶನಿ, ರಾಹು, ಕೇತುಗಳೇ ಈ ನವಗ್ರಹರು. ರವಿ :- · ರವಿಯು ಸಿಂಹ ರಾಶಿಯ ಅಧಿಪತಿ · ಇದು ಅಗ್ನಿ ತತ್ವದ ಗ್ರಹ. · ಪುರುಷ ಗ್ರಹ. · ಸರ್ಕಾರಿ ನೌಕರಿಯಲ್ಲಿ ಇರುವವರು. · ಅಧಿಕಾರವನ್ನ ನಡೆಸುವವರು. · ದರ್ಪದಿಂದ ಸದಾ ಇರುವವರು. · ಅಹಂಕಾರದಿಂದ ಮೆರೆಯುವವರು. · ಆಡಳಿತ (ಇವರು ಆಡಳಿತವನ್ನ ಚೆನ್ನಾಗಿ ಮಾಡುತ್ತಾರೆ.) · ನಾಯಕತ್ವವನ್ನ ಬಯಸುವವರು. · ಒಂಟಿಯಾಗಿ ಕುಳಿತು ಯೋಚನೆಯನ್ನ ಮಾಡುವವರು · ನ್ಯಾಯ ತೀರ್ಮಾನವನ್ನ ಮಾಡುವವರು. · ಗುಂಡಾದ ಮುಖವಿರುವವರು · ಇಅವ್ರುಗಳ ಮುಖ, ಅಸ್ಟೊಂದು ಆಕರ್ಷಣೆ ಇರೋದಿಲ್ಲ(ಕಾರಣ ಸಿಂಹದ ಮುಖವೇ ಹಾಗೆ). · ಉಗ್ರ ಮನಸ್ಸಿರುವವರು. · ಬಹಳ ಕೋಪಿಸ್ಟರು · ಕಠಿಣ ಹೃದಯ ಇರುವವರು. · ಶಿಕ್ಷೆಯನ್ನ ಕೊಡುವವರು.ಕಾರಣ ಇದು ರಾಜನ ರಾಶಿ. · ಹೆಚ್ಚಿಗೆ ಕ್ಷಮಾಯಾಚನೆ ಇರೋಲ್ಲ ಇವರಲ್ಲಿ. · ಗಂಭೀರ ನಡಿಗೆ ಉಳ್ಳವರು. · ಒಳ್ಳೇ ಶ್ರೀಮಂತ ಗ್ರಹ · ಸದಾ ಗೆಲ್ಲುವ ಹಂಬಲ · ಇವರಿಗೆ ವಾಹನ ಸುಖವಿರುತ್ತದೆ. · ಯಾವಾಗಲೂ ಡೋಮಿನೇಷನ್ ನೇಚರ್ ಇರುವವರು. · ಮುಖ್ಯ ಮಂತ್ರಿ, ಮಂತ್ರಿ, ಎಮ್.ಎಲ್.ಏ ಎಲ್ಲಾ ಸಿಂಹ ರಾಶಿಯವರು. · ರವಿಯನ್ನ ಕ್ರೂರ ಗ್ರಹವೆಂದೂ ಕರೆಯುತ್ತಾರೆ. · ರವಿಯು ಜ್ನಾನವಂತ ಗ್ರಹ. ಆದರೆ ವಿದ್ಯಾವಂತ ಗ್ರಹವಲ್ಲ. · ರವಿಯ ಸಂಖೆ ೧. · ಪಿತೃ ಕಾರಕ. · ಉಚ್ಚ ಸ್ಥಾನ ಮೇಷ ರಾಶಿ · ಉಚ್ಚಾಂಶ ೧೦ * · ಮೂಲ ತ್ರಿಕೋಣ ಸಿಂಹ ರಾಶಿ · ದಶಾ ಅವಧಿ ೬ ವರುಷ. · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು. · ಧಾನ್ಯ ಗೋಧಿ. · ದಿಕ್ಕು ಪೂರ್ವ · ಕಾರಕ ಪಿತ್ಥ · ನೀಚ ಸ್ಥಾನ ತುಲಾ ರಾಶಿ · ರವಿಯು ಮೂಳೆಯ ಕಾರಕ. · ಇಂದ್ರಿಯ :- ಕಣ್ಣು. · ಗೃಹ ಮಿತ್ರ :-ಚಂದ್ರ, ಕುಜ,ಗುರು, ಕೇತು. · ಶತ್ರು :- ಶನಿ,ಶುಕ್ರ, ರಾಹು. · ಸಮ ಗ್ರಹ :- ಬುಧ · ರವಿಯ ರತ್ನ ಮಾಣಿಕ್ಯ · ರವಿಯ ಬಣ್ಣ ಕೆಂಪು ಮತ್ತು ಗುಲಾಬಿ. · ಪೀತಾಂಬರ ಇವರ ಮೆಟಲ್. ಚಂದ್ರ :- · ಕಟಕ ರಾಶಿಯ ಅಧಿಪತಿ. · ಜಲತತ್ವದ ಗ್ರಹ. · ಶಾಂತ ಸ್ವಭಾವದ ಗ್ರಹ. · ಸುಂದರ ಕಣ್ಣುಗಳು ಇರುವವರು. · ಕರುಣೆ ಇರುವವರು. · ಸ್ತ್ರೀ ಗ್ರಹ. · ಸಭ್ಯತೆ ಜಾಸ್ತಿ. · ಮಾತೃ ಹೃದಯ ಇರುವವರು. · ಚಂದ್ರನೂ ಸೂರ್ಯನಂತೆ ಅಧಿಕಾರ ಗ್ರಹ. · ಇವರು ದಕ್ಷ ಆಡಳಿತಕಾರರು. · ಆದರೆ ಇವರು ಹೊಂದಾಣಿಕೆಯನ್ನ ಮಾಡುವಂತಹವರು. ಕಾರಣ ಶಾಂತತೆಯೇ ಪ್ರಾಧಾನ್ಯ ಇವರಿಗೆ. · ಕಠಿಣ ಹೃದಯ ಇರುವವರು. ( ಯಾಕೆಂದರೆ ತಾಯಿ ಮಕ್ಕಳನ್ನ ಹೊಡೆಯುತ್ತಿರುತ್ತಾರೆ) · ಪರರಿಗೆ ಉಪಕಾರವನ್ನ ಮಾಡುವರು. · ಜನರಿಗೆ ಸಹಾಯವನ್ನ ಮಾಡುವವರು. · ಶ್ರೀಮಂತ, ಜ್ನಾನವಂತ, ಹಾಗೂ ವಿದ್ಯಾವಂತ ಗ್ರಹ. · ಓದದೇನೇ ಜ್ನಾನವನ್ನ ಪಡೆಯುವವರೆಂದರೆ, ಇವರುಗಳು. ಎಲ್ಲಾ ವಿಷಯಗಳಲ್ಲಿ ಒಳ್ಳೇ ಮಾಹಿರತೆ ಉಂಟು. · ಒಳ್ಳೇ ಜ್ಯೋತಿಷ್ಯಗಾರನಿಗೆ ಚಂದ್ರನು ಒಳ್ಳೆಯವನಾಗಿರಬೇಕು. · ಚಂದ್ರನು ಕ್ಷಮಾದಾಯಕ ಗ್ರಹ. · ಇವರುಗಳು ಆಭರಣ ಪ್ರಿಯರು. · ವಿವಿಧ ವಸ್ತುಗಳ ಪ್ರಿಯರು. · ವೈಭವ ಜೀವನವನ್ನ ನಡೆಸುವವರು. · ಇವರಿಗೆ ವಾಹನ ಸುಖವಿರುತ್ತದೆ. · ಆದರೆ ಇಲ್ಲಿ ಸೇವಕರು ಡ್ರೈವ್ ಮಾಡಲು ಇರುತ್ತಾರೆ. ಇವರುಗಳು ಸಾಮಾನ್ಯವಾಗಿ ಮಾಡೋಲ್ಲ. · ಇಲ್ಲಿ ಹೆಚ್ಚಿಗೆ ಸ್ವತಂತ್ರ ಮನೋಭಾವನೆ ಇರುತ್ತದೆ. · ಇವರು ಕುಟುಂಬ ನಿರ್ವಹಣೆಯಲ್ಲಿ ನಿಸ್ಸೀಮರು. ಪೈಸ ಪೈಸ ಲೆಕ್ಕ ಹಾಕುತ್ತಾರೆ. · ಒಳ್ಳೇ ಆಹಾರವನ್ನ ತಯ್ಯಾರು ಮಾಡುವವರು. · ಇವರುಗಳು ಒಳ್ಳೇ ಭೋಜನ ಪ್ರಿಯರು ಕೂಡ. ಆಲ್ತು, ಫ಼ಾಲ್ತು ತಿನ್ನೋಲ್ಲ. · ಇವರುಗಳಿಗೆ ಅಡಿಗೆ ಪರ್ಫ಼ೆಕ್ಟ್ ಆಗಬೇಕು. · ಚಂದ್ರನ ಸಂಖೆ ೨ · ಚಂದ್ರನ ಮಿತ್ರರು ರವಿ ಮತ್ತು ಬುಧ ಹಾಗೂ ಕೇತು. · ಶತ್ರು ರಾಹು. · ಸಮ ಗ್ರಹಗಳು ಕುಜ, ಗುರು, ಶುಕ್ರ ಮತ್ತು ಶನಿ. · ಚಂದ್ರ ಮಾತೃ ಕಾರಕ. · ಉಛ್ಛ ಸ್ಥಾನ :- ವೃಷಭ ರಾಶಿ. · ನೀಚ ಸ್ಥಾನ :- ವೃಸ್ಚಿಕ ರಾಶಿ. · ದಶಾ ವರ್ಷ :- ೧೦ · ಮೂಲ ತ್ರಿಕೋಣ :- ಕರ್ಕ ರಾಶಿ. · ಉಛ್ಚಾಂಶ :- ೩ * · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅವಧಿ ೨ ೧/೨ ದಿನ · ದಿಕ್ಕು :- ವಾಯೂವ್ಯ. · ಕಾರಕ :- ಕಫ · ಲೋಹ :- ಬೆಳ್ಳಿ. · ಅಂಗಾಂಗ :- ರಕ್ತ. · ಇಂದ್ರಿಯ :- ನಾಲಿಗೆ. · ಧಾನ್ಯ :- ಅಕ್ಕಿ · ಇವರ ರತ್ನ ಮುತ್ತು. · ಇದೇ ಚಂದ್ರ ಋಣಾ ಧಾನ್ಯ :- ಅಕ್ಕಿ · ಇವರ ರತ್ನ ಮುತ್ತು. · ಇದೇ ಚಂದ್ರ ಋಣಾತ್ಮಕನಾದಲ್ಲಿ, ಹೊಟ್ಟೇ ಕಿಚ್ಚು ಬಹಳ. · ಇವರಲ್ಲಿ ಶಕ್ತಿ ಹೀನತೆ ಉಂಟಾಗುತ್ತದೆ. · ಅಜೀರ್ಣತೆ ಜಾಸ್ತಿ · ಆವಾಗಾವಾಗ ಟಾಯಿಲೆಟ್ಟಿಗೆ ಹೋಗುತ್ತಿರುತ್ತಾರೆ. · ಹೊಟ್ಟೇ ಸಂಬಂಧಿತ, ಅಂದರೆ ಜಲ ಸಂಬಂಧಿತ ಕಾಹಿಲೆಗಳು ಜಾಸ್ತಿ. · ಅದೇ ಚಂದ್ರ ಕೆಟ್ಟಲ್ಲಿ, ವಾಮಾಚಾರಕ್ಕೆ ಇಳಿಯುತ್ತಾರೆ. · ಇವರು ಚಂದ್ರನಂತೆ ಬಳುಕು ದೇಹ. ಇವರ ಕಟ್ಟಿ ಹಿಂದೆ ಬಂದಿರುತ್ತದೆ. ಕುಜ ಗ್ರಹ :- · ಮೇಷ ಹಾಗೂ ವೃಸ್ಚಿಕ ರಾಶಿಗಳ ಅಧಿಪತಿ. · ಅಗ್ನಿ ತತ್ವದ ಗ್ರಹ. ಅದಕ್ಕೇ ಮೇಷ ರಾಶಿಯ ಕುಜನಿಗೆ ಪ್ರಾಮುಖ್ಯತೆ ಜಾಸ್ತಿ. · ವೃಸ್ಚಿಕ ರಾಶಿಯ ಕುಜನ ಜಲ ತತ್ವಕ್ಕೆ ಅಸ್ಟೇನೂ ಪ್ರಾಮುಖ್ಯತೆ ಕೊಡೋಲ್ಲ. · ಕುಜನು ಪುರುಷ ಗ್ರಹ. · ಈತ ಉಗ್ರ ಗ್ರಹನೂ ಹೌದು. · ಒಳ್ಳೇ ಕೋಪಿಸ್ಠರು. · ಬಣ್ಣ ರಕ್ತ ಕೆಂಪು. · ದೇಹದಲ್ಲಿಯ ರಕ್ತ ಸೂಚಕ ಗ್ರಹ. · ಹೊಡೆದಾಟಕ್ಕೆ, ಬಡಿದಾಟಕ್ಕೆ ಕಾರಕ ಗ್ರಹ. · ಆದರೆ ಪರೋಪಕಾರಿ ಗ್ರಹ. · ಸಾಮಾನ್ಯವಾಗಿ ಗೆಲ್ಲುವ ಗ್ರಹ. · ಅಸ್ತ್ರ ಶಸ್ತ್ರಗಳ ಬಳಕೆಯನ್ನ ಮಾಡುವಂತಹ ಗ್ರಹ. · ಪರರನ್ನ ಪೀಡಿಸುವ ಗ್ರಹ. · ಸಮಾಜ ಘಾತಕ ಕೆಲಸಗಳನ್ನ ಮಾಡುವಂತಹ ಗ್ರಹ. · ಆಕ್ರೋಷದ ಗ್ರಹ. · ಒಂದು ಸಾಲಿನಲ್ಲಿ ನಿಂತಲ್ಲಿ, ಹಿಂದಿದ್ದವ ಕ್ರಮ ತಪ್ಪಿ ಮುಂದೆ ಹೋಗಿ ನಿಂತಿರುತ್ತಾನೆ. · ಶರೀರ ಶಕ್ತಿಯನ್ನ ಉಪಯೋಗಿಸುವವ. ಯುಕ್ತಿಯನ್ನಲ್ಲ. · ಕಿರುಚಿ ಅಥವಾ ಜೋರಾಗಿ ಮಾತನಾಡುವ ಗ್ರಹ. · ಶರೀರ ಬಹಳ ಕಟ್ಟು ಮಸ್ತಾಗಿರುತ್ತೆ. · ಆರೋಗ್ಯವಂತ ಗ್ರಹ. · ನ್ಯಾಯವನ್ನ ಕೊಡಿಸುತ್ತಾರೆ. · ಸಮಾಜ ಸೇವೆಯೇ ಇವರ ಗುರಿ. (ಪೋಲೀಸ್ ಹುದ್ದೆ, ಮಿಲಿಟರಿ ಹುದ್ದೆ, ನೇವ್ವಿ ಹುದ್ದೆ, ಆರ್ಮ ಗಾಡ್ಸ್ ಹುದ್ದೆ ಹೀಗೆ ಎಲ್ಲಿ ಡ್ರೆಸ್ಸ್ ಕೋಡ್ ಇರುತ್ತವೆಯೋ ಅಲ್ಲಿ ಇವರದ್ದೇ ಗುಂಪು. ಖಾದಿ ಧರಿಸುವವರೂ ಹೆಚ್ಚು ಇವರೇ. ಅಂದರೆ ಮಂಗಲ್ ಬಹಳ ಸ್ಟ್ರೋಂಗ್) · ಇವರದ್ದು ಕುಟುಂಬ, ನಾಡು, ದೇಷದ ರಕ್ಷಣೆಯೇ ಗುರಿ. · ಹಿಟ್ಲರ್ ಅಂದಾಕ್ಷಣ ಕುಜನ ನೆನಪಾಗಬೇಕು ನಿಮಗೆಲ್ಲಾ. · ಟೆರ್ರೋರಿಸ್ಟ್ಸಗಳೆಲ್ಲಾ ಯುವಕರೇ, ಹಾಗೂ ಇವರಲ್ಲಿ ಕುಜನು ಬಹಳ ಸ್ಟ್ರೋಂಗ್. · ಕೆಂಪು ಬಣ್ಣದ ಹವಳ ಇವರ ರತ್ನ. · ಇವರಿಗೆ ಆಟಕ್ಕೆ ಬೇಕಾಗುವ ಶಕ್ತಿ ಕುಜನು ಕೊಡುತ್ತಾನೆ. ಆದರೆ ಆಟಕ್ಕೆ ಕಾರಕನಲ್ಲ. · ಸಂಖೆ ೯ · ಕಾರಕತ್ವ ಭ್ರಾತೃ · ಉಛ್ಛಕ್ಷೇತ್ರ ಮಕರ ರಾಶಿ. · ನೀಚ ಕ್ಷೇತ್ರ ಕರ್ಕ ರಾಶಿ. · ದಶಾ ವರ್ಷ ೭. · ಅಂಗಾಂಗ :- ಮಜ್ಜೆ. · ಉಛ್ಚಾಂಶ :- ೨೮* · ಓಮ್ದು ರಾಶಿಯಿಂದ ಇನ್ನೊಂದು ರಾಶಿಗೆ ೪೫ ದಿನಗಳು. · ದಿಕ್ಕು :- ದಕ್ಷಿಣ · ಲೋಹ : ತಾಮ್ರ · ದೃಸ್ಟಿ :- ೪,೭ ಮತ್ತು ೮. · ಮಿತ್ರ ಗ್ರಹಗಳಿ :- ಗುರು, ರವಿ ಮತ್ತು ಚಂದ್ರ · ಶತ್ರುಗಳು :- ಬುಧ · ಸಮ ಗ್ರಹಗಳು :- ಶುಕ ಬುಧ ಗ್ರಹ:- · ಮಿಥುನ ಮತ್ತು ಕನ್ಯಾ ಅಧಿಪತಿ. · ಇವರುಗಳು ಪಾದರಸದಂತೆ ಬಹಳ ಚುರುಕು ಸ್ವಭಾವ. · ಎಲ್ಲವುದರಲ್ಲಿಯೂ ಚುರುಕುತನ. ಬರೇ ೫ ನಿಮಿಷಗಳಲ್ಲಿ ಇವರ ಸ್ನಾನ ಮುಗಿಯುತ್ತದೆ. · ಬರೇ ೩ ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ. · ಮಾತು ಕೂಡ ಹಾಗೆಯೇ, ಒಳ್ಳೇ ಅರಳು ಹೊಟ್ಟಿದ ಹಾಗೆ ಮಾತನಾಡುತ್ತಾರೆ. · ಕಾರಣ ಬುಧನು ಕಮ್ಯುನಿಕೇಷನ್ ಗ್ರಹ. · ಮಿಥುನದಲ್ಲಿ ಧನಾತ್ಮಕ(+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ (-ವ್) · ಆದ್ದರಿಂದ ಮಿಥುನದ ವಾಯು ತತ್ವಕ್ಕೇ ಪ್ರಾಧಾನ್ಯ ಜಾಸ್ತಿ. · ಕನ್ಯಾದ ಪ್ರಥ್ವೀ ತತ್ವಕ್ಕೆ ಅಸ್ಟೇನೂ ಪ್ರಾಧಾನ್ಯ ಕೊಡೋಲ್ಲ. · ಎಲ್ಲಾ ಪುರುಷ ರಾಶಿಗಳಲ್ಲಿ ಗ್ರಹಗಳು ಶಕ್ತಿಶಾಲಿಗಳಾಗಿರುತ್ತವೆ. · ಎಲ್ಲಾ ಸ್ತ್ರೀ ರಾಶಿಗಳಲ್ಲಿ ಅವುಗಳು ಋಣಾತ್ಮಕವಾಗಿರುತ್ತವೆ. · ಇವರುಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ. · ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಸ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ. · ಒಳ್ಳೇ ಶೇಪ್ ಇರುವಂತಹವರು ಬುಧ ಗ್ರಹ. · ಇವರಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ. · ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ. ವರದಕ್ಷಿಣೆ ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ. · ಬಹು ಬುದ್ಧಿವಂತ ಗ್ರಹ. (Extra Ordinary Brilliance.) · ಗೂಢ ವಿದ್ಯಗಳನ್ನ ಅಧ್ಯಯನ ಮಾಡುವುದು ಇವರುಗಳು ಜಾಸ್ತಿ. · ಸಂಶೋಧನಾ ಮನೋಭಾವನೆ ಜಾಸ್ತಿ.