Wednesday, 22 July 2026
|| ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು||
ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ
ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ.
ಅಂತಹ ಬಲವಾದ ಯೋಗಗಳೆಂದರೆ:-
ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ
ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ.
ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:-
*ಕುಜನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ*
*ಬುದನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ
*ಗುರುವಿನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ*
*ಶುಕ್ರನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ*
*ಶನಿಯಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ*
*ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ*
*ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾಹುಇದ್ದು ಮತ್ತೊಂದುಗ್ರಹ ೨೮ಡಿಗ್ರಿ ೩೦ ನಿಮಿಷದಲ್ಲಿ ಇದ್ದರೆ )
*ಜನ್ಮ ಕುಂಡಲಿಯಲ್ಲಿ ಮೂರು ಅಥವ ಮೂರಕ್ಕೂ ಹೆಚ್ಚು ಗ್ರಹಗಳು ಉಚ್ಚ ಅಥವ ಸ್ವಕ್ಷೇತ್ರಗತರಾಗಿದ್ದಲ್ಲಿ ಈ ಕಾಲಸರ್ಪದೋಷವು ಭಂಗವಾಗುತ್ತದೆ.
*ಲಗ್ನಾಧಿಪತಿ,ಚಂದ್ರ,ರವಿ ಶುಭಭಾವಗಳಲ್ಲಿದ್ದಲ್ಲಿ ಅಂದರೆ ಈ ಗ್ರಹಗಳಲ್ಲಿ ಯಾರಾದರು(೧,೫,೯ರಲ್ಲಿ ಇದ್ದಲ್ಲಿ)ಕೇಂದ್ರಗಳಲ್ಲಿ ಇದ್ದಲ್ಲಿ ಕಾಳಸರ್ಪದೋಷ ಭಂಗವಾಗುತ್ತದೆ.
*ದಶಮದಿಂದ ಚಥುರ್ಥದಲ್ಲಿ ಅಥವ ಚತುರ್ಥದಿಂದ ದಶಮದಲ್ಲಿ ಕಾಳಸರ್ಪದೋಷ ಉಂಟಾಗಿದ್ದರೆ ಹಾಗು ಆ ಎಲ್ಲಾ ಬಾವಗಳಲ್ಲಿ ಎಲ್ಲ ಗ್ರಹಗಳಿದ್ದರೆ ಕಾಳಸರ್ಪದೋಷ ನಿಶ್ಚಯವಾಗಿ ಭಂಗವಾಗುತ್ತದೆ.
|| ಹನ್ನೆರಡು ಕಾಳಸರ್ಪ ದೋಷಗಳು ಮತ್ತು ಅವುಗಳ ಪರಿಣಾಮ,ದೋಷಪರಿಹಾರೋಪಾಯಗಳು ||
1.ಅನಂತ:
ರಾಹು ಲಗ್ನದಲ್ಲಿ(೧ರಲ್ಲಿ)ಕೇತು ಸಪ್ತಮದಲ್ಲಿ ಉಳಿದೆಲ್ಲಗ್ರಹಗಳು ಇವುಗಳ ಮದ್ಯೆ ಇದ್ದರೆ ಈ ದೋಷ ಉಂಟಾಗುತ್ತದೆ. ದೋಷಕ್ಕೆ ಕಾರಣ:- ಹುತ್ತವನ್ನು ಹಾಳು ಮಾಡುವುದರಿಂದ, ಹುತ್ತವನ್ನು ಹಾಳುಮಾಡಿ ವ್ಯವಸಾಯ ಮಾಡಿದ್ದರೆ,ಹುತ್ತದಮೇಲೆ ವಾಹನ ಹತ್ತಿಸಿದ್ದರೆ,ಊಟಕ್ಕೆ ವಿಷಹಾಕಿದ್ದರೆ ಈ ದೋಷ ಉಂಟಾಗುತ್ತದೆ.
ಪರಿಣಾಮಗಳು:-
ಜನ್ಮದಿಂದಲೂಏಳಿಗೆಯಾಗುವುದಿಲ್ಲ,ಅವಮಾನ,ನಿಂದನೆ,ಸಂಸಾರ ಜೀವನ ಸುಖವಿರುವುದಿಲ್ಲ,ಮಕ್ಕಳಾಗುವುದಿಲ್ಲ,
ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ,ಕೋರ್ಟು ಕಛೇರಿ ಸುತ್ತಬೇಕಾಗುತ್ತದೆ,ಅಂಡೊತ್ಪತ್ತಿಯಲ್ಲಿ ಸಮಸ್ಯೆ,ಹೆಂಡತಿಬಿಟ್ಟು ಹೋಗುವಿಕೆ.
