Tuesday 22 October 2019

ಕೇತು_ಮಹಾದಶಾ_ಫಲ

ಕೇತು_ಮಹಾದಶಾ_ಫಲ (ಏಳು ವರುಷ) ಈ ದಶೆಯಲ್ಲಿ ಸಾಮಾನ್ಯವಾಗಿ ದುಃಖ , ಭಯ , ಜನಗಳಿಂದ ವಿರೋಧ , ಕಷ್ಟ-ನಷ್ಟ ಭೂಮಿ-ಆಸ್ತಿ ಹಾನಿ , ಅರಿಷ್ಟ , ತಿರುಗಾಟ, ಅಧಿಕಾರಿಗಳೊಡನೆ ವೈಷಮ್ಯ ...ಫಲಗಳನ್ನು ಕಾಣಬಹುದು. ಕೇತುವು ೩ , ೬ , ೧೦, ೧೧ ನೆಯ ಸ್ಥಾನಗಳಲ್ಲಿ ಇದ್ದಾಗ , ಜಾತಕನಿಗೆ ಕೀರ್ತಿ, ಭಾಗ್ಯಲಾಭ , ಧನ-ಧಾನ್ಯ ಸಂಪದವಾಗುತ್ತದೆ. ಆದರೆ ಅದರ ಅಧಿಪತಿಗಳ ಭುಕ್ತಿಗಳಲ್ಲಿ , ಆ ಮನೆಗಳ ಕಾರಕತ್ವಗಳಿಗೆ ಏಟು ಬೀಳುತ್ತದೆ. ಕೇತುವು ವಕ್ರೀಗ್ರಹಗಳೊಡನೆ ಇದ್ದರೆ ಶಿಕ್ಷೆ , ಸೆರೆಮನೆವಾಸ , ಗ್ರಹಣಕಾಲದಲ್ಲಿದ್ದರೆ ಮರಣಭೀತಿ , ಶಸ್ತ್ರಾಸ್ತ್ರಗಳಿಂದ ಅಪಾಯ, ವಿಷಜಂತು ಹಾಗೂ ಸರ್ಪ ಭೀತಿ ಇರುತ್ತದೆ. ಕೇತುವು ಉಚ್ಚ ಸ್ಥಾನದಲ್ಲಿ ಇದ್ದು ಶುಭಗ್ರಹಗಳಿಂದ ವೀಕ್ಷಿಸಲ್ಪಟ್ಟರೆ #ಕೀರ್ತಿಯು , ವ್ಯಾಜ್ಯದಲ್ಲಿ ಜಯ , ನಾಯಿಗಳ ಸಾಕಣಿಕೆ , ಪಶುಸಂಗ್ರಹ , ವಸ್ತ್ರ ಲಾಭ , ರಾಜಸನ್ಮಾನ , ಅಧಿಕಾರಯೋಗ , ಪುರಾಣ ಪುಣ್ಯ ಕಥಾಶ್ರವಣ , ಆಸ್ತಿಪ್ರಾಪ್ತಿ ,ಸಂತಾನಲಾಭ...ಫಲ ಸಿಗುತ್ತದೆ. ಕೇತುವು ನೀಚಸ್ಥಾನದಲ್ಲಿದ್ದು ಅಶುಭಗ್ರಹಗಳ ವೀಕ್ಷಣೆಯಲ್ಲಿದ್ದರೆ ಬಂಧನ ಯೋಗ , ತಂದೆಗೆ ಹಾಗೂ ಸಂಬಂಧಿಕರಿಗೆ ದುಃಖ , ದೇಹ ಬಳಲಿಕೆ, ರೋಗಪೀಡೆ , ಕಳ್ಳರಕಾಟ , ಧನಹಾನಿ... ಈ ತರಹದ ಫಲಗಳು. ಕೇತುವನ್ನು ಶುಭಗ್ರಹ ನೋಡಿದರೆ ತೀರ್ಥಯಾತ್ರೆ , ಪುಣ್ಯಕ್ಷೇತ್ರಗಳ ದರ್ಶನ , ನೆಂಟರಿಷ್ಟರ ಪ್ರೀತಿ ಆದರತೆಗಳು ಇರುತ್ತವೆ. ಕೇತುವನ್ನು ಅಶುಭಗ್ರಹಗಳು ನೋಡಿದರೆ ಸಂತಾನ ಹೀನತೆ , ಅಪಘಾತಗಳು , ಕೆಲಸಗಳಲ್ಲಿ ವಿಘ್ನ , ವಿವಾಹದಲ್ಲಿ ತಡೆ , ನೆಮ್ಮದಿ ಇಲ್ಲದಿರುವುದು , ಆತ್ಮಹತ್ಯೆಯ ಪ್ರಯತ್ನ...