(Researech Oriented.) · ಇವರುಗಳು ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು. ಅದೇ ಗುರು ಗ್ರಹವು ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು. · ಯಾವಾಗಲೂ ಹೊಸತನ್ನೇ ಬಯಸುವರು. · ಹಳೇದಲ್ಲ ಇಸ್ಟ ಆಗೋಲ್ಲ ಇವರಿಗೆ. · ಎಲ್ಲಾ ಕಲೆಗಳಲ್ಲಿ(ನೃತ್ಯ, ಸಂಗೀತ, ಇತ್ಯಾದಿ) ಅಭಿರುಚಿ ಜಾಸ್ತಿ. · ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವರು. · ಒಳ್ಳೇ ಬರೆವಣಿಕೆಗಾರರು. · ಒಳ್ಳೇ ಜ್ಯೋತಿಷ್ಯಗಾರರು. · ಆಟಗಳಲ್ಲಿ , ಅದೂ (Indoor or Outdoor Activities) ಯಾವುದೇ ಆಟ ಇರಬಹುದು. · ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ. · ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ ಹೋದವರಂತೆ ಕಾಣಿಸುತ್ತಾರೆ. ಬುಧ ಗ್ರಹ:- · ಮಿಥುನ ಮತ್ತು ಕನ್ಯಾ ಅಧಿಪತಿ. · ಇವರುಗಳು ಪಾದರಸದಂತೆ ಬಹಳ ಚುರುಕು ಸ್ವಭಾವ. · ಎಲ್ಲವುದರಲ್ಲಿಯೂ ಚುರುಕುತನ. ಬರೇ ೫ ನಿಮಿಷಗಳಲ್ಲಿ ಇವರ ಸ್ನಾನ ಮುಗಿಯುತ್ತದೆ. · ಬರೇ ೩ ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ. · ಮಾತು ಕೂಡ ಹಾಗೆಯೇ, ಒಳ್ಳೇ ಅರಳು ಹೊಟ್ಟಿದ ಹಾಗೆ ಮಾತನಾಡುತ್ತಾರೆ. · ಕಾರಣ ಬುಧನು ಕಮ್ಯುನಿಕೇಷನ್ ಗ್ರಹ. · ಮಿಥುನದಲ್ಲಿ ಧನಾತ್ಮಕ(+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ (-ವ್) · ಆದ್ದರಿಂದ ಮಿಥುನದ ವಾಯು ತತ್ವಕ್ಕೇ ಪ್ರಾಧಾನ್ಯ ಜಾಸ್ತಿ. · ಕನ್ಯಾದ ಪ್ರಥ್ವೀ ತತ್ವಕ್ಕೆ ಅಸ್ಟೇನೂ ಪ್ರಾಧಾನ್ಯ ಕೊಡೋಲ್ಲ. · ಎಲ್ಲಾ ಪುರುಷ ರಾಶಿಗಳಲ್ಲಿ ಗ್ರಹಗಳು ಶಕ್ತಿಶಾಲಿಗಳಾಗಿರುತ್ತವೆ. · ಎಲ್ಲಾ ಸ್ತ್ರೀ ರಾಶಿಗಳಲ್ಲಿ ಅವುಗಳು ಋಣಾತ್ಮಕವಾಗಿರುತ್ತವೆ. · ಇವರುಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ. · ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಸ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ. · ಒಳ್ಳೇ ಶೇಪ್ ಇರುವಂತಹವರು ಬುಧ ಗ್ರಹ. · ಇವರಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ. · ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ. ವರದಕ್ಷಿಣೆ ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ. · ಬಹು ಬುದ್ಧಿವಂತ ಗ್ರಹ. (Extra Ordinary Brilliance.) · ಗೂಢ ವಿದ್ಯಗಳನ್ನ ಅಧ್ಯಯನ ಮಾಡುವುದು ಇವರುಗಳು ಜಾಸ್ತಿ. · ಸಂಶೋಧನಾ ಮನೋಭಾವನೆ ಜಾಸ್ತಿ.(Researech Oriented.) · ಇವರುಗಳು ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು. ಅದೇ ಗುರು ಗ್ರಹವು ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು. · ಯಾವಾಗಲೂ ಹೊಸತನ್ನೇ ಬಯಸುವರು. · ಹಳೇದಲ್ಲ ಇಸ್ಟ ಆಗೋಲ್ಲ ಇವರಿಗೆ. · ಎಲ್ಲಾ ಕಲೆಗಳಲ್ಲಿ(ನೃತ್ಯ, ಸಂಗೀತ, ಇತ್ಯಾದಿ) ಅಭಿರುಚಿ ಜಾಸ್ತಿ. · ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವರು. · ಒಳ್ಳೇ ಬರೆವಣಿಕೆಗಾರರು. · ಒಳ್ಳೇ ಜ್ಯೋತಿಷ್ಯಗಾರರು. · ಆಟಗಳಲ್ಲಿ , ಅದೂ (Indoor or Outdoor Activities) ಯಾವುದೇ ಆಟ ಇರಬಹುದು. · ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ. · ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ ಹೋದವರಂತೆ ಕಾಣಿಸುತ್ತಾರೆ. · Experts in Fine Arts (ಇವುಗಳಲ್ಲಿ ಬುಧ ಮತ್ತು ಶುಕ್ರನ ಪಾತ್ರ ಬಹು ದೊಡ್ಡದು.) · ಇವರೊಬ್ಬರು ಉತ್ತಮ ಪ್ರಾಧ್ಯಾಪಕರು. · ಅಧಿಕ ಭೂಮಿ, ಹಣ, ಒಡವೆಗಳ ಸಂಗ್ರಹ ಜಾಸ್ತಿ ಇವರುಗಳಿಗೆ. · ವಾಹನಗಳನ್ನೂ ಸಂಗ್ರಹ ಮಾಡುವಲ್ಲಿ ಇವನದ್ದೇ ಎತ್ತಿದ ಕೈ. · ಮ್ರಧು ಭಾಷಿ. · ಜಗಳ ಆಡೋಲ್ಲ. ಕಾರಣ ನಪುಂಸಕ ಗ್ರಹ. ಆದರೆ ಮೋಸ ಮಾಡುವುದರಲ್ಲಿ ಎತ್ತಿದ ಕೈ. · ಇವರ ಮುಖದಲ್ಲಿ ಮುಗ್ಧತೆ ಜಾಸ್ತಿ. · ಇದೇ ಬುಧನು ಋಣಾತ್ಮಕನಾಗಿದ್ದಲ್ಲಿ:- ಚರ್ಮ ರೋಗ, ಅಜೀರ್ಣತೆ ಜಾಸ್ತಿ. · -ವ್ ಬುಧನು ಅವರನ್ನ ಕುಂತಲ್ಲೇ ಕುಳಿತಿರುವಂತೆ ಮಾಡುತ್ತಾನೆ. · ಸಿಕ್ಕಾಪಟ್ಟೆ ಅಶುತ್ವವಾಗಿರುತ್ತಾರೆ. · ಬಣ್ಣ ಗಿಳಿ ಹಸಿರು. · ರತ್ನ ಪಚ್ಚೆ ಅಥವಾ ಪನ್ನ. · ದೊಡ್ಡ ತರದ ಮೋಡೆಲಿಂಗಿಗೆ ಬುಧನೇ ಅಧಿಪತಿ. · ಸಂಖೆ ೫. · ಕಾರಕತ್ವ :- ಕರ್ಮ · ಉಛ್ಚ ಕ್ಷೇತ್ರ :- ಕನ್ಯಾ ರಾಶಿ. · ಉಛ್ಚಾಂಶ :- ೧೫* · ನೀಚ ಕ್ಷೇತ್ರ :- ಮೀನ ರಾಶಿ. · ದಶಾ ವರ್ಷ :- ೧೭ · ಮೂಲ ತ್ರಿಕೋಣ :- ಕನ್ಯಾ ರಾಶಿ. · ಅಂಗಾಂಗ :- ಚರ್ಮ. · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು. · ಧಾನ್ಯ :- ಹೆಸರು ಕಾಳು. · ದಿಕ್ಕು :- ಉತ್ತರ. · ಕಾರಕ ತ್ರಿದೋಷ. · ಲೋಹ :- ಸೀಸ · ಮಿತ್ರ ಗ್ರಹಗಳು :- ಸೂರ್ಯ ಮತ್ತು ಶುಕ್ರ · ಶತ್ರು :- ಚಂದ್ರ · ಸಮ ಗ್ರಹ :- ಶನಿ, ಕುಜ ಮತ್ತು ಗುರು ಗುರು ಗ್ರಹ :- · ಮೀನದಲ್ಲಿ ಆಕಾಶ ತತ್ವ ಹಾಗೂ ಧನುಸ್ಸನಲ್ಲಿ ಅಗ್ನಿ ತತ್ವ · ಇಲ್ಲಿ ಧನುಸ್ಸಿನ ಅಗ್ನಿಗೇ ಪ್ರಾಮುಖ್ಯತೆಯನ್ನ ಕೊಡುತ್ತೇವೆ. · ಇದು ದೊಡ್ಡ ಅಗ್ನಿ. · ಗಾತ್ರದಲ್ಲಿ ದೊಡ್ಡ ಗ್ರಹ. ಅಂತೆಯೇ ಮನುಷ್ಯರೂ ಗುಂಡಾಗಿ ದಪ್ಪವಾಗಿರುತ್ತಾರೆ. · ಒಳ್ಳೇ ವಿದ್ಯಾವಂತರು. · ಬಹಳ ತೇಜಸ್ವಿಗಳು · ಧರ್ಮ ಪ್ರಚಾರಕರು ಹಾಗೂ ಧರ್ಮ ಭೋದಕರು. · ಆದ್ದರಿಂದ ಇವರುಗಳಲ್ಲಿ ಧರ್ಮ ಗುರುಗಳೇ ಜಾಸ್ತಿ. · ಉಪಾಧ್ಯಾಯ ವೃತ್ತಿಯಲ್ಲಿ ಇವರೇ ಜಾಸ್ತಿ ಕಾಣಿಸುತ್ತಾರೆ. · ಇವರುಗಳು ಧರ್ಮ ಛತ್ರಗಳನ್ನ ಕಟ್ಟುವರು. · ಜನತಾ ಸೇವೆ ಜಾಸ್ತಿ. ಇವರು ಸಮಾಜ ಸೇವೆ ಅಲ್ಲ, ಸಮಾಜ ಕಲ್ಯಾಣ ಜಾಸ್ತಿ ಮಾಡುತ್ತಾರೆ. · ಇವರು ಇರುವುದೇ ಲೋಕ ಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕಾಗಿ. · ಬಡವರಿಗೆ, ಜನರಿಗೆ ಆಶ್ರಯಗಳನ್ನ ಕಟ್ಟಿಸಿ ಕೊಡುತ್ತಾರೆ. · ಬೇರವರ ತಪ್ಪನ್ನ ತಿದ್ದುವಂತಹವರು. ಇದೇ ಬುದ್ಧಿ ಕುಂಭ ರಾಶಿಯವರಿಗುಂಟು. · ಪ್ರಪಂಚಕ್ಕೇ ಕಾನೂನನ್ನ ಬದಲಾವಣೆ ಮಾಡುವವರು. ಬಾಬಾ ಸಾಹೇಬ ಅಂಬೇಡಕರನಂತೆ. · ಪರಮ ದೈವ ಭಕ್ತರು. · ಜ್ಯೋತಿಷ್ಯಗಾರರಿಗೆ ಗುರುವಿನ ಅನುಗ್ರಹ ಇದ್ದಲ್ಲಿ ಬಹಳ ಒಳ್ಳೆಯದು. · ಪುರೋಹಿತ ಕೆಲಸವನ್ನು ಮಾಡುವವರು ಇವರೇ ಜಾಸ್ತಿ. · ಇವರು ಹಣ ಕಾಸು ಸಂಸ್ಥೆಯಾದ ರೆಸರ್ವ್ ಬೇಂಕ್, ಬ್ಯಾಕಿಂಗ್ ಕ್ಷೇತ್ರ ದಲ್ಲಿ ಜಾಸ್ತಿ ಕಾಣ ಸಿಗುತ್ತಾರೆ. · ಬುಧ ಗ್ರಹ ಹಣ ಕಾಸಿನ ವ್ಯವಹಾರವನ್ನ ಮಾಡುತ್ತಾರೆ. ಆದರೆ ಇವರುಗಳು ಈ ಸಂಸ್ಥೆಯಲ್ಲಿ ಕೆಲಸವನ್ನ ಮಾಡುತ್ತಿರುತ್ತಾರೆ. · ಇವರುಗಳು ವೈದ್ಯಕೀಯ ವೃತ್ತಿಯಲ್ಲಿ ಕೂಡ ಜಾಸ್ತಿ ಕಾಣ ಸಿಗುತ್ತಾರೆ. ಕಾರಣ ಜನತಾ ಸೇವೆಯೇ ಜನಾರ್ಧನ ಸೇವೆ. ಆದರೆ ಅದೇ ಗುರು ಋಣಾತ್ಮಕವಾದಲ್ಲಿ:- ಬೇರವರನ್ನ ಬಯ್ಯುತ್ತಾರೆ. · ಬೇರವರಿಗೆ ಶ್ರಾಪ ಹಾಕುತ್ತಾರೆ. · ಇವರಿಗೆ ಹಳದಿ ಬಣ್ಣ ಹೆಚ್ಚು ಇಸ್ಟ. · ಹೊಟ್ಟೇ ಕಿಚ್ಚನ್ನ ಪಡುತ್ತಿರುತ್ತಾರೆ. · ಇನ್ನೊಬ್ಬರಿಗೆ ತೊಂದರೆಗಳನ್ನ ಕೊಡುವುದು