ಪರಿಹಾರ:-
ಸರ್ಪಶಿರಮುದ್ರೆ ದಾರಣೆಮಾಡಿ ನಿತ್ಯ ಈ ಮಂತ್ರವನ್ನು೧೦೮ಸಲ ಜಪಿಸಿದರೆ ಈ ದೋಷ ನಿವಾರಣೆಯಾಗುತ್ತದೆ.
ಮಂತ್ರ:-
ಓಂ ಫೋ ಅನಂತಮುಖಿ ಸ್ವಾಹಾ
2.ಕುಲಿಕ ಕಾಳಸರ್ಪ ದೋಷ
ಕಾರಣ:-
ಸರ್ಪ ನಿದ್ರಾಭಂಗ ದೋಷದಿಂದ,ಸರ್ಪದ ಉದರಕ್ಕೆ ಹೊಡೆದು ಸಾಯಿಸಿದ್ದರೆ,ಈ ದೋಷ ಉಂಟಾಗುತ್ತದೆ.
ಪರಿಣಾಮ:-
ವೀರ್ಯಾಣುವಿನ ಸಮಸ್ಯೆ ಅಂಡಾಣು ಸಮಸ್ಯೆ ವೀರ್ಯದೋಷಗಳು ಉಂಟಾಗುತ್ತವೆ.
ಪರಿಹಾರ:- ಕುಜ/ಸುಬ್ರಮಣ್ಯನ ಸೇವೆ ಮಾಡಿಸಿರಿ.ಈ ಮುದ್ರೆಯೊಂದಿಗೆ ಈ ಮಂತ್ರವನ್ನು ನಿತ್ಯ ೧೦೮ಸಲ ಜಪಿಸಿರಿ ನಿಮ್ಮ ದೋಷ ನಿವಾರಣೆಯಾಗುತ್ತದೆ.
ಮಂತ್ರ:-
ಓಂ ಪೂಂ ಪೂಂ ಪೂರ್ವ ಭೂಕಮುಖಿಸ್ವಾಹ.
3.ವಾಸುಕಿ ಕಾಳಸರ್ಪ ದೋಷ
ಕಾರಣ:-
ಸರ್ಪಗಳ ಅಂಡಗಳದ್ವಂಸ ದಿಂದ,ಹಾವಿನ ಸಂತತಿಯನ್ನುಹಾಳುಮಾಡುವುದರಿಂದ,
ಹಾವಿನ ಮರಿಗಳನ್ನು ಸಾಯಿಸಿದ್ದರೆ.
ಪರಿಣಾಮ:-ಚರ್ಮಕ್ಕೆ ಸಂಬಂದಿಸಿದ ರೋಗಗಳು ಮನೆಯವರಿಗೆಲ್ಲಾ ಬರುತ್ತದೆ ಇದು ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಹೆಚ್ಚಾಗಿ ತೊಂದರೆಕೊಡುತ್ತದೆ,ಸೋದರ-ಸೋದರಿಯರೊಡನೆ ವೈರತ್ವ,ಯಾವುದರಲ್ಲು
ಏಳಿಗೆಯಾಗುವುದಿಲ್ಲ,ದಿಡೀರನೆ ಹಣ,ಆಸ್ತಿಗಳನ್ನು ಕಳೆದುಕೊಳ್ಳುವಿಕೆ,ದಾಂಪತ್ಯ ಸುಖವಿರುವುದಿಲ್ಲ,ರತಿಸುಖ ಸಿಗುವುದಿಲ್ಲ, ಇದರಿಂದಾಗಿ ದಂಪತಿಗಳು ಅಡ್ಡದಾರಿ ಹಿಡಿಯಬಹುದು,ಶೀಘ್ರವೀರ್ಯಸ್ಕಲನ.
ಜನನೇಂದ್ರಿಯ ಸಮಸ್ಯೆಯಿಂದ ಗರ್ಭದರಿಸಲು ಸಾದ್ಯವಾಗುವುದಿಲ್ಲ.
ಪರಿಹಾರ:-
ಮುದ್ರೆಯೊಂದಿಗೆ ಈ ಮಂತ್ರವನ್ನು ೧೦೮ ಸಲ ನಿತ್ಯ ಜಪಿಸಿರಿ ನಿಮ್ಮ ವಾಸುಕಿ ಕಾಳಸರ್ಪದೊಷವು ನಿವಾರಣೆಯಾಗುತ್ತದೆ.
ಮಂತ್ರ:-
ಓಂ ವಾಸಕಿ ಮುಖಿ ಸ್ವಾಹಾ
4.ಪದ್ಮ ಕಾಳಸರ್ಪ ದೋಷ
ಕಾರಣ:-
ಹಾವಿನ ಬಾಲಕ್ಕೆ ಹೊಡೆದುಸಾಯಿಸಿದ್ದರೆ
ಈ ದೋಷ ಬರುತ್ತದೆ.
ಪರಿಣಾಮ:-
ಗುಪ್ತ ಜನನಾಂಗಗಳ ರೋಗ,ರುಜಿನಗಳು ಬರುತ್ತವೆ ಕೀವು- ರಕ್ತಬರುವಂತಹ ಗಾಯ ಹುಣ್ಣುಗಳು ಈ ಅಂಗಗಳನ್ನು ಬಾದಿಸುತ್ತವೆ.ಶತೃಕಾಟ,ಗೃಹದಲ್ಲಿ ಜಗಳ, ಸರ್ಪಗಳ ದರ್ಶನ ಆಗಾಗ್ಗೆ ಆಗುತ್ತದೆ, ಕೆಲವೊಮ್ಮೆ ಸರ್ಪ ಮನೆಗೇ ಬರುತ್ತದೆ, ಯೋನಿ/ಶಿಶ್ನಗಳು ಗಾಯಗಳಿಂದಾಗಿ ಕೀವು-ರಕ್ತ ಸೋರುವಿಕೆ,ಇದರಿಂದ ರತಿಸುಖದಿಂದ ದೂರಾಗುವಿಕೆ,ದಾಂಪತ್ಯ ಕಲಹ, ವಿರಹಗಳು,
ಪರಿಹಾರ:-
ಷಷ್ಟಿದಿವಸ ಮುದ್ರೆ ಮಂತ್ರವನ್ನು ಜಪಿಸುವುದರಿಂದ ಈ ದೋಷ ನಿವಾರಣೆಯಾಗುತ್ತದೆ.
5.ಮಹಾಪದ್ಮ ಕಾಳಸರ್ಪ ದೋಷ
ಕಾರಣ:-
ಸರ್ಪಗಳ ಸಂಮ್ಮಿಲ(ಸರ್ಪ ಸಂಭೋಗ)ವನ್ನು ನೋಡಿದರೆ,ನೋಡಿ ಆಡಿಕೊಂಡರೆ, ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಈ ದೃಷ್ಯವನ್ನು ನೋಡಿದರೆ ಇಂತಹ ಸಮಯದಲ್ಲಿ ಸರ್ಪಗಳನ್ನು ದೂರಮಾಡಿದ್ದರೆ.
ಪರಿಣಾಮ:-
ಪ್ರೀತಿ-ಪ್ರೇಮ ವಿವಾಹಕ್ಕೆ ಅಡ್ಡಿ ಆತಂಕಗಳು ಪ್ರೇಮಿಗಳು ಬೇರಾಗುವಿಕೆ,ವಿವಾಹಾ ನಂತರ ದಂಪತಿಗಳು ದೂರಾಗುವಿಕೆ,
ಪರಿಹಾರ:-
ಮುದ್ರೆ ಯೊಂದಿಗೆ ಈ ಮಂತ್ರವನ್ನು ೨೦-೩೦ ನಿಮಿಷ ನಿತ್ಯ ಜಪಿಸುವುದರಿಂದ ಈ ದೋಷ ಪರಿಹಾರವಾಗುತ್ತದೆ
ಮಂತ್ರ:-
ಓಂ ಮಹಾಪದ್ಮಿನಿಮುಖಿಫೋಸ್ವಾಹಾ
6.ತಕ್ಷಕ ಕಾಳಸರ್ಪ ದೋಷ
ಕಾರಣ:-
ಪುರುಷಹತ್ಯೆ,ಶಿಶುಹತ್ಯೆ,ಅಪಹರಣ,ಮಾಡಿದ್ದರೆ ಪರಿಣಾಮ:-
ಅಂತವರಿಗೆ ಗಂಡು ಸಂತಾನವಾಗದು, ಸ್ತ್ರೀಸುಖ/ಪುರುಷಸುಖ ಸಿಗುವುದಿಲ್ಲ. ಇಂತವರಿಗೆ ಅವಳಿ ಹೆಣ್ಣು ಮಕ್ಕಳಾಗುವ ಸಂಬವವಿರುತ್ತದೆ.