ಈ ತರಹ ಫಲ ಒದಗುವುದು. ಕೇತುವಿನ ಅಶುಭಫಲಗಳಿಂದ ದೂರವಾಗಲು ವಿವಿಧ ಪರಿಹಾರಗಳು. #ಕೇತುಭುಕ್ತಿಗೆ -- #ಮೃತ್ಯುಂಜಯ_ಜಪ #ಶುಕ್ರ_ಭುಕ್ತಿಗೆ ... #ದುರ್ಗಾ_ಜಪ . #ರವಿಭುಕ್ತಿಗೆ ... #ಶಿವ ಸಹಸ್ರನಾಮ #ಚಂದ್ರಭುಕ್ತಿಗೆ ... #ದುರ್ಗಾಹೋಮ #ಬೆಳ್ಳಿ_ದಾನ . #ಕುಜಭುಕ್ತಿಗೆ... #ಸುಬ್ರಹ್ಮಣ್ಯ #ಜಪ , #ಸುಬ್ರಹ್ಮಣ್ಯ_ಭುಜಂಗಸ್ತೋತ್ರ #ಪಾರಾಯಣ #ರಾಹುಭುಕ್ತಿಗೆ...ಕಾಳಹಸ್ತೇಶ್ವರನಿಗೆ ಅಭಿಷೇಕ. ದೊಡ್ಡ ಬೂದು ಕುಂಬಳಕಾಯಿ ಯ ದಕ್ಷಿಣೆ ಸಮೇತ ದಾನ. (ಕಾಳಹಸ್ತಿಯಲ್ಲೂ ಮಾಡಿಸಬಹುದು. ಆಗದಿದ್ದವರು ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನದ ಹಿಂಬದಿಯಲ್ಲಿ ಕಾಳಹಸ್ತೇಶ್ವರನ ದೇವಾಲಯವಿದೆ.ಅಲ್ಲೂ ಮಾಡಿಸಬಹುದು) #ಗುರುಭುಕ್ತಿಗೆ.. ಮುಕ್ತಿನಾಥನಲ್ಲಿ ಬೇಡಿಕೆ , ತಮಿಳುನಾಡು ಗುರು ಕ್ಷೇತ್ರಕ್ಕೆ ಭೇಟಿ. #ಶನಿಭುಕ್ತಿಗೆ ... ನಂಜುಂಡೇಶ್ವರನ ದರ್ಶನ ಹಾಗೂ ಸೇವೆ. ಜಿಂಕೆಚರ್ಮದ ದಾನ. #ಬುಧಭುಕ್ತಿಗೆ ...ವಿಷ್ಣುಸಹಸ್ರನಾಮ ಪಾರಾಯಣ. ವಿಷ್ಣು ಪ್ರತಿಮೆ ದಾನ. #ಬುಧ_ದಶೆಯ ಅಂತ್ಯದಲ್ಲಿ ಕೇತುದಶೆ ಇನ್ನೇನು ಆರಂಭ ಅನ್ನುವ ವೇಳೆಗೆ #ಗಣಪತಿ_ಹೋಮ ಹಾಗೂ #ಅನ್ನದಾನ ಮಾಡಿದರೆ ತುಂಬಾ ಒಳ್ಳೆಯದು.

No comments:

Post a Comment