ಜಾಸ್ತಿ ಆಗುತ್ತದೆ. · ಪುಷ್ಯರಾಗ ಇವರ ಪ್ರೀತಿಯ ರತ್ನ. · ಇವರುಗಳು ತುಂಬಾ ಲಕ್ಷಣವಂತರು. · ಒಂದೇ ಶೇಪಿನಲ್ಲಿರುತ್ತಾರೆ. ಆದರೆ ಹೊಟ್ಟೆ ಮುಂದು ಬರುತ್ತದೆ. · ಸಂಖೆ ೩ · ಕಾರಕತ್ವ :- ಪುತ್ರ · ಉಛ್ಚ ರಾಶಿ ಕರ್ಕ · ನೀಚ ರಾಶಿ ಮಕರ · ಉಛ್ಚಾಂಶ :೫* · ದಶಾ ವರ್ಷ ೧೬ · ಒಂದು ರಾಶಿಯಿಂದ ಇನ್ನೊಂದು ರಾಶಿಯ ಅವಧಿ ೧೨ ತಿಂಗಳು. · ದಿಕ್ಕು :- ಈಶಾನ್ಯ. · ಧಾನ್ಯ :- ಕಡ್ಲೆ · ಅಂಗಾಂಗ :- ಕಿವಿ. · ಕಾರಕ :- ಕಫ. · ದೃಸ್ಟಿ :- ೫,೭ ಮತ್ತು ೯. · ಮಿತ್ರ ಗ್ರಹಗಳು :- ಸೂರ್ಯ, ಚಂದ್ರ ಮತ್ತು ಕುಜ · ಶತ್ರು ಗ್ರಹಗಳು :- ಶುಕ್ರ ಮತ್ತು ಬುಧ · ಸಮ ಗ್ರಹಗಳು :- ಶನಿ. ಶುಕ್ರ ಗ್ರಹ :- · ಶುಕ್ರನು ವೃಷಭ ಮತ್ತು ತುಲಾದ ಅಧಿಪತಿ. · ವೃಷಭದಲ್ಲಿ ಪ್ರಥ್ವೀ ತತ್ವದಲ್ಲಿದ್ದರೆ, ತುಲಾದಲ್ಲಿ ವಾಯು ತತ್ವದಲ್ಲಿರುವನು. · ತುಲಾ ಶುಕ್ರನು ಬಹಳ ಧನಾತ್ಮಕನಾಗಿರುತ್ತಾರೆ. ಕಾರಣ ಅದು ಪುರುಷ ರಾಶಿ. · ಅದಕ್ಕೇ ತುಲಾ ಶುಕ್ರನಿಗೆ ಪ್ರಾಧಾನ್ಯ ಜಾಸ್ತಿ. · ಅದೇ ವೃಷಭದಲ್ಲಿ ಋಣಾತ್ಮಕನಾದುದರಿಂದ, ಶಕ್ತಿ ಹೀನ. · ಶುಕ್ರನು ಚಂದ್ರನಂತೆ ಸ್ತ್ರೀ ಗ್ರಹ. · ಚಂದ್ರನಂತೆಯೇ ಸೌಂದರ್ಯಕ್ಕೆ ಕಾರಕ ಗ್ರಹ. · ಒಳ್ಳೇ ಜ್ಯೋತಿಷ್ಯಗಾರರು. ಜ್ಯೋತಿಷ್ಯದಲ್ಲಿ ಪರಿಣಿತರು. · ಇವರಿಗೆ ಒಂದು ಒಳ್ಳೇ ಸ್ಟೇಂಡರ್ಡ್ ಉಂಟು. · ಶ್ರೀಮಂತ ಗ್ರಹ. · ಯಾರನ್ನೂ ಅತಿಯಾಗಿ ನಂಬೋಲ್ಲ ಹಾಗೂ ಹತ್ತಿರಕ್ಕೆ ಸೇರಿಸೋಲ್ಲ. · ಸದಾ ಸಂಶಯವನ್ನ ಪಡುವವರು. · ಇವರು ಜನರನ್ನ ಜಾಸ್ತಿ ಸ್ನೇಹಿತರನ್ನಾಗಿ ಮಾಡಿಕೊಳ್ಳೋಲ್ಲ. · ಇವರದ್ದು ಯಾವಾಗಲೂ ಒನ್ ವೇ ಟ್ರಾಫ಼ಿಕ್. ತಮ್ಮ ಕುದುರೆಗೆ ಮೂರೇ ಕಾಲು ಎನ್ನುವವರು. · ಕಾರಣ ಶುಕ್ರಚಾರ್ಯರಿಗೆ ಒಂದೇ ಕಣ್ಣು. · ಇವರುಗಳು ಹೇಳಿದ್ದೇ ಸರಿ. · ಇವರು ಶುಕ್ರಾಚಾರ್ಯನಂತೆ ಹಟ ಮಾಡುತ್ತಿರುತ್ತಾರೆ. · ಲಗ್ನದಲ್ಲಿ ಶುಕ್ರ ಇದ್ದಲ್ಲಿ ಅವರು ನೂರಕ್ಕೆ ನೂರು ಟ್ರಾಫ಼ಿಕ್ ಕೆಡಿಸುತ್ತಾರೆ. · ಶ್ರೀಮಂತ ವಸ್ತುಗಳ ಸಂಗ್ರಹವನ್ನ ಮಾಡುತ್ತಾರೆ. · ಮನೆಯನ್ನ ಅಲಂಕಾರ ಮಾಡುವ ಗ್ರಹ. · ಸುಗಂಧ ವಸ್ತುಗಳ ಸಂಗ್ರಹವನ್ನ ಮಾಡುವವರು. ಇವರದ್ದು ಅದ್ಧೂರಿತನದ, ಆಡಂಬರದ ಮನೆ. · ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ. · ಇವರಲ್ಲಿ ದೊಡ್ಡ ಗಾಡಿ ಇದೆ ಎಂದರೆ ಇವರ ಶುಕ್ರ ಬಹಳ ಒಳ್ಳೆಯದು. · ಇವರಲ್ಲಿಯ ಗಾಡಿ ಬಹಳ ನೀಟ್ ಎಂಡ್ ಕ್ಲೀನ್ ಆಗಿರುತ್ತದೆ. · ಇವರುಗಳು ಒಳ್ಳೇ ನ್ಯಾಯವಂತರು. · ಬಹಳ ಒಳ್ಳೆಯ ಹೊಂದಾಣಿಕೆಯನ್ನ ಮಾಡುವವರು. · ಇವರುಗಳು ಭಾವನಾತ್ಮಕ ಜೀವಿಗಳು. · ಇವರೂ ಕೂಡ ಶುಕ್ರಾಚಾರ್ಯನಂತೆ ಯಾರೊಂದಿಗೂ ಸೇರೋಲ್ಲ.ಒಂಟಿ ಜೀವಿಗಳು. · ವದ್ಯಕೀಯ ವೃತ್ತಿಯನ್ನ ಮಾಡುವವರು. · ಒಳ್ಳೇ ಪ್ರಾಧ್ಯಾಪಕ ವೃತ್ತಿಯನ್ನ ಮಾಡುವವರು. · ಶ್ರಂಗಾರ ವಿದ್ಯಗಳಲ್ಲಿ ಪ್ರವೀಣರು. · ನವ ರಸ ವಿದ್ಯಗಳಲ್ಲಿ ಪರಿಣಿತರು. · ೬೪ ಕಲೆಗಳ ರಾಜ. · ಶುಕ್ರನು ಒಳ್ಳೇ ದಿದ್ದರೆ ಮನೆಯಲ್ಲಿ ಘಂ ಅನ್ನುವ ಸುಗಂಧದ ಪರಿಮಳ ಬರುತ್ತೆ. · ಅದೇ ಬುಧನು ಒಳ್ಳೆಯದಿದ್ದಲ್ಲಿ, ಮನೆ ತುಂಬಾ ಪೇಪರ್, ಗಲೀಜು ಇರುತ್ತೆ. · ಅದೇ ಸೂರ್ಯನು ಸ್ಟ್ರೋಂಗ ಇದ್ದಲ್ಲಿ, ಕೆಲಸಗಾರು ಹೋಗಿ ಬಾಗಿಲನ್ನ ತೆಗೆಯುತ್ತಾರೆ. · ಅದೇ ಚಂದ್ರನು ಸ್ಟ್ರೋಂಗ್ ಇದ್ದಲ್ಲಿ, ಮನೆ ಒಡತಿ (ಹೆಂಡತಿ) ಬಾಗಿಲನ್ನ ತೆಗೆಯುತ್ತಾರೆ. · ಅದೇ ಮನೆ ತುಂಬಾ ಗಲೀಜುಗಳ ರಾಶಿ ಇದ್ದಲ್ಲಿ, ಶನಿ ಗ್ರಹ ಶಕ್ತಿಶಾಲಿಯಾಗಿರುತ್ತೆ. · ಕೆಟ್ಟ ಗುಣಾಗಳ ಶುಕ್ರ · ಅದೇ ಶುಕ್ರನಲ್ಲಿ ಕೆಟ್ಟ ಗುಣವಿದ್ದಲ್ಲಿ, ಹೊಟ್ಟೇ ಕಿಚ್ಚು ಜಾಸ್ತಿ. · ಜನರ ಜೊತೆಗೆ ಸೇರೋದಿಲ್ಲ! · ತನಗಿಂತಾ ಹೆಚ್ಚಿಗೆ ವಿದ್ಯ ಇತ್ತೆಂದರೆ, ಹೊಟ್ಟೇ ಕಿಚ್ಚು ಜಾಸ್ತಿ ಬರುತ್ತೆ! · ಒಂಟೀ ಜೀವಿಗಳು. ಇದಕ್ಕೆ ಕಾರಣ ಶುಕ್ರಾಚಾರ್ಯರು ಯಾರೊಂದಿಗೂ ಸೇರೋಲ್ಲ! ಇದಕ್ಕೆ ಮತ್ತೊಂದು ಕಾರಣ ತನಗೇ ಎಲ್ಲಾ ೬೪ ಕಲೆಗಳೂ ಗೊತ್ತೆನ್ನುವ ಅಹಂ! · ಆದರೆ ಇವರುಗಳು ಅತೀ ಉತ್ತಮ ರೀತಿಯಿಂದ ಹೊಂದಾಣಿಕೆಯನ್ನ ಮಾಡಿಕೊಳ್ಳುವರು. · ವಜ್ರ ಇವರ ರತ್ನ. ಪ್ಲೇಟಿನಮ್ ಸಿಲ್ವರ್ · ಬಿಳಿ ಬಣ್ಣ ಇವರ ಫೇವರೇಟ್ · ಒಳ್ಳೇ ಸುಂದರವಾದ ಕೋಮಲ ಶರೀರ. · · ಇವರುಗಳ ಸಂಖೆ ೬ ಕಾರಕತ್ವ :- ಕಳತ್ರ · ಉಛ್ಚ ರಾಶಿ :- ಮೀನ · ನೀಚ ರಾಶಿ :- ಕನ್ಯಾ · ದಶಾ ವರ್ಷ:- ೨೦ · ಮೂಲತ್ರಿಕೋಣ :-ತುಲಾ ರಾಶಿ. · ಉಛ್ಛಾಂಶ :-೨೭* · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬೇಕಾಗುವ ಅವಧಿ :- ೧ ತಿಂಗಳು. · ದಿಕ್ಕು :- ಆಗ್ನೇಯ · ಧಾನ್ಯ :- ಅವರೆ · ಇಂದ್ರಿಯ :- ನಾಲಿಗೆ · ಕಾತ್ರಕ :- ಕಫ · ದೃಸ್ಟಿ :- ೭ · ಮಿತ್ರ ಗ್ರಹಗಳು :- ಬುಧ, ಶನಿ · ಶತ್ರು ಗ್ರಹ :- ಸೂರ್ಯ ಮತ್ತು ಚಂದ್ರ · ಸಮ ಗ್ರಹ :- ಕುಜ, ಗುರು ಶನಿ ಗ್ರಹ :- · ಮಕರ ಮತ್ತು ಕುಂಭದ ಅಧಿಪತಿ ಶನಿ ದೇವ. · ಪ್ರಥ್ವಿ ತತ್ವ ಹಾಗೂ ವಾಯು ತತ್ವದ ಅಧಿಪತಿ. · ಇಲ್ಲಿ ಕುಂಭದ ಶನಿಗೆ ಬಹಳ ಮಹತ್ವ ಉಂಟು. ಅಂದರೆ ವಾಯು ತತ್ವದ ಶನಿ ದೇವನಿಗೆ. · ಹಾಗೆಯೇ ಮಿಥುನದ ವಾಯು ತತ್ವದ ಬುಧನಿಗೆ ಮಹತ್ವ ಕೊಟ್ಟಿರುತ್ತಾರೆ. · ಇವರುಗಳು ಬಡಕಲು ಶರೀರದವರು. · ಬಣ್ಣ ಕಪ್ಪು. · ರೋಗಗ್ರಸ್ಥರಾಗಿ ಕಾಣಿಸುತ್ತಾರೆ. · ಒಳ್ಳೇ ಶ್ರಮ ಜೀವಿಗಳು ಇವರುಗಳು. · ತತ್ವ ಜ್ನಾನಿಗಳು. ಅದೂ ಕುಂಭ ರಾಶಿಯವರು ತತ್ವಜಾನಿಗಳು (ಫಿಲೋಸಫರ್ಸ್). · ಇವರುಗಳಿಗೆ ಸಿದ್ಧಾಂತದ ಮೇಲೆ ನಂಬಿಕೆಯನ್ನ ಇಡುವವರು. · ಯಾರೂ ಮಾಡದ ಕೆಲಸವನ್ನ ಇವರು ಮಾಡುತ್ತಾರೆ. · ಇವರು ತಾಂತ್ರಿಕ ವರ್ಗದಲ್ಲಿ ಕೆಲಸವನ್ನ ಮಾಡುವವರು. · ಯಾವಾಗಲೋ ಮನೆಗೆ ಬರುತ್ತಾರೆಂದರೆ, ಅವರುಗಳು ಶನಿ ತತ್ವದವರು. · ಇವರುಗಳು ಒಳ್ಳೇ ಸಮಾಜ ಸೇವಕರು. ಅದೇ ಗುರು ತತ್ವದವರು, ಸಮಾಜ ಕಲ್ಯಾಣರು. · ಇವರುಗಳು ಒಳ್ಳೇ ನ್ಯಾಯವಾದಿಗಳು. · ಗೆಲ್ಲುವ ತನಕ ಹೋರಾಟವನ್ನ ಮಾಡುವಂತಹ ನಿಧಾನಿಗಳು. ಕಾರಣ ಶನಿಯು ಮಂದ ಗ್ರಹ. ತಾಳ್ಮೆ ಬಹಳ. · ಅದೇ ಬುಧ ಗ್ರಹ ಫಟ್ಟನೆ ಹೋಗಿ ಕೆಲಸವನ್ನ ಮುಗಿಸಿಯೇ ಬಿಡುತ್ತಾರೆ. · ಶನಿಯು ಮಂದ ಗ್ರಹ. ತಾಳ್ಮೆಯ ಗ್ರಹ. · ಕೆಟ್ಟ ಶನಿ ಇದ್ದಲ್ಲಿ ಅವರು ಬಹಳ ಮೋಸಗಾರರು. ಕಳ್ಳ ತನ ಮಾಡುವವರು. · ಕೆಟ್ಟ ಚಟಗಳಿಗೆ ಬಲಿಯಾಗುವವರು. · ಇವರುಗಳು ಕೆಟ್ಟದ್ದನ್ನ ಮಾಡಲೂ ಒಳ್ಳೇ ತಾಳ್ಮೆಯಿರುತ್ತದೆ. · ಟೆಕ್ನೋಲಜಿಯನ್ನ ಒಳ್ಳೇ ರೀತಿಯಲ್ಲಿ ನಿಭಾಯಿಸುವವರು, ಹಾಗೂ ಸಂಶೋಧನೆಯನ್ನ ಮಾಡುವವರು. · ಬಡಕಲು ಶರೀರವಾದರೂ ಒಳ್ಳೇ ಬಲವಿರುವಂತಹ ಮೂಳೆಗಳನ್ನ ಹೊಂದಿದವರು. ಆದರೆ ಅದೇ ಮೂಳೆಯಲ್ಲಿ ಶಕ್ತಿ ಹೀನತೆಯನ್ನೂ ಕಾಣುವವರು. · ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತವೆ. · ಹೊಟ್ಟೇ ಸಂಬಂಧಿತ ತೊಂದರೆಗಳು ಸರ್ವೇ ಸಾಮಾನ್ಯ. · ಜನ ಸಂಘಟನೆಯನ್ನ ಮಾಡುವವರು. · ಅದೇ ಮುಷ್ಕರವನ್ನೂ ಮಾಡುವವರು ಇವರೇ. · ಕೊಳಕು ವಸ್ತ್ರ್ವನ್ನ ಧರಿಸುವವರು. · ಕೊಳಕು ಮನೆಯಲ್ಲಿ ನೆಲೆಸುವವರು. · ಯಾರಿಗೆ ಶನಿಯು ಪ್ರಬಲವಾಗಿದ್ದಾನೋ, ಅವರುಗಳು ಕಲ್ಲಿನ ಇಟ್ಟಿಗೆಯ ಮನೆಯನ್ನ ಕಟ್ಟುವವರು. · ಅದೇ ಕೆಟ್ಟ ಶನಿ ಇದ್ದಲ್ಲಿ, ಹಂಚಿನ ಮನೆಯಲ್ಲಿ ತಂಗುವವರು. · ಬಾಗಿಲು ತೂತಾಗಿ ಕಾಣಿಸೋದು. · ಹೊದೆಯುವ ಬಟ್ಟೆಗಳು ಕೊಳಕಾಗಿ ಕಾಣಿಸೋದು. · ಕಬ್ಬಿಣ ಇವರ ಲೋಹ. · ಸಂಖೆ :- ೮ · ಕಾರಕತ್ವ:- ಆಯುಷ್ಯ · ಉಚ್ಚರಾಶಿ :- ತುಲಾ · ನೀಚ ರಾಶಿ :- ಮೇಷ · ಉಚ್ಚಾಂಷ :- ೨೦* · ದಿಕ್ಕು :- ಪಸ್ಚಿಮ · ಅಂಗಾಂಗ :- ಸ್ನಾಯು · ಇಂದ್ರಿಯ :- ಚರ್ಮ · ಧಾನ್ಯ :- ಎಳ್ಳು. · ಕಾರಕ :- ವಾತ · ದೃಸ್ಟಿ :- ೩,೭ ಮತ್ತು ೧೦. · ಮಿತ್ರ ಗ್ರಶಗಳು :- ಶುಕ್ರ ಮತ್ತು ಬುಧ. · ಶತ್ರು ಗ್ರಹ :- ಸೂರ್ಯ ಮತ್ತು ಕುಜ. · ಸಮ ಗ್ರಹ :- ಚಂದ್ರ ಮತ್ತು ಗುರು ··"ಶನಿವತ್ ರಾಹು-ಕುಜವತ್ ಕೇತು" ರಾಹು ಗ್ರಹವು ಶನಿ ತತ್ವದ ಮೇಲೆಯೇ ನಿರ್ದರಿಸಿದೆ. ಅಂದರೆ ರಾಹುವಿನ ತತ್ವಗಳೆಲ್ಲಾ ಶನಿಯ ತತ್ವದ್ದು. ಅದೇ ಕೇತು ಗ್ರಹವು, ಕುಜ ಗ್ರಹದ ಮೇಲೆಯೇ ನಿರ್ದರಿಸಿದೆ. ಕೇತುವಿನ ತತ್ವಗಳೆಲ್ಲಾ ಕುಜನ ತತ್ವದ್ದು. -ಕೃಪೆ ಅಂತರಜಾಲ ತಾಣ(FB)