ಪರಿಹಾರ:-
ಮುದ್ರೆ ಮಂತ್ರವನ್ನು ಜಪಿಸುವುದು.
7.ಕಾರ್ಕೋಟಕ ಕಾಳಸರ್ಪ ದೋಷ (ಶಂಖಚೂಡ ಕಾಳಸರ್ಪ ದೋಷ )
ಕಾರಣ:-
ಸ್ತ್ರೀ ಅಪಹರಣ,ವೇಶ್ಯಾವಾಟಿಕೆಗೆಬಲವಂತವಾಗಿ ಸ್ತ್ರೀಯನ್ನಾಗಲಿ ಪುರುಷರನ್ನಾಗಲಿ ದೂಡಿದ್ದರೆ, ಕಳೆದ ಜನ್ಮದಲ್ಲಿ ಈ ರೀತಿ ಮಾಡಿದ್ದರೆ.ಪರಸ್ತ್ರೀಯನ್ನು ಬಲವಂತವಾಗಿ ಅನುಭವಿಸಿದ್ದರೆ,ವಿವಾಹಕ್ಕೆ ಮುನ್ನ ಸ್ತ್ರೀ ಸುಖ ಪಡೆದಿದ್ದರೆ.
ಪರಿಣಾಮ:-
ಜೂಜು ಕೋರರಾಗುತ್ತಾರೆ,ರೇಸ್ ಹುಚ್ಚು,ಬೆಟ್ಟಿಂಗ್ ಹುಚ್ಚು,ಕಾಮಾಸಕ್ತಿ ಇರುವುದಿಲ್ಲ,ಪುರುಷನು ಸ್ತ್ರೀಯಂತೆ ವರ್ತಿಸುತ್ತಾನೆ,
ಪರಿಹಾರ:-
ಮುದ್ರೆ ಮಂತ್ರವನ್ನು ಜಪಿಸಿರಿ.
8.ಪಾತಕ(ಘಾತಕ)ಕಾಳಸರ್ಪ ದೋಷ ಕಾರಣ:-
ಸಮಾಜದಲ್ಲಿ ೯೯ ಜನರಿಗೆ ಈ ದೋಷ ವಿರುತ್ತದೆ, ಪರಸ್ತ್ರೀಅಪಹರಣ,ನರಹತ್ಯ,ಹುತ್ತಕ್ಕೆ ಬೆಂಕಿ, ಕೆಮಿಕಲ್ಸ್ ಹಾಕಿದ್ದರೆ.
ಪರಿಣಾಮ:-
ವ್ಯವಹಾರಹಾನಿ,ಉದ್ಯೋಗಮಾಡಲಾಗದು,ಇಂತವರು ವ್ಯಾಪಾರವನ್ನೇ ಮಾಡಿ ಬದುಕಬೇಕು,ಆದರೆ ವ್ಯಾಪಾರದಲ್ಲಿ ದ್ರೋಹಗಳು ನಡೆಯುತ್ತಿರುತ್ತವೆ,ಅದರಲ್ಲುಹಿತಶತೃಗಳಿಂದದ್ರೋಹಗಳು,ಬುದ್ದಿ
ಮಾಂದ್ಯ ಮಕ್ಕಳಜನನ,ಕಿಡ್ನಿಇಲ್ಲದ ಮಕ್ಕಳಜನನ.
ಪರಿಹಾರ:-
ಮುದ್ರೆ ಮಂತ್ರವನ್ನು ಜಪಿಸುವುದು.
9.ವಿಷದರ(ವಿಶಕ್ತ)ಕಾಳಸರ್ಪ ದೋಷ ಕಾರಣ:-
ದಂಪತಿಗಳಅಗಲಿಸಿದ್ದರೆ,ವಿಷಹಾಕಿದ್ದರೆ.
