Wednesday, 22 July 2026
|| ೨೧ ವಸ್ತುಗಳನ್ನು ಉಪಯೋಗಿಸಿಕೊಂಡು ಸಕಲ ಗ್ರಹ ಪೀಡೆಯನ್ನು ಪರಿಹಾರ ಮಾಡಿಕೊಳ್ಳುವ ತಂತ್ರ ಪ್ರಯೋಗ||
೦೧.ಬಿಳಿ ಎಕ್ಕದ ಗಿಡದ ಬೇರು ೦೨.ಕರಿ/ಬಿಳಿ ಉಮ್ಮತ್ತಿ ಗಿಡದ ಬೇರು
೦೩.ಬಿಳಿಉತ್ತರಾಣಿ ಬೇರು ೦೪.ಧರ್ಬೆ
೦೫.ರಾಗಿ ಗಿಡದ ಬೇರು ೦೬.ಅರಳಿ ಮರದ ಬೇರು ೦೭.ನೇರಳೆ ಬೇರು
೦೮.ನೇರಳೆ ಎಲೆ ೦೯.ಮಾವಿನ ಎಲೆ
೧೦.ಒಂದು ಮಣ್ಣಿನ ಮಡಿಕೆ(ಮುಚ್ಚಳ ದೊಂದಿಗೆ)
೧೧.ಹಸುವಿನ ಹಾಲು
೧೨.ಹಸುವಿನ ತುಪ್ಪ ೦೩.ಅಕ್ಕಿ
೧೪.ಹಸಿ ಕಡಲೆ ಕಾಳು ೧೫.ಗೋಧಿ
೧೬.ಹೆಸರು ಕಾಳು ೧೭.ಕಪ್ಪು ಎಳ್ಳು
೧೮.ಗೋಮೂತ್ರ ೧೯.ಬಿಳಿ ಸಾಸಿವೆ ೨೦.ಗರಿಕೆ ೨೧.ಚಂದನ
ಈ ಎಲ್ಲಾ ವಸ್ತುಗಳನ್ನು ಮಡಿಕೆಯಲ್ಲಿ / ಗಡಿಗೆ ಯಲ್ಲಿ ಶನಿವಾರದಂದು ಚಂದ್ರನು ಉದಯಿದ ನಂತರ ಹಾಕಿ ದೇವರ ಮುಂದೆ ಇಟ್ಟು ಈ ಮಂತ್ರವನ್ನು ೧೦೮ ಸಲ ಜಪಿಸಿ ನಂತರ ಮನೆಯ ಎಲ್ಲಾ ಸದಸ್ಯರಿಗೂ ೨೧ ಸಲ ತಲೆಯಿಂದ ಪಾದದ ವರೆಗು ಇಳಿತಗೆದು ತಗೆದುಕೊಂಡು ಹೋಗಿ ಅರಳಿ ಮರದ ಬುಡದಲ್ಲಿ ಇಟ್ಟು ಬರಬೇಕು.ಈ ತಂತ್ರ ಪ್ರಯೋಗವನ್ನು ಮಾಡುವುದರಿಂದ ಘೋರವಾದ ದಾರಿದ್ರ್ಯ ನಾಶವಾಗುವುದು.ಮತ್ತು ಆಯುಷ್ಯ ವೃದ್ದಿಯಾಗುವುದು(ಅನಾರೋಗ್ಯ ಇದ್ದವರಿಗೆ ಗುಣವಾಗುತ್ತದೆ)ಸಕಲ ಗ್ರಹ ಪೀಡೆಗಳು ನಿವಾರಣೆ ಯಾಗುತ್ತವೆ.ಈ ಮಂತ್ರವನ್ನು ೧೦೮ ಸಲ ನಿತ್ಯವು ಜಪಿಸುವುದರಿಂದ ಸಿದ್ದಿಯು ದೊರೆಯುವುದು.
ಮಂತ್ರ
||ಓಂ ನಮೋ ಭಾಸ್ಕರಾಯ ಮಮ ಸರ್ವ ಗ್ರಹ ಪೀಡಾ ನಿವಾರಣಂ ಕುರು ಕುರು ಸ್ವಾಹಾ||
ಸೂಚನೆ:
ಪೂಜಾ ನಂತರ ಮಡಿಕೆ/ಗಡಿಗೆ ತಗೆದುಕೊಂಡು ಹೋಗುವಾಗ ಪಾದರಕ್ಷೆ ಹಾಕಿಕೊಂಡು ಹೋಗಬಾರದು.
ಅಜ್ಜಹಳ್ಳಿ ಕೃಷ್ಣಮೂರ್ತಿ
Subscribe to:
Post Comments (Atom)
No comments:
Post a Comment