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ ಪ್ರಮುಖ ನಾಲ್ಕು ದಿಕ್ಕುಗಳಂತೆಯೇ ಉಪದಿಕ್ಕುಗಳೂ ಸಹ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮೊದಲಿಗೆ ಆಗ್ನೇಯ ದಿಕ್ಕಿನ ಫಲಾಫಲಗಳು ನೋಡೋಣ. ಪೂರ್ವ ದಿಕ್ಕು ಹಾಗೂ ದಕ್ಷಿಣದ ದಿಕ್ಕಿನ ಮೂಲೆಯೇ ಆಗ್ನೇಯ ದಿಕ್ಕು, ಈ ದಿಕ್ಕಿಗೆ ಅಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ಈ ಭಾಗವು ಮನೆಯ ಸ್ತ್ರೀಯರು ಹಾಗೂ ಮನೆಯ ಎರಡನೇ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ, ಹಾಗಾಗಿಯೇ ನಮ್ಮ ಪೂರ್ವಿಕರು ಆಗ್ನೇಯ ಭಾಗದಲ್ಲಿಯೇ ಅಡುಗೆ ಮನೆಯನ್ನು ನಿರ್ಮಿಸುವಂತೆ ಹೇಳಿದ್ದಾರೆ. ಆಗ್ನೇಯ ದಿಕ್ಕು ಬೆಳೆದರೂ, ಹೆಚ್ಚು ಖಾಲಿ ಜಾಗವಿದ್ದರೂ ಪರಿಣಾಮ ಕೆಟ್ಟದಿರುತ್ತದೆ, ನೈಋತ್ಯ ದಿಕ್ಕಿಗಿಂತ ತಗ್ಗಾಗಿಯೂ, ಈಶಾನ್ಯ ದಿಕ್ಕಿಗಿಂತ ಎತ್ತರವಾಗಿಯೂ ಇರುವಂತೆ ನೋಡಿಕೊಳ್ಳಬೇಕು, ಆಗ್ನೇಯ ದಿಕ್ಕಿನಲ್ಲಿ ಹಳ್ಳ, ಭಾವಿ ಮುಂತಾದುವಿದ್ದರೆ ಮನೆಯ ಹೆಣ್ಣು ಮಕ್ಕಳು(ಎರಡನೇ) ನಡತೆಗೆಡುತ್ತಾರೆ, ಎರಡನೆಯ ಮಗ ಅಕಾಲ ಮರಣಕ್ಕೀಡಾಗುತ್ತಾನೆ. ಆಗ್ನೇಯ ದಿಕ್ಕಿನಲ್ಲೂ ಎರಡು ರೀತಿಯಾಗಿ ವಿಂಗಡಿಸಬಹುದು, ಪೂರ್ವ ಆಗ್ನೇಯ ಹಾಗೂ ದಕ್ಷಿಣ ಆಗ್ನೇಯ. ಪೂರ್ವ ಆಗ್ನೇಯ ದೋಷಪೂರಿತವಾಗಿದ್ದು ಲೋಪವಾದರೆ ಮನೆಯ ಯಜಮಾನಿ/ ಪತ್ನಿ ಗೆ ಅನಾರೋಗ್ಯ , ಆಯುಷ್ಯ ಕ್ಕೆ ತೊಂದರೆ, ದ್ವಿತೀಯ ಪುತ್ರಿಯ ವೈವಾಹಿಕ ಜೀವನಕ್ಕೆ ತೊಂದರೆ,ದಾಂಪತ್ಯ ದಲ್ಲಿ ವಿರಸ ಮುಂತಾದ ದುಷ್ಫಲಗಳು. ದಕ್ಷಿಣ ಆಗ್ನೇಯ ಲೋಪವಾಗಿ ದೋಷಪೂರಿತವಾಗಿದ್ದರೆ, ಯಜಮಾನ ನಿಗೆ ದುರಾಭ್ಯಾಸ, ದುರ್ವ್ಯಸನಗಳು,ಸಾಂಸಾರಿಕ ಕಲಹ, ವಿವಾಹದ ವಿಷಯದಲ್ಲಿ ತೊಂದರೆ, ಸ್ತ್ರೀ ಪ್ರಾಭಲ್ಯ ಹೆಚ್ಚು. ಆಗ್ನೇಯ ದಿಕ್ಕು ಪ್ರಭಲವಾಗಿ , ವಾಸ್ತು ರೀತ್ಯಾ ಶುದ್ಧವಾಗಿದ್ದರೆ, ದಾಂಪತ್ಯ ದಲ್ಲಿ ಅನ್ಯೋನ್ಯತೆ, ಸಾಮರಸ್ಯವಿರುತ್ತದೆ. ಈ ದಿಕ್ಕು ಅಗ್ನಿ ಪ್ರಾಧಾನ್ಯವಾದ್ದರಿಂದ ಈ ದಿಕ್ಕಿನಲ್ಲಿಯೇ ಅಡುಗೆ ಮನೆ, .ಟ್ರಾನ್ಸ್ಫಾರ್ಮರ್, ಜನರೇಟರ್, ಬಾಯ್ಲರ್ ಮುಂತಾದ ಅಗ್ನಿ ಸಂಭದಿ ವಸ್ತುಗಳಿದ್ದರೆ ಒಳ್ಳೆಯದು. ಪೂರ್ವದಿಕ್ಕು :--- ಪೂರ್ವ ದಿಕ್ಕಿಗೆ ಅಧಿಪತಿ ಸೂರ್ಯ, ಸೌರವ್ಯೂಹದ ಕೇಂದ್ರ ಬಿಂದುವೇ ಸೂರ್ಯ. ಸೂರ್ಯ ಅಗಾಧ ಶಕ್ತಿಯ ಕಣಜ ಎಂಬ ಅಂಶವನ್ನು ವಾಸ್ತು ತಜ್ಞರು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಸೂರ್ಯನಲ್ಲಿರುವ ಸಪ್ತವರ್ಣಗಳು ಹಾಗೂ ಸೂರ್ಯ ಕಿರಣಗಳು ಹೊರಸೂಸುವ ಅತಿ ನೇರಳೆ ಕಿರಣಗಳು, ಅವುಗಳಿಂದಾಗುವ ಒಳಿತು-ಕೆಡಕುಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯನ್ನು ವಾಸ್ತು ವಿಜ್ಞಾನ ಬಹಳ ಹಿಂದೆಯೇ ತಿಳಿಸಿದೆ. ಆದ್ದರಿಂದಲೇ ವಾಸ್ತು ಪೂರ್ವ ದಿಕ್ಕಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಿದೆ. ಪೂರ್ವ ದಿಕ್ಕು ಹಾಗೂ ಸೂರ್ಯನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. ಪೂರ್ವ ದಿಕ್ಕಿಗೆ ರವಿಯ ಉಚ್ಚಸ್ಥಾನವಾದ ಮಧ್ಯದಲ್ಲಿ ಮುಖ್ಯದ್ವಾರ ಇಡುವುದರಿಂದ ಉತ್ತಮ ಮತ್ತು ಅನುಕೂಲ. ಪೂರ್ವದ್ವಾರದ ಮುಂಬಾಗದಲ್ಲಿ ಖಾಲಿ ಜಾಗ ಹೆಚ್ಚಿದ್ದು ತಗ್ಗಾಗಿದ್ದರೆ ಮನೆಯ ಯಜಮಾನನು ಆರೋಗ್ಯವಂತನೂ, ಎಲ್ಲಾ ಕಾರ್ಯಗಳಲ್ಲಿ ಯಶಸ್ಸು, ಅಭಿವೃದ್ಧಿ , ಉನ್ನತ ಪದವಿ, ನಾಯಕತ್ವ ಗುಣ, ಕೀರ್ತಿ ಗೌರವಗಳು ಲಭಿಸುತ್ತದೆ. ದಕ್ಷಿಣ ದಿಕ್ಕು ದಕ್ಷಿಣದ ದಿಕ್ಕಿಗೆ ಅಧಿಪತಿ ಕುಜಗ್ರಹ, ದಿಕ್ಪಾಲಕ ಯಮ , ಕುಜಗ್ರಹ ವು ಧೈರ್ಯಕ್ಕೆ ಬ್ರಾತ್ರುವಿಗೆ ಕಾರಕನು, ಮುಂಗೋಪ, ಮನೆಯ ಯಜಮಾನ ನಿಗೆ ಧೈರ್ಯ ಸಾಹಸಗಳನ್ನು ತುಂಬುತ್ತಾನೆ, ಕ್ರೀಡಾಭಿಮಾನಿ, ಅಚಲ ನಿರ್ಧಾರಗಳನ್ನು ತೆಗೆದುಕೊಳ್ಳುವರೂ ಆಗುತ್ತಾರೆ. ಉತ್ತರ ದಿಕ್ಕು ಸ್ತ್ರೀ ಭಾಗವಾದಾಗ ಅದರ ವಿರುದ್ದದ ದಕ್ಷಿಣ ವೂ ಸಹ ಸ್ತ್ರೀ ಭಾಗವಾಗುತ್ತದೆ, ಹಾಗಾಗಿ ಈ ದಿಕ್ಕು ಮನೆಯ ಹೆಂಗಸರ ಮೇಲೂ ಪರಿಣಾಮ ಬೀರುತ್ತದೆ, ಜೊತೆಗೆ ಸಾಹಸ ಉತ್ಸಾಹ ಗಳನ್ನು ಪ್ರತಿನಿಧಿಸುತ್ತದೆ. ದಕ್ಷಿಣದ ದಿಕ್ಕು ಎತ್ತರವಾಗಿದ್ದರೆ, ಆ ಮನೆಯಲ್ಲಿ ವಾಸಿಸುವವರು ಆರೋಗ್ಯವಂತರು, ಹಣಬಲವುಳ್ಳವರೂ ಆಗುತ್ತಾರೆ, ಆದ್ದರಿಂದ ದಕ್ಷಿಣ ವನ್ನು ಎತ್ತರವಾಗಿರಿಸಿ ಮನೆಯಲ್ಲಿ ಬೇಡವಾದ , ಉಪಯೋಗಿಸದ ವಸ್ತುಗಳನ್ನು ಈ ಭಾಗದಲ್ಲಿ ಹಾಕಿದರೆ ಶುಭ, ಈ .ಭಾಗದಲ್ಲಿ ಎತ್ತರದಲ್ಲಿ ಕೋಣೆಗಳನ್ನು ಕಟ್ಟಿದರೆ ಹಣವಂತರಾಗುತ್ತಾರೆ. ದಕ್ಷಿಣದ ದಿಕ್ಕಿನಲ್ಲಿ ಹೆಚ್ಚು ಖಾಲಿ ಜಾಗ ವಿರಬಾರದು, ಹೆಚ್ಚು ತಗ್ಗಿರಬಾರದು, ಯಾವುದೇ ರೀತಿಯ ಹಳ್ಳ, ಶೌಚಾಲಯ ಇರಬಾರದು, ಈ ದಿಕ್ಕಿನ ದಿಕ್ಪಾಲಕ ಯಮ ನಾದ್ದರಿಂದ, ವಾಸ್ತು ಲೋಪವಿದ್ದಲ್ಲಿ ಮನೆಯ ಸ್ತ್ರೀ, ಯಜಮಾನ ಅಕಾಲ ಮರಣಕ್ಕೀಡಾಗುವ ಸಂಭವ, ಆರ್ಥಿಕ ನಷ್ಟ, ಕಳ್ಳತನ ವಾಗುವ ಸಂಭವವೂ ಇರುತ್ತದೆ, ಈ ದಿಕ್ಕು ಎತ್ತರವಿದ್ದು, ಭವನವೂ ಎತ್ತರವಿದ್ದು, ಸಾಕಷ್ಟು ಭಾರವಾಗಿದ್ದಲ್ಲಿ ಮನೆಯ ಯಜಮಾನ ಹಾಗೂ ಮನೆಯ ಸ್ತ್ರೀಯರು ಸುಖವಾಗಿಯೂ ನಿರೋಗಿಗಳಾಗಿಯೂ ಇರುತ್ತಾರೆ, ಈ ದಿಕ್ಕಿನಲ್ಲಿ ಎತ್ತರದ ಮರಗಳನ್ನು ಬೆಳೆಸಬಹುದು, ಈ ದಿಕ್ಕಿನಲ್ಲಿ ಹಣ ಇರಿಸುವುದರಿಂದ ಆರ್ಥಿಕ ಒಳ ಹರಿವು ಹೆಚ್ಚಾಗುತ್ತದೆ. *ನೈಋತ್ಯ ದಿಕ್ಕು : ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಮೂಲೆಯೇ ನೈಋತ್ಯ. ದಿಕ್ಕು. ನೈಋತ್ಯ ದಿಕ್ಕಿಗೆ ರಾಹು ಅಧಿಪತಿ, (ಕೆಲವರ ಪ್ರಕಾರ ರಾಹು ಕೇತುಗಳಿಬ್ಬರೂ ಈ ದಿಕ್ಕಿಗೆ ಅಧಿಪತಿ ) ಅಷ್ಟದಿಕ್ಪಾಲಕ ರಲ್ಲಿ ನಿರುಋತಿ ಈ ಭಾಗದ ದಿಕ್ಪಾಲಕ. ವಾಸ್ತು ನಿಯಮದ.ಪ್ರಕಾರ ಈ ದಿಕ್ಕು ರಾಕ್ಷಸರ ದಿಕ್ಕೆಂದು ಕರೆಯಲ್ಪಟ್ಟಿದೆ. ಈ ದಿಕ್ಕು ಮನೆಯ ಯಜಮಾನನ ಆಳ್ವಿಕೆ, ಧನಾಗಮ, ನೆಮ್ಮದಿ, ಸುಖ ಸಂತೋಷ ಇವುಗಳನ್ನು ಪ್ರತಿನಿಧಿಸುತ್ತದೆ. ಈ ದಿಕ್ಕಿನ ಅಧಿಪತಿ ರಾಹು ಪಾಪಗ್ರಹವಾದ್ದರಿಂದ, ಈ ದಿಕ್ಕಿನ ಮೇಲೆ ಹೆಚ್ಚು ಭಾರ ಮತ್ತು ಹೊರೆಯನ್ನು ಇಡಬೇಕೆಂಬ ದೃಷ್ಟಿಯಿಂದ ಈ ದಿಕ್ಕು ಎತ್ತರವಾಗಿರಬೇಕು, ಈ ದಿಕ್ಕಿನಲ್ಲಿ ಹೆಚ್ಚಿನ ಭಾರ ಇರುವಂತೆ ಮನೆಯ ಮೇಲೆ ಎತ್ತರವಾಗಿ ಕಟ್ಟಿಸಬೇಕು, ನೀರಿನ ಟ್ಯಾಂಕ್ ಈ.ದಿಕ್ಕಿನಲ್ಲಿಯೇ ಇಡಬೇಕು. ಇದಲ್ಲದೆ ಮೆಟ್ಟಿಲುಗಳನ್ನೂ ಈ ದಿಕ್ಕಿನಲ್ಲಿ ನಿರ್ಮಿಸ ಬಹುದು. ಮನೆಯ ಯಜಮಾನ ನ ಕೋಣೆಯು ಈ ದಿಕ್ಕಿನಲ್ಲಿಯೇ ಇರಬೇಕು, ಕಚ್ಚಾ ಸಾಮಗ್ರಿ ಗಳನ್ನಿರಿಸಲು ಮೆಶೀನು, ಹಣದ ಗಲ್ಲಾಪೆಟ್ಟಿಗೆ ( ಉತ್ತರದಿಕ್ಕಿಗೆ ಮುಖವಿರುವಂತೆ) ಯನ್ನೂ ಈ ದಿಕ್ಕಿನಲ್ಲಿಯೇ ಇರಿಸಬೇಕು. ಹೀಗೆ ಯಾವುದೇ ರೀತಿಯ ಲೋಪವಿಲ್ಲದೆ ಶುದ್ಧವಾಗಿದ್ದರೆ ಮನೆಯ ಯಜಮಾನನಿಗೆ ಉತ್ತಮ ಆರೋಗ್ಯ, ಧನಾಗಮ, ನೆಮ್ಮದಿ ಸುಖ ಸಂತೋಷ ವಿರುತ್ತದೆ. ನೈಋತ್ಯ ದಿಕ್ಕಿನಲ್ಲಿ ಹಳ್ಳ, ಭಾವಿ, ಕೆರೆ, ಕುಂಟೆ ಇದ್ದರೆ, ನಿವೇಶನ ನೈಋತ್ಯ ಭಾಗದಲ್ಲಿ ತಗ್ಗಿದ್ದರೆ ತೊಂದರೆ, ಪಾಪಗ್ರಹಗಳ ಬಲ ಹೆಚ್ಚಾಗಿ, ಕ್ರೂರ ಫಲಗಳನ್ನು ಪಡೆಯಬೇಕಾಗುತ್ತದೆ. ನೈರುತ್ಯ ದಿಕ್ಕಿನಲ್ಲೂ ಎರಡು ಭಾಗವಾಗಿ ವಿಂಗಡಿಸಬಹುದು *, ದಕ್ಷಿಣ ನೈಋತ್ಯ ಹಾಗೂ ಪಶ್ಚಿಮ ನೈಋತ್ಯ.* ದಕ್ಷಿಣದ ನೈಋತ್ಯ ಲೋಪವಾಗಿದ್ದಲ್ಲಿ ಮನೆಯ ಯಜಮಾನನಿಗೆ ಆಯುಷ್ಯದ ತೊಂದರೆ, ಆಕಸ್ಮಿಕ ಅಪಘಾತಗಳು, ಮೃತ್ಯು, ಆತ್ಮಹತ್ಯೆ ಪ್ರಯತ್ನ ಗಳು ನಡೆಯುತ್ತವೆ. ಪಶ್ಚಿಮ ನೈಋತ್ಯ ಲೋಪವಾಗಿದ್ದರೆ, ಯಜಮಾನನಿಗೆ ದುಶ್ಚಟಗಳು, ಕಾನೂನಿನ ಉಲ್ಲಂಘನೆ, ಗೌರವ ಮರ್ಯಾದೆಗೆ ಧಕ್ಕೆ, ಅನಾರೋಗ್ಯ , ದುರ್ಮರಣಕ್ಕೀಡಾಗುವುದು, ಹತ್ಯೆ, ಪುತ್ರಸಂತತಿ ಇಲ್ಲದಿರುವಿಕೆ, ಸ್ರೀಸ್ವತ್ತು, ಸ್ತ್ರೀಯರ ಪ್ರಭಾವ ಜಾಸ್ತಿಯಾಗುತ್ತದೆ. ಈ ದಿಕ್ಕಿನಲ್ಲಿ ತೆರೆದಿಡುವಿಕೆ ಅಂದರೆ.ಕಿಟಿಕಿಗಳು ಬಾಗಿಲುಗಳು ಇರಬಾರದು, ಶೌಚಾಲಯ, ಬೋರ್ವೆಲ್ ಗಳೂ ಇರಬಾರದು. ನೈಋತ್ಯ ದಿಕ್ಕಿನಲ್ಲಿ ಆವರಣದಲ್ಲಿ ಖಾಲಿ ಜಾಗವಿದ್ದರೆ ಎತ್ತರವಾದ ಗಿಡಮರಗಳನ್ನು ಬೆಳೆಸುವ ಮೂಲಕ ದೋಷವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ವಾಯುವ್ಯ ದಿಕ್ಕು :---- ಪಶ್ಚಿಮ ಹಾಗೂ ಉತ್ತರದಿಕ್ಕಿನ ಮೂಲೆಯೇ ವಾಯುವ್ಯದಿಕ್ಕು. ಈ ದಿಕ್ಕಿನ ದಿಕ್ಪಾಲಕ ವಾಯುದೇವ, ಅಧಿಪತಿ ಚಂದ್ರ, ಚಂದ್ರನ ಸ್ವಭಾವ ನಡತೆ, ಗುಣಗಳನ್ನು ಈಭಾವ ಪ್ರತಿನಿಧಿಸುತ್ತದೆ. ಚಂದ್ರನು ಸ್ರೀಗ್ರಹವಾದ್ದರಿಂದ ಈ ಭಾಗದ ಫಲಾಪಲಗಳು ಮನೆಯ ಹೆಂಗಸರ ಮೇಲೆ ಹಾಗೂ ಮೂರನೆಯ ಸಂತಾನದ ಮೇಲೆ , ಮನೆಯವರ ನಡತೆ ಹಾಗೂ ವ್ಯವಹಾರವನ್ನು ಪ್ರತಿಬಿಂಬಿಸುತ್ತದೆ. ವಾಯುವ್ಯ ದಿಕ್ಕಿನಲ್ಲಿಯೂ ಎರಡು ಭಾಗವಾಗಿ ವಿಂಗಡಿಸಬಹುದು, *ಪಶ್ಚಿಮ ವಾಯುವ್ಯ ಹಾಗೂ ಉತ್ತರ ವಾಯುವ್ಯ*. *ಪಶ್ಚಿಮ ವಾಯುವ್ಯ :---* ಪಶ್ಚಿಮ ವಾಯುವ್ಯ ದಿಕ್ಕಿಗೆ ಶನಿ ಮತ್ತು ಚಂದ್ರರ ಅಧಿಪತ್ಯ ಉಂಟಾಗುತ್ತದೆ. ಶನಿಯು ಕರ್ಮ ಕಾರಕ ಹಾಗೂ ಅಧ್ಯಾತ್ಮ ಕಾರಕ, ಹಾಗೂ ಸೇವಾ ಮನೋಭಾವವನ್ನು ಸೂಚಿಸುತ್ತಾನೆ. ಚಂದ್ರನು ಮನಃಕಾರಕ, ಸದಾ ಅಲೋಚನೆಯುಳ್ಳವನು, ವಾಯುವ್ಯ ಮೂಲೆಯು ಬೆಳೆದಿರುವುದಾಗಲೀ, ಕಡಿತವಾಗಿರುವುದಾಗಲೀ ಆಗಿರಬಾರದು, ಸಮವಾಗಿರಬೇಕು, ಹಾಗಿದ್ದಲ್ಲಿ ಮನೆಯ ಯಜಮಾನ ಕರ್ಮದಲ್ಲಿ ಆಸಕ್ತಿ ಯುಳ್ಳವನು ಸದಾ ಕರ್ಮನಿರತನು, ಅಧ್ಯಾತ್ಮಕ್ಕೆ ಹೆಚ್ಚು ಆಸಕ್ತಿ, ಒಲವನ್ನು ತೋರಿಸುವವು, ಈ ದಿಕ್ಕು ಲೋಪವಿಲ್ಲದೆ ಶುದ್ಧವಾಗಿದ್ದಲ್ಲಿ ಯಜಮಾನನ ವ್ಯವಹಾರ ಉತ್ತಮವಾಗಿರುತ್ತದೆ, ಸಿರಿತನವಿರುತ್ತದೆ. ಈ ದಿಕ್ಕು ಲೋಪವಾಗಿದ್ದಲ್ಲಿ ದುರ್ವ್ಯಸನಗಳಿಗೆ ಒಳಗಾಗಿ ಸಂಸಾರದಲ್ಲಿ ನಿರಾಸಕ್ತಿ ಉಂಟಾಗಿ ಸನ್ಯಾಸ ಸ್ವೀಕರಿಸುವ ಸಂಭವ ಅಥವಾ ಅಪಮೃತ್ಯುವಿಗೆ ತುತ್ತಾಗಬಹುದು. *ಉತ್ತರ ವಾಯುವ್ಯ :---*ಉತ್ತರ ವಾಯುವ್ಯ ವನ್ನು ಪ್ರತಿನಿಧಿಸುವ ಗ್ರಹರು ಬುಧ ಮತ್ತು ಚಂದ್ರರು. ಈ ದಿಕ್ಕು ಪ್ರಭಲವಾಗಿದ್ದಲ್ಲಿ ಮನೆಯ ಯಜಮಾನಿ ಹಾಗೂ ಮನೆಯ ಹೆಣ್ಣುಮಕ್ಕಳು ಬುದ್ಧಿವಂತರು ಆರೋಗ್ಯವಂತರು ಆಗಿರುತ್ತಾರೆ. ಈ ದಿಕ್ಕು ಲೋಪವಾಗಿದ್ದಲ್ಲಿ ಮನೆಯ ಹೆಂಗಸರ ಅನಾರೋಗ್ಯ, ಮಾನಸಿಕ ಅಸ್ವಸ್ಥತೆ, ಕೃತ್ರಿಮ ವ್ಯವಹಾರಗಳು ವ್ಯವಹಾರದಲ್ಲಿ ಅಪಜಯ, ಹಲವು ದುರಭ್ಯಾಸಕ್ಕೆ ತುತ್ತಾಗುವುದು, ಕೋರ್ಟ್ ಕೇಸು, ಕಳ್ಳರ ಭಯ, ಮನಃಶಾಂತಿ ಇಲ್ಲದಿರುವುದು ಚಂಚಲತೆ, ಕಷ್ಟನಷ್ಟಗಳು, ಪರಾಧೀನತೆ ಉಂಟಾಗುತ್ತದೆ. ಈ ದಿಕ್ಕು ತಗ್ಗಾಗಿದ್ದು, ಭಾವಿ , ಹಳ್ಳ ಮುಂತಾದುವಿದ್ದರೆ, ವ್ಯಾಧಿ ಹಾಗೂ ಜಗಳಗಳು, ಮನೆಯ ಯಜಮಾನಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೇ. ವಾಯುವ್ಯ ಭಾಗವು ಎತ್ತರವಾಗಿದ್ದರೆ ಯಜಮಾನನು ಸಾಲಗಾರನಾಗಬೇಕಾಗುತ್ತದೆ. ವಾಯುವ್ಯ ದೊಷವಿರುವ ಮನೆಯಲ್ಲಿ ಹುಟ್ಟಿದ ಮಕ್ಕಳು ಅಂಗಹೀನರಾಗುತ್ತಾರೆ. ವಾಯುವ್ಯ ಭಾಗವು ಈಶಾನ್ಯ ಕ್ಕಿಂತ ಸ್ವಲ್ಪ ಎತ್ತರವಾಗಿರಬೇಕು, ನೈಋತ್ಯ ಭಾಗಕ್ಕಿಂತ ತಗ್ಗಾಗಿರಬೇಕು. ವಾಯುವ್ಯ ಭಾಗವು ಬೆಳೆದಿರಬಾರದು ಹಾಗೂ ಕಡಿತವಾಗಿರಬಾರದು, 90° ಸಮವಾಗಿರಬೇಕು. ಈ ದಿಕ್ಕಿನಲ್ಲಿ ಮಲಗುವ ಕೋಣೆ, ದನದಕೊಟ್ಟಿಗೆ, ಗ್ಯಾರೇಜ್, ಅತಿಥಿ ಹಾಗೂ ನೌಕರರ ಕೋಣೆಗಳೂ ನಿರ್ಮಾಣ ಮಾಡಬಹುದು, ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಲಾಗದ ಸಂದರ್ಭದಲ್ಲಿ ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಬಹುದು. -SangrahaMahiti (FB)

