Thursday 31 January 2019

ಜಾತಕದಲ್ಲಿ ಅಭಿಚಾರ ಯೋಗ

ಜನ್ಮ ಜಾತಕದಲ್ಲಿ ಆಭಿಚಾರ ಯೋಗದ ಬಗ್ಗೆ ತಿಳಿದುಕೊಳ್ಳುವ ಮುನ್ನ ಒಂದೆರಡು ಸಂಗತಿಗಳತ್ತ ಗಮನ ಹರಿಸೋಣ. ಆಭಿಚಾರದಲ್ಲಿ ಎರಡು ಬಗೆಗಳಿವೆ. ಅದೆಂದರೆ ಕ್ಷುದ್ರಾಭಿಚಾರ ಮತ್ತು ಮಹಾಭಿಚಾರ. ಪ್ರಶ್ನೆ ಕೇಳುವ ಮೂಲಕ ವ್ಯಕ್ತಿಯ ಮೇಲೆ ಆಭಿಚಾರ ಪ್ರಯೋಗ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಜಾತಕದಲ್ಲಿ ಅಭಿಚಾರ ಜನ್ಮ ಕುಂಡಲಿಯ ಆರನೆ ಮನೆಯಲ್ಲಿರುವ ಗ್ರಹ ಮತ್ತು ಅದರ ವರ್ಣವನ್ನು ಗುರುತಿಸುವ ಮೂಲಕ ಆಭಿಚಾರ ದೋಷವನ್ನು ಪತ್ತೆ ಮಾಡಬಹುದು. ಯಾರ ಜಾತಕದಲ್ಲಿ ಬುಧನು ಬಾಧಕ ಸ್ಥಾನದಲ್ಲಿ ಇರುತ್ತಾನೋ ಅವನು ಅಭಿಚಾರ ದೋಷದಿಂದ ಬಳಲುತ್ತಾನೆ. ಒಂದು ವೇಳೆ ಜಾತಕನ ಕುಂಡಲಿಯಲ್ಲಿ ಅಭಿಚಾರ ದೋಷವಿದ್ದರೂ ಇತರೆ ಸ್ಥಾನಗಳು ಶುಭಸ್ಥಾನದಲ್ಲಿದ್ದರೆ ಅಭಿಚಾರ ದೋಷ ಕಾಣಬರುವುದಿಲ್ಲ. ಜಾತಕದಲ್ಲಿ ಕೆಳಕಂಡ ಗ್ರಹಗಳು ಸ್ಥಾನದ ಆಧಾರದ ಮೇಲೆ ಅಭಿಚಾರ ಯೋಗವನ್ನು ಲೆಕ್ಕಾಚಾರ ಹಾಕಬಹುದು. ಅದರಲ್ಲೂ ಷಟ್ ಸ್ಥಾನವು ಮುಖ್ಯವಾಗಿದೆ. ಜಾತಕದಲ್ಲಿ ಅಭಿಚಾರ ದೋಷವನ್ನು ಲೆಕ್ಕಾಚಾರ ಹಾಕುವಾಗ, ವಿಶೇಷವಾಗಿ ಕುಜ ಸ್ಥಾನವನ್ನು ಗಮನಿಸಬೇಕು. ಆರು ಮತ್ತು ಎಂಟನೆಯ ಸ್ಥಾನದಲ್ಲಿ ಯಾವ ಗ್ರಹಗಳಿವೆ ಅದರ ಅಧಿಪತಿಗಳೇನು ಎಂಬುದನ್ನು ಗಮನಿಸಬೇಕು. ಇದರ ಆಧಾರದ ಮೇಲೆ ಜಾತಕನಿಗೆ ಮಹಾ ಅಭಿಚಾರ ಅಥವಾ ಕ್ಷುದ್ರ ಅಭಿಚಾರ ದೋಷದಿಂದ ಪೀಡಿಸಲ್ಪಟ್ಟಿದ್ದಾನೆಯೇ ಎಂಬುದನ್ನು ಲೆಕ್ಕ ಹಾಕಬಹುದು. ಆರನೆ ಮನೆಯಲ್ಲಿರುವ ಗ್ರಹ ಅದರ ಬಣ್ಣ, ಸ್ವರೂಪದ ಆಧಾರದ ಮೇಲೆ ಯಾವ ವರ್ಣದವರಿಂದ ಅಭಿಚಾರ ಪ್ರಯೋಗ ಆಗಿದೆ, ಆತನ ಸ್ಥಳವೆಲ್ಲಿಯದು ಎಂಬುದನ್ನೂ ತಿಳಿದುಕೊಳ್ಳಬಹುದು. ಒಂದು ವೇಳೆ ಷಷ್ಠಮ ಸ್ಥಾನದಲ್ಲಿ ಗುರುವಿದ್ದರೆ ಮಾಟಮಂತ್ರದಂತಹ ಅಭಿಚಾರ ವಿದ್ಯೆಗಳಲ್ಲಿ ಪರಿಣತನೂ, ಶತ್ರುಗಳನ್ನು ನಾಶಮಾಡುವವನೂ,ಅತ್ಯಂತ ಆಲಸಿಯೂ ಆಗುವ ಲಕ್ಷಣಗಳನ್ನು ಹೊಂದಿರುತ್ತಾನೆ. ಜಾತಕದಲ್ಲಿ ಅಭಿಚಾರ ದೋಷವಿದೆ ಅಥವಾ ನೀವು ಅಭಿಚಾರ ಪ್ರಯೋಗಕ್ಕೆ ಒಳಗಾಗಿದ್ದೀರೆಂದಾಕ್ಷಣ ಹೆದರುವ ಅಗತ್ಯವಿಲ್ಲ. 'ಪ್ರತಿ ಪಕ್ಷ ನಾಶಿನಿ ಪ್ರತಿ ಮಂತ್ರ ಭಕ್ಷಿಣಿ' ಆದ ಪ್ರತ್ಯಂಗಿರಿ ದೇವಿಯ ಆರಾಧನೆಯಿಂದ ದೋಷ ಪರಿಹಾರವಾಗುತ್ತದೆ. ಪ್ರತ್ಯಂಗಿರಾ ದೇವಿಯನ್ನು ಅಥರ್ವಣ ಭದ್ರಕಾಳಿ ಅಥವಾ ನಿಕುಂಭಿಲಾ ಎಂತಲೂ ಕರೆಯುತ್ತಾರೆ. ದೋಷ ಪರಿಹಾರಕ್ಕಾಗಿ ಪ್ರತ್ಯಂಗಿರಾ ದೇವತೆಯ ಉಪಾಸನೆಯನ್ನು ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷಚೂರ್ಣ ಪ್ರಯೋಗ, ಭಾನಾಮತಿ ಪ್ರಯೋಗ ಮತ್ತಿತರ ಋಣಬಾಧೆಗಳಿಂದ ನರಳುತ್ತಿರುವವರೂ ದೋಷ ಪರಿಹಾರಾರ್ಥವಾಗಿ ಪ್ರತ್ಯಂಗಿರಾ ದೇವಿಯ ಪೂಜೆಯನ್ನು ಮಾಡಬಹುದು. ಹೋಮಕ್ಕೆ ಕೆಂಪು ಮೆಣಸಿನಕಾಯಿ, ದಾಳಿಂಬೆ ಬೀಜ ಮತ್ತು ಕೆಲ ಗಿಡ ಮೂಲಿಕೆಗಳನ್ನು ಬಳಸುವ ಪದ್ಧತಿಯಿದೆ. ಸಮಸ್ಯೆ ಪರಿಹಾರಕ್ಕೊಂದು ಸೂತ್ರ * ಪ್ರತಿನಿತ್ಯ ಪ್ರತ್ಯಂಗಿರಾ ಮಂತ್ರ ಜಪ ಮಾಡಿದರೆ ಶತ್ರುಗಳು ಕ್ರಮವಾಗಿ ಕಡಿಮೆಯಾಗುತ್ತಾರೆ. * ಕಳಶ ಸ್ಥಾಪನೆ ಮಾಡಿ ಅಕ್ಕಿ ರಾಶಿಯಲ್ಲಿ ಪ್ರತ್ಯಂಗಿರ ಯಂತ್ರ ಇಟ್ಟು ಪ್ರಾಣ ಪ್ರತಿಷ್ಠೆ ಮಾಡಿ ಆವರಣ ಪೂಜೆ, ಸಹಸ್ರ ನಾಮಾವಳಿಯಿಂದ ಅರ್ಚನೆ ಮಾಡಿ 1.25 ಲಕ್ಷ ನಾರಾಯಣೆ ಪ್ರತ್ಯಂಗಿರ ಜಪ ಮಾಡಿ. ಬಿಳಿ ಎಕ್ಕದ ಸವಿತ್ತು, ಮೆಣಸು, ತುಪ್ಪ, ಎಳ್ಳು, ಹೋಮ ಮಾಡಿದರೆ ದುಷ್ಟಶಕ್ತಿ ನಿವಾರಣೆಯಾಗುತ್ತದೆ.

No comments:

Post a Comment