Wednesday, 22 July 2026

|| ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು|| ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ. ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾಹುಇದ್ದು ಮತ್ತೊಂದುಗ್ರಹ ೨೮ಡಿಗ್ರಿ ೩೦ ನಿಮಿಷದಲ್ಲಿ ಇದ್ದರೆ ) *ಜನ್ಮ ಕುಂಡಲಿಯಲ್ಲಿ ಮೂರು ಅಥವ ಮೂರಕ್ಕೂ ಹೆಚ್ಚು ಗ್ರಹಗಳು ಉಚ್ಚ ಅಥವ ಸ್ವಕ್ಷೇತ್ರಗತರಾಗಿದ್ದಲ್ಲಿ ಈ ಕಾಲಸರ್ಪದೋಷವು ಭಂಗವಾಗುತ್ತದೆ. *ಲಗ್ನಾಧಿಪತಿ,ಚಂದ್ರ,ರವಿ ಶುಭಭಾವಗಳಲ್ಲಿದ್ದಲ್ಲಿ ಅಂದರೆ ಈ ಗ್ರಹಗಳಲ್ಲಿ ಯಾರಾದರು(೧,೫,೯ರಲ್ಲಿ ಇದ್ದಲ್ಲಿ)ಕೇಂದ್ರಗಳಲ್ಲಿ ಇದ್ದಲ್ಲಿ ಕಾಳಸರ್ಪದೋಷ ಭಂಗವಾಗುತ್ತದೆ. *ದಶಮದಿಂದ ಚಥುರ್ಥದಲ್ಲಿ ಅಥವ ಚತುರ್ಥದಿಂದ ದಶಮದಲ್ಲಿ ಕಾಳಸರ್ಪದೋಷ ಉಂಟಾಗಿದ್ದರೆ ಹಾಗು ಆ ಎಲ್ಲಾ ಬಾವಗಳಲ್ಲಿ ಎಲ್ಲ ಗ್ರಹಗಳಿದ್ದರೆ ಕಾಳಸರ್ಪದೋಷ ನಿಶ್ಚಯವಾಗಿ ಭಂಗವಾಗುತ್ತದೆ. || ಹನ್ನೆರಡು ಕಾಳಸರ್ಪ ದೋಷಗಳು ಮತ್ತು ಅವುಗಳ ಪರಿಣಾಮ,ದೋಷಪರಿಹಾರೋಪಾಯಗಳು || 1.ಅನಂತ: ರಾಹು ಲಗ್ನದಲ್ಲಿ(೧ರಲ್ಲಿ)ಕೇತು ಸಪ್ತಮದಲ್ಲಿ ಉಳಿದೆಲ್ಲಗ್ರಹಗಳು ಇವುಗಳ ಮದ್ಯೆ ಇದ್ದರೆ ಈ ದೋಷ ಉಂಟಾಗುತ್ತದೆ. ದೋಷಕ್ಕೆ ಕಾರಣ:- ಹುತ್ತವನ್ನು ಹಾಳು ಮಾಡುವುದರಿಂದ, ಹುತ್ತವನ್ನು ಹಾಳುಮಾಡಿ ವ್ಯವಸಾಯ ಮಾಡಿದ್ದರೆ,ಹುತ್ತದಮೇಲೆ ವಾಹನ ಹತ್ತಿಸಿದ್ದರೆ,ಊಟಕ್ಕೆ ವಿಷಹಾಕಿದ್ದರೆ ಈ ದೋಷ ಉಂಟಾಗುತ್ತದೆ. ಪರಿಣಾಮಗಳು:- ಜನ್ಮದಿಂದಲೂಏಳಿಗೆಯಾಗುವುದಿಲ್ಲ,ಅವಮಾನ,ನಿಂದನೆ,ಸಂಸಾರ ಜೀವನ ಸುಖವಿರುವುದಿಲ್ಲ,ಮಕ್ಕಳಾಗುವುದಿಲ್ಲ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ,ಕೋರ್ಟು ಕಛೇರಿ ಸುತ್ತಬೇಕಾಗುತ್ತದೆ,ಅಂಡೊತ್ಪತ್ತಿಯಲ್ಲಿ ಸಮಸ್ಯೆ,ಹೆಂಡತಿಬಿಟ್ಟು ಹೋಗುವಿಕೆ. ಪರಿಹಾರ:- ಸರ್ಪಶಿರಮುದ್ರೆ ದಾರಣೆಮಾಡಿ ನಿತ್ಯ ಈ ಮಂತ್ರವನ್ನು೧೦೮ಸಲ ಜಪಿಸಿದರೆ ಈ ದೋಷ ನಿವಾರಣೆಯಾಗುತ್ತದೆ. ಮಂತ್ರ:- ಓಂ ಫೋ ಅನಂತಮುಖಿ ಸ್ವಾಹಾ 2.ಕುಲಿಕ ಕಾಳಸರ್ಪ ದೋಷ ಕಾರಣ:- ಸರ್ಪ ನಿದ್ರಾಭಂಗ ದೋಷದಿಂದ,ಸರ್ಪದ ಉದರಕ್ಕೆ ಹೊಡೆದು ಸಾಯಿಸಿದ್ದರೆ,ಈ ದೋಷ ಉಂಟಾಗುತ್ತದೆ. ಪರಿಣಾಮ:- ವೀರ್ಯಾಣುವಿನ ಸಮಸ್ಯೆ ಅಂಡಾಣು ಸಮಸ್ಯೆ ವೀರ್ಯದೋಷಗಳು ಉಂಟಾಗುತ್ತವೆ. ಪರಿಹಾರ:- ಕುಜ/ಸುಬ್ರಮಣ್ಯನ ಸೇವೆ ಮಾಡಿಸಿರಿ.ಈ ಮುದ್ರೆಯೊಂದಿಗೆ ಈ ಮಂತ್ರವನ್ನು ನಿತ್ಯ ೧೦೮ಸಲ ಜಪಿಸಿರಿ ನಿಮ್ಮ ದೋಷ ನಿವಾರಣೆಯಾಗುತ್ತದೆ. ಮಂತ್ರ:- ಓಂ ಪೂಂ ಪೂಂ ಪೂರ್ವ ಭೂಕಮುಖಿಸ್ವಾಹ. 3.ವಾಸುಕಿ ಕಾಳಸರ್ಪ ದೋಷ ಕಾರಣ:- ಸರ್ಪಗಳ ಅಂಡಗಳದ್ವಂಸ ದಿಂದ,ಹಾವಿನ ಸಂತತಿಯನ್ನುಹಾಳುಮಾಡುವುದರಿಂದ, ಹಾವಿನ ಮರಿಗಳನ್ನು ಸಾಯಿಸಿದ್ದರೆ. ಪರಿಣಾಮ:-ಚರ್ಮಕ್ಕೆ ಸಂಬಂದಿಸಿದ ರೋಗಗಳು ಮನೆಯವರಿಗೆಲ್ಲಾ ಬರುತ್ತದೆ ಇದು ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಹೆಚ್ಚಾಗಿ ತೊಂದರೆಕೊಡುತ್ತದೆ,ಸೋದರ-ಸೋದರಿಯರೊಡನೆ ವೈರತ್ವ,ಯಾವುದರಲ್ಲು ಏಳಿಗೆಯಾಗುವುದಿಲ್ಲ,ದಿಡೀರನೆ ಹಣ,ಆಸ್ತಿಗಳನ್ನು ಕಳೆದುಕೊಳ್ಳುವಿಕೆ,ದಾಂಪತ್ಯ ಸುಖವಿರುವುದಿಲ್ಲ,ರತಿಸುಖ ಸಿಗುವುದಿಲ್ಲ, ಇದರಿಂದಾಗಿ ದಂಪತಿಗಳು ಅಡ್ಡದಾರಿ ಹಿಡಿಯಬಹುದು,ಶೀಘ್ರವೀರ್ಯಸ್ಕಲನ. ಜನನೇಂದ್ರಿಯ ಸಮಸ್ಯೆಯಿಂದ ಗರ್ಭದರಿಸಲು ಸಾದ್ಯವಾಗುವುದಿಲ್ಲ. ಪರಿಹಾರ:- ಮುದ್ರೆಯೊಂದಿಗೆ ಈ ಮಂತ್ರವನ್ನು ೧೦೮ ಸಲ ನಿತ್ಯ ಜಪಿಸಿರಿ ನಿಮ್ಮ ವಾಸುಕಿ ಕಾಳಸರ್ಪದೊಷವು ನಿವಾರಣೆಯಾಗುತ್ತದೆ. ಮಂತ್ರ:- ಓಂ ವಾಸಕಿ ಮುಖಿ ಸ್ವಾಹಾ 4.ಪದ್ಮ ಕಾಳಸರ್ಪ ದೋಷ ಕಾರಣ:- ಹಾವಿನ ಬಾಲಕ್ಕೆ ಹೊಡೆದುಸಾಯಿಸಿದ್ದರೆ ಈ ದೋಷ ಬರುತ್ತದೆ. ಪರಿಣಾಮ:- ಗುಪ್ತ ಜನನಾಂಗಗಳ ರೋಗ,ರುಜಿನಗಳು ಬರುತ್ತವೆ ಕೀವು- ರಕ್ತಬರುವಂತಹ ಗಾಯ ಹುಣ್ಣುಗಳು ಈ ಅಂಗಗಳನ್ನು ಬಾದಿಸುತ್ತವೆ.ಶತೃಕಾಟ,ಗೃಹದಲ್ಲಿ ಜಗಳ, ಸರ್ಪಗಳ ದರ್ಶನ ಆಗಾಗ್ಗೆ ಆಗುತ್ತದೆ, ಕೆಲವೊಮ್ಮೆ ಸರ್ಪ ಮನೆಗೇ ಬರುತ್ತದೆ, ಯೋನಿ/ಶಿಶ್ನಗಳು ಗಾಯಗಳಿಂದಾಗಿ ಕೀವು-ರಕ್ತ ಸೋರುವಿಕೆ,ಇದರಿಂದ ರತಿಸುಖದಿಂದ ದೂರಾಗುವಿಕೆ,ದಾಂಪತ್ಯ ಕಲಹ, ವಿರಹಗಳು, ಪರಿಹಾರ:- ಷಷ್ಟಿದಿವಸ ಮುದ್ರೆ ಮಂತ್ರವನ್ನು ಜಪಿಸುವುದರಿಂದ ಈ ದೋಷ ನಿವಾರಣೆಯಾಗುತ್ತದೆ. 5.ಮಹಾಪದ್ಮ ಕಾಳಸರ್ಪ ದೋಷ ಕಾರಣ:- ಸರ್ಪಗಳ ಸಂಮ್ಮಿಲ(ಸರ್ಪ ಸಂಭೋಗ)ವನ್ನು ನೋಡಿದರೆ,ನೋಡಿ ಆಡಿಕೊಂಡರೆ, ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಈ ದೃಷ್ಯವನ್ನು ನೋಡಿದರೆ ಇಂತಹ ಸಮಯದಲ್ಲಿ ಸರ್ಪಗಳನ್ನು ದೂರಮಾಡಿದ್ದರೆ. ಪರಿಣಾಮ:- ಪ್ರೀತಿ-ಪ್ರೇಮ ವಿವಾಹಕ್ಕೆ ಅಡ್ಡಿ ಆತಂಕಗಳು ಪ್ರೇಮಿಗಳು ಬೇರಾಗುವಿಕೆ,ವಿವಾಹಾ ನಂತರ ದಂಪತಿಗಳು ದೂರಾಗುವಿಕೆ, ಪರಿಹಾರ:- ಮುದ್ರೆ ಯೊಂದಿಗೆ ಈ ಮಂತ್ರವನ್ನು ೨೦-೩೦ ನಿಮಿಷ ನಿತ್ಯ ಜಪಿಸುವುದರಿಂದ ಈ ದೋಷ ಪರಿಹಾರವಾಗುತ್ತದೆ ಮಂತ್ರ:- ಓಂ ಮಹಾಪದ್ಮಿನಿಮುಖಿಫೋಸ್ವಾಹಾ 6.