*ಚಂದ್ರ - ರಾಹು ಸಂಯೋಗ :

ಈ ಸಂಯೋಗ ಇರುವ ಜಾತಕರದು ಸ್ವಾರ್ಥ ಪರತೆ, ಹಠ, ಛಲ, ಯಾವುದೇ ವ್ಯವಹಾರವಾಗಲಿ ತಮಗೇ ಮೊದಲು ಸಿಗಬೇಕು, ಅಗಣಿತ ಲಾಭವಾಗಬೇಕು ಎಂಬಾಸೆಯುಳ್ಳವರು. ರಾಹುವಿನಿಂದ ಪೈಶಾಚಿಕ ಮನಸ್ಸು, ಇವರನ್ನು ಸುಮ್ಮನಿರಲೂ ಬಿಡುವುದಿಲ್ಲ. ಸದಾ ಗ್ರಹಬಡಿದವರಂತೆ ಕಾಣುತ್ತಾರೆ. ಶಕ್ತಿ ದೇವಸ್ಥಾನಗಳಿಗೆ ಹೋಗುತ್ತಾರೆ, ನಿಂಬೆ ಹಣ್ಣಿನ ದೀಪ ಹಚ್ಚುವುದು, ದೇವಿಯ ಅಖಂಡ ಪೂಜೆ, ಮೈಮೇಲೆ.ದೇವರು ಬಂದಂತೆ ಕುಣಿಯುವುದು, ಹರಿಸಿನ - ಕುಂಕುಮ - ವಿಧವಿಧವಾದ ಎಲೆ, ಕಾಯಿಗಳನ್ನು ಅಗಿದು ತಿನ್ನುವುದು, ಮೈಕೈಗೆಲ್ಲಾ ಶಸ್ತ್ರಗಳಿಂದ ಚುಚ್ಚಿಕೊಂಡು, ಕುಣಿದು ಭಕ್ತಿ ಪ್ರದರ್ಶನ ಮಾಡುವುದು, ಕೆಲವೊಮ್ಮೆ ಮೈಮೇಲಿನ ಬಟ್ಟೆಯ ಪರಿವೆಯೂ ಇರುವುದಿಲ್ಲ. ಇವರುಗಳು ಪ್ರೇತ, ಭೂತ, ಭಾನಾಮತಿ ಮುಂತಾದುವುಗಳ ವಶಕ್ಕೆ ಬೇಗ ಒಳಗಾಗುತ್ತಾರೆ, ಗಾಳಿ ಸಂಬಂಧ, ಪ್ರೇತ ಸಂಭಂದ ಗ್ರಹಗಳು ಇವರ ಶರೀರದಲ್ಲಿ ಸೇರಿ ಇವರ ಬುದ್ಧಿ, ಮನಸ್ಸು, ಶರೀರ, ನರಗಳನ್ನು ದೌರ್ಬಲ್ಯ ಮಾಡಿ ಯಾವ ಕೆಲಸಕ್ಕೂ ಬರದವರಂತೆ ಮಾಡುತ್ತವೆ. ಇದರಿಂದಲೇ ದೇವರು ಮೈಮೇಲೆ ಬಂದವರಂತೆ ಕುಣಿದು, ದಣಿದು ನೆಲಕ್ಕೆ ಬೀಳುತ್ತಾರೆ. ಈ ಸಂಯೋಗಕ್ಕೆ ಕುಜನ ಸಂಬಂದ ಬಂದರೆ ಪರಿಸ್ಥಿತಿ ಕ್ರೂರವಾಗಿ ಶರೀರಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಶನಿ ಸಂಬಂದ ಬಂದ್ರೆ ಮಂಕಾಗಿ, ಮನೋರೋಗದವರ ಹಾಗೆ ಮೂಲೆಯಲ್ಲಿ ಕುಳಿತುಬಿಡುತ್ತಾರೆ, ಇಲ್ಲವೇ ಮನೆ ಬಿಟ್ಟು ಹೋಗುತ್ತಾರೆ. ಚಂದ್ರನು ಬಲಿಷ್ಠ ನಾಗಿದ್ದರೆ ಇಂತಹ ಪರಿಸ್ಥಿತಿ ಬರುವುದಿಲ್ಲ, ಬಂದರೂ ಶಾಂತರಾಗಿರುತ್ತಾರೆ, ಪರಿಸ್ಥಿತಿ ವಿಕೋಪಕ್ಕೆ ಹೋಗದಿದ್ದರೂ, ಆ ಛಾಯೆ ಹೋಗುವುದಿಲ್ಲ, ಒಂದಲ್ಲ ಒಂದು ದಿನ ಮನೋರೋಗಕ್ಕೆ ತುತ್ತಾಗುತ್ತಾರೆ. ರಾಹು ಬಲಿಷ್ಟ ನಾದರೆ ಒಂದು ರೀತಿಯ ಗ್ರಹಣಯೋಗವುಂಟಾಗಿ ಬಳಲುವರು. ರಾಹು - ಸರ್ಪ, ಬಾಯಿ. ಚಂದ್ರನನ್ನು ನುಂಗಿ ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವನು, ಹಾಗಾಗಿ ಮನಸ್ಸೂ, ಜೀವನ ಎರಡೂ ಕಾಣದೆ, ಸಂಘರ್ಷದ ಜೀವನದಿಂದ ತೊಳಲಾಡುವರು. ಕಷ್ಟಗಳಿಗೆ ಹೆದರಿ , ಜೀವನವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ವಿಷಪ್ರಾಶನದಿಂದ ಆತ್ಮಹತ್ಯೆ ಮಾಡಿಕೊಳ್ಳುವರು. ರಾಹು - ಚಂದ್ರನ ಸಂಯೋಗ, ನೀಚ ರಾಶಿ - ನವಾಂಶ, ಪಾಪ ರಾಶಿ -ನವಾಂಶ, ಕ್ರೂರ ರಾಶಿ - ನಮಾಂಶ ದಲ್ಲಿದ್ದು ಕುಜನ ಸಂಪರ್ಕ ದಲ್ಲಿದ್ದರೆ, ನೀಚರ ಸಹವಾಸದಿಂದ ಜೀವನ ಹಾಳು ಮಾಡಿಕೊಳ್ಳುವರು. ಈ ಮೂರರ ಸಂಯೋಗದ ಜೊತೆ ಶುಕ್ರನೇನಾದರೂ ಸೇರಿದರೆ, ಅತ್ಯಾಚಾರ - ಕೊಲೆಗೀಡಾಗುವರು. ದೇಹದ ಅಂಗಗಳನ್ನು ಕತ್ತರಿಸಿಕೊಳ್ಳೋದು, ವಾಹಣಗಳಡಿಗೆ ತಲೆ ಕೊಟ್ಟು ಸಾಯೋದು, ಉದ್ದೇಶಪೂರ್ವಕವಾಗೇ ಅಪಘಾತ ಮಾಡುವುದು. ಜೈಲುವಾಸ, ಅಲೆಮಾರಿ ಜೀವನ, ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯಾ ನಿರ್ಧಾರ ಮಾಡುವುದು. ದುಶ್ಚಟಗಳಿಗೆ ಬಲಿಯಾಗುವುದು. ಅಫೀಮು, ಗಾಂಜಾ, ಡ್ರಗ್ಸ್ ತೆಗೆದುಕೊಳ್ಳುವುದು ಮಾಡುತ್ತಾರೆ. ಇಂತಹವರಿಗೆ ಶನಿ ಸಂಪರ್ಕ ಬಂದರೆ ಎತ್ತರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು, ಅಂಗಾ0ಗಗಳಿಗೆ ಊನ ಮಾಡಿಕೊಳ್ಳುವುದು, ಹಿರಿಯರು - ಕಿರಿಯರು, ಬಂಧುಗಳು ಎಂಬ ತಾರತಮ್ಯವೂ ಇಲ್ಲದೆ ಎಲ್ಲರನ್ನೂ ಹೆದ್ರಿಸಿ, ಬೆದರಿಸಿ ಕೊಲೆ ಮಾಡಲು ಸಜ್ಜಾಗುವುದು. ಒಟ್ಟಿನಲ್ಲಿ... ಭಯಂಕರ, ವಿಕೃತ ಮನಸ್ಸಿನವರಾಗಿರುತ್ತಾರೆ. ಚಂದ್ರ ಬಲವಾಗಿ ಶುಭದೃಷ್ಟಿಇದ್ದರೆ ಫಲಗಳಲ್ಲಿ ವ್ಯತ್ಯಾಸವಿರುತ್ತೆ... -SangrahaMahiti(FB)