ಪರಿಣಾಮ:-
ಅಣ್ಣನೊಂದಿಗೆವಾದ-ವಿವಾದಗಳು ಜರುಗುವುವು,ಅಣ್ಣನಿಂದಲೇತೊಂದರೆಉಂಟಾಗುತ್ತಿರುತ್ತದೆ,ದೂರಪ್ರದೇಶದಲ್ಲಿವಾಸ,ಕೋರ್ಟ್ ಕೇಸಿಗೆ ಅಲೆಯುವಿಕೆ,ವಿವಾಹಾನಂತರಕೂದಲು ಉದುರುತ್ತದೆ,ಚರ್ಮರೋಗ,ಕಜ್ಜಿ,ಉಂಟಾಗುತ್ತದೆ,ಹೆಂಡತಿ ಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗುವಿಕೆ,ಆಗಾಗ ಹಾವುಗಳು ಮನೆಗೆ ಬರುತ್ತವೆ,ಅಂಡಾಣು/ವೀರ್ಯಾಣುಗಳ ಚಲನೆಯಲ್ಲಿ ಮಂದಗತಿ ಉಂಟಾಗುತ್ತದೆ ಇದರಿಂದ ಸಂತಾನದೋಷ ಉಂಟಾಗುತ್ತದೆ, ಮಾತು ವಿಕೃತವಾಗುತ್ತದೆ,ರಾಹುದೋಷ ಉಂಟಾಗುತ್ತದೆ,ಅನಿದ್ರೆ,ಕಣ್ಣುಬೇನೆ,ಹೃದ್ರೋಗ ಪೀಡಿಸಲ್ಪಡುವವು ಜೀವನದ ಅಂತ್ಯವು ರಹಸ್ಯವಾಗಿರುವುದು.
ಪರಿಹಾರ:-
ಈ ಮುದ್ರೆ ಮಂತ್ರವನ್ನು ನಿತ್ಯ ೧೦೮ ಸಲ ಮುದ್ರೆಯೊಂದಿಗೆ ಜಪಿಸಿರಿ
ಮಂತ್ರ:-
ಓಂ ನವಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ವಿಷಧರ ಪ್ರಚೋದಯಾತ್
10.ಶೇಷನಾಗ ಕಾಳಸರ್ಪ ದೋಷ
ಕಾರಣ:-
ಒಂದು ಬೀದಿಗೆ ಸಾಮಾನ್ಯವಾಗಿ ೨೫ ಜನರಿಗೆ ಈದೋಷವಿರುತ್ತದೆ,ಪುಣ್ಯಕ್ಷೇತ್ರಗಳಲ್ಲಿ,ಮಠ,ದೇವಾಲಯ, ನಧಿ,ಕೊಳಗಳ ತೀರದಲ್ಲಿ ರತಿಸುಖವನ್ನು ಪಡೆದಿದ್ದರೆ ಈ ದೋಷವು ಬರುತ್ತದೆ,ಇಂತಹ ಸ್ಥಳಗಳಲ್ಲಿ ಕಾಮ,ಪ್ರೇಮದ ಛೇಷ್ಟೆಯನ್ನು ಮಾಡಿದ್ದರೆ ಈ ದೋಷಬರುತ್ತದೆ. ಪರಿಣಾಮ:-
ಕಣ್ಣಿನದೋಷ,ಹೃದಯದ ರೋಗ,ಅಂಗವಿಕಲ ಮಕ್ಕಳಜನನ,ತಲೆದಪ್ಪಮಕ್ಕಳಜನನ,ಕಣ್ಣು
ದಪ್ಪ,ಕುಬ್ಜಮಕ್ಕಳ ಜನನ,
ಪರಿಹಾರ:-
ವಿಷ್ಣುವಿನ ಜಪವನ್ನು ನಿತ್ಯ ಜಪಿಸುವುದು ಮತ್ತು ಮುದ್ರೆ ಮಂತ್ರವನ್ನು ಜಪಿಸುವುದು.
ಸಂಗ್ರಹ ಮಾಹಿತಿ
ಅಜ್ಜಹಳ್ಳಿಕೃಷ್ಣಮೂರ್ತಿ
Subscribe to:
Post Comments (Atom)
No comments:
Post a Comment