ತಕ್ಷಕ ಕಾಳಸರ್ಪ ದೋಷ ಕಾರಣ:- ಪುರುಷಹತ್ಯೆ,ಶಿಶುಹತ್ಯೆ,ಅಪಹರಣ,ಮಾಡಿದ್ದರೆ ಪರಿಣಾಮ:- ಅಂತವರಿಗೆ ಗಂಡು ಸಂತಾನವಾಗದು, ಸ್ತ್ರೀಸುಖ/ಪುರುಷಸುಖ ಸಿಗುವುದಿಲ್ಲ. ಇಂತವರಿಗೆ ಅವಳಿ ಹೆಣ್ಣು ಮಕ್ಕಳಾಗುವ ಸಂಬವವಿರುತ್ತದೆ. ಪರಿಹಾರ:- ಮುದ್ರೆ ಮಂತ್ರವನ್ನು ಜಪಿಸುವುದು. 7.ಕಾರ್ಕೋಟಕ ಕಾಳಸರ್ಪ ದೋಷ (ಶಂಖಚೂಡ ಕಾಳಸರ್ಪ ದೋಷ ) ಕಾರಣ:- ಸ್ತ್ರೀ ಅಪಹರಣ,ವೇಶ್ಯಾವಾಟಿಕೆಗೆಬಲವಂತವಾಗಿ ಸ್ತ್ರೀಯನ್ನಾಗಲಿ ಪುರುಷರನ್ನಾಗಲಿ ದೂಡಿದ್ದರೆ, ಕಳೆದ ಜನ್ಮದಲ್ಲಿ ಈ ರೀತಿ ಮಾಡಿದ್ದರೆ.ಪರಸ್ತ್ರೀಯನ್ನು ಬಲವಂತವಾಗಿ ಅನುಭವಿಸಿದ್ದರೆ,ವಿವಾಹಕ್ಕೆ ಮುನ್ನ ಸ್ತ್ರೀ ಸುಖ ಪಡೆದಿದ್ದರೆ. ಪರಿಣಾಮ:- ಜೂಜು ಕೋರರಾಗುತ್ತಾರೆ,ರೇಸ್ ಹುಚ್ಚು,ಬೆಟ್ಟಿಂಗ್ ಹುಚ್ಚು,ಕಾಮಾಸಕ್ತಿ ಇರುವುದಿಲ್ಲ,ಪುರುಷನು ಸ್ತ್ರೀಯಂತೆ ವರ್ತಿಸುತ್ತಾನೆ, ಪರಿಹಾರ:- ಮುದ್ರೆ ಮಂತ್ರವನ್ನು ಜಪಿಸಿರಿ. 8.ಪಾತಕ(ಘಾತಕ)ಕಾಳಸರ್ಪ ದೋಷ ಕಾರಣ:- ಸಮಾಜದಲ್ಲಿ ೯೯ ಜನರಿಗೆ ಈ ದೋಷ ವಿರುತ್ತದೆ, ಪರಸ್ತ್ರೀಅಪಹರಣ,ನರಹತ್ಯ,ಹುತ್ತಕ್ಕೆ ಬೆಂಕಿ, ಕೆಮಿಕಲ್ಸ್ ಹಾಕಿದ್ದರೆ. ಪರಿಣಾಮ:- ವ್ಯವಹಾರಹಾನಿ,ಉದ್ಯೋಗಮಾಡಲಾಗದು,ಇಂತವರು ವ್ಯಾಪಾರವನ್ನೇ ಮಾಡಿ ಬದುಕಬೇಕು,ಆದರೆ ವ್ಯಾಪಾರದಲ್ಲಿ ದ್ರೋಹಗಳು ನಡೆಯುತ್ತಿರುತ್ತವೆ,ಅದರಲ್ಲುಹಿತಶತೃಗಳಿಂದದ್ರೋಹಗಳು,ಬುದ್ದಿ ಮಾಂದ್ಯ ಮಕ್ಕಳಜನನ,ಕಿಡ್ನಿಇಲ್ಲದ ಮಕ್ಕಳಜನನ. ಪರಿಹಾರ:- ಮುದ್ರೆ ಮಂತ್ರವನ್ನು ಜಪಿಸುವುದು. 9.