ಅಭಿಜಿನ್ಮಹೂರ್ತ(ಅಭಿಜಿನ್ ಮುಹೂರ್ತ)

ಅಭಿಜಿನ್ಮಹೂರ್ತ 1, *ನಕ್ಷತ್ರ ದೋಷಮ್ ತಿಥಿವಾರ ದೋಷಮ್ ಗಂಡಾಂತ ದೋಷಮ್ ಕುಮುಹೂರ್ತ ದೋಷಮ್ ಲಗ್ನಾದಿ ಪಂಚಾಂಗ ವಿರುದ್ಧ ದೋಷಮ್ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* 2. ಅವಗಣ ಶತ ದೋಷಮ್ ಲಕ್ಷಕೋಟಿ ಪ್ರದೋಷಮ್ ಆಯುತ ವಿಯುತ ದೋಷಮ್ ಶಂಖಪದ್ಮಾದಿದೋಷಮ್ ರವಿ ಶನಿ ಕುಜ ದೋಷಮ್ ಹರತು ಸಕಲ ದೋಷಮ್ ಅಂತ್ಯ ಮಧ್ಯಾಹ್ನ ಲಗ್ನಮ್ 3. *ವಿಷ ವ್ಯತೀಪಾತ ಕುಜಾರ್ಥ ದೋಷಮ್ ಏಕಾರ್ಗಳಾವೀನ ಭವ ಸಂಭವಾಶ್ಚ ಖಮದ್ಯದೋಷಮ್ ಮಪಿ ಚಂಡರಶ್ಮಿ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* ಇವು ಜ್ಯೋತಿಷ್ಯ ನಿಘಂಟು ವಿನಲ್ಲಿ ಇರುವ ಶ್ಲೋಕಗಳು ಈ ಮೇಲಿನ ಶ್ಲೋಕಗಳೆಲ್ಲಾ ಅಭಿಜಿನ್ಮಹೂರ್ತದ ಮಹತ್ವವನ್ನು ಸಾರುತ್ತಾ ಇವೆ. ಎಷ್ಟೆಲ್ಲಾ ದೋಷಗಳು ಅಭಿಜಿನ್ ಮಹೂರ್ತದಿಂದ ನಾಶವಾಗುತ್ತೆ ಅಂದಾಗ ಈ ಅಭಿಜಿನ್ ಮಹೂರ್ತ ಎಂದರೇನು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಅಲ್ವಾ...? ಈ ಅಭಿಜಿನ್ಮಹೂರ್ತ ಪ್ರತಿದಿನವೂ ಬರುತ್ತೆ. ಪ್ರತಿದಿನ ಮಧ್ಯಾಹ್ನ 12 ರಿಂದ 12 - 30 ರ ಒಳಗಿನ ಈ 20 ರಿಂದ 30 ನಿಮಿಷಗಳ ಕಾಲವನ್ನ ಅಭಿಜಿನ್ಮಹೂರ್ತ ಅನ್ನುತ್ತಾರೆ. ಈ ಮಹೂರ್ತ ಲಗ್ನಕ್ಕೆ ದಶಮದಲ್ಲಿ ಸೂರ್ಯ ಬರುವುದರಿಂದ, ಸೂರ್ಯನು ದಶಮದಲ್ಲಿ ದಿಗ್ಬಲನಾಗಿರುವುದರಿಂದ ಈ ಅಭಿಜಿನ್ಮಹೂರ್ತಕ್ಕೆ ಬಲವಿರುವುದು. ಹಾಗಾಗಿ ಈ ಮಹೂರ್ತ ಶ್ರೇಷ್ಠ ಎನ್ನಲಾಗಿದೆ. ಆದ್ರೆ ಸೂರ್ಯ ನೀಚನಾಗಿರಬಾರದು, ಮತ್ತು ಪಾಪಗ್ರಹಗಳ ಸಂಬಂಧ ಬರಬಾರದು ಹಾಗೂ ಮೂಲ ಜಾತಕದ ಸೂರ್ಯ ನೀಚನಾಗಿರಬಾರದು. -SangrahaMuhurtha(FB)

ಕುಂಡಲಿಯಲ್ಲಿ ಧನಯೋಗ

ಹೋರಾ ಕುಂಡಲಿಯಲ್ಲಿ ಧನಯೋಗ 30° ಯ ರಾಶಿಯನ್ನು ಸಮಭಾಗ ಮಾಡಿದಾಗ ಪ್ರತಿ ಭಾಗ ಒಂದೊಂದು ಹೋರೆಯಾಗುತ್ತದೆ. ಅಂದರೆ ಒಂದು ರಾಶಿಯಲ್ಲಿ ಎರಡು ಹೋರೆಗಳು. ಸಮರಾಶಿಯಲ್ಲಿ ಮೊದಲ 15° ಯ ವರೆಗಿನದ್ಧು ಚಂದ್ರಹೋರೆ, ನಂತರದ 15° (15° -30°) ವರೆಗೆ ರವಿಹೋರೆ. ಬೆಸರಾಶಿಗಳಲ್ಲಿ ಮೊದಲ 15° ಯವರೆಗೆ ರವಿ ಹೋರೆ, ನಂತರದ 15° (15° -30°) ವರೆಗೆ ಚಂದ್ರ ಹೋರೆ. ಚಂದ್ರ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ, ಕಡಿಮೆ ಪ್ರಯತ್ನ ಕ್ಕೇ ಹೆಚ್ಚು ಸಂಪಾದನೆ. ರವಿ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ ಪ್ರಯತ್ನಕ್ಕೆ ತಕ್ಕಂತೆ ಫಲ. ಒಳ್ಳೇ ಗ್ರಹಗಳಿದ್ದರೆ ಒಳ್ಳೇ ದಾರಿಯಲ್ಲಿ ಸಂಪಾದನೆ. ಇದು ಮೇಲ್ನೋಟಕ್ಕೆ ಕಾಣುವ ವಿಚಾರ, ಆಳ ಅಧ್ಯಯನದ ಮೂಲಕ ಯಾವ ಪ್ರಮಾಣದಲ್ಲಿ ಧನ ಸಂಪಾದನೆ ಅಥವಾ ಧನಲಾಭ ಅನ್ನುವ ವಿಚಾರವನ್ಮು ತಿಳಿಯಬಹುದು.. ಅವುಗಳೆಂದರೆ.... ★ ಪುರುಷ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ.... ★ ಸ್ತ್ರೀ ರಾಶಿಯಲ್ಲಿನ ಸ್ರೀಗ್ರಹಗಳು ಚಂದ್ರಹೋರೆಯಲ್ಲಿದ್ದರೆ 100% ಶುಭಫಲ ( ಅನಾಯಾಸ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ... ★ ಪುರುಷ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..75% ಫಲ ( ಕಡಿಮೆ ಪರಿಶ್ರಮದಿಂದ ಅಧಿಕ ಧನಲಾಭ ). ★ ಪುರುಷ ರಾಶಿಯಲ್ಲಿನ ಪುರುಷ ಗ್ರಹ ಚಂದ್ರ ಹೋರೆ ಯಲ್ಲಿದ್ದರೆ... ★ ಸ್ತ್ರೀ ರಾಶಿಯಲ್ಲಿನ ಸ್ತ್ರೀ ಗ್ರಹ ರವಿ ಹೋರೆ ಯಲ್ಲಿದ್ದರೆ.. 50% ಫಲ ( ಶ್ರಮಕ್ಕೆ ತಕ್ಕಂತೆ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ ... ★ ಪುರುಶ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..25% ಫಲ ( ಅಧಿಕ ಶ್ರಮ ಅಲ್ಪಲಾಭ ). ಜಾತಕದಲ್ಲಿ ಈ ರೀತಿಯ ಗ್ರಹ ಸಂಯೋಜನೆ ಯಿಂದ ನಮ್ಮ ಧನ ಸಂಪಾದನೆಯನ್ನು ನಿರ್ಧರಿಸಬಹುದು. ಧನಯೋಗ ಮೊದಲನೆಯದಾಗಿ... 1) ಭಾವ 2) ಭಾವಾಧಿಪತಿ 3) ಭಾವಾಧಿಪತಿ ಸ್ಥಿತ ಸ್ಥಾನ 4) ಭಾವಾಧಿಪತಿಯನ್ನು ದೃಷ್ಟಿಸುವ ಗ್ರಹ 5) ಯುತಿ 6) ಧನಕಾರಕ 7) ಧನಯೋಗ... ಇವಿಷ್ಟನ್ನೂ ಪರಿಶೀಲಿಸಬೇಕಾಗುತ್ತದೆ. 2ನೇ ಭಾವಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ .. ಏಕೆಂದರೆ 80% ರಿಸಲ್ಟ್ ಬಾವದಿಂದ ಸಿಗುತ್ತೆ. ನಂತರ ಧನಕಾರಕ(ಗುರು) ವನ್ನು ನೋಡಬೇಕು, ಗುರು ಉತ್ತಮ ಸ್ಥಾನದಲ್ಲಿ ಸ್ಥಿತನಾಗಿದ್ರೆ ಒಳ್ಳೆಯ ಫಲ... ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸ. ನಂತರ ಧನಭಾವ ಯಾವ ಸ್ವಭಾವ ಅನ್ನೋದನ್ನ ತಿಳಿಬೇಕು. ಧನಭಾವ ಚರರಾಶಿಯಾದರೆ.. ಒಮ್ಮೆಗೇ ಧಿಡೀರ್ ಹಣದ ಹರಿವು, ಉತ್ತಮ ಸಂಪಾದನೆ. ಧನಭಾವ ಸ್ಥಿರರಾಶಿಯದರೆ..ಜೀವನ ಪೂರ್ತಿ ನಿಶ್ಚಿತ ಹಣದ ಹರಿವು . ದ್ವಿಸ್ವಭಾವ ರಾಶಿಯಾದರೆ.. ಧನದ ಹರಿವಿನಲ್ಲಿ ಏರಿಳಿತವಿರುತ್ತದೆ. ನಂತರ ಧನಸ್ಥಾನ ಅಥವಾ ಧನಾಧಿಪತಿ ಇರುವ ದಿಕ್ಕು.. ತತ್ವ.. ಇವುಗಳ ಆಧಾರದ ಮೇಲೆ ಧನದ ಮೂಲ ಯಾವುದರಿಂದ ಅನ್ನುವುದನ್ನು ತಿಳಿಯಬಹುದು. 12 ಭಾವಗಳಿಂದಲೂ ಹಣದ ಹರಿವನ್ನು ತಿಳಿಯಬಹುದು. ಆದ್ರೆ 1, 2, 9, 10, 11 , 12 ನೇ ಭಾವಗಳು ಮುಖ್ಯ. ದಾರಿದ್ರ್ಯಭಾವ.. 3, 6, 8, 12. ಇಲ್ಲಿ ..ಧನ - ಹಾಗೂ ದಾರಿದ್ರ್ಯಭಾವಗಳೆರದರಲ್ಲೂ 12 ಮನೆಯನ್ನು ಪರಿಗಣಿಸಬೇಕು. 12ನೇ ಮನೆ ಧನಭಾವಗಳ ಜೊತೆ ಸಂಬಂಧ ಬಂದರೆ ಧನಭಾವ... 12ನೇ ಮನೆ ದರಿದ್ರಭಾವಗಳ ಜೊತೆ ಸಂಬಂಧ ಬಂದರೆ ದರಿದ್ರಭಾವ. ( 12 ನೇ ಭಾವ ದೂರಪ್ರಯಾಣ - ವಿದೇಶಿಪ್ರಯಾಣವನ್ನು ಸೂಚಿಸುತ್ತೇ) ನಕ್ಷತ್ರ ಗಳೂ... ಎಷ್ಟು ಪ್ರಮಾಣದಲ್ಲಿ ಧನಲಾಭವಾಗುತ್ತೆ ಅನ್ನುವುದನ್ನು ತಿಳಿಸುತ್ತೆ, ಯಾವರೀತಿಯ ಧನಾಗಮ... ಶೀಘ್ರ, ಲಘು, ಚರ, ಸ್ಥಿರ ಫಲಗಳು ..ಯಾವ ಸಮಯದಲ್ಲಿ ಅನ್ನುವುದನ್ನು ನಕ್ಷತ್ರ ಗಳಿಂದಲೂ ತಿಯಬಹುದು. ಧನಭಾವಾಧಿಪತಿಗಳು ಕೆಲವೊಮ್ಮೆ ಎರಡು ರೀತಿಯಲ್ಲಿ ವರ್ತಿಸುತ್ತೆ ಉತ್ಪತ್ತಿ ಇಲ್ಲ ಉತ್ಪತ್ತಿ ನಿಲ್ಲುತ್ತಿಲ್ಲ.. ಧನಭಾವಾಧಿಪತಿಗಳು ದಾರಿದ್ರ್ಯ ಭಾವದಲ್ಲಿದ್ದರೆ. ಅಥವಾ ದಾರಿದ್ರ್ಯಭಾವಾಧಿಪತಿಗಳು ಧನಭಾವದಲ್ಲಿದ್ದರೆ, ಹಣದ ಹರಿವು ಇರೋಲ್ಲ. ಧನಭಾವಾಧಿಪತಿಗಳ ಸಂಬಂಧ ಧನಭಾವದಲ್ಲೇ ಇದ್ದರೆ ಹಣದ ಉತ್ಪತ್ತಿ ಚೆನ್ನಾಗಿರುತ್ತೆ ಧನದ ಅಭಾವ :-- ೧). ಜಾತಕದಲ್ಲಿ ಲಗ್ನಾಧಿಪತಿ ದ್ವಾದಶದಲ್ಲಿದ್ದು, ದ್ವಾದಶಾಧಿಪತಿ ಲಗ್ನದಲ್ಲಿದ್ದರೆ... 2). ಧನಾಧಿಪತಿ ವ್ಯಯದಲ್ಲಿದ್ದು, ದ್ವಾದಶಾಧಿಪತಿ ಧನಭಾವದಲ್ಲಿದ್ದರೆ... 3). ದುರ್ಬಲ ನಾದ ದ್ವಿತೀಯಾಧಿಪತಿ ಪಾಪಮಧ್ಯದಲ್ಲಿದ್ದರೆ... 3). ದ್ವಿತೀಯ ಹಾಗೂ ಲಾಭಾಧಿಪತಿಗಳು, ಷಷ್ಟ , ಅಷ್ಟಮದಲ್ಲಿದ್ದರೆ... 4). ಲಗ್ನಾಧಿಪತಿ ವ್ಯಯಭಾವದಲ್ಲಿದ್ದು ಮಾರಕಾಧಿಪತಿಯ ದೃಷ್ಟಿ ಯಲ್ಲಿದ್ದರೆ... 5). 6, 8, 12 ನೇ ಭಾವಾಧಿಪತಿಗಳು ಧನಸ್ಥಾನದಲ್ಲಿದ್ದರೆ... 6). ಧನ, ಸುಖ, ಪೂರ್ವಪುಣ್ಯಾಧಿಪತಿ, ಭಾಗ್ಯಾಧಿಪತಿ, ದಶಮಾಧಿಪಗಳು 6 ಅಥವಾ 12 ನೇ ಭಾವದಲ್ಲಿದ್ದರೆ... 7). ಜಾತಕರು ಕೆಮದೃಮ ಹಾಗೂ ಶಟಕ ಯೋಗಗಳಲ್ಲಿ ಜನಿಸಿದ್ದರೆ... 8). ಲಗ್ನಾಧಿಪತಿ 6.8.12 ರಲ್ಲಿ ಪಾಪಗ್ರಹಗಳ ಯುತಿಯಲ್ಲಿದ್ದು, ಅಷ್ಟಮಾಧಿಪತಿಯಿಂದ ವೀಕ್ಷಿಸಲ್ಪಟ್ಟರೆ.. ಜಾತಕರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡತನದಲ್ಲಿ ನರಳುತ್ತಾರೆ. -Sangraha MAhiti(FB)

ಪ್ರಸವ ಮತ್ತು ಆರೋಗ್ಯ

ನಭೋಮಂಡಲದಲ್ಲಿ ಸಂಚರಿಸುತ್ತಿರುವ ಗ್ರಹಗಳ ಶಕ್ತಿಯು ಭೂಮಿಯನ್ನು ಸ್ಪರ್ಶಿಸಿ, ಜೀವಿಗಳ ಜೀವನದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಗ್ರಹಗಳು ಜನ್ಮಸ್ಥಳದ ಅಕ್ಷಾಂಶ ರೇಖಾಂಶ ಗಳಿಗೆ ತಕ್ಕಂತೆ ಉದಯವಾಗುವ ಲಗ್ನ ಬಿಂದುವಿಗೆ ಯಾವ ಭಾವದಲ್ಲಿ ಸ್ಥಿತರಾಗಿರುತ್ತಾರೋ ಅದರಂತೆ ಶುಭಾಶುಭ ಫಲಗಳನ್ನು ಕೊಡುತ್ತಾರೆ. ಈ ಗ್ರಹಗಳು ಭಚಕ್ರದ ಯಾವ ಯಾವ ರಾಶಿಯಲ್ಲಿ, ಯಾವ ನಕ್ಷತ್ರ ದಲ್ಲಿ, ಸ್ಥಿತರಾಗಿರುತ್ತಾರೋ ಅದರಂತೆ ಫಲಗಳಲ್ಲಿ ವ್ಯತ್ಯಾಸವುಂಟಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ವಜನ್ಮ ಕೃತ ಫಲದಂತೆ ಈ ಜನ್ಮವನ್ನು ಪಡೆಯುತ್ತಾರೆ, ಪೂರ್ವಜನ್ಮ ದಲ್ಲಿ ಮಾಡಿದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುವುದನ್ನು ಪ್ರಸವಕಾಲದ ಕುಂಡಲಿಯಲ್ಲಿ ನವಗ್ರಹರು ಸ್ಥಿತರಾದ ರೀತಿಯಲ್ಲಿ ತಿಳಿಯಬಹುದು. ಪೂರ್ವಜನ್ಮದ ಪಾಪ ಅಥವಾ ಪುಣ್ಯಫಲದಂತೆ ಮನುಷ್ಯಜನ್ಮ ಪಡೆದಮೇಲೆ ಅತ್ಯಂತ ದುಃಖ, ಸುಖ, ಕಷ್ಟಗಳನ್ನು ಅನುಭವಿಸುತ್ತೇವೆ. ಅದರೆ ಕೆಲವುವೇಳೆ ಜನ್ಮ ತಾಳುವುದಕ್ಕೆ ಅನೇಕ ಕಷ್ಟಗಳನ್ನು ಅನುಭವಿಸುವುದು ಮಾತೃ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಪ್ರಸವ ಕಾಲದಲ್ಲಿ ಬದುಕುಳಿದರೆ ಅದು ನಮ್ಮ ಜನ್ಮ, ಜನ್ಮಕೊಟ್ಟ ತಾಯಿ ಬದುಕುಳಿದರೆ ಅದು ಅವರ ಪುನರ್ಜನ್ಮ. ಗರ್ಭಧಾರಣೆಯ ನಂತರ ಗರ್ಭಸ್ರಾವ, ಗರ್ಭದಲ್ಲೇ ಮರಣ (ಮೃತ ಶಿಶು ಜನನ) ಅವಧಿಗೆ ಮೊದಲೇ ಜನನ, ಕಷ್ಟಪ್ರಸವ ಇವು ಜನನ ಪೂರ್ವ ಸಂಕಟಗಳು. ಗುರು, ಶುಕ್ರ, ಚಂದ್ರ, ಬುಧರು ಸುಖ (ಶುಭ) ಪ್ರಸವವನ್ನು ಸೂಚಿಸುತ್ತಾರೆ. ರವಿ, ಶನಿ, ಕುಜ, ರಾಹು ಕೇತುಗಳು ಕಷ್ಟ ( ಅಶುಭ ) ಪ್ರಸವವನ್ನು ಸೂಚಿಸುತ್ತಾರೆ. ರಕ್ತ ಅಥವಾ ಜಲಸ್ರಾವ, ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಸವವನ್ನು ಕುಜನಿಂದಲೂ, ತಡೆಗಳನ್ನು ಶನಿಯಿಂದಲೂ, ರಕ್ತಸ್ರಾವವನ್ನು ರಾಹುವಿನಿಂದಲೂ ತಿಳಿಯಬಹುದು. ಯಾವುದೇ ಜಾತಕದಲ್ಲಿ ಮುಖ್ಯವಾಗಿ ಕುಜ, ಶನಿಯಿಂದ ನಂತರ ರವಿ ಕೇತುಗಳಿಂದ ಕಷ್ಟಪ್ರಸವವನ್ನು ನಿರ್ಣಯಿಸಬಹುದು. ಯಾವುದೇ ಜಾತಕದಲ್ಲಿ ರವಿ ಚಂದ್ರರು, ಲಗ್ನ, ಲಗ್ನಾಧಿಪತಿ, ಷಷ್ಟ, ಷಷ್ಟಾಧಿಪತಿ, ಅಷ್ಟಮ, ಅಷ್ಠಮಾಧಿಪತಿ, ಪೀಡಿತ - ಪಾಪಕರ್ತರಿಯೋಗ - ನೀಚ - ಅಸ್ತ - ಪಾಪಗ್ರಹಗಳ ಯುತಿ - ದೃಷ್ಟಿಯಿದ್ದರೆ ಆರೋಗ್ಯ ಕೆಡುತ್ತದೆ. ಈ ಭಾವ - ಭಾವಾಧಿಪತಿ ಗಳು ಬಲವಾಗಿದ್ದು, ಸುಸ್ಥಿಯಲ್ಲಿದ್ದರೆ ಜಾತಕರು ಆರೋಗ್ಯವಾಗಿರುತ್ತಾರೆ. ಪುರುಷರ ಆರೋಗ್ಯವನ್ನು ರವಿಯಿಂದಲೂ, ಸ್ತ್ರೀಯರ ಆರೋಗ್ಯವನ್ನು ಚಂದ್ರನಿಂದಲೂ ಅವರುಗಳ ಬಲಾಬಲದಿಂದ ತಿಳಿಯಬಹುದು. ಜಾತಕದಲ್ಲಿ ರವಿ ಪೀಡಿತನಾದ್ರೆ ಪ್ರಕೃತಿದತ್ತವಾದ ರೋಗಗಳು, ಚಂದ್ರನು ಪೀಡಿತನಾಗಿದ್ದರೆ, ಬಲಹೀನನಾಗಿದ್ದರೆ ಮಾನಸಿಕ ರೋಗಿಯಾಗುತ್ತಾರೆ. ಲಗ್ನ - ಲಗ್ನಾಧಿಪತಿ ಪೀಡಿತನಾಗಿದ್ದರೆ ಸದಾ ರೋಗಿಯಾಗಿದ್ದು ಸಣ್ಣಪುಟ್ಟ ರೋಗಗಳು ಕಾಡುತ್ತಿರುತ್ತವೆ. ಷಷ್ಟ - ಷಷ್ಟಾಧಿಪತಿ ಗಳು ಪೀಡಿತರಾಗಿದ್ದರೆ, ಅತೀವ ಬಾಧೆಯ ರೋಗಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅಷ್ಟಮ - ಅಷ್ಟಮಾಧಿಪತಿಗಳು ಪೀಡಿತರಾಗಿದ್ರೆ ತೀವ್ರ ಮರಣ ಸೂಚಕ ರೋಗಗಳು - ಸಾಂಕ್ರಾಮಿಕ ರೋಗಗಳು, ಭಯಂಕರ ವ್ಯಾಧಿಗಳು, ದುರ್ಮರಣಗಳು ಉಂಟಾಗುತ್ತದೆ. ದ್ವಾದಶ - ದ್ವಾದಶಾಧಿಪತಿಗಳು ಪೀಡಿತರಾದ್ರೆ ಸದಾ ಆಸ್ಪತ್ರೆ ವಾಸ, ಹಾಸಿಗೆ ಹಿಡಿಯುವ ವ್ಯಾಧಿಗಳು ಬರುತ್ತವೆ. -SangrahaMahiti(FB)

ವಿದ್ಯಾಭ್ಯಾಸ (Education in Astrology)

ವಿದ್ಯಾರ್ಜನೆಗೆ ಲಗ್ನದಿಂದ ಚತುರ್ಥ ಸ್ಥಾನವನ್ನೂ, ಜ್ಞಾನಾರ್ಜನೆಗೆ ಪಂಚಮ ಸ್ಥಾನವನ್ನೂ ಪರಿಶೀಲಿಸಬೇಕು. ಆದ್ರೆ ಯಾವುದೇ ವಿದ್ಯೆಗೆ ಪ್ರಾಥಮಿಕ ವಿದ್ಯಾರ್ಜನೆಗೆ 2ನೇ ಮನೆಯನ್ನು ನೋಡಬೇಕು. ಏಕೆಂದರೆ ವಾಕ್ ಸ್ಥಾನವಾದ ಧನಸ್ಥಾನವು ಮಗುವಿನ ತೊದಲ್ನುಡಿಗಳಿಂದಿಡಿದು ಹೇಳಿಕೊಟ್ಟದ್ದನ್ನು ಕಲಿತು ಮತ್ತೆ ನೆನಪಿಸಿಕೊಂಡು ಹೇಳುವುದನ್ನು ಸೂಚಿಸುತ್ತೆ. ಎಲ್ಲಾ ವಿದ್ಯೆಗೂ ಮೂಲ ಸ್ಥಾನ ಧನಭಾವ ( 2ನೇ ಮನೆ ) ವೇ ಆಗಿದೆ. ಅಕ್ಷರದ ಪರಿಚಯವಿಲ್ಲದೆ ವಿದ್ಯಾವಂತನಾಗಲು ಸಾಧ್ಯವಿಲ್ಲ. ಧನಭಾವ ಚನ್ನಾಗಿದ್ದರೆ ಅಕ್ಷರಜ್ಞಾನ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಗಳಿಸಿರುತ್ತಾನೆ. ಧನಭಾವ ಬಲವಿಲ್ಲದೆ 5, 9 ನೇ ಸ್ಥಾನಗಳು ಪ್ರಭಲವಾಗಿದ್ದರೂ ವಿದ್ಯಾವಂತರಾಗಲಾರರು, ಧನಭಾವ ಪ್ರಬಲವಾಗಿದ್ದು 5, 9th ಬಲಹೀನವಾಗಿದ್ರೆ ಪೂರ್ಣಪ್ರಮಾಣದಲ್ಲಿ ವಿದ್ಯಾವಂತನಾಗದಿದ್ದರೂ, ಅಕ್ಷರಸ್ಥರಾಗಿ ವ್ಯಾವಹಾರಿಕ ಜ್ಞಾನವನ್ನು ಪಡೆಯಬಹುದು. ಹಾಗಾಗಿ ಜಾತಕದಲ್ಲಿ ವಿದ್ಯಾಭ್ಯಾಸವನ್ನು ಪರಿಶೀಲಿಸಬೇಕಾದರೆ... ಮೊದಲು 2, 5 ನೇ ಭಾವಗಳನ್ನು, ಅದರ ಭಾವಾಧಿಪತಿಗಳನ್ನ, ಮತ್ತವುಗಳ ಬಲಾಬಲಗಳನ್ನು ತಿಳಿಯಬೇಕಾಗುತ್ತದೆ. ■ ಬುಧ, ಗುರು, ಶುಕ್ರರು ವಿದ್ಯಾಕಾರಕರು. ■ ಬುಧ ---- ವಿದ್ಯಾಗ್ರಹಣ ಶಕ್ತಿ ■ ಗುರು ---- ಜ್ಞಾನಾರ್ಜನಾ ಶಕ್ತಿ ■ ಶುಕ್ರ ---- ಮೇಧಾ ಶಕ್ತಿ. ಜಾತಕದಲ್ಲಿ ಈ ವಿದ್ಯಾಸಂಬಂಧ ಗ್ರಹಗಳಾದ ಬುಧ , ಗುರು, ಶುಕ್ರರು ಪೀಡಿತರಾದಾಗ ವಿದ್ಯಾರ್ಜನಗೆ ಅಡಚಣೆ, ತೊಂದರೆಗಳಾಗುತ್ತವೆ. ★ ಧನ(೨), ಚತುರ್ಥ(೪), ಪಂಚಮಭಾವಗಳು(೫) --- ವಿದ್ಯಾಭಾವಗಳು. ★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ. ★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ ★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ. ★ ನವಮಭಾವ --- ಉನ್ನತವಿದ್ಯೆ. ★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ). ವಿದ್ಯೆಗೆ ತೊಂದರೆ ಮಾಡುವ ಗ್ರಹಗಳು ★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ. ★ ಕುಜ -- ಮರೆವು ★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ ★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ. ★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು. ★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ ವಿದ್ಯೆ ಪರಿಶೀಲನೆಗೆ ನಿಯಮಗಳು ◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ. ◆ ವಿದ್ಯಾಕಾರಕ ಬುಧ, ಗುರುಗಳು ದುಸ್ಥಾನ ಸ್ಥಿತ, ಬಲಹೀನ, ಪಾಪಗ್ರಹಗಳಿಂದ ಪೀಡಿತರಾದಾಗ ವಿದ್ಯೆಯಲ್ಲಿ ಕುಂಠಿತ ( ಬುಧ - ಗ್ರಹಣಶಕ್ತಿ, ಗುರು - ಶ್ರದ್ಧೆ ). ,◆ ವಿದ್ಯಾಸ್ಥಾನದಲ್ಲಿ ರಾಹುಕೇತುಗಳು ಸ್ಥಿತರಾಗಿ ಪಾಪಗ್ರಹಗಳ ಸಂಬಂಧ ಬಂದಾಗ ವಿದ್ಯಾಹೀನ. ◆ ಕೇಂದ್ರಾದಿಪತ್ಯ ದೋಷ, ದುಸ್ಥಾನಾಧಿಪತ್ಯ, ವಕ್ರ, ನೀಚ, ಅಸ್ತ, ರಾಶಿ - ಭಾವ ಸಂಧಿಸ್ಥಿತ ನೈಸರ್ಗಿಕ ಶುಭಗ್ರಹಗಳಾದರೂ ವಿದ್ಯೆಗೆ ಅಡಚಣೆ. ◆ ನೈಸರ್ಗಿಕ ಪಾಪಗ್ರಹನಾದರೂ ಯೋಗಕಾರಕನು ವಿದ್ಯಾಸ್ಥಾನದಲ್ಲಿದ್ದಾಗ ವಿದ್ಯಾಭಿವೃದ್ಧಿ. - SangrahaMahiti(FB)

ಪರಮಾಯುರ್ಯೋಗ

ಬೃಹತ್ಪರಾಶರ ಹೋರಾಶಾಸ್ತ್ರ, ಜಾತಕ ಪಾರಿಜಾತ, ಸರ್ವಾರ್ಥ ಚಿಂತಾಮಣಿ ಮುಂತಾದ ಪ್ರಸಿದ್ಧ ಜ್ಯೋತಿಷ ಗ್ರಂಥಗಳಲ್ಲಿ ವಿಭಿನ್ನ ಪ್ರಮಾಣದ ಆಯಸ್ಸಿನ ಕುರಿತಾದ ವರ್ಣನೆಯಿದ್ದು, ಅವುಗಳಲ್ಲಿ ಶತಾಯುಸ್ಸಿನ ನಂತರ *ಪರಮಾಯು* ಶಬ್ದದ ವರ್ಣನೆಯನ್ನು ಮಾಡಲಾಗಿದೆ. ನೂರು ವರ್ಷಕ್ಕಿಂತಲೂ ಹೆಚ್ಚಿನ ಆಯಸ್ಸಿಗೆ *ಪರಮಾಯು* ಎನ್ನಲಾಗಿದೆ. ಕೆಲವೆಡೆ ಪರಮಾಯುವಿಗೆ *108* ವರ್ಷವೆಂದೂ ಉಲ್ಲೇಖಿಸಲಾಗಿದೆ. ಆದರೆ ಪರಮಾಯು ಅಂದರೆ ನೂರು ವರ್ಷಕ್ಕಿಂತ ಹೆಚ್ಚಿನದು, ಹಾಗೂ ಮನುಷ್ಯನ ಆಯಸ್ಸಿನ ಗರಿಷ್ಠ ಅವಧಿ 120 ವರ್ಷಗಳಾದ್ದರಿಂದ ಇಲ್ಲಿ ಪರಮಾಯುವನ್ನು 100 ರಿಂದ 120 ವರ್ಷ ಎಂದು ತಿಳಿಯಬೇಕಾಗುತ್ತೆ. *ಸರ್ವಾರ್ಥ ಚಿಂತಾಮಣಿ* ಜ್ಯೋತಿಷ ಗ್ರಂಥದಲ್ಲಿ ಪರಮಾಯುವಿನ ಯೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ, ಇಲ್ಲಿ ಒಂದೆರಡು ಶ್ಲೋಕಗಳನ್ನು ಪ್ರಸ್ತುತಪಡಿಸುತ್ತೇನೆ. *ಸರ್ವಾರ್ಥ ಚಿಂತಾಮಣಿ ಯ 12ನೇ ಅಧ್ಯಾಯದ 43 ನೇ ಶ್ಲೋಕ :----* *ತ್ರಿಭಿಗ್ರರ್ಹೈಃ ಸ್ನೋಚ್ಚಗತೈಃ ವಿಲಗ್ನೇ ವೃಷೇ ಕುಲೀರೇ ಸಗುರೌ ತಥೈವ |* *ಮೃಗೇ ಕುಜೇ ಕರ್ಕಿಣಿ ದೇವಪೂಜ್ಯ ಕೇಂದ್ರೆಷು ಶೇಷಾಃ ಪರಮಾಯುರತ್ರ ||* ಅರ್ಥ :-- ಲಗ್ನದಲ್ಲಿ ಉಚ್ಚ ಗುರುವಿದ್ದು, ಮಕರದಲ್ಲಿ ಕುಜನಿದ್ದು, ಶುಕ್ತನು ಉಚ್ಚನಾಗಿ ಅಥವಾ ವೃಷಭದಲ್ಲಿದ್ದರೆ, ಅಂದರೆ ಮೂರು ಗ್ರಹಗಳು ಉಚ್ಛವಾಗಿದ್ದು , ಉಳಿದ ಗ್ರಹಗಳು ಕೇಂದ್ರದಲ್ಲಿದ್ದರೆ (1. 4. 7. 10 ) ಇಂಥ ಜಾತಕರು 108 ವರ್ಷದಿಂದ 120 ವರ್ಷಗಳ ಆಯಸ್ಸನ್ನು ಅನುಭವಿಸುತ್ತಾರೆ. *ಸರ್ವಾರ್ಥ ಚಿಂತಾಮಣಿ ಯ 12 ನೇ ಅಧ್ಯಾಯದ 45 ನೇ ಶ್ಲೋಕ :--* *ಲಗ್ನೇ ಮೃಗಾಪರಾರ್ದ್ಧೆ ತು ಪೂರ್ವಾರ್ದ್ಧೆ ಭೌಮ ಸಂಯುತೇ |* *ಲಗ್ನೇ ಶಶಾಂಕ ಸಹಿತೇ ಗುರೌ ಕೇಂದ್ರೆ ಪರಂವಯಃ ||* ಅರ್ಥ :--- ಮಕರ ಲಗ್ನ 15 ಅಂಶಗಳಲ್ಲಿದ್ದು, ಚತುರ್ಥ ಭಾವದಲ್ಲಿ ಕುಜನಿದ್ದು, ಲಗ್ನದಲ್ಲಿ ಚಂದ್ರನಿದ್ದು ಉಚ್ಚ ಗುರುವಿದ್ದರೆ ಇಂಥ ಜಾತಕರು ಪರಮಾಯುಷ್ಯವನ್ನು ಹೊಂದಿ 108 ರಿಂದ 120 ವರ್ಷಗಳ ವರೆಗೆ ಜೀವಿಸುತ್ತಾರೆ. *ಭೃಗೌ ಚತುರ್ಥೇ ಸಗುರೌ ವಿಲಗ್ನೇ ಸೇಂದೌ ಶನೌ ಕರ್ಮಣಿ ಪಾಪಹೀನೆ|* *ಜಾತೋ ನರೋಸ್ಮಿನ್ ಸಮುಪೈತಿ ಧೀರ್ಘಯಾಯುಷ್ಯ ವಿದ್ಯಾo ಯಶಸಾ ಸಮತಾಂ ||* ಅರ್ಥ :--- ಗುರುವು ಲಗ್ನದಲ್ಲಿದ್ದು, ಚತುರ್ಥದಲ್ಲಿ ಶುಕ್ರನಿದ್ದು, .ಶನಿಯೊಡನೆ ಚಂದ್ರನು ಶುಭಸ್ಥಾನದಲ್ಲಿ ಸ್ಥಿತನಿದ್ದು, ದಶಮ ಸ್ಥಾನದಲ್ಲಿ ಯಾವುದೇ ಪಾಪ ಗ್ರಹವಿರದಿದ್ದರೆ... ಈ ಜಾತಕರು ವಿದ್ವಾಂಸರಾಗಿ ಪರಮಾಯುಷ್ಯವನ್ನು ಹೊಂದಿ ಯಶಸ್ವೀ ಜೀವನ ನಡೆಸುತ್ತಾರೆ. -Sangraha Mahiti(FB)

*ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು)

*ಗ್ರಹಗಳು* ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ 5) ೬, ೮೧೨ನೇ ಸ್ಥಾನಗಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* *ತೊಂದರೆಗಳು* :- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ, ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. *ಪರಿಹಾರಗಳು:-* ಶಿವಮತ್ತು ರವಿಯನ್ನು ಆರಾಧಿಸಿ, ೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ, ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ, ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ, ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. -Sangra Mahiti(FB)