ವಿಷದರ(ವಿಶಕ್ತ)ಕಾಳಸರ್ಪ ದೋಷ ಕಾರಣ:- ದಂಪತಿಗಳಅಗಲಿಸಿದ್ದರೆ,ವಿಷಹಾಕಿದ್ದರೆ. ಪರಿಣಾಮ:- ಅಣ್ಣನೊಂದಿಗೆವಾದ-ವಿವಾದಗಳು ಜರುಗುವುವು,ಅಣ್ಣನಿಂದಲೇತೊಂದರೆಉಂಟಾಗುತ್ತಿರುತ್ತದೆ,ದೂರಪ್ರದೇಶದಲ್ಲಿವಾಸ,ಕೋರ್ಟ್ ಕೇಸಿಗೆ ಅಲೆಯುವಿಕೆ,ವಿವಾಹಾನಂತರಕೂದಲು ಉದುರುತ್ತದೆ,ಚರ್ಮರೋಗ,ಕಜ್ಜಿ,ಉಂಟಾಗುತ್ತದೆ,ಹೆಂಡತಿ ಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗುವಿಕೆ,ಆಗಾಗ ಹಾವುಗಳು ಮನೆಗೆ ಬರುತ್ತವೆ,ಅಂಡಾಣು/ವೀರ್ಯಾಣುಗಳ ಚಲನೆಯಲ್ಲಿ ಮಂದಗತಿ ಉಂಟಾಗುತ್ತದೆ ಇದರಿಂದ ಸಂತಾನದೋಷ ಉಂಟಾಗುತ್ತದೆ, ಮಾತು ವಿಕೃತವಾಗುತ್ತದೆ,ರಾಹುದೋಷ ಉಂಟಾಗುತ್ತದೆ,ಅನಿದ್ರೆ,ಕಣ್ಣುಬೇನೆ,ಹೃದ್ರೋಗ ಪೀಡಿಸಲ್ಪಡುವವು ಜೀವನದ ಅಂತ್ಯವು ರಹಸ್ಯವಾಗಿರುವುದು. ಪರಿಹಾರ:- ಈ ಮುದ್ರೆ ಮಂತ್ರವನ್ನು ನಿತ್ಯ ೧೦೮ ಸಲ ಮುದ್ರೆಯೊಂದಿಗೆ ಜಪಿಸಿರಿ ಮಂತ್ರ:- ಓಂ ನವಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ವಿಷಧರ ಪ್ರಚೋದಯಾತ್ 10.ಶೇಷನಾಗ ಕಾಳಸರ್ಪ ದೋಷ ಕಾರಣ:- ಒಂದು ಬೀದಿಗೆ ಸಾಮಾನ್ಯವಾಗಿ ೨೫ ಜನರಿಗೆ ಈದೋಷವಿರುತ್ತದೆ,ಪುಣ್ಯಕ್ಷೇತ್ರಗಳಲ್ಲಿ,ಮಠ,ದೇವಾಲಯ, ನಧಿ,ಕೊಳಗಳ ತೀರದಲ್ಲಿ ರತಿಸುಖವನ್ನು ಪಡೆದಿದ್ದರೆ ಈ ದೋಷವು ಬರುತ್ತದೆ,ಇಂತಹ ಸ್ಥಳಗಳಲ್ಲಿ ಕಾಮ,ಪ್ರೇಮದ ಛೇಷ್ಟೆಯನ್ನು ಮಾಡಿದ್ದರೆ ಈ ದೋಷಬರುತ್ತದೆ. ಪರಿಣಾಮ:- ಕಣ್ಣಿನದೋಷ,ಹೃದಯದ ರೋಗ,ಅಂಗವಿಕಲ ಮಕ್ಕಳಜನನ,ತಲೆದಪ್ಪಮಕ್ಕಳಜನನ,ಕಣ್ಣು ದಪ್ಪ,ಕುಬ್ಜಮಕ್ಕಳ ಜನನ, ಪರಿಹಾರ:- ವಿಷ್ಣುವಿನ ಜಪವನ್ನು ನಿತ್ಯ ಜಪಿಸುವುದು ಮತ್ತು ಮುದ್ರೆ ಮಂತ್ರವನ್ನು ಜಪಿಸುವುದು. ಸಂಗ್ರಹ ಮಾಹಿತಿ ಅಜ್ಜಹಳ್ಳಿಕೃಷ್ಣಮೂರ್ತಿ

No comments:

Post a Comment