ಕೋಪ :--ಜ್ಯೋತಿಷ್ಯದ ಕಾರಣಗಳು :---

ಕೋಪ ಅಥವಾ ಕ್ರೋಧ ವ್ಯಕ್ತ ಪಡಿಸುವಿದು ಮನುಷ್ಯನ ಅಸಾಮಾನ್ಯ ನಡತೆ. ಈ ಅಸಾಮಾನ್ಯ ನಡತೆ ಕೆಲವರಲ್ಲಿ ಹೆಚ್ಚಾಗಿದ್ದರೆ ಕೆಲವರಲ್ಲಿ ಸಾಧಾರಣವಾಗಿರುತ್ತದೆ. ಕೆಲವರಲ್ಲಂತೂ ಕೋಪಬಂದರೆ ಮುಖ ಕೆಂಪಾಗಿ ಮುಖದ ಆಕಾರವೇ ಬದಲಾಗಿ ನೋಡಲು ತುಂಬಾ ವ್ಯಗ್ರ ರಂತೆ ಕಾಣುತ್ತಾರೆ ಇಂಥವರನ್ನು " ಕೋಪಿಷ್ಟ " ಎಂದೇ ಗುರುತಿಸುತ್ತಾರೆ. ಜ್ಯೋತಿಷ್ಯ ದ ದೃಷ್ಟಿಯಿಂದ ಈ ಅಧಿಕ ಸಿಟ್ಟಿಗೆ ಕಾರಣವೇನು ಎಂಬುದನ್ನು ತಿಳಿಯೋಣ. ಜ್ಯೋತಿಷ್ಯದಲ್ಲಿ ಮನುಷ್ಯನ ಪ್ರವೃತ್ತಿಯ ಅಧ್ಯಯನವನ್ನು ಸಾಮಾನ್ಯವಾಗಿ ಲಗ್ನ, ಲಗ್ನಾಧಿಪತಿ, ಸೂರ್ಯ, ಚಂದ್ರ ಹಾಗೂ ಕುಜನ ಆಧಾರದ ಮೇಲೆ ಮಾಡಲಾಗುತ್ತದೆ. ಮನುಷ್ಯನ ಪ್ರವೃತ್ತಿ ತುಂಬಾ ಕ್ಲಿಷ್ಟವಾದುದು, ಹಾಗೆ ನೋಡಿದರೆ ಇದರ ಅಧ್ಯಯನವನ್ನು ಒಂದೆರಡು ಭಾವ ಅಥವಾ ಒಂದೆರಡು ಗ್ರಹಗಳ ಆಧಾರದಿಂದ ಮಾಡಲಾಗದು. ಇದನ್ನು ಹನ್ನೆರಡು ಭಾವಗಳು ಹಾಗೂ ಒಂಬತ್ತು ಗ್ರಹಗಳ ಸಂಯೋಗದಿಂದ ಅರ್ಥೈಸಬಹುದು, ಯಾವುದೇ ವ್ಯಕ್ತಿಗೆ ಅಧಿಕ ಕೋಪ ಬರಲು ಈ ಕೆಲವು ಜ್ಯೋತಿಷ್ಯ ಕಾರಣಗಳಿರುತ್ತವೆ.ಅವುಗಳು ಯಾವುವು ಎಂಬುದನ್ನು ನೋಡೋಣ 1. ಮೇಷ, ಸಿಂಹ, ವೃಶ್ಚಿಕ ಲಗ್ನದ ಜಾತಕರಿಗೆ ಸಾಮಾನ್ಯ ಕೋಪ ಹೆಚ್ಚು. 2. ಲಗ್ನದಲ್ಲಿ ಕುಜ ಅಥವಾ ರವಿ ಸ್ಥಿತರಿದ್ದರೆ ಜಾತಕ ರಿಗೆ ಅಧಿಕ ಕೋಪ, ಇಂಥವರನ್ನು ಕೋಪ ಪ್ರವೃತ್ತಿಯವರೆಂದೇ ಪರಿಗಣಿಸಲಾಗುತ್ತೆ. 3. ಕುಂಡಲಿಯ ಸಪ್ತಮಭಾವದಲ್ಲಿ ಕುಜ ಅಥವಾ ರವಿ ಸ್ಥಿತವಾಗಿದ್ದರೂ ಕೋಪ ಜಾಸ್ತಿ. 4. ಷಷ್ಟ ಭಾವದಲ್ಲಿ ಕುಜ ಸ್ಥಿತನಾಗಿದ್ದರೂ ಕೋಪ ಜಾಸ್ತಿ. 5. ಲಗ್ನಾಧಿಪತಿ ದುರ್ಬಲನಾಗಿದ್ದು ಮತ್ತು ಕುಜನ ಯುತಿ ಅಥವಾ ದೃಷ್ಟಿಯಿದ್ದರೆ ಸಾಮಾನ್ಯಕ್ಕಿಂತ ಅಧಿಕ ಕೋಪ. 6. ಜಾತಕದಲ್ಲಿ ಚಂದ್ರನಿಗೆ ಕುಜನ ಸಂಬಂಧ ಬಂದರೂ ( ದೃಷ್ಟಿ ಅಥವಾ ಯುತಿ) ಜಾತಕನಿಗೆ ಅಧಿಕ ಕೋಪ. 7. ಕುಜನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಸ್ಥಿತನಿದ್ದರೆ, ಅಥವಾ ಕುಜನೊಂದಿಗೆ ಯುತಿ ಪಡೆದ ಗ್ರಹದ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೂ ಜಾತಕನಿಗೆ ಕೋಪ ಬರುವ ಸಂಭವ ಜಾಸ್ತಿ. 8. ಚಂದ್ರನು ಷಷ್ಟ ಅಥವಾ ಅಷ್ಟಮದಲ್ಲಿದ್ದರೆ ಅಥವಾ ಷಷ್ಟಾಷ್ಟಮ ಭಾವಾಧಿಪತಿಗಳ ಯುತಿಯಲ್ಲಿದ್ದರೆ ಜಾತಕನಿಗೆ ಕೋಪ ಬರುತ್ತದೆ, ಈ ಕೋಪ ಅಲ್ಪಕಾಲವಿದ್ದರೂ... ಇದರ ತೀವ್ರತೆ ಮಾತ್ರ ಅಧಿಕವಾಗಿರುತ್ತದೆ. 9. ಜಾತಕದಲ್ಲಿ ಶುಭ ಯೋಗಗಳಿಗಿಂತ ಅಶುಭಯೋಗಗಳು ಜಾಸ್ತಿಯಿದ್ದರೂ ಕೂಡ ಜಾತಕನು ಕೋಪಾವಿಷ್ಟನಾಗುತ್ತಾನೆ. 10. ಜಾತಕದಲ್ಲಿ ಲಗ್ನಾಧಿಪತಿಯೊಂದಿಗೆ 2, 9, 10 ನೇ ಅಧಿಪತಿಗಳು ದುರ್ಬಲರಾಗಿದ್ದರೂ ಕೂಡ ಜಾತಕನಿಗೆ ಕೋಪ. 11. ಜನ್ಮ ಕುಂಡಲಿಯ ಸಪ್ತಮ ಭಾವದಲ್ಲಿ ಪಾಪಗ್ರಹಗಳು ಸ್ಥಿತರಾಗಿದ್ದರೆ, ಜಾತಕನಿಗೆ ಕುಜದೋಷವಿದ್ದರೂ ಸಹ ಅಧಿಕ ಕೋಪ. 12. ಸಪ್ತಮಾಧಿಪತಿ ದುರ್ಬಲನಾಗಿದ್ದರೂ, ಸಪ್ತಮಾಧಿಪತಿ ಪಂಚಮದಲ್ಲಿದ್ದರೂ ಅಥವಾ ಪಾಪ ಗ್ರಹಗಳ ಸಂಪರ್ಕ ಪಡೆದಿದ್ದರೂ ಜಾತಕನಿಗೆ ಕೋಪವಿರುತ್ತದೆ. 13. ಲಗ್ನಾಧಿಪತಿ 6, 8 ರಲ್ಲಿ ಸ್ಥಿತರಾದರೂ ಜಾತಕನಿಗೆ ಕೋಪ ಬರುವ ಸಂಭವ ಹೆಚ್ಚು. 14. ರಾಹುವಿನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೆ ಅಧಿಕ ಕೋಪ. 15. ಒಂದು ವೇಳೆ ಷಷ್ಟಾಧಿಪತಿ, ಅಷ್ಟಮಾಧಿಪತಿ, ಅಥವಾ ಮಾರಕ ಗ್ರಹಗಳಿಂದ ಜಾತಕನು ಪೀಡಿತನಾಗಿದ್ದರೂ ಕೂಡ ಜಾತಕನಿಗೆ ಅಧಿಕ ಕೋಪವಿರುತ್ತದೆ. 16. ಗೋಚಾರ ದಲ್ಲಿ ರವಿಯು ಲಗ್ನ, ಷಷ್ಟ, ಸಪ್ತಮ, ಅಷ್ಟಮ, ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದರೆ ಮತ್ತು ಲಗ್ನದ ಮೇಲೆ ಕುಜನ, ರಾಹುವಿನ ಅಥವಾ ಶನಿಯ ಗೋಚಾರದ ಪ್ರಭಾವವಿದ್ದರೆ, ಆ ಸಮಯದಲ್ಲಿ ಜಾತಕನಿಗೆ ಅಧಿಕ ಕೋಪವಿರುತ್ತದೆ. 17. ಗೋಚಾರದಲ್ಲಿ ಕುಜನು 1, 4, 6, 7, 8, 12 ನೇ ಮನೆಯಲ್ಲಿ ಸಂಚರಿಸುತ್ತಿದ್ದರೆ. ಮತ್ತು ಜಾತಕನಿಗೆ ಸಾಡೇಸಾತಿ ನಡೆಯುವಾಗ ಅಧಿಕ ಕೋಪ ಬರುತ್ತದೆ. 18. ಲಗ್ನಾಧಿಪತಿ ದುರ್ಬಲನಾಗಿದ್ದು, ಗೋಚಾರದಲ್ಲಿ ಚಂದ್ರನು 4, 8, 12 ನೇ ಭಾವದ ಮೇಲೆ ಪರಿಭ್ರಮಣ ಮಾಡುವಾಗ ಜಾತಕನಿಗೆ ಅಧಿಕ ಕೋಪ ಬರುತ್ತದೆ. ಕೋಪವು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಯಾವ ಜಾತಕರು ಪ್ರತೀಕೂಲ ಗ್ರಹಗಳ ದೆಸೆಯಿಂದ ಕೋಪಾವಿಷ್ಟರಾಗುತ್ತಾರೋ ಆಗ ಅದರಿಂದ ಆಗುವ ಹಾನಿಯಿಂದ ರಕ್ಷಣೆ ಪಡೆಯಲು ಈ ಕೆಳಗಂಡ ಪರಿಹಾರವನ್ನು ಮಾಡಬಹುದು. ◆ ಲಗ್ನಾಧಿಪತಿಯ ರತ್ನ ಧರಿಸಬಹುದು. ◆ ಏಕಮುಖಿ ರುದ್ರಾಕ್ಷಿ ಧಾರಣೆ ಮಾಡಬಹುದು ◆ ಯಾವ ಗ್ರಹದ ಕಾರಣದಿಂದ ಕೋಪ ಉತ್ಪನ್ನಗೊಳ್ಳುತ್ತಿದೆಯೋ ಆ ಗ್ರಹದ ಮಂತ್ರಜಪ ಮಾಡಬೇಕು. -SangrahaMahiti

ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ

ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್ ಅಂದರೆ ಮುಖ ಮನಸ್ಸಿನ ಸೂಚಕ.ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ.ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ.ಅದೇ ಗ್ರಾಫಾಲಜಿ.ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ,ನೀವು ಮಾಡುವ ಕೆಲಸಗಳು,ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ.ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇಯಿರುತ್ತದೆ.ಆದರೆ,ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸೋಣ. *ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು:* ಇಂತಹವರಿಗೆ ವಿಶ್ವಾಸ ಹೆಚ್ಚಾಗಿರುತ್ತದೆ.ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ.ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು.ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು.ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ. *ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ:* ಸಮಾಜದಲ್ಲಿ ಗೌರವ,ಮರ್ಯಾದೆಗಳನ್ನು ಗಳಿಸುತ್ತಾರೆ.ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ.ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ.ದೈರ್ಯವಂತರು. *ಸಹಿ ಕೆಳಮುಖವಾಗಿದ್ದರೆ:* ಸ್ವಾರ್ಥ ಹೆಚ್ಚಾಗಿರುತ್ತದಂತೆ. *ಸಹಿ ಮೇಲ್ಮುಖವಾಗಿದ್ದರೆ:* ನಿಮಗೆ ತೀಕ್ಷ್ಣ ಬುದ್ಧಿಯಿರುತ್ತದೆ.ಧನಾತಕ ವ್ಯಕ್ತಿತ್ವ, ಯಾವುದೆ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತಿರ. ಅಭಿವೃದ್ಧಿ ಪಥದಕಡೆ ನಿಮ್ಮ ಪಯಣ. *ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ:* ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತೀರಿ(ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು) *ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ:* ಎಂದೆಂದಿಗೂ ನಿಮಗೆ ಜಯ ಲಭಿಸುತ್ತದೆ. *ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ;* ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ. ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ. *ಸಹಿಯಲ್ಲಿ ಚುಕ್ಕೆಗಳಿದ್ದರೆ:* ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು. *ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ:* ಆರಂಭ ಶೂರತ್ವ ಹೆಚ್ಚಾಗಿರುತ್ತದೆ.ಒಳ್ಳೆಯ ಐಡಿಯಾ ಗಳಿರುತ್ತವೆ.ಆದರೆ,ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತೀರ. -Sangraha Mahiti

ವಿವಾಹಯೋಗ

ಜಾತಕದಲ್ಲಿ ಲಗ್ನ, ಚಂದ್ರ, ಕಲತ್ರಕಾರಕನಾದ ಶುಕ್ರ ಪ್ರಬಲವಾಗಿದ್ದರೆ ಉತ್ತಮ ವಿವಾಹಯೋಗ. ವಿವಾಹಯೋಗಕ್ಕೆ ಪ್ರಮುಖವಾಗಿ ವಿವಾಹ ಸ್ಥಾನಗಳಾದ 1, 2, 4, 7, 8, 12 ಭಾವಗಳನ್ನು ಲಗ್ನ, ಚಂದ್ರ ಹಾಗೂ ಶುಕ್ರರಿಂದ ನಿರ್ಣಯ ಮಾಡಬೇಕು. 1. ಲಗ್ನಭಾವ - ಜಾತಕನ ಗುಣ, ಆತನ ಸುಖವನ್ನು ಸೂಚಿಸುತ್ತದೆ. 2. ಕುಟುಂಬ ಭಾವ - ಜಾತಕನ ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ. 4. ಸುಖಭಾವ - ವೈವಾಹಿಕ ಸುಖವನ್ನು ಸೂಚಿಸುತ್ತದೆ. 7. ಕಳತ್ರಭಾವ - ಸಂಗಾತಿಯ ಗುಣ, ಅವರಿಂದ ಸಿಗುವ ಸುಖ ದುಃಖಗಳನ್ನು ಸೂಚಿಸುತ್ತದೆ. 8. ಮಾಂಗಲ್ಯ ಭಾವ - ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ. 12. ಪತಿ - ಪತ್ನಿಯರಲ್ಲಿ ಪರಸ್ಪರ ಪ್ರೀತಿ, ಶಯನಸುಖವನ್ನು ಸೂಚಿಸುತ್ತದೆ. ಈ ಎಲ್ಲಾ ಭಾವಗಳಲ್ಲಿ ಶುಭಗ್ರಹರು ಸ್ಥಿತರಾದಾಗ ಉತ್ತಮ ವೈವಾಹಿಕ ಜೀವನ. ಅಶುಭ, ಪೀಡಿತ, ಅಸ್ತ, ನೀಚ ಗ್ರಹಗಳೇನಾದರೂ ಸ್ಥಿತವಾಗಿದ್ರೆ, ಆಯಾ ಗ್ರಹಗಳ ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಏರುಪೇರುಗಳು ಇರುತ್ತದೆ. ವಿವಾಹ ಜೀವನಕ್ಕೆ ಶುಭಗ್ರಹರು - ಚಂದ್ರ, ಶುಕ್ರ, ಗುರು. ವಿವಾಹ ಜೀವನಕ್ಕೆ ಅಶುಭರು- ರವಿ, ರಾಹು, ಶನಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವವರು ಕುಜ, ಕೇತು ಬುಧ ( ಶುಭಗ್ರಹರ ಸಂಪರ್ಕ ವಿದ್ದರೆ ಶುಭ, ಅಶುಭರ ಸಂಪರ್ಕ ವಾದರೆ ಅಶುಭ ) ವಿವಾಹವಾಗಲು ಕುಟುಂಬ,.ಸಪ್ತಮ, ಮತ್ತು ಲಾಭ ಸ್ಥಾನ ಹಾಗೂ ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತೆ, ಹಾಗೂ ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು. ಯಾವುದೇ ಜಾತಕದಲ್ಲಿ 2, 7, 11 ನೇ ಭಾವಾಧಿಪತಿಗಳು ಬಲಿಷ್ಠರಾಗಿ ವಿವಾಹ ಸೂಚಕ ಗ್ರಹರಾದ ಶುಕ್ರ, ಗುರು, ಚಂದ್ರರು ಬಲಿಷ್ಠರಾಗಿದ್ದರೆ ಉತ್ತಮ ವಿವಾಹ ಯೋಗ. ಜಾತಕದಲ್ಲಿ ಸಪ್ತಮಾಧಿಪತಿ ಬಲಯುತನಾಗಿ ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರ ದಲ್ಲಿದ್ದರೆ ವಿವಾಹಯೋಗ ಹಾಗೂ ಉತ್ತಮ ಸಂಗಾತಿ. ಸಪ್ತಮಾಧಿಪತಿ ಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭ ವಿವಾಹ ಯೋಹ. ಕಲತ್ರಕಾರಕನಾದ ಶುಕ್ರನು ಶುಭ ಗುರು ದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗ. ಪುರುಷರ ಜಾತಕದಲ್ಲಿ. ಚಂದ್ರ 2 ಅಥವಾ 4 ನೇ ಸ್ಥಾನದಲ್ಲಿದ್ದಾರೆ ತಡ (ಆಲಸ್ಯ )ವಿವಾಹಯೋಗ ಸ್ತ್ರೀಯರ ಜಾತಕನಿಗೆ ರವಿಯು 2 ಅಥವಾ 4 ರಲ್ಲಿದ್ದರೆ ಆಲಸ್ಯ ವಿವಾಹಯೋಗ. ಮೇಷ, ಸಿಂಹ, ಕನ್ಯಾ, ಧನಸ್ಸು, ಮಕರ ಲಗ್ನದಲ್ಲಿ ಶುಕ್ರನಿದ್ದರೆ ( ಸ್ತ್ರೀ ಪುರುಷರ ಜಾತಕಗಳೆರಡರಲ್ಲೂ ) ಆಲಸ್ಯ ವಿವಾಹಯೋಗ. Sangraha maahiti